<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-27009232</id><updated>2011-12-23T12:38:52.497+05:30</updated><category term='ಕನ್ನಡ ಪ್ರಭ'/><category term='ಕನ್ನಡ ಸಾಹಿತ್ಯ ಸಮ್ಮೇಳನ'/><category term='ನಮ್ಮಾಫೀಸು'/><category term='ಅಮ್ಮ'/><category term='ಸಿ. ಅಶ್ವತ್ಥ್'/><category term='Photo'/><category term='ನ್ಯಾಲೆ'/><category term='ವರಮಹಾಲಕ್ಷ್ಮೀ'/><category term='ನನ್ನ ಕವಿತೆ'/><category term='ಭಯೋತ್ಪಾದನೆ'/><category term='ಡಾ. ವಿಷ್ಣುವರ್ಧನ್'/><category term='Story'/><category term='ಲಹರಿಯಲಿ ತೇಲಿ'/><category term='ಮದರಂಗಿ'/><category term='College'/><category term='ಟಿ.ಎಸ್. ನಾಗಾಭರಣ'/><category term='Humor'/><category term='ಫಲಿತಾಂಶ'/><category term='ಎಂ.ಆರ್. ದತ್ತಾತ್ರಿ'/><category term='One Flew over the Cuckoo&apos;s Nest'/><category term='ಹೊಸ ವರ್ಷ'/><category term='Invitation'/><category term='ಪ್ರೇಮಪತ್ರ'/><category term='ನೆಲಮಾವಿನ ಸೊಪ್ಪು'/><category term='Kote Betta'/><category term='ಕೂದಲು'/><category term='ಸ್ವರ ಸಮರ್ಪಣೆ'/><category term='ಟಿ.ವಿ.'/><category term='ಶಿಕ್ಷಣ ಪದ್ಧತಿ'/><category term='ಸಾಗರ'/><category term='ಸಿದ್ದರ ಬೆಟ್ಟ'/><category term='North Bangalore Hotels'/><category term='ಅಡಕೆ'/><category term='ಅನಾಥ'/><category term='Blogroll'/><category term='ಫೋಟೋ'/><category term='ಬಾಂಬ್'/><category term='ಬಾವಿ'/><category term='ಬಿಸಿಲು'/><category term='ಹೆಸರು'/><category term='ಛತ್ರಿ'/><category term='Thought Spot'/><category term='ಗುರುಕುಲ'/><category term='Kiss'/><category term='Friendship'/><category term='ಮಳೆ'/><category term='ಖುಶಿ'/><category term='ಗಾಳಿಪಟ'/><category term='ಮೋಹ'/><category term='ಪ್ರೀತಿ'/><category term='ವಡಪ್ಪೆ'/><category term='ಶಾಲೆ'/><category term='ಟಿಪ್ಪಣಿ'/><category term='ಕುವೆಂಪು'/><category term='Malleswaram'/><category term='ರಾಘವೇಶ್ವರ ಭಾರತಿ'/><category term='Ugadi'/><category term='ಪುಸ್ತಕ ಬಿಡುಗಡೆ'/><category term='ಬಾನು'/><category term='FarmVille'/><category term='Holebaagilu'/><category term='ಹೊಳೆಬಾಗಿಲು'/><category term='Travelogue'/><category term='ಪೇಚು'/><category term='Miscellaneous'/><category term='ಮಾರಿ ಜಾತ್ರೆ'/><category term='Champa Tree'/><category term='Facebook'/><category term='ಆಮೆ'/><category term='One Year Celebration'/><category term='ಡಾ. ರಾಜ್‍ಕುಮಾರ್'/><category term='ಬಲಮುರಿ'/><category term='Reports'/><category term='ಬಂಧ'/><category term='ವಿಷಾದ'/><category term='Poem'/><category term='Education System'/><category term='ಕನ್ನಡ ರಾಜ್ಯೋತ್ಸವ'/><category term='Airo-India Show'/><category term='ವರದಿ'/><category term='ಮಲ್ಲೇಶ್ವರಂ'/><category term='ಕೋಟೆ ಬೆಟ್ಟ'/><category term='Moustache'/><category term='Dr. Vishnuvardhan'/><category term='ಕರ್ವಾಲೋ'/><category term='ಮಾವು'/><category term='ಶಿಕ್ಷಕರ ದಿನ'/><category term='Dentist Love'/><category term='ಹಲ್ಲು'/><category term='ಅಪ್ಪ'/><category term='ಮಗ'/><category term='Television'/><category term='Fathers Day'/><category term='Devarayanadurga'/><category term='ಅಜ್ಜಿ'/><category term='Mothers Day'/><category term='Personal'/><category term='ಪ್ರೊ. ಜಿ. ವೆಂಕಟಸುಬ್ಬಯ್ಯ'/><category term='ಇಂಥ ಕತೆ'/><category term='ವಿ. ಹರಿನಾಥ ಬಾಬು'/><category term='ಚಾರಣದ ಹಾದಿ'/><category term='ಹನಿ'/><category term='ಚಪ್ಪರ'/><category term='ಚಿತ್ರಚಾಪ'/><category term='ಮೋಡ'/><category term='Timepass'/><category term='Gamaka'/><category term='ನಾಗರ ಪಂಚಮಿ'/><category term='ಹಕ್ಕಿ ಕತೆ'/><category term='Chitrachaapa'/><category term='ಮಾವಿನಕಾಯಿ ನೀರುಗೊಜ್ಜು'/><category term='ಮುಳ್ಳಯ್ಯನ ಗಿರಿ'/><category term='Reflections'/><category term='ಕೆ.ಎಸ್. ನಿಸಾರ್ ಅಹ್ಮದ್'/><category term='ಪ್ರಬಂಧ ಸ್ಪರ್ಧೆ'/><category term='Games'/><category term='ಕಿ.ರಂ. ನಾಗರಾಜ. ಪ್ರೊ. ಸಿದ್ದಲಿಂಗಯ್ಯ'/><category term='Siddara Betta'/><category term='ಸಂಬಂಧ'/><category term='ಶುಭಾಶಯ'/><category term='ದಾಂಪತ್ಯ'/><category term='Bendre'/><category term='ವಿಶ್ವ ಅಮ್ಮಂದಿರ ದಿನ'/><category term='ಉದ್ಯೋಗ ಖಾತರಿ ಯೋಜನೆ'/><category term='Jokes'/><category term='ವಿಜಯ ಕರ್ನಾಟಕ'/><category term='ಮುತ್ತು'/><category term='TV'/><category term='ದೀಪಾವಳಿ'/><category term='ಚರ್ಚೆ'/><category term='Letters'/><category term='ಗೋಪಾಲಕೃಷ್ಣ ಅಡಿಗ'/><category term='Birthday'/><category term='ಕವನ'/><category term='25 ವರ್ಷ'/><category term='ಅಂತರ್ಜಾಲೀ ಕನ್ನಡಿಗರ ಮುಖಾಮುಖಿ'/><category term='Sweet Memories'/><category term='ಕೆ.ಪಿ. ಪೂರ್ಣಚಂದ್ರ ತೇಜಸ್ವಿ'/><category term='ಮೀಸೆ'/><category term='ಸು-ಲಲಿತ ಪ್ರಬಂಧ'/><category term='Commerce Lecturer'/><category term='Notes'/><category term='ತಲೆ'/><category term='ಕೆ.ಎಸ್. ನರಸಿಂಹಸ್ವಾಮಿ'/><category term='ಪೂಚಂತೇ'/><category term='ರಾಮಚಂದ್ರಾಪುರ ಮಠ'/><category term='ವ್ಯಥೆ'/><category term='ಬರ'/><category term='Primary School'/><category term='ಗಣೇಶ ಚತುರ್ಥಿ'/><category term='ಪುಸ್ತಕಪ್ರೀತಿ'/><category term='ದ.ರಾ. ಬೇಂದ್ರೆ'/><category term='ಲಚ್ಚಮ್ಮನ ಕೆರೆ'/><category term='ಹುಟ್ಟು ಹಬ್ಬ'/><category term='ಅಕ್ಕ ಸಮ್ಮೇಳನ'/><category term='ಛಂದ ಪುಸ್ತಕ'/><category term='ಕೋಸು'/><category term='ದ್ವೀಪವ ಬಯಸಿ'/><category term='Bloggers Meet'/><category term='ನನ್ನದಲ್ಲದ್ದು'/><category term='ಚಳಿ'/><category term='ಡಬ್ಬಿ'/><category term='ರಂಗನತಿಟ್ಟು'/><category term='ಮುಂಗಾರು ಮಳೆ'/><category term='ಸುಗ್ಗಿ'/><category term='ಹಾಸ್ಯ'/><category term='ಹಾಯಿಕು'/><category term='ಪ್ರಣತಿ'/><category term='Forum'/><category term='Crush'/><category term='Mansoon'/><category term='ಹೆಚ್ಚೆಸ್ವಿ'/><category term='ಬೇಸರ'/><category term='Greetings'/><category term='ಗಮಕ'/><category term='ಬೆಂಗಳೂರು'/><category term='Savandurga Trip'/><category term='C. Ashwath'/><category term='ಯುಗಾದಿ'/><category term='Diwali'/><category term='ಪ್ರಯೋಗ'/><category term='ಕುಮಾರ ಪರ್ವತ'/><category term='Shivana Samudra Trip'/><category term='ಅಶ್ವತ್ಥ್'/><category term='ಸಾಹಿತ್ಯ'/><category term='Kumara Parvatha'/><category term='ಹೋಟೆಲ್'/><category term='ಶ್ರದ್ಧಾಂಜಲಿ'/><category term='ಪ್ರಚಲಿತ'/><category term='ಗಂಗಮ್ಮನ ಜೀರಿಗೆ'/><category term='ಸೂತ್ರ'/><category term='ಹೀಗೇ ಸುಮ್ನೆ'/><category term='Teachers Day'/><category term='ವಿಶ್ವ ಗೋ ಸಮ್ಮೇಳನ'/><category term='ಅಂಕಿತ ಪುಸ್ತಕ'/><category term='ಬದುಕು'/><category term='ಕೊಟ್ಟಿಗೆ'/><category term='Bhairappa'/><category term='Pranati'/><category term='ಸ್ನೇಹ'/><category term='ಸಂಪಿಗೆ ಮರ'/><category term='ಇಲಿ'/><title type='text'>:ಮೌನಗಾಳ:</title><subtitle type='html'>ಕಾಲಾತೀತದಲ್ಲಿ ಗಾಳ ಹಾಕಿ ಮೌನವಾಗಿ ಕುಳಿತಿದ್ದೇನೆ. ಸಿಕ್ಕಷ್ಟು, ಹಿಡಿದಷ್ಟು: ಈ ಬ್ಲಾಗೆಂಬ ಬುಟ್ಟಿಗೆ...</subtitle><link rel='http://schemas.google.com/g/2005#feed' type='application/atom+xml' href='http://hisushrutha.blogspot.com/feeds/posts/default'/><link rel='self' type='application/atom+xml' href='http://www.blogger.com/feeds/27009232/posts/default?max-results=100'/><link rel='alternate' type='text/html' href='http://hisushrutha.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/27009232/posts/default?start-index=101&amp;max-results=100'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><generator version='7.00' uri='http://www.blogger.com'>Blogger</generator><openSearch:totalResults>184</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-27009232.post-6991114078301248868</id><published>2011-07-14T13:39:00.001+05:30</published><updated>2011-07-14T13:40:04.479+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಕವಿತೆ</title><content type='html'>೧&lt;br /&gt;ಹಸಿರು ಶಾಯಿಯ ಪೆನ್ನಿನಲ್ಲಿ ಕವಿತೆ&lt;br /&gt;ಬರೆಯುವುದು ಎಂದರೆ ನನಗೆ ಖಯಾಲಿ&lt;br /&gt;ಒಂದೆಲಗ ಬತ್ತಿಸಿದ ನೀರಿಗೆ ಕಾಳು-&lt;br /&gt;ಮೆಣಸು ಜಜ್ಜಿ ಹಾಕಿ ಕುಡಿದೆ&lt;br /&gt;ಮೊಣಕಾಲು ದಾಟುವವರೆಗಿನ ಕುರ್ತಾ&lt;br /&gt;ಧರಿಸಿ ಸಾಹಿತ್ಯ ಸಮಾರಂಭಗಳಿಗೆ ಹೋಗಿಬಂದೆ&lt;br /&gt;ಗೊಂಬೆಗೆ ಉಡಿಸಿದ ಸೀರೆ, ನೀರಲ್ಲಿ ತೇಲಿಬಿಟ್ಟ ದೋಣಿ,&lt;br /&gt;ಮೊದಲ ಮಳೆಯ ಮಣ್ಣ ಘಮ, ಹುಣ್ಣಿಮೆ ರಾತ್ರಿಯ ಚಂದ್ರ-&lt;br /&gt;ಎಲ್ಲ ನನ್ನ ಕವಿತೆಯಲ್ಲಿ ರೂಪಕಗಳಾದವು&lt;br /&gt;ಬೆಟ್ಟದ ಹೂವಿಗೆ ಮಳೆಯ ರಾತ್ರಿ ಬಿದ್ದ ಕನಸಿನಲ್ಲಿ&lt;br /&gt;ದುಂಬಿಯೊಂದು ಕೊಡೆ ಹಿಡಿದು ಬಂದಿತ್ತಂತೆ&lt;br /&gt;ಅಂತೆಲ್ಲ ಬರೆದು ಚಪ್ಪಾಳೆ ಗಿಟ್ಟಿಸಿದೆ&lt;br /&gt;ಶೇವಿಂಗು ಮಾಡ್ಕೊಳೋ ಎಂದ ಅಮ್ಮನಿಗೆ&lt;br /&gt;ಜಿಲೆಟ್ಟಿ ಕಂಪನಿಯ ಲಾಭಕೋರತನದ ಬಗ್ಗೆ ತಿಳಿಹೇಳಿದೆ&lt;br /&gt;&lt;br /&gt;೨&lt;br /&gt;ಚಿಕ್ಕವನಿದ್ದಾಗ ನಾನು ಶ್ರುತಿಯ ಕಷ್ಟ ನೋಡಿ&lt;br /&gt;ಟೀವಿಯ ಮುಂದೆ ಅತ್ತದ್ದಿದೆ. ಅಕ್ಟೋಬರಿನ&lt;br /&gt;ಗುಡುಗು-ಸಿಡಿಲಿಗೆ ಹೆದರಿ ಅಮ್ಮನ ಸೆರಗ ಹಿಂದೆ ಬಿಕ್ಕಳಿಸಿದ್ದಿದೆ. &lt;br /&gt;ತಿಳುವಳಿಕೆ ಬಂದಮೇಲೆ ನಾನು ಅತ್ತಿದ್ದೇ ಇಲ್ಲ&lt;br /&gt;ಗಂಡಸರು ಅಳಬಾರದು ಅಂದವರು ಯಾರೋ?&lt;br /&gt;ನಗರಿಯ ಕಟ್ಟಡಗಳ ತುದಿಯಲ್ಲಿ ನನ್ನ ಭಯವನ್ನು ನೂಕಿದೆ&lt;br /&gt;ಅಪಘಾತದ ಸ್ಥಳದಲ್ಲಿ ಸ್ಥಗಿತಗೊಂಡ ಟ್ರಾಫಿಕ್ ಕಂಡು&lt;br /&gt;ಜೋರಾಗಿ ಹಾರನ್ನು ಬಾರಿಸಿದೆ&lt;br /&gt;ಊಟ ಮಾಡಿ ಕೂತು ಕ್ರೈಂಸ್ಟೋರಿಯನ್ನು ರಸವತ್ತಾಗಿ ನೋಡಿದೆ&lt;br /&gt;ಹತನಾದ ಯೋಧನ ಕಥೆ ತೋರಿಸುತ್ತಿದ್ದ ಛಾನೆಲ್ &lt;br /&gt;ಫಕ್ಕನೆ ಬದಲಿಸಿ ಕುಣಿಯೋಣು ಬಾರಾ ಎಂದೆ&lt;br /&gt;ಗೆಳೆಯ ಫೋನ್ ಮಾಡಿ ನಾಳೆ ಮನೆ ಶಿಫ್ಟಿಂಗು, &lt;br /&gt;ಸ್ವಲ್ಪ ಹೆಲ್ಪ್ ಮಾಡೋಕೆ ಬಾರಯ್ಯಾ ಎಂದಾಗ &lt;br /&gt;ಎಷ್ಟು ಕೊಡ್ತೀಯ ಅಂತ ಕೇಳಲು ಹೋಗಿ ತಡೆದುಕೊಂಡು&lt;br /&gt;ಬೇರೆ ಏನೋ ಸಬೂಬು ಹೇಳಿ ತಪ್ಪಿಸಿಕೊಂಡೆ&lt;br /&gt;ಟೆರೇಸಿನಲ್ಲಿನ ಮೌನ ಕಂಡು ಖುಶಿಯಾಗಿ&lt;br /&gt;ಬಾಲ್ಯದ ಹಸಿರಿನ ಸಿರಿಯ ಕುರಿತು ಕವನ ಬರೆದು&lt;br /&gt;ನನಗೆ ನಾನೇ ಐದಾರು ಸಲ ಓದಿಕೊಂಡೆ&lt;br /&gt;&lt;br /&gt;೩&lt;br /&gt;ರೈಲಿನ ನೂಕಿನಲ್ಲಿ ನಿಜಗಂಧದ ತರುಣಿ&lt;br /&gt;ತೂರಿ ಬಂದರೆ ಕಾಯಕದ ದಿನವಿಡೀ ಉಲ್ಲಾಸ&lt;br /&gt;ಕೈಯಲ್ಲಿ ಐಫೋನು, ಕಿವಿಯಲ್ಲಿ ಮೊರೆಯುವ ಪಾಪ್-&lt;br /&gt;ಚಿಗುರು ಬೆರಳಿನ ಹುಡುಗಿಗೆ ಟಚ್‌ಸ್ಕ್ರೀನ್ ಫೋನು ಇಷ್ಟ; &lt;br /&gt;ಹಾಗೆಯೇ ಟಚ್‌ಸ್ಕ್ರೀನ್ ಫೋನಿಗೆ ಚಿಗುರು ಬೆರಳಿನ ಹುಡುಗಿ.&lt;br /&gt;ಹೂವಿನ ಚಬ್ಬೆಯ ಮುದುಕಿ ಬಂದಾಗ ಎತ್ತಲೋ&lt;br /&gt;ನೋಡಿದ ನಾನು ಐಫೋನಿನ ಹುಡುಗಿಗೆ &lt;br /&gt;ಪ್ಲೀಸ್ ಸಿಟ್ ಅಂತ ಸೀಟು ಬಿಟ್ಟುಕೊಟ್ಟೆ&lt;br /&gt;ನಯವನ್ನೂ ನಾಜೂಕಿನಲ್ಲಿ ಬಳಸಬೇಕು&lt;br /&gt;ಅಂತ ಮನಸಿನಲ್ಲೇ ಅಂದುಕೊಂಡು ಮುಗುಳ್ನಕ್ಕೆ&lt;br /&gt;&lt;br /&gt;ಟ್ವೀಟುಗಳನ್ನು ಸ್ಕ್ರಾಲ್ ಮಾಡುತ್ತಿದ್ದವಳು&lt;br /&gt;ಬ್ಲಾಸ್ಟ್ಸ್ ಅಗೇನ್ ಅಂತ ಕೂಗಿದ್ದೇ ರೈಲಿನಲ್ಲಿ &lt;br /&gt;ಗಲಿಬಿಲಿ ಶುರುವಾಗಿ ಕೆಲವರು ಹೊರಗೆ ಹಾರಿ&lt;br /&gt;ಒಬ್ಬರ ಮೇಲೊಬ್ಬರು ಬಿದ್ದು ಆಕ್ರಂದನಗಳು &lt;br /&gt;ಹೇಷಾರವಗಳಾಗಿ ಅಕೋ ಅಲ್ಲಿ ಓಡಿ ಬರುತ್ತಿರುವ&lt;br /&gt;ರಕ್ತಸಿಕ್ತ ದೇಹವೊಂದು ನನಗೇ ಢಿಕ್ಕಿ ಹೊಡೆದು&lt;br /&gt;ನಾನು ಬೋರಲು ಬಿದ್ದು ಯಾರೋ ತುಳಿದುಕೊಂಡು ಹೋಗಿ&lt;br /&gt;ಮತ್ಯಾರೋ ಬಂದು ಕೈ ಹಿಡಿದೆತ್ತಿ ಹತ್ತಿರದ &lt;br /&gt;ಗೋಡೆಗೆ ಒರಗಿಸಿ ಕೂರಿಸಿ ನೀರು ಕೊಟ್ಟರು.&lt;br /&gt;&lt;br /&gt;೪&lt;br /&gt;ಆಗಲೇ ನನಗೆ ಅಳು ಮತ್ತೆ ನೆನಪಾದದ್ದು;&lt;br /&gt;ಕೆಂಪು ಇಂಕಿನ ಪೆನ್ನಿನಿಂದ ಪದ್ಯ ಬರೆದದ್ದು.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-6991114078301248868?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/6991114078301248868/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=6991114078301248868' title='18 Comments'/><link rel='edit' type='application/atom+xml' href='http://www.blogger.com/feeds/27009232/posts/default/6991114078301248868'/><link rel='self' type='application/atom+xml' href='http://www.blogger.com/feeds/27009232/posts/default/6991114078301248868'/><link rel='alternate' type='text/html' href='http://hisushrutha.blogspot.com/2011/07/blog-post_14.html' title='ಕವಿತೆ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>18</thr:total></entry><entry><id>tag:blogger.com,1999:blog-27009232.post-3303071844476339988</id><published>2011-07-11T10:10:00.000+05:30</published><updated>2011-07-11T10:10:39.434+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಇದೇ ಈ ಕ್ಷಣಕ್ಕೆ...</title><content type='html'>ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವುದೇ&lt;br /&gt;ನಿರಾಳ ಬದುಕಿನ ಯಶೋಸೂತ್ರ ಎಂದವರು&lt;br /&gt;ಸೂರ್ಯನನ್ನೇ ಕರಿಬಟ್ಟೆಯಿಂದ ಮುಚ್ಚಿ&lt;br /&gt;ಮಂದಬೆಳಕಿನ ದೀಪಗಳ ಕೆಳಗೆ&lt;br /&gt;ಮಿಕ್ಸ್ ಮಾಡಲು ಐಸನ್ನೋ ನೀರನ್ನೋ &lt;br /&gt;ಸ್ಪ್ರೈಟನ್ನೋ ಕಾಯುತ್ತ ಕೂತಿದ್ದಾರೆ&lt;br /&gt;ಅವರ ಮಾತನ್ನು ಜಗತ್ತು ಕೇಳುತ್ತಿಲ್ಲ.&lt;br /&gt;&lt;br /&gt;ಅತಿಯಾಗಿ ಸಿಟ್ಟು ಮಾಡುವ ಹುಡುಗಿಗೆ&lt;br /&gt;ಉಪ್ಪು ಕಮ್ಮಿ ಹಾಕಿದ ಉಪ್ಪಿಟ್ಟು ತಿನ್ನಿಸಿ&lt;br /&gt;ತುದಿಯಷ್ಟೇ ಕೆಂಪಗಾಗಿರುವ ಮೂಗಿಗೆ&lt;br /&gt;ಅಂಟಿಕೊಂಡಿರುವ ಗುಲಗುಂಜಿ ಒರೆಸುವಾಗ&lt;br /&gt;ತುಟಿ ಬಿರಿದರಳಿ ಮೊಗ ಹೂವಾಗಿದೆ&lt;br /&gt;ಇವರಾಡುವ ಮಾತು ಈ ಲೋಕದ್ದೇ ಅಲ್ಲ.&lt;br /&gt;&lt;br /&gt;ಕೆಲವೇ ಗಂಟೆಗಳ ಹಿಂದೆ, ಎತ್ತಿ ಹಿಡಿದ ಪರದೆಯ &lt;br /&gt;ಆಚೀಚೆ ನಿಂತಿದ್ದಾಗ ಸುಲಗ್ನೇ ಸಾವಧಾನ &lt;br /&gt;ಎಂದಿದ್ದ ಪುರೋಹಿತರಿಗೂ ಡೊಳ್ಳುಹೊಟ್ಟೆಯ ಬೀಗರು&lt;br /&gt;ಬಗ್ಗಿ ಬಗ್ಗಿ ಹೇಳುತ್ತಿದ್ದಾರೆ:&lt;br /&gt;ಸಾವಧಾನ, ನಿಧಾನವಾಗಿ ಆಗಲಿ ಊಟ.&lt;br /&gt;&lt;br /&gt;ಪಂಕ್ತಿಯ ಕೊನೆಯಲ್ಲಿ ಕುಳಿತಿದ್ದಾನೆ ಒಬ್ಬ ಹುಡುಗ&lt;br /&gt;ಅವರು ಬರುವುದರೊಳಗೆ ಎದ್ದು ಹೋಗಬೇಕು ಅಂತ &lt;br /&gt;ಕಣ್ಣು ಮೂಗು ಕಿವಿಗಳಿಂದಲೂ ತಿನ್ನುತ್ತಿದ್ದಾನೆ&lt;br /&gt;ಅಪಘಾತದಿಂದ ತಪ್ಪಿಸಿಕೊಳ್ಳಲೆಂದೇ ಅವಸರ ಮಾಡುತ್ತಿದ್ದಾನೆ.&lt;br /&gt;&lt;br /&gt;ಗಿಜಿಗಿಜಿ ತುಂಬಿದ ಮದುವೆಯ ಮನೆಯಲ್ಲಿ &lt;br /&gt;ಎಲ್ಲರೂ ಅವರವರ ಮಾತು ಆಡುತ್ತಿದ್ದಾರೆ.&lt;br /&gt;&lt;br /&gt;ಪಂಕ್ತಿಯ ಮಧ್ಯದಲ್ಲಿ ಒಂದು ಬಾಳೆ ಉಳಿದುಹೋಗಿದೆ &lt;br /&gt;ಹಸಿದ ಬೀಗರು ಎಡೆಶೃಂಗಾರಕ್ಕೆ ಹಾಕಿದ&lt;br /&gt;ಪದಾರ್ಥಗಳನ್ನು ನೋಡುತ್ತ ನಿಂತುಬಿಟ್ಟಿದ್ದಾರೆ.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-3303071844476339988?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/3303071844476339988/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=3303071844476339988' title='5 Comments'/><link rel='edit' type='application/atom+xml' href='http://www.blogger.com/feeds/27009232/posts/default/3303071844476339988'/><link rel='self' type='application/atom+xml' href='http://www.blogger.com/feeds/27009232/posts/default/3303071844476339988'/><link rel='alternate' type='text/html' href='http://hisushrutha.blogspot.com/2011/07/blog-post_11.html' title='ಇದೇ ಈ ಕ್ಷಣಕ್ಕೆ...'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>5</thr:total></entry><entry><id>tag:blogger.com,1999:blog-27009232.post-6360047421425428249</id><published>2011-07-03T22:21:00.000+05:30</published><updated>2011-07-03T22:22:20.225+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ನಡೆಯುವ ಕಪ್ಪೆ</title><content type='html'>&lt;br /&gt;ಅವತ್ತೊಂದು ಮಳೆಗಾಲದ ದಿನ, ಹೀಗೇ ಜೋರು ಮಳೆ.&lt;br /&gt;ನಮ್ಮೂರಿನ ರಸ್ತೆಯ ಪಕ್ಕದಲ್ಲೇ ದೊಡ್ಡ ಕೆರೆ.&lt;br /&gt;ಹುಟ್ಟಿ ಮೂರು ದಿನವಾದ ಕಪ್ಪೆಗಳು ನೀರಿನಿಂದ ಹೊರ-&lt;br /&gt;ಬಂದು ದಂಡೆ ಏರಿ ಕೋಡಿ ಹತ್ತಿಳಿದು ರಸ್ತೆಯನ್ನೂ ದಾಟಿ&lt;br /&gt;ಆಚೆ ಹೋಗುವ ಸರ-&lt;br /&gt;ಭರದಲ್ಲಿ ಚಲಿಸುವ ಜೋರು&lt;br /&gt;ವಾಹನಗಳ ಚಕ್ರಕ್ಕೆ ಸಿಲುಕಿ&lt;br /&gt;ಅಪ್ಪಚ್ಚಿಯಾಗಿ&lt;br /&gt;ಸತ್ತು ಹೋಗುತ್ತಿದ್ದಾಗ&lt;br /&gt;&lt;br /&gt;ಇದೊಂದು ಕಪ್ಪೆ ಕುಪ್ಪಳಿಸುವ ಬದಲು&lt;br /&gt;ನಡೆದು ಹೋಗುತ್ತಿತ್ತು.&lt;br /&gt;&lt;br /&gt;ಇದನ್ನು ನೋಡಿದ ಒಂದು ಪಿಕಳಾರ ಹಕ್ಕಿ ತಾನು&lt;br /&gt;ಹಾರುವುದರ ಬದಲು ಕುಪ್ಪಳಿಸತೊಡಗಿತು&lt;br /&gt;ಅಲ್ಲಿದ್ದ ನಾಯಿಯೊಂದು ನಡೆಯುವುದು ಬಿಟ್ಟು ಹಾರಿತು&lt;br /&gt;ಕೆರೆಯಿಂದ ಕತ್ತೆತ್ತಿ ನೋಡಿದ ಮೀನುಗಳು&lt;br /&gt;ದಂಡೆಯ ಮೇಲೆ ನಡೆದಾಡತೊಡಗಿದವು&lt;br /&gt;ಹೆಗ್ಗಣಕ್ಕೆ ತಲೆಕೆಟ್ಟು ಕೆರೆಗೆ ಹಾರಿ ಈಜಿತು&lt;br /&gt;ಈ ವಿಚಿತ್ರ ನೋಡುತ್ತ ವಾಹನಗಳೆಲ್ಲ ನಿಂತು&lt;br /&gt;ಬಿಟ್ಟವು. ನಡೆಯುತ್ತಿದ್ದ ಕಪ್ಪೆ ಅರಾಮಾಗಿ ರಸ್ತೆ&lt;br /&gt;ದಾಟಿತು. ನನಗೆ ಏನೂ ಮಾಡಲು ತೋಚದೆ&lt;br /&gt;&lt;br /&gt;ಕವನ ಬರೆದೆ.&lt;br /&gt;&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-6360047421425428249?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/6360047421425428249/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=6360047421425428249' title='13 Comments'/><link rel='edit' type='application/atom+xml' href='http://www.blogger.com/feeds/27009232/posts/default/6360047421425428249'/><link rel='self' type='application/atom+xml' href='http://www.blogger.com/feeds/27009232/posts/default/6360047421425428249'/><link rel='alternate' type='text/html' href='http://hisushrutha.blogspot.com/2011/07/blog-post.html' title='ನಡೆಯುವ ಕಪ್ಪೆ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>13</thr:total></entry><entry><id>tag:blogger.com,1999:blog-27009232.post-3628699013576609426</id><published>2011-06-25T13:14:00.001+05:30</published><updated>2011-06-25T13:16:12.554+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಟಂಗ್‌ಸ್ಟನ್ ಎಂದರೆ ಪ್ರೀತಿ</title><content type='html'>ಎಷ್ಟು ಸಣ್ಣ ಎಳೆ ಅದು ಹಿಡಿದಿಟ್ಟಿದ್ದು&lt;br /&gt;ಅದೆಷ್ಟು ಬೆಳಕು, ಜುಮ್ಮೆನಿಸುವ ವಿದ್ಯುತ್ತು&lt;br /&gt;ವಿರುದ್ಧ ಧ್ರುವಗಳನೂ ಜತೆಮಾಡಿದ ತಂತಿ&lt;br /&gt;ಸಂಚರಿಸಿದ ಕಿರಣಗಳು, ಯಾರು ಕಟ್ಟಿದರು ಬಿಲ್ಲು?&lt;br /&gt;&lt;br /&gt;ಅಳಿಸಿಬಿಡಬಹುದೇ ಹಾಗೆ ನೆನಪುಗಳನ್ನು, ಕರಿ-&lt;br /&gt;ಹಲಗೆಯ ಮೇಲೆ ಬರೆದ ಚಿತ್ರವನ್ನು ಒರೆಸಿದಂತೆ ವಸ್ತ್ರ&lt;br /&gt;ಮರೆಯಾಗಿಸಬಹುದೇ ಹಾಗೆ ಮರಳದಿಣ್ಣೆಯ ಮೇಲೆ &lt;br /&gt;ಕೊರೆದ ಅಕ್ಷರಗಳನ್ನು ಒಂದೇ ಭರತದ ಅಲೆ&lt;br /&gt;ತೊಳೆಯಬಹುದೇ ಹಾಗೆ ಹೋಳಿಯ ಬಣ್ಣ ಮೆತ್ತಿದ &lt;br /&gt;ಅಂಗಿಯನ್ನು ನೆನೆಸಿಟ್ಟಲ್ಲೇ ಬುರುಗಿನ ನೀರು&lt;br /&gt;&lt;br /&gt;ಎಷ್ಟೆಲ್ಲ ಕೆಲಸವಿದೆ- ಆರ್ಕುಟ್ಟಿನಲ್ಲಿನ ನಿನ್ನ ಸ್ಕ್ರಾಪು,&lt;br /&gt;ಫೇಸ್‌ಬುಕ್ಕಿನಲ್ಲಿನ ಮೆಸೇಜು, ಜಿಮೇಲಿನಲ್ಲಿನ ಇಮೇಲು,&lt;br /&gt;ಬ್ಲಾಗುಗಳಲ್ಲಿನ ಕಮೆಂಟು, ಮೊಬೈಲಿನಲ್ಲಿನ ಎಸ್ಸೆಮ್ಮೆಸ್ಸು...&lt;br /&gt;ಎಲ್ಲವನ್ನು ಡಿಲೀಟು ಮಾಡಿ, ನೀನು ಕೊಟ್ಟ ಕೀಚೈನು,&lt;br /&gt;ಪುಟ್ಟ ಟೆಡ್ಡಿಬೇರು, ಆರೇ ಸಾಲಿನ ಪತ್ರ, ಬಿಳಿನವಿಲಿನ ಚಿತ್ರ...&lt;br /&gt;ಎಲ್ಲ ಒಯ್ದು ಎಲ್ಲಿಡಲಿ? ಊರಾಚೆ ಅಷ್ಟೆಲ್ಲ ಜಾಗವಿಲ್ಲ.&lt;br /&gt;&lt;br /&gt;ನಕ್ಷತ್ರಗಳೆಲ್ಲ ಮಿಂಚುಹುಳುಗಳಾದರೆ &lt;br /&gt;ಚಂದ್ರ ಎಲ್ಲಿಗೆ ಹೋಗಬೇಕು ಪಾಪ?&lt;br /&gt;ಮೀನುಗಳೆಲ್ಲ ಸಮುದ್ರವನ್ನೇ ಬಯಸಿದರೆ&lt;br /&gt;ನದಿಯ ಕಲ್ಲಿನ ಏಕಾಂತಕ್ಯಾರು ಜೊತೆ?&lt;br /&gt;&lt;br /&gt;ಕತ್ತಲೆಗೆ ಹೆದರಿದವನಲ್ಲ ನಾನು,&lt;br /&gt;ಆದರೂ ಇವತ್ಯಾಕೋ ಹೆಜ್ಜೆ ಮುಂದಾಗುತ್ತಿಲ್ಲ;&lt;br /&gt;ಬಲ್ಬು ಹೋಗಿದೆ ಅಂತ ಗೊತ್ತಿದೆ,&lt;br /&gt;ಆದರೂ ಸ್ವಿಚ್ ಒತ್ತುವುದು ಬಿಡುವುದಿಲ್ಲ.&lt;br /&gt;&lt;br /&gt;[&lt;i&gt;Eternal Sunshine of the Spotless Mind ಸಿನೆಮಾ ನೋಡಿ..&lt;/i&gt;]&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-3628699013576609426?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/3628699013576609426/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=3628699013576609426' title='9 Comments'/><link rel='edit' type='application/atom+xml' href='http://www.blogger.com/feeds/27009232/posts/default/3628699013576609426'/><link rel='self' type='application/atom+xml' href='http://www.blogger.com/feeds/27009232/posts/default/3628699013576609426'/><link rel='alternate' type='text/html' href='http://hisushrutha.blogspot.com/2011/06/blog-post_25.html' title='ಟಂಗ್‌ಸ್ಟನ್ ಎಂದರೆ ಪ್ರೀತಿ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>9</thr:total></entry><entry><id>tag:blogger.com,1999:blog-27009232.post-966768558280438632</id><published>2011-06-14T13:30:00.003+05:30</published><updated>2011-06-14T13:32:34.401+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಅಮ್ಮನಿಗೆ</title><content type='html'>ಅವರು ಹೀಗಂದುದಕ್ಕೆ &lt;br /&gt;ನಾನು ಹೀಗಂದೆ &lt;br /&gt;ಎನ್ನುವಳು ಅಮ್ಮ&lt;br /&gt;&lt;br /&gt;ಯಾರಿಗಾಗಿ ಈ ಸಮರ್ಥನೆ ಅಮ್ಮಾ..&lt;br /&gt;ನನಗೆ ನೀನು ಗೊತ್ತು&lt;br /&gt;ನಿನಗೆ ನಾನು ಗೊತ್ತು&lt;br /&gt;ಅವರಿಗೂ ತಿಳಿದಿಲ್ಲವೆಂದಲ್ಲ&lt;br /&gt;ಪ್ರಶ್ನೆಯ ಸ್ವರ ಹೊರಬೀಳುವುದರೊಳಗೇ&lt;br /&gt;ಅದರ ಉತ್ತರಕ್ರಿಯೆಯೂ ಆಗಿರುತ್ತದೆ&lt;br /&gt;ಆದರೂ ಕೇಳುತ್ತಾರೆ&lt;br /&gt;&lt;br /&gt;ರಿಂಗಣವಾಗಿರಬಹುದು ಚಪ್ಪಾಳೆಯ ಮೊಳಗು&lt;br /&gt;ಸಭೆಯ ಸರ್ವರ ಮುಂದೆ&lt;br /&gt;ಮೆಚ್ಚಿರಬಹುದು ಅಹುದಹುದು ಎಂದು&lt;br /&gt;ಆದರೆ ಮುಚ್ಚಿದ ಹೊದರಿನ ಕೆಳಗಿರುವ ಮಿತಿಗಳೂ&lt;br /&gt;ಕದವಿಕ್ಕಿದ ಮನೆಯೊಳಗಿನ ಕತ್ತಲೆಯ ಕತೆಗಳೂ&lt;br /&gt;ಮರೆತ ಸಾಲು, ತಪ್ಪಿ ತಗ್ಗಿದ ಶೃತಿಗಳೂ&lt;br /&gt;ನಿನಗಷ್ಟೇ ಗೊತ್ತು.&lt;br /&gt;&lt;br /&gt;ಮಗ ಕಾರ್ನೆಟೋ ಕೊಡಿಸುವಾಗ&lt;br /&gt;ಐದನೇ ಕ್ಲಾಸಿನಲ್ಲಿ ರೇಖಾಗಣಿತದ ಮೇಷ್ಟ್ರು&lt;br /&gt;ಬರೆಸಿದ್ದ ಶಂಕುವಿನ ಚಿತ್ರ ನೆನಪಾಗಿದ್ದು&lt;br /&gt;ನಿನಗೇ ಹೊರತು ಅವರಿಗಲ್ಲ.&lt;br /&gt;ಆದರೂ ಹೇಳುತ್ತಾರೆ: ‘ಎಂಥಾ ರಸಭಂಗ!’&lt;br /&gt;&lt;br /&gt;ನೀನು ಅಲ್ಲಿಂದೀಚೆ ಬರುತ್ತಿದ್ದಂತೆಯೇ ಪ್ಲೇಟಿಗೆ ಹೊಯ್ದ&lt;br /&gt;ಹಲ್ವಾವನ್ನು ನೀಟಾಗಿ ಕತ್ತರಿಸಿ ಎತ್ತಿ&lt;br /&gt;ಕೈಗೆ ಬಾಯಿಗೆ ಹಲ್ಲಿಗೆ ಮೆತ್ತಿಕೊಳ್ಳುತ್ತ ಮೆಲ್ಲುತ್ತಾರೆ.&lt;br /&gt;ಕೆಂಪುಗಾರೆಯ ನೆಲದ ಮೇಲೆ ಓಡಾಡುವ ಇರುವೆಗಳು&lt;br /&gt;ತಲೆಯೆತ್ತಿ ನೊಡುತ್ತವೆ. ದಂಡುಪಾಳ್ಯದ&lt;br /&gt;ಗ್ಯಾಂಗಿನಲ್ಲಿ ಸಾಲು ಸಾಲು ಸಂಚಲನ.&lt;br /&gt;&lt;br /&gt;ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ,&lt;br /&gt;ನೀ ಸುಮ್ಮನಿರು ಎಂದರೆ ಅಮ್ಮ ಕೇಳುವುದಿಲ್ಲ. &lt;br /&gt;ನಾಳೆ ನಮ್ಮ ಮನೆಯಲ್ಲೂ ಮಾಡುತ್ತಾಳಂತೆ &lt;br /&gt;ಗೋಧಿ ಹಲ್ವಾ.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-966768558280438632?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/966768558280438632/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=966768558280438632' title='11 Comments'/><link rel='edit' type='application/atom+xml' href='http://www.blogger.com/feeds/27009232/posts/default/966768558280438632'/><link rel='self' type='application/atom+xml' href='http://www.blogger.com/feeds/27009232/posts/default/966768558280438632'/><link rel='alternate' type='text/html' href='http://hisushrutha.blogspot.com/2011/06/blog-post_14.html' title='ಅಮ್ಮನಿಗೆ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>11</thr:total></entry><entry><id>tag:blogger.com,1999:blog-27009232.post-4882270534958314330</id><published>2011-06-04T12:04:00.006+05:30</published><updated>2011-06-04T12:13:07.484+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಅಪ್ಪ ಅಮ್ಮನ ಮದುವೆಯ ಅಲ್ಬಮ್</title><content type='html'>&lt;span style="font-size: small;"&gt;ನಿಮ್ಮ ಮದುವೆಯ ಮಾಸಲು ಮುಖಪುಟದ ಅಲ್ಬಮ್ ಸವರುವಾಗ &lt;br /&gt;ಕಾಟನ್ ಶರ್ಟು-ಕಚ್ಚೆಪಂಚೆಯ ದೊಡ್ಡಜ್ಜ &lt;br /&gt;ಜಗುಲಿಕಟ್ಟೆಯ ಆ ಹಳೇ ಮರದ ಖುರ್ಚಿಯಲ್ಲಿ ಕೂತು&lt;br /&gt;ಕವಳ ಹಾಕುತ್ತಿದ್ದ ನೆನಪು.&lt;br /&gt;&lt;br /&gt;ನಿಮ್ಮ ಮದುವೆ ಅಲ್ಬಮ್ಮಿನ ಅಂಟಿಕೊಂಡ ಪುಟಗಳನ್ನು ಬಿಡಿಸುವಾಗ &lt;br /&gt;ಕೇಜಿಗಟ್ಟಲೆ ಮೂಸಂಬಿ-ದ್ರಾಕ್ಷಿ ಹಿಡಿದು ಮಾವ &lt;br /&gt;ಉಳವಿಯಿಂದ ಬಾಡಿಗೆ ಸೈಕಲ್ ಹೊಡೆದುಕೊಂಡು &lt;br /&gt;ನಡುಮಧ್ಯಾಹ್ನ ಕೆಂಪಾಗಿ ಬರುತ್ತಿದ್ದ ನೆನಪು.&lt;br /&gt;&lt;br /&gt;ನಿಮ್ಮ ಮದುವೆ ಅಲ್ಬಮ್ಮಿನ ಬ್ಲಾಕ್ ಅಂಡ್ ವ್ಹೈಟ್ ಫೋಟೋಗಳನ್ನು&lt;br /&gt;ಕವರಿನಿಂದ ಹುಷಾರಾಗಿ ಹೊರತೆಗೆಯುವಾಗ &lt;br /&gt;ಆ ನಶ್ಯದ ಡಬ್ಬಿಯ ಪುರೋಹಿತ ಭಟ್ಟರು ಒಮ್ಮೆ ನನ್ನ ಕೈ ನೋಡಿ&lt;br /&gt;ಭಾರೀ ಉಜ್ವಲ ದಿನಗಳ ಭವಿಷ್ಯ ಹೇಳಿದ ನೆನಪು.&lt;br /&gt;&lt;br /&gt;ನಿಮ್ಮ ಮದುವೆಯ ಆ ಫೋಟೋಗಳನ್ನು ಸ್ಕ್ಯಾನ್ ಮಾಡುವಾಗ&lt;br /&gt;ತನ್ನ ಯೌವನದ ದಿನಗಳಲ್ಲಿ ಕನ್ನಡಿ ಮುಂದೆ ನಿಂತ ಅಪ್ಪ &lt;br /&gt;ಮೀಸೆಯನ್ನು ಚೂಪಗೆ ಟ್ರಿಮ್ ಮಾಡಿಕೊಂಡು, ಮುಖಕ್ಕೆ ಪೌಡರ್ &lt;br /&gt;ಹಚ್ಚಿಕೊಳ್ಳುತ್ತಿದ್ದ ಬೆಳ್ಳನೆ ನೆನಪು.&lt;br /&gt;&lt;br /&gt;ಕಂಪ್ಯೂಟರ್ ಪರದೆಯ ಮೇಲೆ ಮೂಡಿದ ಆ ಫೋಟೋಗಳಿಗೆ&lt;br /&gt;ಟಚ್-ಅಪ್ ಕೊಟ್ಟು ರಕ್ಷಿಸಿ ಇಡುವಾಗ, ಅಮ್ಮ ನೈಟಿ ತೊಡಲೋ ಬೇಡವೋ&lt;br /&gt;ಅಂತ ವಾರಗಟ್ಟಲೆ ಯೋಚಿಸಿ ಪಕ್ಕದ ಮನೆಯವಳ ಬಳಿ ಚರ್ಚಿಸಿ&lt;br /&gt;ಕೊನೆಗೂ ಸೀರೆಯನ್ನೇ ಖಾಯಂ ಮಾಡಿದ ಹಚ್ಚನೆ ನೆನಪು.&lt;br /&gt;&lt;br /&gt;ಅಪ್ಪ-ಅಮ್ಮನ ಮದುವೆಯ ಫೋಟೋಗಳಲ್ಲಿ ನಾನಿಲ್ಲ&lt;br /&gt;ನನ್ನ ನೆನಪಿನ ಅಲ್ಬಮ್ಮಿನಲ್ಲಿ ಅಪ್ಪ, ಅಮ್ಮ ಮತ್ತು ಎಲ್ಲ.&lt;/span&gt;&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-4882270534958314330?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/4882270534958314330/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=4882270534958314330' title='11 Comments'/><link rel='edit' type='application/atom+xml' href='http://www.blogger.com/feeds/27009232/posts/default/4882270534958314330'/><link rel='self' type='application/atom+xml' href='http://www.blogger.com/feeds/27009232/posts/default/4882270534958314330'/><link rel='alternate' type='text/html' href='http://hisushrutha.blogspot.com/2011/06/blog-post.html' title='ಅಪ್ಪ ಅಮ್ಮನ ಮದುವೆಯ ಅಲ್ಬಮ್'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>11</thr:total></entry><entry><id>tag:blogger.com,1999:blog-27009232.post-5253710233293459813</id><published>2011-05-29T02:02:00.004+05:30</published><updated>2011-06-04T12:14:45.419+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಮುಳಕ</title><content type='html'>&lt;span style="font-size: small;"&gt;ನೋ, ಇದು ಪ್ಲಾಸ್ಟಿಕ್ಕಲ್ಲ ಕಣೋ, ಇಕೋ, ಒಮ್ಮೆ ಮುಟ್ಟಿ ನೋಡು&lt;/span&gt;&lt;br /&gt;&lt;span style="font-size: small;"&gt;ತಾಜಾ ಇದೆ ಹೂವು. ಕೆಸವಿನೆಲೆಮೇಲಿನ ಇಬ್ಬನಿ ಹನಿ,&lt;/span&gt;&lt;br /&gt;&lt;span style="font-size: small;"&gt;ಮುಟ್ಟಿದರೆ ನಾಚಿಕೊಳ್ಳುವ ಮುಚ್ಚಗನ ಎಲೆಗಳು,&lt;/span&gt;&lt;br /&gt;&lt;span style="font-size: small;"&gt;ಕಾಪಿಡದಿದ್ದರೆ ಕೊಳೆತುಹೋಗುವ ಕೊಯ್ದ ಹಣ್ಣು&lt;/span&gt;&lt;br /&gt;&lt;span style="font-size: small;"&gt;ಎಲ್ಲ - ಎಲ್ಲ ನಿಜವಾದ್ದು.&lt;/span&gt;&lt;br /&gt;&lt;span style="font-size: small;"&gt;ಚಳಿ ನೀಗುವ ಈ ಕೆಂಪನೆ ಮೃದು ರಗ್ಗು,&lt;/span&gt;&lt;br /&gt;&lt;span style="font-size: small;"&gt;ಫ್ರಿಜ್ಜಿನಿಂದ ಹೊರತೆಗೆದರೆ ಕರಗುವ ಐಸ್‌ಕ್ರೀಂ,&lt;/span&gt;&lt;br /&gt;&lt;span style="font-size: small;"&gt;ಕಿಡಿ ತಾಕಿದರೆ ಗಂಧ ಹೊಮ್ಮಿಸುವ ಲೋಭಾನ,&lt;/span&gt;&lt;br /&gt;&lt;span style="font-size: small;"&gt;ನೀರು ಹೊಯ್ದರೆ ಕೊತಕೊತ ಕುದಿಯುವ ಸುಣ್ಣದ ಕಲ್ಲು,&lt;/span&gt;&lt;br /&gt;&lt;span style="font-size: small;"&gt;ಬೆಳಕು ಹಾಯ್ದರೆ ಕಾಮನಬಿಲ್ಲು ಮೂಡಿಸುವ ಪಟ್ಟಕ,&lt;/span&gt;&lt;br /&gt;&lt;span style="font-size: small;"&gt;ಎಲ್ಲಾ ಸತ್ಯ. ಎಲ್ಲಿತ್ತು ಆ ಏಳು ಬಣ್ಣಗಳು,&lt;/span&gt;&lt;br /&gt;&lt;span style="font-size: small;"&gt;ಸುಡುಸುಡು ಬೆಂಕಿ, ಆ ಪರಿಮಳ, ಘನದೊಳಗಿನ ದ್ರವ,&lt;/span&gt;&lt;br /&gt;&lt;span style="font-size: small;"&gt;ನೆಮ್ಮದಿಯ ಕಾವು -ಅಂತೆಲ್ಲ ಕೇಳಬಾರದು.&lt;/span&gt;&lt;br /&gt;&lt;br /&gt;&lt;span style="font-size: small;"&gt;ಬಾಯೊಳಗಿಟ್ಟುಕೋ ಚೂರೇ ಮುರಿದು&lt;/span&gt;&lt;br /&gt;&lt;span style="font-size: small;"&gt;ಅಮ್ಮ ನಿನಗೇಂತಲೇ ಈ ಗಡಿಬಿಡಿಯಲ್ಲೂ ಮಾಡಿಕೊಟ್ಟಿದ್ದು&lt;/span&gt;&lt;br /&gt;&lt;span style="font-size: small;"&gt;ಹಲಸಿನ ಹಣ್ಣಿನ ಮುಳಕ ಎಂದರೆ ಅವನಿಗೆ ಪಂಚಪ್ರಾಣ&lt;/span&gt;&lt;br /&gt;&lt;span style="font-size: small;"&gt;ಅಂತ ಹಿಂದೆಲ್ಲೋ ಹೇಳಿದ್ದೆ. ಅದನ್ನೇ ನೆನಪಿಟ್ಟುಕೊಂಡಿದ್ದಾಳೆ.&lt;/span&gt;&lt;br /&gt;&lt;span style="font-size: small;"&gt;ಹಾಗೆ ದುರುಗುಟ್ಟಿಕೊಂಡು ನೋಡಬೇಡ, ಎಲ್ಲ ಸುಳ್ಳೆನ್ನಬೇಡ.&lt;/span&gt;&lt;br /&gt;&lt;br /&gt;&lt;span style="font-size: small;"&gt;ಅರ್ಥ ಮಾಡಿಕೋ, ಅಜ್ಜನಿಗೆ ನಾನೆಂದರೆ ಅಷ್ಟು ಪ್ರೀತಿ&lt;/span&gt;&lt;br /&gt;&lt;span style="font-size: small;"&gt;ಮೊಮ್ಮಗಳು ಏನು ಮಾಡಿಕೊಂಡಳೋ ಅಂತ ಭಯ&lt;/span&gt;&lt;br /&gt;&lt;span style="font-size: small;"&gt;ಮೂರು ಜನರಿಗೆ ಅಭಯ ತುಂಬಿ ಬರುವುದು&lt;/span&gt;&lt;br /&gt;&lt;span style="font-size: small;"&gt;ನೂರು ಯೋಜನ ದಾಟಿ ಬಂದಷ್ಟೇ ಕಷ್ಟ.&lt;/span&gt;&lt;br /&gt;&lt;span style="font-size: small;"&gt;ನಾಲ್ಕು ದಿನ ತಡವಾಗಿದೆ ಅಷ್ಟೇ.&lt;/span&gt;&lt;br /&gt;&lt;span style="font-size: small;"&gt;ನಮ್ಮ ಮದುವೆಯಲ್ಲಿ ಮನೆಯವರೆಲ್ಲ ಇರ್ತೀವಿ&lt;/span&gt;&lt;br /&gt;&lt;span style="font-size: small;"&gt;ಅಂತ ಅಜ್ಜನೇ ಹೇಳಿದ್ದಾನೆ.&lt;/span&gt;&lt;br /&gt;&lt;br /&gt;&lt;span style="font-size: small;"&gt;ನನಗೂ ತಿಳಿಸದೆ ನೀನು ಮಾಡಿಸಲು ಹಾಕಿದ&lt;/span&gt;&lt;br /&gt;&lt;span style="font-size: small;"&gt;ಮಾಂಗಲ್ಯದ ಗುಟ್ಟು ಅಕ್ಕಸಾಲಿಗ ಹೇಳಿಬಿಟ್ಟಿದ್ದಾನೆ.&lt;/span&gt;&lt;br /&gt;&lt;span style="font-size: small;"&gt;ತಯಾರಾಗಿದೆಯಂತೆ, ನೋಡಿಕೊಂಡು ಬರೋಣ ಬಾ.&lt;/span&gt;&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-5253710233293459813?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/5253710233293459813/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=5253710233293459813' title='1 Comments'/><link rel='edit' type='application/atom+xml' href='http://www.blogger.com/feeds/27009232/posts/default/5253710233293459813'/><link rel='self' type='application/atom+xml' href='http://www.blogger.com/feeds/27009232/posts/default/5253710233293459813'/><link rel='alternate' type='text/html' href='http://hisushrutha.blogspot.com/2011/05/blog-post_29.html' title='ಮುಳಕ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>1</thr:total></entry><entry><id>tag:blogger.com,1999:blog-27009232.post-949645248635572576</id><published>2011-05-18T16:23:00.000+05:30</published><updated>2011-05-18T16:23:17.507+05:30</updated><category scheme='http://www.blogger.com/atom/ns#' term='ಸು-ಲಲಿತ ಪ್ರಬಂಧ'/><category scheme='http://www.blogger.com/atom/ns#' term='ಅಂಕಿತ ಪುಸ್ತಕ'/><category scheme='http://www.blogger.com/atom/ns#' term='ಕನ್ನಡ ಪ್ರಭ'/><title type='text'>ಹೊಸ ಭಾವ</title><content type='html'>&lt;span style="font-size: small;"&gt;‘ನಿನ್ನ ಜೀವನದಲ್ಲಿ ಅತಿ ಹೆಚ್ಚು ಉಪ್ಪಿಟ್ಟು ತಿಂದ ದಿನಗಳು ಯಾವುದು?’ ಅಂತ ಯಾರಾದರೂ ಕೇಳಿದರೆ, ನಾನು ಸುಲಭವಾಗಿ ‘ಅದು ನನ್ನ ಅಕ್ಕನಿಗೆ ಗಂಡು ಹುಡುಕುವ ದಿನಗಳಲ್ಲಿ’ ಅಂತ ಉತ್ತರಿಸುತ್ತೇನೆ. &lt;br /&gt;&lt;br /&gt;ಅಕ್ಕ ಡಿಗ್ರಿಯಲ್ಲಿ ಡುಮ್ಕಿ ಹೊಡೆದದ್ದೇ ಮದುವೆಯಾಗಲಿಕ್ಕೆ ಅರ್ಹತೆ ಪಡೆದುಬಿಟ್ಟಳು. ‘ಶೇಷಭಟ್ರ ಮನೆ ಕೂಸಿಗೆ ಮದುವೆ ಮಾಡ್ತಾರಂತೆ. ಜಾತಕ ಹೊರಡಿಸಿದ್ದಾರಂತೆ’ ಎಂಬ ಸುದ್ದಿ ಊರಿನ ಬಾಯ್ಬಡುಕರ ಮುಂದಿನ ನೋಟೀಸ್ ಬೋರ್ಡಿನಲ್ಲಿ ತೂಗಾಡಿತು. ಆಮೇಲೆ ಆ ಸುದ್ದಿ ಹರಡಲಿಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಗಣಪತಣ್ಣನನ್ನು ಮೊದಲ್ಗೊಂಡು ಕೊನೇಮನೆ ಸೌಭದ್ರಕ್ಕನವರೆಗೆ ಎಲ್ಲರೂ ದೂರ್ವೆ ಕೊಯ್ಯುವ ನೆಪದಲ್ಲೋ, ಹೆಪ್ಪಿಗೆ ಮಜ್ಜಿಗೆ ಕೇಳುವ ನೆಪದಲ್ಲೋ, ಕುಡಗೋಲು ಮಸೆಯುವ ನೆಪದಲ್ಲೋ ನಮ್ಮನೆಗೆ ಬಂದು, ‘ಕೂಸಿನ ಜಾತಕ ಹೊಂಡ್ಸಿದ್ರಡ ಹೌದನೇ?’ ಅಂತ ಕೇಳಿಕೊಂಡು, ತಮ್ಮ ನೆಂಟರಿಷ್ಟರ ಪೈಕಿ ಮದುವೆಗೆ ಇರುವ ಗಂಡಿನ ಬಗ್ಗೆ ಒಂದು ಮಾತು ನಮ್ಮ ಕಿವಿಗೆ ಹಾಕಿ, ‘ನಿಮ್ಮನೆ ಕೂಸು ಬಿಡು, ಹೈಕ್ಲಾಸ್ ಇದ್ದು. ಅಲ್ದೇ ಮೊದಲೇ ಹುಡುಗಿಯರಿಗೆ ಬರ ಈಗ, ಯಾರರು ಫಾರಿನ್ನಗಿಪ್ಪವೇ ಹಾರ್‌ಸ್ಕ್ಯಂಡ್ ಹೋಗ್ತ ತಗ’ ಅಂತ ಹೊಗಳಿ ಹೋಗುತ್ತಿದ್ದರು. &lt;br /&gt;&lt;br /&gt;ಒಂದೇ ಇದ್ದ ಅಕ್ಕನ ಜಾತಕ ಜೆರಾಕ್ಸ್ ಮಷೀನಿನ ಗಾಜುಗಳ ನಡುವೆ ಕೂತು ಮೂವತ್ತು ಕಾಪಿಯಾಯಿತು. ಯಶವಂತ್ ಸ್ಟುಡಿಯೋದ ಹಸಿರು ಉದ್ಯಾನದ ಪೋಸ್ಟರಿನ ಮುನ್ನೆಲೆಯಲ್ಲಿ ನಿಂತ ಸೀರೆಯುಟ್ಟ ಅಕ್ಕ ಕೆಮೆರಾದ ಫ್ಲಾಶಿನಲ್ಲಿ ಬೆಳಗಿದಳು. ಒಂದು ವಾರದೊಳಗೆ ಅಕ್ಕನನ್ನು ನೋಡುವುದಕ್ಕೆ ಗಂಡಿನ ಕಡೆಯವರು ಧಾಳಿ ಇಡಲು ಶುರು ಮಾಡಿದರು.&lt;br /&gt;&lt;br /&gt;ಹುಡುಗಿಯರಿಗಿರುವ ಬೇಡಿಕೆಯ ಸಂಪೂರ್ಣ ಲಾಭ ಪಡೆದುಕೊಂಡ ಪೀಯೂಸಿ ಪಾಸಾಗಿದ್ದ ಅಕ್ಕ, ಹಳ್ಳಿಯಲ್ಲಿರುವ ಹುಡುಗ ಬೇಡವೇ ಬೇಡ ಅಂತ ಸಾರಾಸಗಟಾಗಿ ನಿರಾಕರಿಸಿಬಿಟ್ಟಿದ್ದಳು. ಆದರೆ ಆ ಕಂಡೀಶನ್ನು, ಜಾತಕ ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ವರ್ಗಾವಣೆಯಾಗುವ ನಡುವೆ ಎಲ್ಲೋ ತಪ್ಪಿಹೋಗಿಬಿಟ್ಟಿರುತ್ತಿತ್ತು. ಹೀಗಾಗಿ ಮೊದಮೊದಲು ಅಕ್ಕನನ್ನು ನೋಡಲು ಬಂದವರು ಹಳ್ಳೀಹುಡುಗರ ಪೋಷಕರೇ. ಹಳ್ಳಿಯವರಾದರೇನು ದಿಲ್ಲಿಯವರಾದರೇನು, ಹುಡುಗಿ ನೋಡಲು ಬಂದವರನ್ನು ಹಾಗೇ ಕಳಿಸಲಿಕ್ಕೆ ಬರುತ್ತದೆಯೇ? ದೂರದ ಊರಿನಿಂದ ಬಜಾಜ್ ಎಮ್‌ಎಯ್ಟಿಯಲ್ಲಿ ಧೂಳು ಹಾರಿಸುತ್ತಾ ಬಂದ ಹುಡುಗನ ಕಡೆಯವರಿಗೆ ಉಪ್ಪಿಟ್ಟು-ಕಾಫಿ ಮಾಡುವುದು ಅಮ್ಮನಿಗೆ ಅನಿವಾರ್ಯ ಕರ್ಮವಾಯಿತು. ಹಳ್ಳಿಯವರಾದರೆ, ತನ್ನ ತಂದೆಯ ಜೊತೆಗೋ ಮಾವನ ಜೊತೆಗೋ ಹುಡುಗನೇ ಬಂದುಬಿಟ್ಟಿರುತ್ತಿದ್ದ. ಆದರೆ ಹುಡುಗ ಪರ ಊರಿನಲ್ಲಿರುವವನಾದರೆ, ಮೊದಲ ಭೇಟಿಯಲ್ಲಿ ಹುಡುಗನ ತಂದೆ ಮತ್ತು ಹುಡುಗನ ಮಾವ ಅಥವಾ ಹತ್ತಿರದ ಯಾರೋ ನೆಂಟ -ನೋಡಲು ಬರುತ್ತಿದ್ದುದು. ಜಾಗತೀಕರಣದ ಪರಿಣಾಮವೋ, ಪೇಟೆಯೆಡೆಗಿನ ಆಕರ್ಷಣೆಯೋ, ಟೀವಿ-ಗೀವಿಗಳಲ್ಲಿ ನೋಡಿದ ಸಿಟಿಲೈಫಿನ ಥಳುಕುಬಳುಕಿನ ಮೋಡಿಯೋ ಅಥವಾ ತನ್ನ ಓರಗೆಯ ಹುಡುಗಿಯರ ಗಂಡಂದಿರನ್ನು ನೋಡಿದ್ದ ಪ್ರಭಾವವೋ ಏನೋ, ಈ ಹಳ್ಳಿಯ ಹುಡುಗರೆಲ್ಲ ಅಕ್ಕನಿಗೆ ಬೆಪ್ಪುತಕ್ಕಡಿಗಳಂತೆ ಕಾಣಿಸುತ್ತಿದ್ದರು. ಬೆಂಗಳೂರಿನಲ್ಲಿರುವವ, ಅಮೆರಿಕೆಗೆ ಹೋಗಿಬಂದವ, ಸಾಫ್ಟ್‌ವೇರ್ ಇಂಜಿನಿಯರು, ಓನ್ ಫ್ಲಾಟು, ಸ್ವಿಫ್ಟ್ ಕಾರು -ಇತ್ಯಾದಿ ಶಬ್ದಗಳು ಅಡುಗೆಮನೆಯಲ್ಲೋ ರೂಮಿನಲ್ಲೋ ನಿಂತು ಜಗುಲಿಯಲ್ಲಿನ ಮಾತುಗಳನ್ನು ಕದ್ದು ಕೇಳುತ್ತಿದ್ದ ಅಕ್ಕನಿಗೆ ಖುಶಿ ತರುತ್ತಿದ್ದವು. &lt;br /&gt;&lt;br /&gt;ವಿಷಯ ಎಂದರೆ- ಬಂದ ಅಭ್ಯಾಗತರೊಂದಿಗೆ ಒಳ್ಳೆಯ ಮಾತಾಡಿ ಸಂಭಾಳಿಸುವ ಸಂಕಷ್ಟಲ್ಲಿರುತ್ತಿದ್ದ ಅಪ್ಪ, ಉಪ್ಪಿಟ್ಟಿನ ರುಚಿ ಸರಿಯಾಗಿದೆಯೋ ಇಲ್ಲವೋ ಎಂಬ ಆತಂಕದಲ್ಲಿರುತ್ತಿದ್ದ ಅಮ್ಮ, ಮತ್ತೊಂದು ಹೊಸ ನಾಟಕ ಪ್ರದರ್ಶನಕ್ಕೆ ಸೀರೆಯಂತಹ ತನ್ನಿಷ್ಟದ್ದಲ್ಲದ ಉಡುಗೆ ತೊಡುತ್ತಿದ್ದ ಅಕ್ಕ -ಇವರೆಲ್ಲರ ನಡುವೆ ಈ ಸನ್ನಿವೇಷದ ನಿಜವಾದ ಮಜಾ ತೆಗೆದುಕೊಳ್ಳುತ್ತಿದ್ದುದು ನಾನು! ಈ ಹುಡುಗಿ ನೋಡಲಿಕ್ಕೆಂದು ಬಂದ ಹುಡುಗರೆಲ್ಲ ಒಂದು ತರಹದ ವಿಚಿತ್ರ ಸೋಗಿನಲ್ಲಿರುತ್ತಿದ್ದರು. ನೀಟಾಗಿ ಇಸ್ತ್ರಿ ಮಾಡಿದ ಪ್ಯಾಂಟು ಧರಿಸಿ, ಇನ್‌ಶರ್ಟ್ ಮಾಡಿಕೊಂಡು, ಫಳಫಳ ಹೊಳೆಯುವ ತೊಳೆದ ಚಪ್ಪಲಿ ಹಾಕಿಕೊಂಡು ಬಂದಿರುತ್ತಿದ್ದ ಇವರು ಟೈ ಒಂದು ಇದ್ದರೆ ಥೇಟ್ ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೆ ಕಾಣುತ್ತಿದ್ದರು. ಇವರು ಧರಿಸಿದ ಬಿಳಿಯಂಗಿಯ ಮೇಲೆ ನಮ್ಮೂರ ರಸ್ತೆಯ ಧೂಳಿನ ಕಣಗಳು ಬಿಂದಾಸ್ ಕೂತು ರಾರಾಜಿಸುತ್ತಿದ್ದವು. ನಗೆಯೆಂಬುದು ಇವರ ತುಟಿಗಳಿಗೇ ಪೇಟೆಂಟ್ ಆಗಿಹೋಗಿರುತ್ತಿತ್ತು. ‘ನಾನೇ ಹುಡುಗಿ ಅಪ್ಪ, ಇವಳು ನಮ್ಮನೆಯವಳು, ಇಂವ ಹುಡುಗಿ ತಮ್ಮ’ ಅಂತೆಲ್ಲ ಅಪ್ಪ ಪರಿಚಯಿಸಿಕೊಡುವಾಗ ಈ ಬಕರಾ, ಅಪ್ಪ-ಅಮ್ಮರ ಜೊತೆಗೆ ನನಗೂ ‘ಹೆಹೆ, ನಮಸ್ಕಾರ’ ಅಂತ ಕೈ ಮುಗಿಯುತ್ತಿದ್ದ. ಬಹುಶಃ ನನಗಿಂತ ಹಿರಿಯವರಿಂದ ಅನೇಕ ನಮಸ್ಕಾರಗಳನ್ನು ನಾನು ಪಡೆದದ್ದೂ ಆ ದಿನಗಳಲ್ಲೇ ಇರಬೇಕು! &lt;br /&gt;&lt;br /&gt;ಅಕ್ಕ ಅಡುಗೆಮನೆಯಿಂದ ಉಪ್ಪಿಟ್ಟಿನ ತಟ್ಟೆಗಳನ್ನು ಟ್ರೇಯಲ್ಲಿಟ್ಟುಕೊಂಡು ಬರುವಾಗ ನನ್ನೀ ಭಾವೀ ಭಾವಂದಿರ ಮುಖ ನೋಡುವ ಹಾಗಿರುತ್ತಿತ್ತು. ಸಿಗುತ್ತಿದ್ದ ಆ ಎರಡ್ಮೂರು ನಿಮಿಷಗಳಲ್ಲೇ ಹುಡುಗಿಯನ್ನು ಪೂರ್ತಿಯಾಗಿ ಅಳೆದುಬಿಡುವ ಸಾಮರ್ಥ್ಯವನ್ನು ಈಗಾಗಲೇ ತಮ್ಮ ಅನುಭವದಿಂದ ಸಂಪಾದಿಸಿಕೊಂಡಿರುತ್ತಿದ್ದ ಈ ಭಾವಂದಿರು, ಅಕ್ಕ ಟ್ರೇಯಿಂದ ಉಪ್ಪಿಟ್ಟಿನ ತಟ್ಟೆಗಳನ್ನು ಟೀಪಾಯಿಯ ಮೇಲಿಟ್ಟು, ಅಮ್ಮ ಹೇಳಿದ ‘ತಗಳಿ, ನಮ್ಮನೆ ಕೂಸೇ ಮಾಡಿದ್ದು ಉಪ್ಪಿಟ್ಟು’ ಎಂಬ ಶುದ್ಧ ಸುಳ್ಳಿನ ನುಡಿಗೆ ‘ಓಹೋ?’ ಎಂದು ಮುಗುಳ್ನಕ್ಕು ತಲೆಯಾಡಿಸಿ, ತಟ್ಟೆಗೂ ಸ್ಪೂನಿಗೂ ಕೈ ಹಾಕುವ ಈ ದೃಶ್ಯ, ಎಲ್‌ಬಿಡಬ್ಲೂ ಅಪೀಲನ್ನು ಮತ್ತೆಮತ್ತೆ ತೋರಿಸುವ ಕ್ರಿಕೆಟ್ಟಿನಾಟದ ರಿಪ್ಲೇಯಂತೆ ಪ್ರತಿ ವಧುಪರೀಕ್ಷೆಯಲ್ಲೂ ಸಾಮಾನ್ಯವಾಗಿರುತ್ತಿತ್ತು. ಈ ಹುಡುಗರು ತಮ್ಮ ಮಾವ-ಅತ್ತೆಯರ -ಅದಕ್ಕೂ ಹೆಚ್ಚಾಗಿ ಅಡುಗೆಮನೆಯಲ್ಲಿ ಕೇಳಿಸಿಕೊಳ್ಳುತ್ತಲೇ ಇರಬಹುದಾದ ಹುಡುಗಿಯ- ಮನ ಗೆಲ್ಲಲೆಂದು ಅನೇಕ ಕಸರತ್ತು ನಡೆಸುತ್ತಿದ್ದರು. ತಮ್ಮ ತಂದೆ ‘ಯಮ್ಮನೆ ಮಾಣಿಗೆ ಒಂದೇ ಒಂದು ಚಟ ಇಲ್ಲೆ. ತಪ್ಪಿ ಎಲೆ-ಅಡಿಕೆ ಸಹ ಹಾಕದಿಲ್ಲೆ. ಜಾಬಲ್ಲಿ ಇಲ್ದೇ ಇದ್ರೆ ಎಂತಾತು? ಆರು ಎಕರೆ ತೋಟ ಇದ್ದು. ಮನೇಲಿ ಸಕಲ ಸೌಕರ್ಯವೂ ಇದ್ದು. ಕೈಕಾಲಿಗೆ ಆಳು ಇದ್ದ. ಪ್ಯಾಟೆ ಮನೇಲಿ ಇದ್ದಂಗೇ ಆರಾಮಾಗಿ ಇರ್ಲಕ್ಕು ನಿಮ್ಮನೆ ಕೂಸು’ ಅಂತೆಲ್ಲ ಹೇಳುವಾಗ, ಅದಾಗಲೇ ನನ್ನಕ್ಕನ ಸೌಂದರ್ಯಕ್ಕೆ ಮರುಳಾಗಿರುತ್ತಿದ್ದ ಈ ಭಾವಿ ಭಾವ ಪ್ರತಿಯೊಂದಕ್ಕೂ ತಲೆಯಾಡಿಸುತ್ತಿದ್ದ. ಎಲ್ಲಾ ಮುಗಿದು, ‘ಸರಿ. ಹುಡುಗ-ಹುಡುಗಿ ನೋಡಿ ಆತು. ಇನ್ನು ನಿಂಗ್ಳ ನಿರ್ಧಾರ ಲಘೂ ತಿಳಿಸಿ’ ಅಂತ ಹೇಳಿ, ನಿರ್ಣಯವನ್ನು ಥರ್ಡ್ ಅಂಪೇರಿಗೆ ವರ್ಗಾಯಿಸಿ ಅವರು ಜಾಗ ಖಾಲಿ ಮಾಡುತ್ತಿದ್ದರು. ಅವರಿಗೂ ಗೊತ್ತಿತ್ತು: ಇಲ್ಲಿ ಆಟಗಾರಳೇ ಥರ್ಡ್ ಅಂಪೇರೂ! ಅವಳದೇ ಕೊನೆಯ ನಿರ್ಧಾರ! ಹುಡುಗ ಔಟೋ ನಾಟೌಟೋ ಎಂದು ತೀರ್ಮಾನಿಸುವ ಸಿಗ್ನಲ್ಲಿನ ಸ್ವಿಚ್ಚು ಅಕ್ಕನ ಕೈಯಲ್ಲೇ ಇರುತ್ತಿತ್ತು. &lt;br /&gt;&lt;br /&gt;ಅವರು ಅತ್ತ ಹೋದಮೇಲೆ ಅಕ್ಕ ಆ ಹುಡುಗ ಹೇಗೆ ಬೆಪ್ಪನಂತಿದ್ದನೆಂದು ನನ್ನ ಮತ್ತು ಅಮ್ಮನ ಬಳಿ ಹೇಳಿಕೊಂಡು ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದಳು. ಮಿಕ್ಕಿರುತ್ತಿದ್ದ ಉಪ್ಪಿಟ್ಟು ತಿನ್ನುತ್ತಾ ನಾನು, ಈ ಭಾವನೂ ಔಟ್ ಆದುದಕ್ಕೆ, ಆತನ ಪ್ರದರ್ಶನವೆಲ್ಲ ವೇಸ್ಟ್ ಆದುದಕ್ಕೆ ಅಯ್ಯೋ ಪಾಪ ಎಂದುಕೊಳ್ಳುತ್ತಿದ್ದೆ. ಅಮ್ಮ-ಅಪ್ಪಂದಿರು ಮಾತ್ರ, ಅಕ್ಕನಿಗೆ ಅದ್ಯಾವತ್ತು ಬುದ್ಧಿ ಬರುತ್ತದೋ, ಯಾವಾಗ ಗ್ರೀನ್ ಸಿಗ್ನಲ್ಲು ಕೊಡುತ್ತಾಳೋ ಎಂಬ ಚಿಂತೆಯಲ್ಲಿ ಕಾಫಿ ಕುಡಿಯುತ್ತಿದ್ದರು.&lt;br /&gt;&lt;br /&gt;ಅಕ್ಕ ಕೊನೆಗೂ ಒಪ್ಪಿದ್ದು ಬೆಂಗಳೂರಿನ ಸಾಫ್ಟ್‌ವೇರ್ ಮಾಣಿಯನ್ನೇ. ಅಕ್ಕನನ್ನು ನೋಡಲು ಟೀಶರ್ಟ್ ಧರಿಸಿ ಪ್ಲೇಬಾಯ್ ಥರ ಬಂದಿದ್ದ ಈ ಹೊಸ ಭಾವ ಮೊದಲು ಸಂಪಾದಿಸಿದ್ದು ನನ್ನ ಗೆಳೆತನ! ಇವನ ಅಪ್ಪ ನನ್ನ ಅಪ್ಪನೊಂದಿಗೆ ಹುಡುಗನ ಗುಣಗಾನದಲ್ಲಿ ತೊಡಗಿದ್ದಾಗ ಅಲ್ಲಿಂದ ಮೆಲ್ಲನೆದ್ದುಬಂದ ಇವನು, ನನ್ನನ್ನು ಹೊರಕಟ್ಟೆಗೆ ಕರೆದೊಯ್ದು ‘ಯಾವ ಕಾಲೇಜು, ಏನು ಓದ್ತಿದೀ, ಮುಂದೇನು ಮಾಡಬೇಕು ಅಂತಿದೀಯಾ, ಜೂನಿಯರ್ ಕಾಲೇಜಿನಲ್ಲಿ ಈಗಲೂ ಆ ಲೆಕ್ಚರರ್ ಇದಾರಾ’ ಅಂತೆಲ್ಲ ಕೇಳಿ ಮೊದಲ ವಿಕೆಟ್ಟು ಗಳಿಸಿಬಿಟ್ಟ. ಅಪ್ಪ-ಅಮ್ಮಂದಿರಂತೂ ಇವರು ನೋಡಲು ಬರುತ್ತಿರುವ ಸುದ್ದಿ ಕೇಳಿಯೇ ಆಸ್ಟ್ರೇಲಿಯಾ ಎದುರಿನ ಕೀನ್ಯಾ ಆಟಗಾರರಂತೆ ಮೊದಲೇ ಶರಣಾಗಿಹೋಗಿದ್ದರು. ಇನ್ನು ಥರ್ಡ್ ಅಂಪೇರ್ ಡಿಸಿಷನ್ ಒಂದೇ ಪೆಂಡಿಂಗ್ ಇದ್ದುದು. ಕನ್ನಡಕದ ಭಾವ, ನಾವೆಲ್ಲ ನಿಬ್ಬೆರಗಾಗುವಂತೆ ಅಕ್ಕನನ್ನೂ ಹೊರಕಟ್ಟೆಗೆ ಕರೆದೊಯ್ದು ಅದೇನೇನೋ ಮಾತಾಡಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಆಟ ಮುಗಿಸಿಯೇಬಿಟ್ಟ!&lt;br /&gt;&lt;br /&gt;ಧಾಮ್‌ಧೂಮ್ ಎಂದು ಮುಗಿದುಹೋದ ಮದುವೆಯ ನಂತರ ಈ ಹೊಸ ಭಾವ ನಮ್ಮ ಮನೆ ಅಳಿಯನಾಗಲು, ಎಲ್ಲರೊಂದಿಗೆ ಹೊಂದಿಕೊಳ್ಳಲು ಸ್ವಲ್ಪ ಕಾಲವೇ ಹಿಡಿಯಿತು. ಮೂಲ ಹಳ್ಳಿಯವನೇ ಆದರೂ ಅದಾಗಲೇ ಬೆಂಗಳೂರಿನ ಗತ್ತುಗಳನ್ನು ಮೈಮೇಲೆ ಹಾಕಿಕೊಂಡಿದ್ದ ಭಾವ, ನಮ್ಮ ಮನೆಯ ಗಾರೆ ನೆಲ, ಕತ್ತಲೆಯ ನಡುಮನೆ, ಬೋಲ್ಟು ಕೂರದ ಬೆಡ್‌ರೂಮಿನ ಬಾಗಿಲು, ಜಾರುವ ಬಚ್ಚಲುಕಲ್ಲು, ಸುಳಿದಾಡುವ ನೆಂಟರ ನಡುವೆ ನುಣುಚಿಕೊಳ್ಳುವ ಹೆಂಡತಿ -ಇವುಗಳೊಂದಿಗೆ ಹೇಳಿಕೊಳ್ಳಲಾಗದ ಅಸಮಾಧಾನ ಅನುಭವಿಸುತ್ತಾ ಕಷ್ಟ ಪಡುತ್ತಿದ್ದುದು ನನಗೆ ಅರ್ಥವಾಗುತ್ತಿತ್ತು. ನಮಗೂ ಈ ಹೊಸ ಅಳಿಯದೇವನನ್ನು, ಬೀಗರನ್ನು, ಅವರ ಕಡೆಯ ನೆಂಟರನ್ನು ಸಂಭಾಳಿಸುವ, ಅವರಿಗೆ ಅಭಾಸವಾಗದಂತೆ ನಡೆದುಕೊಳ್ಳುವ ಕಷ್ಟ ಇತ್ತು. ಮಧ್ಯಾಹ್ನದ ಊಟದ ನಂತರ ‘ಸುಸ್ತಾಗಿದ್ದರೆ ರೂಮಿಗೆ ಹೋಗಿ ಮಲಗಿ’ ಅಂತ ಅಪ್ಪ ಕೇಳಿದರೆ, ಅದೆಷ್ಟೇ ನೇರ ನಡೆಯವನಾದರೂ ಭಾವ ‘ಅಯ್ಯೋ, ಎಂಥಾ ಸುಸ್ತೂ ಇಲ್ಲೆ’ ಅಂತ, ಜಗುಲಿಯ ಕಂಬಳಿಯ ಮೇಲೇ ಕೂತು ತೂಕಡಿಸುತ್ತಿದ್ದ. ಅಂತೂ ಭಾವ ದಿನ ಕಳೆದಂತೆ, ಹಬ್ಬಗಳಿಗೆ ಬಂದು-ಹೋಗಿ ಮಾಡುತ್ತ, ಫೋನಿನಲ್ಲಿ ಮಾತಾಡುತ್ತಾ ಹಳಬನಾದ. ಅವನ ಬೆಂಗಳೂರಿನ ಮನೆಗೆ ಹೋಗಿದ್ದಾಗ ನಮ್ಮ ಮನೆಯಲ್ಲಿ ಆತ ಅನುಭವಿಸಿದ್ದ ಧರ್ಮಸಂಕಟಗಳನ್ನೆಲ್ಲ ನಾವು ಇಲ್ಲಿ ಅನುಭವಿಸಿದೆವು. ಸರಳತೆಗೆ ಹೊಂದಿಕೊಳ್ಳುವುದಕ್ಕಿಂತ ಆಡಂಬರಕ್ಕೆ ಹೊಂದಿಕೊಳ್ಳುವ ಕಷ್ಟ ದೊಡ್ಡದು ಅಂತ ಅರಿತುಕೊಂಡೆವು. &lt;br /&gt;&lt;br /&gt;ಓದು ಮುಗಿಸುವ, ಕೆಲಸ ಹುಡುಕುವ, ನಗರದಲ್ಲಿ ಸೆಟಲ್ ಆಗುವ ಜರೂರಿನಲ್ಲಿ ಮುಳುಗಿಹೋಗಿದ್ದ ನನಗೆ ಇವೆಲ್ಲ ನೆನಪಾದದ್ದು, ‘ಇಪ್ಪತ್ತೇಳು ವರ್ಷ ಆತು ನಿಂಗೆ. ಮನೆಗೆ ಸುಮಾರೆಲ್ಲ ಜಾತಕ ಬೈಂದು. ನಿನ್ನೆ ಬಂದಿದ್ದೋರು ಹೇಳಿದ, ಕೂಸಿಗೆ ಕಾನಸೂರು ಆತಡ. ಬೆಂಗಳೂರಲ್ಲೇ ಯಾವುದೋ ಕಂಪನೀಲಿ ಕೆಲಸ ಮಾಡ್ತಡ. ಮೊಬೈಲ್ ನಂಬರ್ ಕೊಡಸ್ತಿ. ಮೊದಲು ನಿಂಗನೇ ಎಲ್ಲಾದ್ರೂ ಮೀಟ್ ಆಗಿ ಮಾತಾಡಿ. ನಿಮಗೆ ಪರಸ್ಪರ ಒಪ್ಪಿಗೆ ಆತು ಅಂದ್ರೆ ನಾವು ಮುಂದುವರಿತ್ಯ. ಅಡ್ಡಿಲ್ಯಾ?’ ಅಂತ ಅಪ್ಪ ಫೋನ್ ಮಾಡಿ ಕೇಳಿದಾಗ. &lt;br /&gt;&lt;br /&gt;ಅಪ್ಪ ಕೊಟ್ಟ ನಂಬರಿಗೆ ಫೋನ್ ಮಾಡಿದೆ. ಕಾಫಿ ಡೇಯ ಕುರ್ಚಿಯಲ್ಲಿ ವಿಕೆಟ್ಟು ಉದುರಿತು. ನಿಶ್ಚಿತಾರ್ಥದ ದಿನ ಅವರ ಮನೆಗೆ ಹೋದಾಗ, ಈಗಾಗಲೇ ಫೇಸ್‌ಬುಕ್ಕಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಪರಿಚಯವಾಗಿಹೋಗಿದ್ದ ಆಕೆಯ ಭೇಷ್ ತಮ್ಮ ಸಂಪತ್, ಬಿಳೀ ಜುಬ್ಬಾ ಧರಿಸಿ ‘ಇವನೇನಾ ಹೊಸ ಭಾವ?’ ಎಂಬಂತೆ ನನ್ನನ್ನು ನೋಡುತ್ತಿದ್ದ. ಇವನಿಗೊಂದು ಡೈರಿಮಿಲ್ಕ್ ಹಿಡಿದುಕೊಂಡು ಬರಬೇಕಿತ್ತು ಅಂತ ಅನಿಸಿತಾದರೂ ಈಗಾಗಲೇ ಬುಟ್ಟಿಗೆ ಬಿದ್ದವನಿಗೆ ಕಾಳು ಹಾಕುವುದ್ಯಾಕೆ ಅಂತ ಸುಮ್ಮನಾದೆ. ಆದರೆ, ಹುಡುಗಿಗೆ ಉಂಗುರ ತೊಡಿಸುವಾಗ ‘ಅವತ್ತು ನೋಡಿದ ಕೂಸು ಇವಳೇ ಸೈಯಾ ಕರೆಕ್ಟಾಗಿ ನೋಡಿಕೊಳ್ಳೋ. ಒಂದೇ ಸಲ ನೋಡಿದ್ದು, ಮರೆತು ಹೋಗಿರ್ತು’ ಅಂತ ಮಾವನ ಕಡೆಯವರ್ಯಾರೋ ಕಿಚಾಯಿಸುವಾಗ, ನಮ್ಮ ಮನೆಗಳಿಗೆ ತಿಳಿಸದಂತೆ ಲಾಲ್‌ಭಾಗ್, ಫೋರಮ್ ಮಾಲ್, ನಂದಿಬೆಟ್ಟ ಅಂತೆಲ್ಲ ಸುತ್ತಿದ್ದ ನಮ್ಮ ಜಂಟಿ ಫೋಟೋಗಳನ್ನು ಅಲ್ಬಮ್ಮಿನಲ್ಲಿ ನೋಡಿಬಿಟ್ಟಿರಬಹುದಾದ ಸಂಪತ್, ಅದನ್ನು ಈಗ ಬಾಯಿಬಿಡದಿರಲಪ್ಪಾ ಅಂತ ನಾನು ಪ್ರಾರ್ಥಿಸುತ್ತಿದ್ದೆ. ಹೊಸ ಭಾವನ ತಳಮಳ ಸಂಪೂರ್ಣ ಅರ್ಥವಾದವನಂತೆ, ಅವನು ಮುಗುಳ್ನಕ್ಕ. ನಾನು ಕಣ್ಣು ಹೊಡೆದೆ. ಸುಳ್ಳೇ ಸಂಕೋಚವನ್ನು ಆವಾಹಿಸಿಕೊಂಡು, ಹೊಸಬನಂತೆ ನಟಿಸುವ ಪ್ರಯತ್ನ ಮಾಡಿದೆ. ಉಪ್ಪಿಟ್ಟಿನ ಘಮ ಅಡುಗೆಮನೆಯಿಂದ ತೇಲಿಬರುತ್ತಿತ್ತು.&lt;/span&gt;&lt;br /&gt;&lt;br /&gt;&lt;span style="font-size: small;"&gt;&lt;span style="color: #660000;"&gt;&amp;nbsp;[&lt;/span&gt;&lt;i style="color: #660000;"&gt;ಕನ್ನಡ ಪ್ರಭ - ಅಂಕಿತ ಪುಸ್ತಕ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆಯ ಯುವ ವಿಭಾಗದಲ್ಲಿ ಬಹುಮಾನ&lt;/i&gt;&lt;span style="color: #660000;"&gt;.]&lt;/span&gt;&lt;i&gt;&lt;br /&gt;&lt;/i&gt;&lt;/span&gt;&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-949645248635572576?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/949645248635572576/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=949645248635572576' title='27 Comments'/><link rel='edit' type='application/atom+xml' href='http://www.blogger.com/feeds/27009232/posts/default/949645248635572576'/><link rel='self' type='application/atom+xml' href='http://www.blogger.com/feeds/27009232/posts/default/949645248635572576'/><link rel='alternate' type='text/html' href='http://hisushrutha.blogspot.com/2011/05/blog-post_18.html' title='ಹೊಸ ಭಾವ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>27</thr:total></entry><entry><id>tag:blogger.com,1999:blog-27009232.post-1791557080400221743</id><published>2011-05-09T10:59:00.001+05:30</published><updated>2011-05-09T13:17:32.331+05:30</updated><category scheme='http://www.blogger.com/atom/ns#' term='ಬಾವಿ'/><category scheme='http://www.blogger.com/atom/ns#' term='ಸು-ಲಲಿತ ಪ್ರಬಂಧ'/><title type='text'>ಬಾವಿಯ ಸುತ್ತ ಭಾವಬಂಧ</title><content type='html'>ಐವತ್ತು ವರ್ಷಗಳ ಹಿಂದೆ ನಮ್ಮೂರಲ್ಲಿ ಇದ್ದುದು ಐದೋ ಆರೋ ಮನೆಗಳಂತೆ. ಮೂಲ ಮನೆಯಿಂದ ಬೇರಾಗಿ ಬಂದ ನನ್ನ ಅಜ್ಜ ಒಂದು ಪುಟ್ಟ ಸ್ವಾಂಗೆಮನೆ ಕಟ್ಟಿಕೊಂಡು ಸಂಸಾರ ನಡೆಸುತ್ತಿದ್ದ. ನಮ್ಮ ಮನೆಗೆ ಬಾವಿ ಇರಲಿಲ್ಲ. ಬಾವಿ ತೆಗೆಸುವಷ್ಟು ದುಡ್ಡೂ ಅಜ್ಜನ ಬಳಿ ಇರಲಿಲ್ಲ. ಅಜ್ಜಿ ಹತ್ತಿರವಿದ್ದ ಸರ್ಕಾರಿ ಬಾವಿಯಿಂದ ನೀರು ಹೊತ್ತು ತರುತ್ತಿದ್ದಳಂತೆ. ಸೊಂಟದಲ್ಲೊಂದು, ಕೈಯಲ್ಲೊಂದು ಕೊಡಪಾನ ಹಿಡಿದು ಗಂಡ-ಮೂರು ಮಕ್ಕಳ ಮನೆಗೆ ಒದಗಿಸುವಷ್ಟರಲ್ಲಿ ಸಾಕುಸಾಕಾಗುತ್ತಿತ್ತು. ನನ್ನ ಅಪ್ಪ-ಅತ್ತೆಯರು ಸ್ವಲ್ಪ ನೀರು ದಂಡ ಮಾಡಿದರೂ ಅಜ್ಜಿಯ ದಾಸವಾಳ ಬರಲಿನ ಹೊಡೆತಕ್ಕೆ ಒಳಗಾಗಬೇಕಿತ್ತು. ಊರ ಯಾರ ಮನೆಯಲ್ಲೂ ಇಲ್ಲದಷ್ಟು ಸಣ್ಣ ಚೊಂಬು, ಮಗ್ಗುಗಳು ನಮ್ಮ ಮನೆಯಲ್ಲಿದ್ದವಂತೆ. ದೊಡ್ಡ ಚೊಂಬು ಇದ್ದರೆ ಜಾಸ್ತಿ ನೀರು ಖರ್ಚಾಗುತ್ತದೆಯಲ್ಲವೇ? ‘ನಿನ್ನ ಅಜ್ಜಿಯ ಹೆದರಿಕೆಗೆ ಎಷ್ಟೋ ಸಲ ನಾವು ಬರೀ ಎರಡೇ ಚೊಂಬು ನೀರಲ್ಲಿ ಸ್ನಾನ ಮಾಡಿ ಮುಗಿಸ್ತಿದ್ಯ’ ಅಂತ ಅಪ್ಪ ಆಗೀಗ ನೆನಪು ಮಾಡಿಕೊಂಡು ಹೇಳುತ್ತಾನೆ. ‘ಬಿಂದಿಗೆ ಹೊತ್ತ ನಾರಿ’ ಎಂಬುದು ರೂಪಕಕ್ಕಷ್ಟೇ ಚೆಂದ, ಹೊರುವ ಕಷ್ಟ ನಾರಿಗಷ್ಟೇ ಗೊತ್ತು ಅಂತ ನಾನು ಅಂದುಕೊಳ್ಳುತ್ತಿದ್ದೆ. &lt;br /&gt;&lt;br /&gt;ಅಪ್ಪ ಸಂಸಾರ ವಹಿಸಿಕೊಂಡಮೇಲೆ ಮೊದಲು ಮಾಡಿದ ಕೆಲಸ ಮನೆಯ ಆವರಣದಲ್ಲೊಂದು ಬಾವಿ ತೆಗೆಸಿದ್ದು. ನನ್ನ ದೊಡ್ಡತ್ತೆಯ ಬಾಣಂತನಕ್ಕೆ ಅಜ್ಜಿ ಸರ್ಕಾರಿ ಬಾವಿಯಿಂದ ನೀರು ಹೊರುವುದನ್ನು ಅವನಿಗೆ ನೋಡಲಾಗಲಿಲ್ಲವಂತೆ. ನನ್ನ ಅಜ್ಜಿಯ ತಮ್ಮ ರಾಘವೇಂದ್ರಜ್ಜ ಅಂತರ್ಜಲ ನೋಡುವ ಕಲೆಯಲ್ಲಿ ನಿಪುಣ. ಅವನನ್ನು ಕರೆಸಿ, ಮನೆಯ ಹತ್ತಿರ ಜಲ ನೋಡಿಸಿದ್ದು. ಸುಮಾರು ಹೊತ್ತು ತೆಂಗಿನಕಾಯಿಯನ್ನು ಅಂಗೈಯಲ್ಲಿಟ್ಟುಕೊಂಡು ಮನೆಯ ಸುತ್ತಮುತ್ತ ಓಡಾಡಿದ ರಾಘವೇಂದ್ರಜ್ಜ, ಬೀಡಿ ಮುಗಿಯುವುದರೊಳಗೆ ಮನೆಯ ಸ್ವಲ್ಪ ಹಿಂದೆ ನೀರ ನಿಕ್ಷೇಪ ಇರುವುದು ಪತ್ತೆ ಹಚ್ಚಿದ. ಅಲ್ಲಿಗೆ ಹೋಗಿ ಅಂವ ನಿಲ್ಲುತ್ತಿದ್ದಂತೆ ತೆಂಗಿನಕಾಯಿಯೂ ಜುಟ್ಟು ಮೇಲೆ ಮಾಡಿ ನಿಂತಿತಂತೆ! ಅವನ ಅಣತಿಯಂತೆ ಅಗೆಯಲು, ಐವತ್ತು ಅಡಿ ಆಳದಲ್ಲಿ ಅಂತೂ ನೀರು ಸಿಕ್ಕಿತು. ಬಾವಿಯ ಸುತ್ತ ಒಂದು ಕಟ್ಟೆ ಎದ್ದುನಿಂತಿತು. ಆ ಕಡೆಗೊಂದು - ಈ ಕಡೆಗೊಂದು ಕವಲುಕಂಬಗಳು ಹೂಳಲ್ಪಟ್ಟು, ಅದರ ಮೇಲೊಂದು ಮರದ ತುಂಡು ಹೇರಿ, ಮಧ್ಯದಲ್ಲಿ ಗಡಗಡೆ ಕಟ್ಟಿ, ಪೇಟೆಯಿಂದ ತಂದ ಅರವತ್ತಡಿ ಉದ್ದದ ಬಾವಿಹಗ್ಗಕ್ಕೆ ಕುಣಿಕೆ ಬಿಗಿದು, ಕೊಡಪಾನ ಇಳಿಸಿ, ಅಜ್ಜಿ-ಅತ್ತೆಯರೆಲ್ಲ ನಿಟ್ಟುಸಿರಾಗುವಂತೆ, ಗಂಗೆಯನ್ನು ಮೇಲೆತ್ತಿಯೇಬಿಟ್ಟರು!&lt;br /&gt;&lt;br /&gt;ಆದರೆ ನಮ್ಮ ಮನೆಯ ಬಾವಿಯ ಜಲದ ಸೆಲೆ ಅಷ್ಟೊಂದು ಚೆನ್ನಾದ್ದಲ್ಲ. ಸರ್ಕಾರಿ ಬಾವಿಯಲ್ಲಿ ವರುಷವಿಡೀ ನೀರು ಕೈಗೆಟುಕುವಷ್ಟು ಸಮೀಪವಿರುತ್ತದೆ. ಊರಿನ ಐದಾರು ಮನೆಗಳಲ್ಲೂ ಹಾಗೆಯೇ. ನಮ್ಮ ಮನೆಯ ಬಾವಿ ಜೋರು ಮಳೆಗಾಲದಲ್ಲಿ ತುಂಬಲ್ಪಟ್ಟು ಕಟ್ಟೆಯಿಂದ ತುಸು ಕೆಳಗಿರುವ ಪೈಪಿನ ಮೂಲಕ ನೀರು ಹೊರಬರುತ್ತದಾದರೂ ಮೇ ತಿಂಗಳಿನ ಹೊತ್ತಿಗೆ ನೀರು ತಳ ಕಂಡಿರುತ್ತದೆ. ಪಂಪ್‌ಸೆಟ್ಟಿನ ಫೂಟ್‌ವಾಲ್ವ್‌ಗೆ ನೀರು ಸಿಗದೇ ಒದ್ದಾಡುತ್ತದೆ. ಪ್ರತಿವರ್ಷವೂ ಬೇಸಿಗೆಯ ಕಡೆಯ ಎರಡು ತಿಂಗಳು ಮೋಟರು ಕೆಲಸ ಮಾಡದೆ ನೀರು ಸೇದುವುದು ಅನಿವಾರ್ಯವಾಗುತ್ತದೆ. ಏಳೆಂಟು ವರ್ಷಗಳ ಕೆಳಗೆ ‘ಜಲ ಜಾಗೃತಿ’ ಎಂಬ ಬ್ಯಾನರ್ ಕಟ್ಟಿಕೊಂಡು ನಮ್ಮ ಸೀಮೆಯ ಒಂದಷ್ಟು ಪ್ರಗತಿಪರರು ಊರೂರಿನಲ್ಲಿ ಜಾತಾ ಮಾಡಿದ್ದರು. ‘ಬೇಸಿಗೆಯಲ್ಲಿ ಬಾವಿಯಲ್ಲಿ ನೀರು ಇಲ್ಲವಾಗುವುದಕ್ಕೆ ಮಳೆಗಾಲದಲ್ಲಿ ಜಲದ ಸೆಲೆಗಳು ಸರಿಯಾಗಿ ಭರ್ತಿಯಾಗದಿರುವುದೇ ಕಾರಣ. ಮಳೆಯ ನೀರು ಹರಿದು ಕೆರೆಕೋಡಿ ಸೇರುತ್ತದೆ, ನೆಲದಲ್ಲಿ ಇಂಗುತ್ತಲೇ ಇಲ್ಲ. ಹಾಗಾಗಿ ನಿಮ್ಮ ಬಾವಿಯ ಆವರಣದಲ್ಲಿ ಇಂಗುಗುಂಡಿಗಳನ್ನು ಮಾಡಿ ಮಳೆಗಾಲದಲ್ಲಿ ನೀರು ಇಂಗುವಂತೆ ಮಾಡಬೇಕು’ ಅಂತ ಕರೆ ಕೊಟ್ಟರು. ಅಮ್ಮ ಬೇಸಿಗೆಯಲ್ಲಿ ನೀರು ಸೇದೀ ಸೇದೀ ರಟ್ಟೆ ನೋವು ಮಾಡಿಕೊಂಡು ಅಮೃತಾಂಜನ ತಿಕ್ಕಿಕೊಳ್ಳುವುದನ್ನು ನೋಡಲಾರದ ನಾನೂ ನಮ್ಮ ಹಿತ್ತಿಲಿನಲ್ಲಿ ಗುದ್ದಲಿಯಿಂದ ಸುಮಾರು ಗುಂಡಿಗಳನ್ನು ತೋಡಿ ಬಂದೆ. ಅದರಿಂದ ಬಾವಿಯ ನೀರಿನ ಮಟ್ಟ ಏರಿತೋ ಇಲ್ಲವೋ ಗೊತ್ತಿಲ್ಲ, ಆದರೆ ಜಾನುವಾರಿಗೆ ಹುಲ್ಲು ಕೊಯ್ಯಲು ಹೋದ ಅಪ್ಪ ಆ ಗುಂಡಿಯಲ್ಲಿ ಕಾಲು ಹಾಕಿ ಸರಿಯಾಗಿ ಉಳುಕಿಸಿಕೊಂಡು ಬಂದ. ಒಟ್ಟಿನಲ್ಲಿ ಅಮೃತಾಂಜನದ ಕಂಪನಿಗೆ ಅಳಿವಿಲ್ಲ ಅಂತ ನಾನು ತೀರ್ಮಾನಿಸಿದೆ. &lt;br /&gt;&lt;br /&gt;ವೀಣತ್ತೆಯ ಮಗಳು ವರ್ಷ ನಮ್ಮ ಮನೆಗೆ ಬಂದಾಗ ಅವಳನ್ನು ಕಾಯುವುದು ಒಂದು ಸಾಹಸವೇ ಆಗುತ್ತಿತ್ತು. ಏಕೆಂದರೆ ಅವಳೂರಿನಲ್ಲಿ ಅಬ್ಬಿ ನೀರು. ಬಾವಿ ಅವಳಿಗೆ ಹೊಸತು. ತನಗಿಂತ ಎತ್ತರದ ಕಟ್ಟೆಯನ್ನು ಸುತ್ತ ಕಟ್ಟಿಸಿಕೊಂಡು ಬಚ್ಚಲಮನೆಯ ಪಕ್ಕದಲ್ಲಿ ನಿಗೂಢವಾಗಿದ್ದ ಬಾವಿ ಅವಳಿಗೆ ಕುತೂಹಲಕಾರಿಯಾಗಿತ್ತು. ದೇವರ ಪೂಜೆ, ಕುಡಿಯುವ ನೀರು ಅಂತ ದಿನಕ್ಕೆ ಎರಡ್ಮೂರು ಬಾರಿಯಾದರೂ ನಾವು ನೀರೆತ್ತುವುದು, ಕೆಳಗಿಳಿಸುವಾಗ ಖಾಲಿಯಾಗಿದ್ದ ಸ್ಟೀಲಿನ ಕೊಡಪಾನ ಮೇಲೆ ಬರುವಷ್ಟರಲ್ಲಿ ತುಂಬಿಕೊಂಡಿರುವುದು, ಅವಳಿಗೆ ಆಶ್ಚರ್ಯವಾಗಿತ್ತು. ನಾವು ಸ್ವಲ್ಪ ಆಚೀಚೆ ಹೋದರೂ ಸಾಕು, ಅವಳು ಸೀದಾ ಬಾವಿಕಟ್ಟೆ ಹತ್ತಿ ಕೆಳಗಿಣುಕುವ ಸಾಹಸ ಮಾಡುತ್ತಿದ್ದಳು. ‘ಕೆಳಗಡೆ ಬಿದ್ರೆ ಮುಳುಗಿಹೋಗ್ತೆ ಅಷ್ಟೇ.. ಅಲ್ಲಿ ಹಾವು, ಮೊಸಳೆ, ಭೂತ ಎಲ್ಲಾ ಇದ್ದ’ ಅಂತ ಹೆದರಿಸಿದರೂ ಪುಟ್ಟಿ ಕೇಳುತ್ತಿರಲಿಲ್ಲ. ಕೊನೆಗೆ ನಾವೇ ಅವಳನ್ನೆತ್ತಿಕೊಂಡು ಚೂರೇ ಬಗ್ಗಿಸಿ ‘ನೋಡಿದ್ಯಾ? ಎಷ್ಟು ಆಳ ಇದ್ದೂ..?’ ಅಂತ ತೋರಿಸಬೇಕು, ಅವಳು ಹೆದರಿದಂತೆ ನಟಿಸಿ ‘ಹೂಂ, ನಾ ಇನ್ನು ಇದರ ಹತ್ರ ಬರದಿಲ್ಯಪಾ’ ಎನ್ನಬೇಕು. &lt;br /&gt;&lt;br /&gt;ಬಾವಿಯೊಂದಿಗೆ ನಾವು ಅನುಭವಿಸಿದ ಪುಳಕಗಳನೇಕವನ್ನು ವರ್ಷ ಪುಟ್ಟಿ ಅನುಭವಿಸಲಿಲ್ಲವಲ್ಲಾ ಅಂತ ನಾನು ಅಂದುಕೊಳ್ಳುತ್ತಿದ್ದೆ. ಚಿಕ್ಕವರಿದ್ದಾಗ ಬಾವಿಯ ಬಳಿ ಹೋಗಲು ನಮಗೂ ದೊಡ್ಡವರ ತಡೆಯಿತ್ತಾದರೂ ನಮಗೆ ಬಾವಿಯೆಂದರೆ ಆಳವಿರುವ, ತುಂಬ ನೀರಿರುವ, ಅಕಸ್ಮಾತ್ ಬಿದ್ದರೆ ಮತ್ತೆ ಬರಲಾಗದ ಕೂಪ ಎಂಬ ಅರಿವಿತ್ತು. ಆದರೆ ತೋಟದ ಕಾದಿಗೆಯಲ್ಲಿ ಮೀನು ಹಿಡಿದು, ಹೊಂಬಾಳೆಯಲ್ಲಿಟ್ಟುಕೊಂಡು ಬಂದು ಮನೆಯ ಬಾವಿಗೆ ಬಿಡುವ ಸಂಭ್ರಮದಲ್ಲಿ ಮಾತ್ರ ಅವೆಲ್ಲ ನೆನಪಾಗುತ್ತಿರಲಿಲ್ಲ. ಮೀನು ಬಿಟ್ಟ ಮರುದಿನದಿಂದ ಯಾರೇ ನೀರು ಸೇದಲು ಬಂದರೂ ಅವರೊಂದಿಗೂ ನಾನೂ ನಿಂತು, ಮೇಲೆ ಬಂದ ಕೊಡಪಾನದಲ್ಲಿ ನಾವು ಬಿಟ್ಟ ಮೀನೇನಾದರೂ ಬಂದಿದೆಯಾ ಅಂತ ನೋಡುವ ಕುತೂಹಲಕ್ಕೆ ಪಾರವಿರಲಿಲ್ಲ. ಒಂದಲ್ಲಾ ಒಂದು ದಿನ ಮೀನು ಕೊಡಪಾನದಲ್ಲಿ ಬಂದೇ ಬಿಡುತ್ತಿತ್ತು. ಅಮ್ಮ ‘ಥೋ, ಇದ್ಯಾವಾಗ ತಂದು ಬಿಟ್ಟಿದ್ರಾ? ಕುಡಿಯೋ ನೀರು.. ಥೋ..’ ಎನ್ನುತ್ತಾ, ಹೆದರುತ್ತಾ ಆ ಮೀನನ್ನು ಎಡಗೈಯಿಂದ ತೆಗೆದು ಬಿಸಾಕುತ್ತಿದ್ದಳು. ನಾನು ಮತ್ತೆ ಅದನ್ನು ನೀರು ತುಂಬಿದ ಹಾಳೆಯಲ್ಲಿಟ್ಟುಕೊಂಡು ಬಂದು ತೋಟದ ಕಾದಿಗೆಯಲ್ಲಿ ಬಿಡುತ್ತಿದ್ದೆ. &lt;br /&gt;&lt;br /&gt;ಒಮ್ಮೆ ಅಮ್ಮ ನೀರು ಸೇದುವಾಗ ಕುಣಿಕೆ ಸರಿಯಾಗಿ ಹಾಕದೆ ಕೊಡಪಾನ ಬಾವಿಯಲ್ಲಿ ಬಿದ್ದುಬಿಟ್ಟಿತು. ಅರ್ಧದವರೆಗೆ ಬಂದಿದ್ದ ಕೊಡ ಕಳಚಿ ಬಿದ್ದುದಕ್ಕೆ ಹಗ್ಗ ಹಿಡಿದು ಜಗ್ಗುತ್ತಿದ್ದ ಇವಳೂ ಆಯತಪ್ಪಿ ಹಿಂದೆ ಬಿದ್ದಳು. ಎರಡೆರಡು ಸದ್ದು ಕೇಳಿ ಮನೆಮಂದಿಯೆಲ್ಲ ಏನೋ ಅನಾಹುತವಾಯಿತೆಂದು ಓಡಿ ಬಂದೆವು. ಬಗ್ಗಿ ನೋಡಿದರೆ ಪ್ಲಾಸ್ಟಿಕ್ ಕೊಡಪಾನ ತೇಲುತ್ತಿತ್ತು. ತಕ್ಷಣ ಬುಟ್ಟಿ ಇಳಿಬಿಟ್ಟು ತಡಕಾಡಿದರೂ ಮೇಲೆತ್ತಲಾಗಲಿಲ್ಲ. ಬದಲಿಗೆ ಅದು ಪೂರ್ತಿ ಮುಳುಗಿಯೇ ಹೋಯಿತು. ಆಮೇಲೆ ಸೀತಾರಾಮಣ್ಣನ ಮನೆಯಿಂದ ಪಾತಾಳಗರುಡ ತಂದು ಹರಸಾಹಸ ಮಾಡಿದರೂ ಅದು ಸಿಗಲೇ ಇಲ್ಲ. ಮಣ್ಣಿನಲ್ಲಿ ಹೂತು ಹೋಗಿರಬಹುದೆಂದು ತೀರ್ಮಾನಿಸಿ, ಹೇಗೂ ಬಾವಿ ಸೋಸದೆ ಸುಮಾರು ವರ್ಷ ಆಗಿದ್ದುದರಿಂದ, ಯಾರಾದರೂ ಪರಿಣಿತರನ್ನು ಕರೆಸಿ ಸೋಸುವುದು ಅಂತ ಆಯಿತು. ಮಳಲಗದ್ದೆಯ ಕನ್ನಪ್ಪ ಎಂಬುವವ ಈ ಕೆಲಸದಲ್ಲಿ ಭಾರಿ ಜೋರಿದ್ದಾನೆ ಅಂತ ಯಾರೋ ಅಂದರು. ಕನ್ನಪ್ಪನಿಗೆ ಬುಲಾವ್ ಹೋಯಿತು. &lt;br /&gt;&lt;br /&gt;ಈ ಕನ್ನಪ್ಪ ಬಂದವನೇ ಮೊದಲು ಒಂದು ಲಾಟೀನು ಹೊತ್ತಿಸಿ ಬಾವಿಗೆ ಇಳಿಸಿ ನೋಡಿದ. ಕೆಳಕೆಳಗೆ ಹೋಗುತ್ತಿದ್ದಂತೆ ಅದು ಆರಿಹೊಯ್ತು. ‘ಹೋಯ್, ಈ ಬಾವಿಗೆ ಇಳದ್ರೆ ನನ್ ಕತೆ ಪೋಂಯ! ಉಸುರೇ ಇಲ್ಲ ಇದ್ರಲ್ಲಿ. ಮೊದ್ಲು ಬಾಳೆದಿಂಡು ತಕಂಬನ್ನಿ’ ಅಂತ ಆಜ್ಞಾಪಿಸಿದ. ಸರಿ, ಬಾಳೆದಿಂಡು ಕಡಿದು ತಂದು ಏಳೆಂಟು ಸಲ ಇಳಿಸಿ ಏರಿಸಿ ಮಾಡಿ ಬಾವಿಯೊಳಗೊಂದಷ್ಟು ಆಮ್ಲಜನಕ ತುಂಬಿದ್ದಾಯ್ತು. ‘ಇನ್ನು ತೊಂದ್ರೆ ಇಲ್ಲ, ಇಳಿಯಪ್ಪಾ’ ಎಂದು ನಾವು ಹೇಳಿದರೆ, ಇಂವ ‘ಸರಿ, ಇಳಿಸಿ’ ಅಂದ. ನಮಗೆ ಅರ್ಥವಾಗಲಿಲ್ಲ. ಕೊನೆಗೆ ನೋಡಿದರೆ, ಕನ್ನಪ್ಪ ಬಾವಿ ಸೋಸುವುದರಲ್ಲಿ ಮಾತ್ರ ನಿಪುಣನಿದ್ದನೇ ವಿನಹ ಬಾವಿಗೆ ಇಳಿಯುವುದರಲ್ಲಾಗಲೀ ವಾಪಸು ಹತ್ತುವುದರಲ್ಲಾಗಲೀ ಅಲ್ಲ! ಇವನನ್ನು ಒಂದು ದೊಡ್ಡ ಬುಟ್ಟಿಯೊಳಗೆ ಕೂರಿಸಿ ಇಳಿಸಿ ನಾವೇ ಮೇಲೆತ್ತಬೇಕಿತ್ತು! ಹತ್ತತ್ತಿರ ಒಂದು ಕ್ವಿಂಟಾಲ್ ತೂಕವಿದ್ದ ಇವನನ್ನು ಇಳಿಸಿ-ಎತ್ತುವುದೆಂದರೆ! ಕನ್ನಪ್ಪನಿಗೆ ಮೊದಲೇ ದುಡ್ಡು ಕೊಟ್ಟು ಕರಕೊಂಡು ಬಂದ ತಪ್ಪಿಗೆ ಈಗ ಹಾಗೇ ಬಿಡುವಂತೆಯೂ ಇರಲಿಲ್ಲ. ಊರ ಐದಾರು ಜನರನ್ನು ಕರೆಸಿಕೊಂಡು, ದೊಡ್ಡ ಬುಟ್ಟಿಯಲ್ಲಿ ಇವನನ್ನು ಕೂರಿಸಿದ್ದಾಯ್ತು. ಪದ್ಮಾಸನ ಹಾಕಿ ದೇವರ ಥರ ಕನ್ನಪ್ಪ ಕೂತ. ಇವನನ್ನು ಕೆಳಗಿಳಿಸುವಾಗ ಎಲ್ಲಿ ಕಂಬವೋ ಗಡಗಡೆಯೋ ಹಗ್ಗವೋ ತುಂಡಾಗಿ ಧಡಾಲನೆ ಬೀಳುತ್ತಾನೋ ಅಂತ ನಾವೆಲ್ಲ ಭಯದಲ್ಲಿದ್ದಾಗ, ಸ್ಥಿತಪ್ರಜ್ಞ ಕನ್ನಪ್ಪ ಟಾಟಾ ಮಾಡಿದ. ದೇವರಾಣೆಗೂ ನಾವ್ಯಾರೂ ವಾಪಸು ಟಾಟಾ ಮಾಡುವ ಸ್ಥಿತಿಯಲ್ಲಿರಲಿಲ್ಲ ಮತ್ತು ನಮಗ್ಯಾರಿಗೂ ಮುಳುಗುವ ಸೂರ್ಯನ ಉಪಮೆ ನೆನಪಾಗಲಿಲ್ಲ. ಅಂತೂ ಕನ್ನಪ್ಪ ತಳ ತಲುಪಿ ಕೊಡಪಾನವೇ ಅಲ್ಲದೇ ಇನ್ನೂ ಬಿದ್ದಿದ್ದ ಅನೇಕ ವಸ್ತುಗಳನ್ನೂ, ಕೂತಿದ್ದ ಹೂಳುಮಣ್ಣನ್ನೂ ಮೊಗೆದು, ನಾವು ಇಳಿಬಿಟ್ಟ ಬುಟ್ಟಿಯಲ್ಲಿ ತುಂಬಿ ತುಂಬಿ ಮೇಲೆ ಕಳುಹಿಸಿ ಬಾವಿಯನ್ನು ಸ್ವಚ್ಚ ಮಾಡಿ, ಅರ್ಧಗಂಟೆಯ ನಂತರ ಮತ್ತದೇ ಬುಟ್ಟಿಯಲ್ಲಿ ಕೂತು ಜಗದೇಕವೀರನಂತೆ ಮೇಲೆ ಮೂಡಿಬಂದಾಗ, ಅವನಿಗೆ ಹಾಕಲಿಕ್ಕೆ ಒಂದು ಗೊಲ್ಟೆ ಹೂವಿನ ಹಾರವೂ ಇಲ್ಲವಲ್ಲಪ್ಪಾ ಅಂತ ನಾವು ಕೈ ಕೈ ಹಿಸುಕಿಕೊಂಡೆವು. ಆದರೆ ಅದಕ್ಕೇನು ಬೇಸರಿಸಿಕೊಳ್ಳದ ಕನ್ನಪ್ಪ ‘ಇನ್ನೊಂದು ಐವತ್ರುಪಾಯಿ ಜಾಸ್ತಿ ಕೊಡ್ರೀ ಹೆಗಡೇರೇ’ ಅಂತ ಹೇಳಿದ. &lt;br /&gt;&lt;br /&gt;ನಮ್ಮ ಮನೆಯ ಬಾವಿಯಲ್ಲಿ ಒಂದು ಫ್ರಿಜ್ ಇತ್ತು. ‘ಅದು ಹ್ಯಾಗೆ ಬಿತ್ತು?’ ಅಂತ ಕೇಳಬೇಡಿ. ನೀವು ಅಂದುಕೊಂಡ ಎಲೆಕ್ಟ್ರಿಕ್ ರೆಫ್ರಿಜರೇಟರ್ ಅಲ್ಲ ಅದು. ನೈಸರ್ಗಿಕ ಶಿತಿಲೀಕರಣ ಯಂತ್ರ ಅದು. ಒಂದು ಕೈಚೀಲಕ್ಕೆ ಹಗ್ಗ ಕಟ್ಟಿ, ಅದನ್ನು ನೀರಿನ ಸಮೀಪದವರೆಗೆ ಇಳಿಬಿಟ್ಟು, ಹಗ್ಗದ ಈ ತುದಿಯನ್ನು ಮೇಲೆ ಕಂಬಕ್ಕೆ ಕಟ್ಟಿರುತ್ತಿದ್ದೆವು. ಈ ಚೀಲದೊಳಗೆ ನಿಂಬೆಹಣ್ಣು, ವೀಳ್ಯದೆಲೆ, ಕೊತ್ತಂಬರಿ ಕಟ್ಟು, ಇತ್ಯಾದಿ ವಸ್ತುಗಳನ್ನು ಹಾಕಿ ಬಾವಿಯೊಳಗೆ ಇಳಿಸಿಟ್ಟರೆ ವಾರಗಳವರೆಗೆ ಅವು ಹಾಳಾಗದೇ ಇರುತ್ತಿದ್ದವು. ಕವಳದ ತಬಕಿನಲ್ಲಿ ವೀಳ್ಯದೆಲೆ ಖಾಲಿಯಾಯಿತೆಂದರೆ ಮತ್ತೆ ತೋಟಕ್ಕೆ ಓಡುವ ಅಗತ್ಯವಿರುತ್ತಿರಲಿಲ್ಲ. ಬಾವಿಯ ಬಳಿ ಹೋಗಿ ಈ ಹಗ್ಗ ಎಳೆದರೆ ಸಾಕು, ತಾಜಾ ತಾಜಾ ಎಲೆ ಫ್ರಿಜ್ಜಿನಲ್ಲಿ ನಮ್ಮನ್ನೇ ಕಾಯುತ್ತಿರುತ್ತಿತ್ತು. &lt;br /&gt;&lt;br /&gt;ಬಾವಿ, ಮೇಲ್ಚಾವಣಿ ಇಲ್ಲದ ಹೊರ ಆವರಣದಲ್ಲಿದ್ದರೆ ಚಂದ. ಆಗ ತುಂಬುಚಂದಿರನೂ ಮೋಹಗೊಂಡು ಇದರಲ್ಲಿ ಬಿದ್ದೇಬಿಡುತ್ತಾನೆ. ನೀರವ ರಾತ್ರಿಯಲ್ಲಿ, ನಿಶ್ಚಲ ನೀರಲ್ಲಿ, ತೇಲುತ್ತಿರುವ ಚಂದಿರನನ್ನು ಬಿಂದಿಗೆ ಇಳಿಬಿಟ್ಟು ಎತ್ತುವಾಗ ಹುಡುಗಿ, ಕವಿಗಳೆಲ್ಲ ನವಿಲುಗರಿ ಹಿಡಿದು ಸಜ್ಜಾಗುತ್ತಾರೆ. ಸುಂದರಿಯ ಸೊಂಟಪೀಟದಲ್ಲಿ ಕೂತ ಬಿಂದಿಗೆಯಲ್ಲಿ ಶಶಿ ಮುಗುಳ್ನಗುವಾಗ ಪರವಶರಾಗುತ್ತಾರೆ. &lt;br /&gt;&lt;br /&gt;ಕೇರಿಗೊಂದೇ ಬಾವಿಯಾಗಿಬಿಟ್ಟರಂತೂ ಹೆಂಗಸರಿಗೆ ಇದು ಹರಟೆಕಟ್ಟೆಯಾಗಿಬಿಡುತ್ತದೆ. ನೀರು ತುಂಬಲು ಬಂದವರೆಲ್ಲ ಹಗ್ಗ ಇಳಿಬಿಟ್ಟು ಕತೆ ಹೊಡೆಯುವರು. ಪಾತಾಳದಲ್ಲೆಲ್ಲೋ ದುಡದುಡ ಸದ್ದು ಮಾಡುತ್ತಾ ಬಿಂದಿಗೆ ತುಂಬಿದ್ದು ಇವರ ಅರಿವಿಗೇ ಬರುವುದಿಲ್ಲ. ಅಂದಿನ ಅಡುಗೆ, ಮನೆಗೆ ಬಂದಿರುವ ನೆಂಟರು, ಯಾರದೋ ಮನೆಯ ಕತೆ, ಮತ್ಯಾರದೋ ಬಗೆಗಿನ ಗುಸುಗುಸುಗಳಿಗೆಲ್ಲ ಬಾವಿಕಟ್ಟೆಯೇ ವೇದಿಕೆ. ತುಂಬಿದ ಬಿಂದಿಗೆ ಮೇಲೆಳೆಯುವಾಗ ಇವಳಿಗೆ ಅವಳೂ ಅವಳಿಗೆ ಇವಳೂ ಸಹಾಯ ಮಾಡುವರು. ಅದನ್ನು ಸೊಂಟದಲ್ಲಿಟ್ಟುಕೊಂಡು ಮನೆ ತಲುಪುವವರೆಗೂ ಕತೆ ಮುಗಿಯುವುದೇ ಇಲ್ಲ. &lt;br /&gt;&lt;br /&gt;ನಗರಗಳಲ್ಲಿ ಬಾವಿಯೇ ಇರುವುದಿಲ್ಲ. ಅಡಿ ಜಾಗವೇ ದುಬಾರಿಯಾಗಿರುವ ಕಾಲದಲ್ಲಿ ಅಷ್ಟು ದೊಡ್ಡ ಜಾಗವನ್ನು ಬಾವಿಗಾಗಿ ಮೀಸಲಿಡಲು ಸಾಧ್ಯವೂ ಇಲ್ಲ. ಅಂಗೈಯಷ್ಟು ಅಗಲದಲ್ಲಿ ಬೋರ್ ಕೊರೆದು ನೀರೆತ್ತಿಬಿಡುತ್ತಾರೆ. ಮಳೆಯ ಏರುಪೇರು, ಮರಗಳ ಹನನ, ಅತಿಯಾಗಿ ಬೋರ್‌ವೆಲ್ ಕೊರೆಯುವುದರಿಂದಾಗಿ ಹಳ್ಳಿಗಳಲ್ಲೂ ಅಂತರ್ಜಲದ ಪ್ರಮಾಣ ಇಳಿಕೆಯಾಗಿ ಸುಮಾರು ಬಾವಿಗಳು ಪಾಳಾಗುತ್ತಿವೆ. ಬೇಸಿಗೆ ಬಂತೆಂದರೆ ಮಲೆನಾಡಿನಲ್ಲೂ ಬರ. ಭವಿಷ್ಯದ ಬಗ್ಗೆ ಯೋಚಿಸಲು ಭಯ ಪಡುವ ಮನಸು ಮೌನದಲ್ಲೇ ಹಾರೈಸುತ್ತದೆ: ಎಲ್ಲ ಬಾವಿಯಲ್ಲೂ ಸದಾ ಸಿಹಿನೀರು ತುಂಬಿರಲಿ. ಬಿಂದಿಗೆಯ ನೀರು ತುಳುಕಿದರೆ ತರುಣಿ ಪುಳಕಗೊಳ್ಳಲಿ. ಬಾವಿಯ ಸುತ್ತ ಬೆಸೆದುಕೊಂಡಿರುವ ಭಾವಬಂಧ ಚಿರಂತನವಿರಲಿ.&lt;br /&gt;&lt;br /&gt;&lt;span style="color: #660000;"&gt;[&lt;/span&gt;&lt;i style="color: #660000;"&gt;ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಿತ.&lt;/i&gt;&lt;span style="color: #660000;"&gt;]&lt;/span&gt;&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-1791557080400221743?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/1791557080400221743/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=1791557080400221743' title='9 Comments'/><link rel='edit' type='application/atom+xml' href='http://www.blogger.com/feeds/27009232/posts/default/1791557080400221743'/><link rel='self' type='application/atom+xml' href='http://www.blogger.com/feeds/27009232/posts/default/1791557080400221743'/><link rel='alternate' type='text/html' href='http://hisushrutha.blogspot.com/2011/05/blog-post.html' title='ಬಾವಿಯ ಸುತ್ತ ಭಾವಬಂಧ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>9</thr:total></entry><entry><id>tag:blogger.com,1999:blog-27009232.post-4033794088183794457</id><published>2011-04-26T11:17:00.001+05:30</published><updated>2011-04-26T13:01:37.118+05:30</updated><category scheme='http://www.blogger.com/atom/ns#' term='Birthday'/><category scheme='http://www.blogger.com/atom/ns#' term='ಹುಟ್ಟು ಹಬ್ಬ'/><title type='text'>ವರುಷಗಳು ಉರುಳುರುಳಿ...</title><content type='html'>&lt;a href="http://1.bp.blogspot.com/-IGTVScrJh6g/TbZZDRt-DXI/AAAAAAAAI88/vVSm4XKNcgY/s1600/1.JPG" style="clear: left; float: left; margin-bottom: 1em; margin-right: 1em;"&gt;&lt;img border="0" height="51" src="http://1.bp.blogspot.com/-IGTVScrJh6g/TbZZDRt-DXI/AAAAAAAAI88/vVSm4XKNcgY/s320/1.JPG" width="320" /&gt;&lt;/a&gt; &lt;br /&gt;&lt;br /&gt;&lt;br /&gt;&lt;br /&gt;&lt;br /&gt;ಈಗ್ಗೆ ಹಲ ವರುಷಗಳ ಹಿಂದೆ, ನಮ್ಮೂರ ಪಕ್ಕದೂರಿನ ಯುವಕರೊಬ್ಬರು ಆರೆಸ್ಸೆಸ್ ಸಂಘಟನೆಗೆ ಹುಡುಗರನ್ನು ಒಗ್ಗೂಡಿಸುವ ಸಲುವಾಗಿ ಊರೂರು ಸುತ್ತಿ, ಪ್ರತಿ ಊರಲ್ಲೂ ಅಷ್ಟಿಷ್ಟು ಜನರನ್ನು ಒಂದೆಡೆ ಕೂಡಿಸಿ, ಧ್ವಜವಂದನೆ ಮಾಡಿಸಿ, ‘ನಮಸ್ತೇ ಸದಾ ವತ್ಸಲೇ ಮಾತೃಭೂಮೇ..’ ಹಾಡಿಸಿ ಹೋಗಿದ್ದರು. ಆಗ ಅವರ ಜೊತೆ ನಾನೂ ಒಂದಷ್ಟು ಕಾಲ ಓಡಾಡಿಕೊಂಡಿದ್ದೆ. ಇದನ್ನು ನೋಡಿ ನನ್ನ ಅಪ್ಪ-ಅಮ್ಮ, ಇರುವ ಒಬ್ಬನೇ ಮಗ ಎಲ್ಲಿ ದೇಶಸೇವೆ-ಗೀಶಸೇವೆ ಅಂತ ಹೊರಟುಬಿಡುತ್ತಾನೋ ಎಂದು ವ್ಯಾಕುಲರಾಗಿ, ‘ಅದೆಲ್ಲ ನಮ್ಮಂಥವರಿಗಲ್ಲ, ಮನೇಲಿ ಇಬ್ರು-ಮೂವರು ಮಕ್ಕಳು ಇದ್ರೆ ಒಬ್ಬ ಮಗ ಹಿಂಗೆ ಹೋಗೋದು ಸರಿ. ನೀನು ಇನ್ಮೇಲೆ ಅವನ ಹಿಂದೆ ಓಡಾಡ್ಬೇಡ’ ಅಂತ ನನ್ನನ್ನು ಕೂರಿಸಿಕೊಂಡು ಹೇಳಿದ್ದರು. ನನಗಾದರೂ ಆರೆಸ್ಸೆಸ್ ಬಗೆಗಾಗಲೀ, ದೇಶದ ಬಗೆಗಾಗಲೀ, ದೇಶಸೇವೆ ಎಂದರೇನು ಅಂತಾಗಲೀ, ಪುತ್ರವಾತ್ಸಲ್ಯದ ಅರ್ಥವಾಗಲೀ ಆಗ ಗೊತ್ತಿರಲಿಲ್ಲ. ಅಪ್ಪ-ಅಮ್ಮ ಹೇಳಿದಮೇಲೆ ಹೌದಿರಬಹುದು ಅಂದುಕೊಂಡು ಆಮೇಲೆ ಅತ್ತಕಡೆ ತಲೆ ಹಾಕಲಿಲ್ಲ. &lt;br /&gt;&lt;br /&gt;ಐದಾರು ತಿಂಗಳ ಹಿಂದೆ ಊರಿಗೆ ಹೋಗಿದ್ದಾಗ, ಮನೆಗೆ ಬಂದಿದ್ದ ಅತ್ತೆ ಮತ್ತು ಅವಳ ಮಕ್ಕಳೊಂದಿಗೆ ಉಪ್ಪು-ಖಾರ ತಿನ್ನುತ್ತ ಅದೂ-ಇದೂ ಹರಟೆ ಹೊಡೆಯುತ್ತ ಹಿತ್ಲಕಡೆ ಕಟ್ಟೆಯ ಮೇಲೆ ಕೂತಿದ್ದೆ.&amp;nbsp; ಅಷ್ಟೊತ್ತಿನ ತನಕ ಹಳೇ ನೆನಪು, ಅವರಿವರ ಮನೆ ಕತೆ, ಗೋಳಿನ ಬೆಂಗಳೂರಿನ ಬಗ್ಗೆಯೆಲ್ಲ ನನ್ನ ಜೊತೆ ಲೋಕಾರೂಢಿ ಮಾತಾಡುತ್ತಿದ್ದ ಅತ್ತೆ ಇದ್ದಕ್ಕಿದ್ದಂತೆ ‘ಸರೀ, ಈ ವರ್ಷ ಮದುವೆ ಆಗ್‌ತ್ಯಾ?’ ಅಂತ ಕೇಳಿಬಿಟ್ಟಳು. ಈ ವಿಧಿಯ ಸಂಚೇ ಹಾಗೆ, ಯಾವಾಗ ಕೈ ಕೊಡುತ್ತೆ ಹೇಳಲಿಕ್ಕಾಗುವುದಿಲ್ಲ. ಆದರೂ ಧೃತಿಗೆಡದ ನಾನು, ‘ಅಯ್ಯೋ, ಇನ್ನೊಂದೆರ್ಡು ವರ್ಷ ತಡಿ ಮಾರಾಯ್ತಿ’ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದೆ. ಆದರೆ ಅತ್ತೆ ಮುಂದುವರಿದು, ‘ಹಂಗಲ್ಲಾ, ನೀನೇ ಬೆಂಗಳೂರಲ್ಲಿ ಯಾರನ್ನಾದ್ರೂ ನೋಡಿಕೊಂಡ್ರೂ ಅಡ್ಡಿ ಇಲ್ಲೆ. ಆದರೆ ಎಲ್ಲಾ ಸರಿ ಇದ್ದಾ ನೋಡಿ ಮಾಡ್‌ಕ್ಯ’ ಎಂದಳು. ‘ಎಲ್ಲಾ ಸರಿ ಇರದು ಅಂದ್ರೆ ಎಂತು?’ ನಾನು ಕೇಳಿದೆ. ‘ನಿಂಗ ಸಾಹಿತಿಗಳು ಆದರ್ಶ-ಗೀದರ್ಶ ಅಂತ ಹೊರಟುಬಿಡ್ತಿ. ನೀನು ಮಾಡಿಕೊಳ್ಳೋದಿದ್ರೆ ನಮ್ ಜಾತಿ ಕೂಸಿನ್ನೇ ಮಾಡ್‌ಕ್ಯ. ಹುಡುಗಿ ಮನೆ ಕಡೆಗೂ ಚನಾಗಿರವು. ಕುಂಟಿ, ಕಿವುಡಿ, ನಿನಗಿಂತ ದೊಡ್ಡೋರು, ಡೈವೋರ್ಸಿಗಳು, ಇಂಥವರನ್ನೆಲ್ಲಾ ಮಾಡಿಕೊಳ್ಬೇಡ. ಮೊದಮೊದಲು ಆದರ್ಶ ಅಂತ ಚೊಲೋ ಕಾಣ್ತು. ಆದರೆ ಆಮೇಲೆ ಅದೇ ಒಂದು ಕೊರಗು ಆಗ್ತು..’ ಅಂತೆಲ್ಲ ಹೇಳಿ, ‘ಆದರ್ಶಗಳೆಲ್ಲ ಬೇರೆಯವರಿಗೆ ಹೇಳೋದಿಕ್ಕೇ ವಿನಹ ನಾವೇ ಪಾಲಿಸಲಿಕ್ಕೆ ಅಲ್ಲ’ ಎಂದಳು. &lt;br /&gt;&lt;br /&gt;ಅವಳ ಕೊನೆಯ ವಾಕ್ಯ ನನ್ನೊಳಗೇ ಉಳಿದುಕೊಂಡು ಬಿಟ್ಟಿತು: ‘ಆದರ್ಶಗಳು ನಾವು ಪಾಲಿಸಲಲ್ಲ; ಬೇರೆಯವರಿಗೆ ಬೋಧಿಸಲು.’&amp;nbsp; ಅದೆಷ್ಟೇ ವಿರೋಧಾತ್ಮಕವಾಗಿದ್ದರೂ, ನನ್ನ ಅತ್ತೆ ಹೇಳಿದ ಮಾತು ಅವಳ ಆ ಕ್ಷಣದ, ಪ್ರಾಮಾಣಿಕವಾಗಿ ಹೊರಬಂದ, ಅಂತಃಕರಣದ ಮಾತಾಗಿತ್ತು. ಅವಳ ಹೇಳಿಕೆಯನ್ನಿಟ್ಟುಕೊಂಡು ದಿನವಿಡೀ ವಾದಿಸಬಹುದಿತ್ತಾದರೂ ನಾನು ಸರಿಸರಿಯೆಂದು ತಲೆದೂಗಿದೆ. ಆದರೆ ಆ ವಾಕ್ಯ ಇವತ್ತಿನ ಈ ಕ್ಷಣದವರೆಗೂ ನನ್ನೊಂದಿಗೆ ಬರುತ್ತಿದೆ, ಮನಸಿನೊಂದಿಗೆ ಸೆಣಸುತ್ತಿದೆ. &lt;br /&gt;&lt;br /&gt;ಬಹುಶಃ ನನ್ನ ಅತ್ತೆ ಬಾಯಿಬಿಟ್ಟು ಹೇಳಿದ ಆ ಮಾತು ನಾವೆಲ್ಲ ನಮ್ಮ ಆಪ್ತರಿಗೆ ಬಾಯಿಬಿಟ್ಟೋ ಬಿಡದೆಯೋ ಹೇಳುವ ಮಾತು. ‘ಯೋಧ ಜನಿಸಬೇಕು. ಆದರೆ ನಮ್ಮ ಮನೆಯಲ್ಲಲ್ಲ, ಪಕ್ಕದ ಮನೆಯಲ್ಲಿ’ ಎಂಬ ಅಭಿಪ್ರಾಯ ೯೦ ಪ್ರತಿಶತ ಜನರದು. ನಿರ್ಧಾರದ ಗಳಿಗೆಗಳಲ್ಲೆಲ್ಲ ನಮ್ಮನ್ನು ಕಾಡಿದ ದ್ವಂದ್ವ ಅದೇ: ಧ್ಯೇಯವೋ? ಮೋಹವೋ? ಕವಲುದಾರಿಯಲ್ಲಿ ನಿಂತಾಗಲೆಲ್ಲ ನಮಗೆ ಎದುರಾಗುವ ಗೊಂದಲ ಅದೇ: ಜನ ಹೇಳಿದತ್ತ ಹೋಗಲೋ? ನನ್ನ ವಿವೇಕ ಹೇಳಿದತ್ತ ಹೋಗಲೋ? ಇಷ್ಟಕ್ಕೂ ಆದರ್ಶದ ಪಾಲನೆ ನಮ್ಮ ಸಂತೋಷಕ್ಕೋ ಅಥವಾ ಸಮಾಜ ನನ್ನನ್ನು ಪ್ರಶ್ನಿಸುವ ಕಣ್ಣುಗಳಿಂದ ನೋಡುತ್ತಿದೆ ಎಂಬ ಆತಂಕಕ್ಕೋ?&lt;br /&gt;&lt;br /&gt;ಈ ಆದರ್ಶದ ಪರಿಕಲ್ಪನೆಯೂ ಒಬ್ಬರಿಂದೊಬ್ಬರಿಗೆ ಭಿನ್ನ. ಜಗತ್ತು ನಮ್ಮ ಮೇಲೆ ಹೇರುವ ಆದರ್ಶಗಳು ಒಂದು ತೂಕದವಾದರೆ ನಮ್ಮ ಮೇಲೆ ನಾವೇ ಹೇರಿಕೊಳ್ಳುವ ಆದರ್ಶಗಳು ಇನ್ನೊಂದು ತೆರನವು.&amp;nbsp; ಬಹುಶಃ ನಮ್ಮ ಆದರ್ಶವನ್ನು ನಾವು ಮೊದಲೇ ಸೆಟ್ ಮಾಡಿಕೊಂಡಿದ್ದರೆ ಆಯ್ಕೆಯ ಕ್ಷಣಗಳಲ್ಲಿ ಗೊಂದಲಗಳಾಗುವುದಿಲ್ಲ. ‘ನನ್ನ ಆದರ್ಶದ ಮಿತಿ ಇಷ್ಟೇ’ ಅಂತ ಜಗತ್ತಿಗೆ ಉತ್ತರಿಸಬಹುದು. ಅಥವಾ ಜಗತ್ತಿಗೆ ಉತ್ತರಿಸುವ ದರ್ದಿಲ್ಲ ಎಂದರೆ ನನಗೆ ನಾನೇ ಸಮಾಧಾನ ಮಾಡಿಕೊಳ್ಳಬಹುದು. ಆದರೆ ಅದು ‘ಬುದ್ಧಿವಂತಿಕೆ’ ಆಗಿಹೋಗುತ್ತದಾ? ಹಾಗಾದರೆ ಆದರ್ಶಗಳನ್ನು ಮೈಮೇಲೆ ಹೇರಿಕೊಳ್ಳುವುದೇ ತಪ್ಪಾ? ಬಿಡುಬೀಸಾಗಿ ನಡೆದು, ಮನಸಿಗೆ ತೋಚಿದತ್ತ ಸಾಗುವುದೇ ಸರಿಯಾದ ರೀತಿಯಾ? ಆ ಕ್ಷಣದಲ್ಲಿ ನನಗೆ ಏನನ್ನಿಸುತ್ತದೋ ಅದರಂತೆಯೇ ನಿರ್ಧರಿಸುವುದು ಸರಿಯಾದ ಮಾರ್ಗವಾ? ಗೊತ್ತಿಲ್ಲ.&lt;br /&gt;&lt;br /&gt;&lt;div style="text-align: center;"&gt;&lt;span style="color: blue;"&gt;*&lt;/span&gt; &lt;span style="color: red;"&gt;*&lt;/span&gt; &lt;span style="color: lime;"&gt;*&lt;/span&gt;&lt;/div&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-IGTVScrJh6g/TbZZDRt-DXI/AAAAAAAAI88/vVSm4XKNcgY/s1600/1.JPG" imageanchor="1" style="margin-left: 1em; margin-right: 1em;"&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-ASf0ZCtnhzg/TbZZGKc_52I/AAAAAAAAI9A/2EFiGjDtSgs/s1600/2.jpg" style="clear: left; float: left; margin-bottom: 1em; margin-right: 1em;"&gt;&lt;img border="0" height="99" src="http://3.bp.blogspot.com/-ASf0ZCtnhzg/TbZZGKc_52I/AAAAAAAAI9A/2EFiGjDtSgs/s320/2.jpg" width="320" /&gt;&lt;/a&gt;&lt;a href="http://3.bp.blogspot.com/-ASf0ZCtnhzg/TbZZGKc_52I/AAAAAAAAI9A/2EFiGjDtSgs/s1600/2.jpg" imageanchor="1" style="margin-left: 1em; margin-right: 1em;"&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-WltHwSo7isQ/TbZZJB3BBBI/AAAAAAAAI9E/uEuWt5_x1Qo/s1600/3.jpg" imageanchor="1" style="margin-left: 1em; margin-right: 1em;"&gt;&lt;/a&gt;&lt;/div&gt;&lt;br /&gt;ಜಯಂತ ಕಾಯ್ಕಿಣಿ ‘ಚಾರ್‌ಮಿನಾರ್’ ಎಂಬ ನೀಳ್ಗತೆಯೊಂದನ್ನು ಬರೆದಿದ್ದಾರೆ. ನನ್ನನ್ನು ಬಹಳವಾಗಿ ಕಾಡಿದ ಕತೆ ಅದು. ಯುನಿವರ್ಸಿಟಿಗೇ ಪ್ರಥಮ ಸ್ಥಾನ ಪಡೆದು ತೇರ್ಗಡೆಯಾದ ನೈ‌ಋತ್ಯ ಗಾಂವಕರ ಎಂಬ ಯುವಕ, ಕೆಲಸ ಹಿಡಿದು ದುಡ್ಡು ಮಾಡುವುದು ಬಿಟ್ಟು, ಈ ಸಮಾಜಕ್ಕೆ ಒಳ್ಳೆಯದಾಗುವಂಥದ್ದೇನಾದರೂ ಮಾಡಬೇಕು ಎಂದುಕೊಂಡು, ಮನೆ ಬಿಟ್ಟು ಓಡಿ ಬಂದಂತಹ ಮಕ್ಕಳನ್ನು ಮರಳಿ ಮನೆ ಸೇರಿಸುವ ಕೈಂಕರ್ಯದಲ್ಲಿ ತೊಡಗಿಕೊಳ್ಳುತ್ತಾನೆ. ರೈಲುಗಳಲ್ಲಿ ಟೀ, ಮಜ್ಜಿಗೆ, ವಡೆ, ನ್ಯೂಸ್‌ಪೇಪರು, ತಿಂಡಿಯ ಪೊಟ್ಟಣಗಳನ್ನು ಹಿಡಿದು ಬರುವ ಮಕ್ಕಳಿಂದ ಹಿಡಿದು ಹೋಟೆಲ್‌ಗಳ ಕ್ಲೀನರ್ ಹುಡುಗರವರೆಗೆ, ಅವರ ಪೂರ್ವಾಪರ ವಿಚಾರಿಸಿ ಮತ್ತೆ ಸಾಮಾನ್ಯ ಮಕ್ಕಳನ್ನಾಗಿಸುವ, ಮಕ್ಕಳಿಗೆ ಸಿಗಬೇಕಾದುದನ್ನು ಕೊಡಿಸುವ ಪ್ರಯತ್ನ ಮಾಡುತ್ತಾನೆ. ಪುನರ್ವಸು ಎಂಬ ಹುಡುಗಿ ಅವನ ಈ ಕೆಲಸದಲ್ಲಿ ಸಾಥಿಯಾಗಿ, ಕೊನೆಗೆ ಅವರಿಬ್ಬರೂ ಮದುವೆಯಾಗುತ್ತಾರೆ. ಇನ್ನಾದರೂ ಇವರು ಹಳಿಗೆ ಬಂದಾರು ಎಂದುಕೊಂಡ ಉಭಯ ಪೋಷಕರೂ ನಿರಾಶೆಯಾಗುವಂತೆ ಇವರು ತಮ್ಮ ಸಮಾಜೋದ್ಧಾರದ ಕೆಲಸ ಮುಂದುವರೆಸುತ್ತಾರೆ. ವೈಯಕ್ತಿಕ ಸುಖ-ದುಃಖಗಳು ಗೌಣವಾಗುತ್ತವೆ. ರಸ್ತೆಬದಿ, ರೈಲು, ಬಸ್‌ಸ್ಟಾಂಡು, ಶಾಲೆಯ ಕಟ್ಟೆಗಳ ಮೇಲೇ ಮಲಗೆದ್ದು, ಎಲ್ಲೆಲ್ಲೋ ಏನೇನೋ ತಿನ್ನುತ್ತ, ಅವರು ಈ ಕೆಲಸದಲ್ಲೇ ಮುಳುಗಿಹೋಗಿರುತ್ತಾರೆ.&amp;nbsp; ಆದರೆ ಯಾವಾಗ ಪುನರ್ವಸು ಗರ್ಭಿಣಿಯಾಗುತ್ತಾಳೋ ಆಗ ಅವರಿಗೂ ಒಂದು ‘ವೈಯಕ್ತಿಕ ಬದುಕು’ ಪ್ರಾಪ್ತವಾಗುತ್ತದೆ. ಬಸುರಿ ಹೆಂಡತಿಗಾಗಿ ಹಾಲು, ಒಳ್ಳೆಯ ಊಟ, ಮನೆ, ಬಟ್ಟೆ, ಆರೈಕೆ, ತಾನು, ತನ್ನದು -ಗಳಂತಹ ಸಂಸಾರದ ಚೌಕಟ್ಟಿಗೆ ಅವರೂ ಒಳಗಾಗಬೇಕಾಗುತ್ತದೆ. ‘ಹಣ’ಕ್ಕೊಂದು ಪ್ರಾಮುಖ್ಯತೆ ಬರುತ್ತದೆ.&amp;nbsp; ಬೇರೆ ಸಂಸಾರಗಳನ್ನು, ಗೆಳೆಯರ ಮಕ್ಕಳನ್ನು ನೋಡಿದಾಗ ತಾನು ತೆಗೆದುಕೊಂಡ ನಿರ್ಧಾರಗಳು, ತನ್ನ ಆದರ್ಶಗಳು ಎಲ್ಲಾ ಸುಳ್ಳಾಗಿದ್ದವೇ ಎಂಬ ಗೊಂದಲಕ್ಕೆ ಬೀಳುತ್ತಾನೆ ನೈ‌ಋತ್ಯ. &lt;br /&gt;&lt;br /&gt;ನಾವು ಪಾಲಿಸಿಕೊಂಡು ಬಂದ ಆದರ್ಶಗಳನ್ನು ಕೈಬಿಡುವ ಕ್ಷಣಗಳಲ್ಲಿ ಆಗುವ ಗೊಂದಲ ತೀವ್ರವಾದದ್ದು. ಬಹುಶಃ ಈ ‘ಆದರ್ಶದ ಪರಿಪಾಲನೆ’ ಎಂಬ ಸಂಗತಿಗೆ ‘ಯಾವುದೋ ಸುಖದ ತ್ಯಾಗ’ ಎಂಬ ಸಂಗತಿ ಲಿಂಕ್ ಆಗಿರಬೇಕು. ಮತ್ತು ಈ ‘ಯಾವುದೋ ಸುಖದ ತ್ಯಾಗ’ ಎಂಬುದು ಮತ್ತೊಬ್ಬರನ್ನು ನೋಡಿದಾಗ ನಮಗನಿಸುವ ಭಾವವಿರಬೇಕು. ಉದಾಹರಣೆಗೆ, ‘ಹಣ ಮಾಡುವುದಕ್ಕಾಗಿ ನಾನು ದುಡಿಯುವುದಿಲ್ಲ; ಸಧ್ಯಕ್ಕೆ ನನಗೆ ಬದುಕಲೆಷ್ಟು ಬೇಕೋ ಅಷ್ಟನ್ನು ಮಾತ್ರ ನಾನು ದುಡಿದುಕೊಳ್ಳುತ್ತೇನೆ’ ಎಂಬ ಧ್ಯೇಯವನ್ನು ನಾನು ಇಟ್ಟುಕೊಂಡರೆ, ಇಡೀ ಜಗತ್ತೇ ಹಣದ ಹಿಂದೆ ಬಿದ್ದಿರುವ ಈ ದಿನಗಳಲ್ಲಿ ನಾನು ಒಂಟಿಯಾಗಿಬಿಡುತ್ತೇನೆ. ನಾನೂ ನನ್ನ ಗೆಳೆಯರ, ಊರವರ, ಸಮಾಜದವರ ಸರಿಸಮಾನನಾಗಿ ಬದುಕಬೇಕು ಎಂಬ ಬಯಕೆಗೂ ನನ್ನ ಆದರ್ಶಕ್ಕೂ ಬೀಳುವ ಜಿದ್ದಾಜಿದ್ದಿ ಇದು. ಗೆಳೆಯ ಕಾರು ತಗೊಂಡ, ಸೈಟು ಖರೀದಿಸಲು ನೋಡುತ್ತಿದ್ದಾನೆ, ಫ್ಲಾಟ್‌ನಲ್ಲಿ ಇದ್ದಾನೆ, ಅಮೆರಿಕೆಗೆ ಹಾರುತ್ತಿದ್ದಾನೆ, ಎಷ್ಟು ಸುಂದರಿ ಹೆಂಡತಿ, ಫೈವ್ ಸ್ಟಾರ್ ಹೋಟೆಲಿಗೆ ಕರೆದೊಯ್ಯುತ್ತಾನೆ, ಮಲ್ಟಿಪ್ಲೆಕ್ಸಿನಲ್ಲೇ ಸಿನೆಮಾ ನೋಡುತ್ತಾನೆ, ಶಾಪಿಂಗ್ ಮಾಡುವುದೇನಿದ್ದರೂ ಮಾಲಿನಲ್ಲೇ -ಎಂಬಿತ್ಯಾದಿ ಬೇಡವೆಂದರೂ ನನ್ನನ್ನು ಚುಚ್ಚುವ ಶೂಲಗಳು; ‘ಬರೀ ಈಗಿನದಷ್ಟೇ ನೋಡಿಕೊಂಡ್ರೆ ಆಗ್ಲಿಲ್ಲ, ನಿನ್ನನ್ನಷ್ಟೇ ಸಂಭಾಳಿಸಿಕೊಂಡ್ರೆ ಆಗ್ಲಿಲ್ಲ; ಫ್ಯೂಚರ್ - ಫ್ಯೂಚರ್ ಬಗ್ಗೆ ಯೋಚಿಸು. ನಿನ್ನ ತಂದೆ-ತಾಯಿಯರನ್ನ ನೋಡ್ಕೋಬೇಕು, ಮದುವೆ ಮಾಡ್ಕೋಬೇಕು, ಆಮೇಲೆ ಮಕ್ಳು-ಮರಿ-ಶಾಲೆ-ಫೀಸು, ಸಂಸಾರವನ್ನ ಸುಖವಾಗಿಡಬೇಕು, ಕೊನೇಕಾಲದಲ್ಲಿ ನಿನಗೇ ಹಣದ ಜರೂರತ್ತು ಬೀಳಬಹುದು... ಇದನ್ನೆಲ್ಲ ಯೋಚಿಸು. ಕಮ್ ಔಟ್ ಆಫ್ ದಟ್ ಕಂಪನಿ ಅಂಡ್ ಜಾಯ್ನ್ ಅ ನ್ಯೂ ಜಾಬ್’ ಎಂದು ನನ್ನನ್ನು ಪ್ರೇರೇಪಿಸುವ ಶಕ್ತಿಗಳು; ‘ಈಗಿನ ಕಾಲದಲ್ಲಿ ಲಾಯಲ್ಟಿ, ಭಾವನೆ, ಆದರ್ಶ ಅಂತೆಲ್ಲ ಯೋಚಿಸ್ತಾ ಕೂತ್ರೆ ಅಷ್ಟೇ ಕತೆ. ದುಡ್ಡಿಗಾಗಿ ಏನು ಮಾಡಲಿಕ್ಕೂ ಹೇಸದ ಜನಗಳ ಮಧ್ಯೆ ನೀನಷ್ಟೇ ಸುಮ್ಮನಿದ್ದು ಏನು ಸಾಧಿಸ್ತೀಯಾ? ಹೇಳ್ತೀನಿ ಕೇಳು: ಮುಂದೆಮುಂದೆ ನಿನ್ನ ಆದರ್ಶಗಳ ಪಾಲನೆಗೂ ಹಣವೇ ಬೇಕಾಗತ್ತೋ ಮೂರ್ಖಾ!’ ಎಂದು ಹೆದರಿಸುವ ಆಪ್ತರು; ‘ಒಂದು ಸಲ ನಿಂಗೆ ಎಷ್ಟು ಬೇಕೋ ಅಷ್ಟು ಹಣ ಮಾಡಿಕೊಂಡು ಲೈಫಲ್ಲಿ ಸೆಟಲ್ ಆಗಿ ಕೂತುಬಿಟ್ರೆ ಮುಗೀತಪ್ಪ. ಆಮೇಲೆ ನಿಂಗೆ ಏನು ಬೇಕೋ ಅದು ಮಾಡ್ಕೋ. ಹ್ಯಾಗೆ ಬೇಕೋ ಹಾಗೆ ಬದುಕು’ ಎಂಬ ಹೊಸ ಆಯಾಮದ ಸಲಹೆ -ಇವೆಲ್ಲವುಗಳ ಮಧ್ಯೆ ನಾನು ನಾನಾಗಿ ಉಳಿಯುವುದು ಹೇಗೆ?&lt;br /&gt;&lt;br /&gt;ಈ ಸುಖ ಎಂಬ ಊಹನೆಗೆ ಗರಿಷ್ಠ ಮಿತಿಯೇ ಇಲ್ಲದಿರುವುದು ಇವಕ್ಕೆಲ್ಲ ಕಾರಣವಿರಬಹುದು. ಏನೆಲ್ಲ ಇದ್ದೂ ಇವ್ಯಾವುದೂ ಬೇಡ, ಮತ್ತೇನೋ ಬೇಕು ಎಂದು ಹಂಬಲಿಸುವುದು ಅಧ್ಯಾತ್ಮ.&amp;nbsp; ಆದರೆ ಇಷ್ಟೆಲ್ಲ ಇದ್ದರೂ ಇನ್ನೂ ಬೇಕೆಂಬುದಕ್ಕೆ, ಎಷ್ಟೇ ಅನುಭವಿಸಿದರೂ ಸಾಕೆನಿಸದೇ ಹೋಗುವುದಕ್ಕೆ, ಬರೀ ನಮಗಿಂತ ಮೇಲಿನವರೇ ನಮ್ಮ ಕಣ್ಣಿಗೆ ಚುಚ್ಚುವುದಕ್ಕೆ ತೃಪ್ತಿಯ ಅಳತೆಗೋಲು ಬೆಳೆಯುತ್ತಲೇ ಹೋಗುವುದೇ ಕಾರಣ. ಈ ಎಲ್ಲ ಏನೆಲ್ಲವನ್ನು ಗಳಿಸುವ ಭರಾಟೆಯಲ್ಲಿ ನಾನು ಮುರಿಯಬೇಕಿರುವ ನಿರ್ಧಾರಗಳಿಗೆ ಕೊಟ್ಟುಕೊಳ್ಳಬಹುದಾದ ಸಮರ್ಥನೆಯೇನು? ನಾನು ಬದುಕುತ್ತಿರುವ ಈ ವಾಸ್ತವಿಕ ಜಗತ್ತು ನನ್ನದಲ್ಲ, ನಾನು ಮಾಡುತ್ತಿರುವ ಈ ಕೆಲಸ ನನ್ನದಲ್ಲ, ಐಯಾಮ್ ನಾಟ್ ವ್ಹಾಟ್ ಐಯಾಮ್ -ಎಂಬ, ಆಗಾಗ ನನಗನಿಸುವ ಭಾವ, ಮತ್ತು ಹಾಗಿದ್ದಾಗ್ಯೂ ಇವ್ಯಾವುದನ್ನೂ ಬಿಡಲಾಗದ ಅನಿವಾರ್ಯತೆಗಳ ನಡುವೆ ಹೊಂದಾಣಿಕೆ ಮಾಡಿಕೊಂಡು ಕಾಲ ಸವೆಸುವುದೇ ಬದುಕೇ? ಗೊತ್ತಿಲ್ಲ. &lt;br /&gt;&lt;br /&gt;&lt;div style="text-align: center;"&gt;&lt;span style="color: blue;"&gt;*&lt;/span&gt; &lt;span style="color: red;"&gt;*&lt;/span&gt; &lt;span style="color: lime;"&gt;*&lt;/span&gt;&lt;/div&gt;&amp;nbsp; &lt;br /&gt;&lt;a href="http://1.bp.blogspot.com/-WltHwSo7isQ/TbZZJB3BBBI/AAAAAAAAI9E/uEuWt5_x1Qo/s1600/3.jpg" style="clear: left; float: left; margin-bottom: 1em; margin-right: 1em;"&gt;&lt;img border="0" height="140" src="http://1.bp.blogspot.com/-WltHwSo7isQ/TbZZJB3BBBI/AAAAAAAAI9E/uEuWt5_x1Qo/s320/3.jpg" width="320" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಭಾನುವಾರ ಬೆಳಬೆಳಗ್ಗೆ ಫೋನಿಸಿದ ಹುಡುಗಿ ಭೈರಪ್ಪನವರ ‘ನಿರಾಕರಣ’ ಓದುತ್ತಿರುವುದಾಗಿ ಹೇಳಿದಳು. ಅದ್ಯಾವುದೋ ಗುಂಗಿನಲ್ಲಿದ್ದ ನಾನು, ‘ಅದರಲ್ಲಿ ಬರುವ ಪಾತ್ರ ನರಹರಿಯ ಹಾಗೆ ನಂಗೂ ಆಗಾಗ ಹಿಮಾಲಯಕ್ಕೆ ಹೋಗಿಬಿಡಬೇಕು ಅಂತ ಅನ್ನಿಸುತ್ತೆ.&amp;nbsp; ಒಂದಷ್ಟು ಕಾಲ ಸನ್ಯಾಸಿಯ ಥರ ಬದುಕಿ ಬರಬೇಕು ಅಂತ ಇದೆ’ ಎಂದುಬಿಟ್ಟೆ. ಅಷ್ಟೇ, ಫೋನ್ ಕಟ್! ಏನಾಯಿತು ಅಂತ ತಿಳಿಯಲು ಅರ್ಧ ಗಂಟೆಯ ನಂತರ ಬಂದ ಎಸ್ಸೆಮ್ಮೆಸ್ಸನ್ನೇ ಓದಬೇಕಾಯಿತು: ‘ನಿಂಗೆ ಸನ್ಯಾಸಿ ಆಗ್ಬೇಕು ಅಂತೆಲ್ಲ ಇದ್ರೆ ಮೊದಲೇ ಹೇಳ್ಬಿಡು. ನಾನು ನಿನ್ನ ಮದುವೇನೇ ಮಾಡ್ಕೊಳಲ್ಲ.&amp;nbsp; ಆಮೇಲೆ ಸಂಸಾರ ಬಿಟ್ಟು, ಮಕ್ಕಳನ್ನ ಹರಾಜಿಗೆ ಹಾಕಿ ನೀನು ಹತ್ತಿ ಹೋಗೋದು ಎಲ್ಲಾ ನಂಗೆ ಸಹಿಸಲಿಕ್ಕೆ ಆಗಲ್ಲ. ಎಲ್ಲಾರ ಹಾಗೆ ಡೀಸೆಂಟಾಗಿ ಬದುಕೋ ಹುಡುಗ ಬೇಕು ನಂಗೆ.’&amp;nbsp;&amp;nbsp; ಆಹ್! ಆಮೇಲೆ ‘ನಾನು ಹೇಳಿದ್ದು ಹಂಗಲ್ಲ, ಹಿಂಗೆ, ನಾನು ದೇವರಾಣೆ ಸನ್ಯಾಸಿ ಆಗಲ್ಲ, ಹೆಂಡತಿ-ಮಕ್ಕಳನ್ನ ಬಿಟ್ಟುಹೋಗುವಷ್ಟು ಬೇಜವಾಬ್ದಾರಿತನ ನಂಗಿಲ್ಲ’ ಅಂತೆಲ್ಲ ಹೇಳಿ ಸಮಾಧಾನ ಮಾಡಬೇಕಾಯ್ತು. ಮೂರು ದಿನ ಮಾತಿಲ್ಲ ಕತೆಯಿಲ್ಲ. ಕೊನೆಗೆ ದೇವರೇ ಡೈರಿಮಿಲ್ಕ್ ರೂಪದಲ್ಲಿ ಬಂದು ಈ ಪ್ರಕರಣಕ್ಕೆ ಸುಖಾಂತ್ಯ ಕೊಟ್ಟ.&amp;nbsp; ಕ್ಯಾಡ್‌ಬರೀಸಿಗೆ ಥ್ಯಾಂಕ್ಸ್ ಹೇಳಿದೆ.&lt;br /&gt;&lt;br /&gt;ಕನಸಿಗೂ, ಆದರ್ಶಕ್ಕೂ, ಹುಚ್ಚಿಗೂ ಸಿಕ್ಕಾಪಟ್ಟೆ ಸಂಬಂಧವಾ? ಕನಸು ಕಾಣುವುದು ಹಾಗೂ ಆದರ್ಶಗಳನ್ನು ಆವಾಹಿಸಿಕೊಳ್ಳುವುದು ಹುಚ್ಚಿನ ಲಕ್ಷಣವಾ? ಗೊತ್ತಿಲ್ಲ. &lt;br /&gt;&lt;br /&gt;&lt;div style="text-align: center;"&gt;&lt;span style="color: blue;"&gt;*&lt;/span&gt; &lt;span style="color: red;"&gt;*&lt;/span&gt; &lt;span style="color: lime;"&gt;*&lt;/span&gt;&lt;/div&gt;&lt;br /&gt;&lt;a href="http://4.bp.blogspot.com/-py4yCF-4eVE/TbZZNbBMF3I/AAAAAAAAI9I/w128U7FqdhA/s1600/4.jpg" style="clear: left; float: left; margin-bottom: 1em; margin-right: 1em;"&gt;&lt;img border="0" height="63" src="http://4.bp.blogspot.com/-py4yCF-4eVE/TbZZNbBMF3I/AAAAAAAAI9I/w128U7FqdhA/s320/4.jpg" width="320" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಏನೇನೂ ಗೊತ್ತಿಲ್ಲದ ಕಾಲದಲ್ಲಿ ಶುರು ಮಾಡಿದ್ದು ಈ ಬ್ಲಾಗು. ಆದರೆ ಹೀಗೆಲ್ಲ ನಿಮ್ಮೊಂದಿಗೆ ಮಾತಾಡುತ್ತ ಐದು ವರುಷಗಳೇ ಕಳೆದುಹೋಗಿವೆ. ನಾನು ಬರೆದದ್ದೆಲ್ಲ ಓದಿದ ನಿಮ್ಮ ಪ್ರೀತಿ ದೊಡ್ಡದು. ನಿಮ್ಮ ಸ್ಪಂದನಗಳು ನನಗೆ ನೀಡಿದ ಆತ್ಮವಿಶ್ವಾಸ ಅಪಾರ. ಥ್ಯಾಂಕ್ಸ್, ಋಣಿ, ಕೃತಜ್ಞ, ಆಭಾರಿ -ಇತ್ಯಾದಿ ಶಬ್ದಗಳು ಈ ಸದ್ದಿಲ್ಲದ ಭಾವಗೀತದ ಬಣ್ಣನೆಗೆ ಏನೇನೂ ಸಾಲವು. ಆದರೂ ಈ ಕ್ಷಣಕ್ಕೆ ಹೊಳೆಯುತ್ತಿರುವವು ಅವೇ.&lt;br /&gt;&lt;br /&gt;ದೈನಂದಿನ ಬದುಕಿಗೆ ಇಂಗ್ಲೀಷ್ ಕ್ಯಾಲೆಂಡರ್ ಇಯರ್, ಹಿಂದೂಗಳಿಗೆ ಸಂವತ್ಸರ, ವ್ಯವಹಾರ ಜಗತ್ತಿಗೆ ಫೈನಾನ್ಷಿಯಲ್ ಇಯರ್ -ಇರುವ ಹಾಗೆ ಬ್ಲಾಗಿಗರಿಗೆ ‘ಬ್ಲಾಗೀ ವರ್ಷ.’ ಈ ಬ್ಲಾಗೀ ವರ್ಷ ನನಗೆ ಒಂದಷ್ಟು ಬಹುಮತಿಗಳನ್ನು ತಂದುಕೊಟ್ಟಿತು: ನನ್ನ ‘ಹೊಳೆಬಾಗಿಲು’ ಕೃತಿಗೆ ಸಾಹಿತ್ಯ ಪರಿಷತ್ ಕೊಟ್ಟ ಅರಳು ಪ್ರಶಸ್ತಿ, ಕವಿತೆಗಳಿಗೆ ಟೋಟೋ ಕೊಟ್ಟ ಸರ್ಟಿಫಿಕೇಟು, ಮೊನ್ನೆಮೊನ್ನೆ ಕನ್ನಡ ಪ್ರಭ-ಅಂಕಿತ ಪುಸ್ತಕದ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಬಂದ ಬಹುಮಾನ ...ಹೀಗೆ ಹಂಚಿಕೊಳ್ಳಲು ಒಂದಷ್ಟು ಖುಶಿಗಳು. ನಿಮ್ಮೊಂದಿಗೇ ಯಾಕೆ ಹಂಚಿಕೊಳ್ಳಬೇಕು ಎಂದರೆ ಮೇಷ್ಟ್ರಿಗೆ ಯಾಕೆ ಗೌರವ ಕೊಡಬೇಕು ಎಂದಂತಾಗುತ್ತದೆ. &lt;br /&gt;&lt;br /&gt;ಗಾಳ ಹಾಕಿ ಕುಳಿತವನಿಗೆ ಮೀನೇ ಸಿಗಬೇಕೆಂಬ ಹಟವಿಲ್ಲ. ಆಮೆಮರಿ, ಕಪ್ಪೆಚಿಪ್ಪು, ಉರೂಟು ಕಲ್ಲು, ಸಣ್ಣ ಶಂಕು, ಯಾರದೋ ಸಾಕ್ಸು, ನೀರುಳ್ಳೆ ಹಾವು, ಕನ್ನಡಕದ ಫ್ರೇಮು... ಬುಟ್ಟಿಗೆ ಬಿದ್ದುದೆಲ್ಲ ಕವಿತೆಯಾಗಲಿ; ಮರೆತ ಉಸಿರು ಕತೆಯಾಗಲಿ.&amp;nbsp; ಸಾಗುತ್ತಿರುವ ಪಯಣದಲ್ಲಿ, ಜಾರುತ್ತಿರುವ ಕ್ಷಣಗಳಲ್ಲಿ, ಭಾರ ಭಾರ ಮನಸಿನಲ್ಲಿ ಹೀಗೊಂದು ಪುಟ್ಟ ಪ್ರಾರ್ಥನೆ:&lt;br /&gt;&lt;br /&gt;ಜಗುಲಿಕಟ್ಟೆಯ ಮೇಲೆ ನಡೆಯುತ್ತಿದೆ ಜೋರುನಗೆಯಲಿ ಅಂತ್ಯಾಕ್ಷರಿ &lt;br /&gt;ಹೊಸ ಹಾಡು ಹೊಳೆಯುತಿರಲಿ, ಆಟಕಂತ್ಯವಿಲ್ಲದಿರಲಿ&lt;br /&gt;ಕಾದ ಧರಣಿಗೆ ಆಗುತ್ತಿದೆ ರಾತ್ರಿಯಿಡೀ ಮಳೆಯ ಮೇಜವಾನಿ&lt;br /&gt;ಯಾವ ಗೋಡೆಯೂ ಕುಸಿಯದಿರಲಿ, ಮರದ ರೆಂಬೆ ಗಟ್ಟಿಯಿರಲಿ&lt;br /&gt;&lt;br /&gt;ತಿರುಗುತ್ತಿರುವ ಆಲೆಮನೆಯ ಕೋಣಗಳಿಗೆ ತಲೆಸುತ್ತು ಬಾರದಿರಲಿ&lt;br /&gt;ಅರಳುತ್ತಿರುವ ಎಲ್ಲ ಹೂವ ಕೊರಳಿಗೂ ದುಂಬಿಯುಸಿರು ತಾಕಲಿ&lt;br /&gt;ಉಪ್ಪಿಟ್ಟು ವಾಕರಿಕೆ ತರಿಸುವ ಮುನ್ನ ಬ್ಯಾಚುಲರುಗಳಿಗೆ ಮದುವೆಯಾಗಲಿ&lt;br /&gt;ವುಡ್ವರ್ಡ್ಸ್ ಕುಡಿದ ಮಗು ಅಳು ನಿಲ್ಲಿಸಲಿ, ಅಪ್ಪನಿಗೆ ತನ್ನಮ್ಮನ ನೆನಪಾಗಲಿ&lt;br /&gt;&lt;br /&gt;ಬಿಸಿಲ ಬೇಗೆಗೆ ಇರಲಿ ಇಬ್ಬಟ್ಟಲ ಹಣ್ಣಿನ ಶರಬತ್ತು&lt;br /&gt;ಚಳಿಯ ರಾತ್ರಿಗೆ ಇರಲಿ ತಬ್ಬಿ ಮುತ್ತಿಡುವಷ್ಟು ಮೊಹಬತ್ತು&lt;br /&gt;ಸೂಜಿಯೊಳಗೆ ದಾರ ಪೋಣಿಸುತ್ತಿರುವಜ್ಜಿಗೆ ನೆರವಾಗಲಿ ಮೊಮ್ಮಗಳು &lt;br /&gt;ಮರಳಿ ಬರಲಿ ವನಮಾಲಿ ರಾಧೆಯೆಡೆಗೆ, ಉಲಿಯಲಿ ಮತ್ತೆ ಕೊಳಲು&lt;br /&gt;&lt;br /&gt;ಒತ್ತೆಯಲ್ಲಿಟ್ಟ ಹಣ್ಣು ಸಿಹಿಯಾಗಲಿ, ಒಳ್ಳೆ ಸುದ್ದಿಯೇ ಬರಲಿ ಕಾದವರಿಗೆ&lt;br /&gt;ಆಸೆ ಪಟ್ಟ ಹುಡುಗಿಗೆ, ತಂದು ಮುಡಿಸಲಿ ಹುಡುಗ ಪರಿಮಳದ ಕೇದಿಗೆ&lt;br /&gt;ಕಣ್ಣ ಕೆಂಪೆಲ್ಲ ತಿಳಿಯಾಗಲಿ, ಭಾಷ್ಪವೆಲ್ಲ ಮೀಸಲಿರಲಿ ಆನಂದಕೆ&lt;br /&gt;ಅನ್ನವಿರಲಿ ಹಸಿದ ಹೊಟ್ಟೆಗಳಿಗೆ, ಕಾವಿರಲಿ ತಬ್ಬಲಿ ಮೊಟ್ಟೆಗಳಿಗೆ&lt;br /&gt;&lt;br /&gt;ಒಲ್ಲದ ಒಪ್ಪಿಗೆಗಳ ನೀಡದಂತೆ ನನ್ನನ್ನು ಅಣಿಗೊಳಿಸು&lt;br /&gt;ನಿರ್ಧಾರದ ಗಳಿಗೆಗಳಲಿ ಮನಸನ್ನು ಗಟ್ಟಿಗೊಳಿಸು&lt;br /&gt;ಕನಸುಗಳನ್ನು ಗುರಿಗಳನ್ನಾಗಿಸುವ ಛಲ ತೊಡಿಸು&lt;br /&gt;ಕವಿತೆಗಳನು ಕವಿಸಮಯಕೇ ಬಿಟ್ಟು ವಾಸ್ತವದಲ್ಲಿ ಬದುಕುವುದ ಕಲಿಸು&lt;br /&gt;&lt;br /&gt;&lt;br /&gt;ತುಂಬು ಪ್ರೀತಿ,&lt;br /&gt;&lt;br /&gt;&lt;b&gt;-ಸುಶ್ರುತ ದೊಡ್ಡೇರಿ&lt;/b&gt;&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-4033794088183794457?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/4033794088183794457/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=4033794088183794457' title='40 Comments'/><link rel='edit' type='application/atom+xml' href='http://www.blogger.com/feeds/27009232/posts/default/4033794088183794457'/><link rel='self' type='application/atom+xml' href='http://www.blogger.com/feeds/27009232/posts/default/4033794088183794457'/><link rel='alternate' type='text/html' href='http://hisushrutha.blogspot.com/2011/04/blog-post_26.html' title='ವರುಷಗಳು ಉರುಳುರುಳಿ...'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-IGTVScrJh6g/TbZZDRt-DXI/AAAAAAAAI88/vVSm4XKNcgY/s72-c/1.JPG' height='72' width='72'/><thr:total>40</thr:total></entry><entry><id>tag:blogger.com,1999:blog-27009232.post-1122380282606383593</id><published>2011-04-08T10:35:00.001+05:30</published><updated>2011-04-08T10:47:42.518+05:30</updated><category scheme='http://www.blogger.com/atom/ns#' term='ಸು-ಲಲಿತ ಪ್ರಬಂಧ'/><title type='text'>ಎಮ್ಮೆಬಸ್ಸು ಎಂಬ ಪುಷ್ಪಕ ವಿಮಾನ</title><content type='html'>‘ಫಸ್ಟ್ ಇಂಪ್ರೆಷನ್ ಈಸ್ ದ ಬೆಸ್ಟ್ ಇಂಪ್ರೆಷನ್’ ಎಂಬ ಅದ್ಯಾವುದೋ ಪುಣ್ಯಾತ್ಮ ಮಾಡಿದ ಗಾದೆ ನಮ್ಮೂರ ಬಸ್ಸುಗಳಿಗೂ ಅನ್ವಯಿಸುತ್ತದೆ. ಕಿತ್ತುಹೋಗಿರೋ ಟಾರು ರಸ್ತೆಯಲ್ಲಿ ಗಂಟೆಗೊಂದರಂತೆ ಹಾರನ್ ಮಾಡಿಕೊಂಡು ಚಲಿಸುವ ನಮ್ಮೂರ ಬಸ್ಸುಗಳು ಜನಮನ ಪ್ರೀತಿ ಗಳಿಸಿರುವುದು ತಮ್ಮ ಮೂಲ ಹೆಸರುಗಳೊಂದಿಗೆ. ಹಾಳಾದ ರಸ್ತೆಯಿಂದಾಗಿ ಪದೇಪದೇ ರಿಪೇರಿಗೆ ಬಂದು ಜೇಬಿಗೆ ಸಂಚಕಾರ ತರುವುದಕ್ಕೋ, ಜನರೆಲ್ಲ ಶ್ರೀಮಂತರಾಗಿ ತಮ್ಮ ಸ್ವಂತ ವಾಹನಗಳಲ್ಲಿ ಓಡಾಡತೊಡಗಿ ಕಲೆಕ್ಷನ್ ಸರಿಯಾಗಿ ಆಗದಿರುವುದಕ್ಕೋ ಅಥವಾ ಗ್ರಹಚಾರ ಸರಿಯಿಲ್ಲದೆ ಮತ್ತೆಮತ್ತೆ ಅಪಘಾತಗಳಿಗೆ ಈಡಾಗುವುದಕ್ಕೋ ಬೇಸತ್ತು, ಯಾಕೋ ಈ ರೂಟೇ ಸರಿಯಿಲ್ಲ ಅಂತ ಅದರ ಓನರ್ರು ತೀರ್ಮಾನಿಸಿ ಬಸ್ಸಿನ ಸಮೇತ ರೂಟಿನ ಲೈಸೆನ್ಸನ್ನೂ ಮತ್ಯಾರಿಗೋ ಮಾರಾಟ ಮಾಡಿ ಕೈ ತೊಳೆದುಕೊಳ್ಳುವುದು ಒಂದು ವಾರ್ಷಿಕ ವಾಡಿಕೆಯೇ ಆಗಿತ್ತು. ಆದರೆ ಈ ಅರಿವೇನು ಪ್ರಯಾಣಿಕರಿಗೆ ಆಗುತ್ತಿರಲಿಲ್ಲ. ಬಸ್ಸು ಬರಬೇಕಾದ ಸಮಯಕ್ಕೆ ಬರುತ್ತಿತ್ತು, ಕೈ ಮಾಡಿದಲ್ಲಿ ನಿಲ್ಲುತ್ತಿತ್ತು, ಹತ್ತಿಸಿಕೊಂಡು ಹೋಗುತ್ತಿತ್ತು. ಕಾಲು-ಅರ್ಧಗಂಟೆ ಹೆಚ್ಚುಕಮ್ಮಿಯಾಗುವುದಕ್ಕೆಲ್ಲ ಪ್ರಯಾಣಿಕರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ.&lt;br /&gt;&lt;br /&gt;ಈ ಓನರ್ ಬದಲಾದಾಗ ಬಸ್ಸಿನ ಬಣ್ಣ ಮತ್ತು ಹೆಸರೂ ಬದಲಾಗುತ್ತಿತ್ತು. ‘ಶ್ರೀ ಲಕ್ಷ್ಮೀ ಟ್ರಾವೆಲ್ಸ್’ ಇದ್ದುದು ‘ಶ್ರೀ ಶಿವಪ್ರಕಾಶ್ ಮೋಟಾರ್ಸ್’ ಆಯಿತು, ‘ಶ್ರೀ ಮಲ್ಲಿಕಾರ್ಜುನ ಎಕ್ಸ್‌ಪ್ರೆಸ್’ ಇದ್ದುದು ‘ಶ್ರೀ ಗಣೇಶ್ ಪ್ರಸಾದ್’ ಆಯಿತು, ‘ಶ್ರೀ ಕೃಷ್ಣಾ ಟ್ರಾನ್ಸ್‌ಪೋರ್ಟ್ಸ್ ಸರ್ವೀಸಸ್’ ಇದ್ದುದು ‘ಶ್ರೀ ವೆಂಕಟೇಶ್ವರ ಟ್ರಾನ್ಸ್‌ಪೋರ್ಟ್ಸ್’ ಆಯಿತು. ಆದರೆ ಜನ ಮಾತ್ರ ಅವುಗಳ ಮೂಲ ಹೆಸರನ್ನು ಬಿಟ್ಟುಕೊಡಲಿಲ್ಲ. ಲಕ್ಷ್ಮೀ ಬಸ್ಸು, ಮಲ್ಲಿಕಾರ್ಜುನ ಬಸ್ಸು, ಕೃಷ್ಣಾ ಬಸ್ಸು -ಹೀಗೆ ಅವು ತಮ್ಮ ಒರಿಜಿನಲ್ ಹೆಸರುಗಳಿಂದಲೇ ಕರೆಯಲ್ಪಡುತ್ತಿದ್ದವು. ಇದೇ ಸಾಲಿಗೆ ಸೇರುವ ಮತ್ತೊಂದು ಬಸ್ಸು ‘ಎಮ್ಮೆಬಸ್ಸು’.&lt;br /&gt;&lt;br /&gt;ಈ ಎಮ್ಮೆಬಸ್ಸಿನ ನಿಜವಾದ ಹೆಸರು ‘ಶ್ರೀ ಎಮ್.ಎಮ್.ಎಸ್. ಅಂಡ್ ಎಸ್.ಟಿ.ಎ.’ ಎಂದು. ಇದರ ಲಾಂಗ್‌ಫಾರ್ಮು ಕಂಡುಹಿಡಿಯಲು ನಾವೊಂದಷ್ಟು ಹುಡುಗರು ಆಗ ಜಾಸೂಸಿ ಮಾಡಿದ್ದುಂಟು. ಎಮ್.ಎಮ್.ಎಸ್. ಎಂದರೆ ಮಲ್ಲಿಕಾರ್ಜುನ ಮೋಟಾರ್ ಸರ್ವೀಸಸ್ ಎಂದೇನೋ ಕಂಡುಹಿಡಿದೆವು. ಆದರೆ ಈ ಎಸ್.ಟಿ.ಎ. ಎಂದರೇನೆಂದು ತಿಳಿಯಲೇ ಇಲ್ಲ. ಕಂಡಕ್ಟರ್ ಬಳಿ ಕೇಳಿದರೆ, ಇನ್ನೂ ಶಾಲಾಬಾಲಕರಾಗಿದ್ದ ನಮ್ಮನ್ನು ‘ಅದೆಲ್ಲ ನಿಮಗ್ಯಾಕ್ರೋ?’ ಅಂತ ಹೆದರಿಸಿಬಿಟ್ಟರು. ಜನ ಮಾತ್ರ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗದೆ ಶಿಸ್ತಾಗಿ, ಸಿಂಪಲ್ಲಾಗಿ ಅದನ್ನು ‘ಎಮ್ಮೆಬಸ್ಸು’ ಅಂತ ಕರೆದುಬಿಟ್ಟರು! ಅದರ ಓನರ್ರೂ ಬದಲಾಗಿ, ಹೆಸರೂ ಅನೇಕ ಸಲ ಬದಲಾದರೂ ಜನರ ಬಾಯಲ್ಲಿ ಅದು ಇನ್ನೂ ಎಮ್ಮೆಬಸ್ಸಾಗಿಯೇ ಉಳಿದುಕೊಂಡಿದೆ.&lt;br /&gt;&lt;br /&gt;ಈ ಎಮ್ಮೆಬಸ್ಸು ನಮ್ಮೂರಿಗೆ ಸಾಗರದಿಂದ ಬರುವ ಕೊನೆಯ ಬಸ್ಸು. ಪೇಟೆಗೆ ಹೋದವರೆಲ್ಲ ಅದೆಷ್ಟೇ ಕೆಲಸವಿದ್ದರೂ ಮುಗಿಸಿಕೊಂಡು ಈ ಎಮ್ಮೆಬಸ್ಸಿಗೆ ಹತ್ತಿಕೊಳ್ಳಬೇಕು. ಅದಿಲ್ಲದಿದ್ದರೆ ದೂರದ ಉಳವಿಯಿಂದ ಕತ್ತಲ ರಾತ್ರಿಯಲ್ಲಿ ನಡೆದುಕೊಂಡು ಬರಬೇಕಾಗುತ್ತದೆ. ಎಮ್ಮೆಬಸ್ಸು ಸಾಗರದಿಂದ ರಾತ್ರಿ ಎಂಟೂ ಮುಕ್ಕಾಲಿಗೆ ಹೊರಡುತ್ತದೆ. ಸಂತೆಗೆ ಹೋದವರು, ಮಂಡಿ ಕೆಲಸಕ್ಕೆ ಹೋದವರು, ನೆಂಟರ ಮನೆಗೆ ಹೋದವರು, ಸಿನೆಮಾಗೆ ಹೋದವರು -ಎಲ್ಲಾ ತರಾತುರಿಯಲ್ಲಿ ಓಡಿಬಂದು ಬಸ್ ಹತ್ತಿ ನಿಟ್ಟುಸಿರು ಬಿಡುವರು. ಮೇನ್ ಬಸ್‌ಸ್ಟಾಂಡಿನಿಂದ ಹೊರಟುಹೋಗಿದ್ದರೂ ಹೊಳೆ ಬಸ್‌ಸ್ಟಾಂಡ್ ಬಳಿ ಈ ಬಸ್ ಐದು ನಿಮಿಷ ನಿಲ್ಲುತ್ತಿದುದರಿಂದ ಜನ ಆಟೋ ಮಾಡಿಸಿಕೊಂಡಾದರೂ ಇಲ್ಲಿಗೆ ಬಂದು ಬಸ್ ಹಿಡಿಯುವರು. ಸಂತೆ ಮುಗಿಸಿ ಬಂದವರ ಚೀಲದಿಂದ ಮೂಲಂಗಿಗಿಡ, ಕೊತ್ತಂಬರಿ ಕಟ್ಟುಗಳು ಇಣುಕುತ್ತಿದ್ದರೆ, ಮಂಡಿಗೆ ಹೋಗಿಬಂದವರ ಜೇಬು ನೋಟಿನಿಂದ ಉಬ್ಬಿರುತ್ತಿತು. ನೆಂಟರ ಮನೆಯಿಂದ ಬಂದವರ ಚೀಲದಲ್ಲಿ ಸಿಹಿತಿಂಡಿಗಳಿದ್ದರೆ ಸಿನೆಮಾ ನೋಡಿ ಬಂದವರ ಮೊಗದಲ್ಲಿ ಭಾರಿ ಗಮ್ಮತ್ತು. ಈ ಎಮ್ಮೆಬಸ್ಸಿಗೆ ಸಾಗರದ ಅಂಗಡಿ, ಮಂಡಿ, ಬ್ಯಾಂಕುಗಳಿಗೆ ಕೆಲಸಕ್ಕೆ ಹೋಗುವ ಒಂದಷ್ಟು ಖಾಯಂ ಪ್ರಯಾಣಿಕರೂ, ಒಂದಷ್ಟು ಕುಡುಕರೂ ಇರುತ್ತಿದ್ದರು. ಬಾಯಿಂದ ಘಮ್ಮನೆ ಪರಿಮಳ ಹೊಮ್ಮಿಸುತ್ತ ಬಿ.ಎಚ್. ರೋಡಿನಲ್ಲಿ ಹತ್ತುತ್ತಿದ್ದ ಈ ಕುಡುಕರನ್ನು ಕಂಡಕ್ಟರು ಕೊನೆಯ ಸೀಟಿನಲ್ಲಿ ಕೂರಿಸುತ್ತಿದ್ದ. ಈ ಬಸ್ಸಿನ ತುಂಬ ದಿನವೆಲ್ಲ ಅಡ್ಡಾಡಿ ಸುಸ್ತಾದ ಪ್ರಯಾಣಿಕರೇ. ಇವರೆಲ್ಲ ಕೂತೋ, ನಿಂತೋ, ಜೋತಾಡುತ್ತಲೋ ತೂಕಡಿಸುತ್ತಿದ್ದರು. ತಮ್ಮೂರಿನ ಹೆಸರನ್ನು ಕ್ಲೀನರ್ ಹುಡುಗ ಜೋರಾಗಿ ಕೂಗುತ್ತಿದ್ದಂತೆಯೇ ಎಚ್ಚರಾಗಿ ಲಘುಬಗೆಯಿಂದ ತಮ್ಮ ಚೀಲದ ಸಮೇತ ಕೆಳಗಿಳಿಯುತ್ತಿದ್ದರು.&lt;br /&gt;&lt;br /&gt;ಎಮ್ಮೆಬಸ್ಸಿಗೆ ಬರುವ ಪ್ರಯಾಣಿಕರಲ್ಲಿ ಸಾಗರದ ಸಂಪೂರ್ಣ ಸುದ್ದಿ ಇರುತ್ತಿತ್ತು. ಮಂಡಿಯಲ್ಲಿ ಅಡಿಕೆಯ ರೇಟು ಎಷ್ಟಾಯಿತು, ಈರುಳ್ಳಿ ರೇಟು ಕಮ್ಮಿಯಾಯಿತಾ, ಅದೇನೋ ಗಲಾಟೆಯಂತೆ ಹೌದಾ, ನಾಳೆ ಬಂದ್ ಮಾಡ್ತಾರಂತಾ, ಓಸಿ ನಂಬರ್ ಎಷ್ಟು -ಹೀಗೆ. ಅಡಿಕೆ ಬೇಯಿಸುತ್ತ ಅಲ್ಲೇ ಚಳಿ ಕಾಯಿಸುತ್ತ ಕೂತ ಮಂದಿಗೆ, ಕಣ ಕಾಯಲು ಲಾಟೀನು ಹಿಡಿದು ಹೊರಟವರಿಗೆ, ಪಕ್ಕದ ಮನೆಯಿಂದ ಟೀವಿ ನೋಡಿ ಹೊರಬೀಳುತ್ತಿದ್ದವರಿಗೆ -ಈ ಬಾತ್ಮೀದಾರ ಎಲ್ಲ ವರದಿ ನೀಡಿಯೇ ಮುಂದುವರೆಯಬೇಕು. ಸ್ಟ್ರೀಟ್‌ಲೈಟ್ ಬೆಳಕಿನಲ್ಲಿ ಕಂಗೊಳಿಸುತ್ತ, ಕಪ್ಪು ಭೂತದಂತೆ ಬ್ಯಾಟರಿ ಬಿಟ್ಟುಕೊಂಡು ನಡೆದು ಬರುತ್ತಿರುವ ಇಂತಹ ವಕ್ತಾರರಿಗಾಗಿಯೇ ಕಾಯುತ್ತ ಊರ ಜನ ಕಟ್ಟೆ ಮೇಲೆ ಕೂತಿರುವರು. &lt;br /&gt;&lt;br /&gt;ಎಮ್ಮೆಬಸ್ಸಿಗೆ ಸಂಬಂಧಿಸಿದ ಮತ್ತೊಂದು ಮಜಾ ವಿಷಯವೆಂದರೆ, ಈ ಬಸ್ಸಿಗೆ ಹೆಂಗಸರೇನಾದರೂ ಬರುವವರಿದ್ದರೆ ಅವರನ್ನು ಕರೆದುಕೊಂಡು ಬರಲು ಬ್ಯಾಟರಿ ಹಿಡಿದು ಗಂಡಸರು ಹೋಗಬೇಕಿದ್ದುದು. ಈ ರಾತ್ರಿಹೊತ್ತು ಬ್ಯಾಟರಿ ಹಿಡಿದು ಬಸ್‌ಸ್ಟಾಂಡಿಗೆ ಹೋಗುವ ಕಲ್ಪನೆಯೇ ಥ್ರಿಲ್ಲಿಂಗ್ ಆಗಿರುತ್ತಿತ್ತು. ಚಿಕ್ಕವನಿದ್ದಾಗ ಅಜ್ಜನ ಮನೆಗೆ ಹೋಗಿರುತ್ತಿದ್ದ ನಾನು, ಅಮ್ಮನೊಂದಿಗೆ ವಾಪಸು ಈ ಬಸ್ಸಿಗೇ ಬರುವಂತಹ ಸಂದರ್ಭವೇನಾದರೂ ಬಂದರೆ, ಅಪ್ಪ ಬ್ಯಾಟರಿ ಹಿಡಿದು ಬಸ್‌ಸ್ಟಾಂಡಿಗೆ ಬಂದಿರುತ್ತಿದ್ದ. ಅಷ್ಟೊತ್ತಿನತನಕ ಬಸ್ಸಿನೊಳಗೆ ಬೆಳಕಿನಲ್ಲಿ, ಸ್ಪೀಕರಿನಿಂದ ತೇಲಿಬರುತ್ತಿದ್ದ ಯಾವುದೋ ಸಿನೆಮಾ ಹಾಡಿನ ಲಹರಿಯಲ್ಲಿ, ಅಮ್ಮನ ಪಕ್ಕ ಬೆಚ್ಚಗೆ ಕೂತಿರುತ್ತಿದ್ದ ನನಗೆ, ಊರು ಬಂದು ಬಸ್ಸಿಳಿಯುತ್ತಿದ್ದಂತೆ, ಎಲ್ಲಾ ಕಡೆ ಕತ್ತಲೆಯೇ ಆವರಿಸಿ ಹೆದರಿಕೆಯಾಗುತ್ತಿತ್ತು. ಕತ್ತಲ ಕೂಪದಲ್ಲಿ ನಮ್ಮನ್ನು ಬಿಟ್ಟು, ಕಂಡಕ್ಟರು ‘ರೈಟ್’ ಅಂದದ್ದೇ ಬೆಳಕಿನ ಪೆಟ್ಟಿಗೆಯಂತೆ ಮುಂದೆ ಸಾಗಿಹೋಗುತ್ತಿದ್ದ ಬಸ್ಸು, ನನಗೆ ಪುಷ್ಪಕ ವಿಮಾನದಂತೆ ಕಾಣಿಸುತ್ತಿತ್ತು. ಥೇಟರಿನಿಂದ ಹೊರಬಿದ್ದಾಗ ನಿಜಲೋಕಕ್ಕೆ ಹೊಂದಿಕೊಳ್ಳಲು ಆಗುವ ಕಷ್ಟದಂತೆ ಈ ಕತ್ತಲಿಗೆ ಹೊಂದಿಕೊಳ್ಳಲು ಕೆಲಕ್ಷಣಗಳೇ ಹಿಡಿಯುತ್ತಿದ್ದವು. ನಮ್ಮನ್ನು ಕರೆದುಕೊಂಡು ಹೋಗಲು ಬಂದಿರುತ್ತಿದ್ದ ಅಪ್ಪ, ಆಗ ನಮ್ಮ ಮುಖಕ್ಕೇ ಬ್ಯಾಟರಿ ಬಿಟ್ಟು ನಾವೇ ಹೌದು ಅಂತ ಕನ್‌ಫರ್ಮ್ ಮಾಡಿಕೊಂಡು, ನನ್ನ ಕೈಹಿಡಿದು ಊರಿನ ಇಳಕಲು ಇಳಿಸುತ್ತಿದ್ದ. ದೆವ್ವಭೂತಗಳು ಅಕ್ಕಪಕ್ಕದ ಮರ-ಮಟ್ಟಿಗಳಲ್ಲಿ ಕೂತು ಹಾಯ್ ಎನ್ನುತ್ತಿದ್ದ ಈ ಚಳಿಯ ರಾತ್ರಿ ನಾನು ಅಪ್ಪನ ಕೈ ಗಟ್ಟಿಯಾಗಿ ಹಿಡಿದು ನಡುಗುತ್ತಾ ಮನೆ ಸೇರುತ್ತಿದ್ದೆ. ಇದೇ ಎಮ್ಮೆಬಸ್ಸಿಗೆ ಬರುವ ಅತ್ತಿಗೆಯನ್ನು ಕರೆತರಲು ನಾನೊಬ್ಬನೇ ಯಾವತ್ತು ಬಸ್‌ಸ್ಟಾಂಡಿಗೆ ಹೋದೆನೋ ಅವತ್ತೇ ನಾನು ಭಯ ಗೆದ್ದ ಶೂರನಾದೆ. ನನಗೆ ನಾನೇ ‘ದೊಡ್ಡವನಾದೆ ಮಗನೇ’ ಎಂದುಕೊಂಡೆ. &lt;br /&gt;&lt;br /&gt;ಹಿಂದೊಂದು ಕಾಲದಲ್ಲಿ, ನಮ್ಮೂರ ಕಡೆ ಕಾಡು ದಟ್ಟವಾಗಿದ್ದ ದಿನಗಳಲ್ಲಿ, ಈ ಕೊನೆಯ ಬಸ್ಸಿಗೆ ಬರಲು ಹೆಂಗಸರೇನು, ಗಂಡಸರೂ ಭಯ ಪಡುತ್ತಿದ್ದರಂತೆ. ‘ಇಲ್ಲೆಲ್ಲ ಇಷ್ಟೆಲ್ಲ ಮನೆ ಇರ್ಲೆ. ಊರಿಗೆ ಇದ್ದಿದ್ದು ಬರೀ ನಾಲ್ಕೇ ಮನೆ. ರಸ್ತೆ ಎಡಬಲಕ್ಕೂ ಎತ್ತೆತ್ತರದ ಮರಗಳು, ದಟ್ಟ ಮಟ್ಟಿ ಇದ್ದಿದ್ದ. ಹುಲಿ, ಕಾಡೆಮ್ಮೆ ಎಲ್ಲಾ ಓಡಾಡ್ತಿದ್ದ. ಒಂದ್ಸಲ ಹುಲಿ ಗುರ್‌ಗುಟ್ಟಿದ್ದು ಕೇಳ್ಚು ಅಂದ್ರೆ, ಎದೆಯೆಲ್ಲ ಥರಗುಟ್ಟಿಹೋಗ್ತಿತ್ತು. ಅಲ್ದೇ ಗುಡುಸ್ಲು ಮಾವಿನಮರದ ಹತ್ರ ಬರ್ತಿದ್ದಂಗೇ ಸಾಲಾಗಿ ಕೊಳ್ಳಿದೆವ್ವ ಹೋಗ್ತಿರೋದು ಕಾಣ್ತಿತ್ತು, ಹೆಂಗೆ ಗೊತಿದಾ? ಗಾಯತ್ರಿ ಬಲದಮೇಲೇ ಜೀವ ಹಿಡ್ಕಳಕ್ಕಾಗಿತ್ತು. ಗುಡುಸ್ಲು ಮಾರೆಮ್ಮಂಗೆ ಹಣ್‌ಕಾಯಿ ಹೇಳಿಕೊಂಡಮೇಲೇ, ಅವು ದಾರಿ ಬಿಟ್ಟುಕೊಡ್ತಿದ್ದದ್ದು’ ಅಂತ ಅಜ್ಜ ಹೇಳುವಾಗ, ಇಂತಹ ಅನುಭವಗಳಿಗ್ಯಾವುದಕ್ಕೂ ಫಕ್ಕಾಗದ ನನ್ನ ಬಗ್ಗೆ ನನಗೇ ಬೇಸರವಾಗುತ್ತಿತ್ತು. ಅಷ್ಟೇ ಅಲ್ಲ, ಆಗಿನ ಜನಗಳ ಮೌಢ್ಯವೋ, ನಂಬಿಕೆಯ ಪರಾಕಾಷ್ಠೆಯೋ ಅಥವಾ ಎಲ್ಲವನ್ನೂ ಉತ್ಪ್ರೇಕ್ಷಿಸಿ ಹೇಳುವ ಅವರ ಕಥೆಗಾರಿಕೆಯ ಬಗೆಯೋ, ಸಾಗರದಿಂದ ಬರುವ ಈ ಕೊನೇಬಸ್ಸು ಪಡವಗೋಡಿನ ಬಳಿಯ ಒಂದು ಭೂತದಕಲ್ಲಿನ ಬಳಿ ಪ್ರತಿದಿನ ಆಫ್ ಆಗಿ ನಿಂತುಬಿಡುತ್ತಿತ್ತಂತೆ! ಡ್ರೈವರೂ ಕಂಡಕ್ಟರೂ ಇಳಿದುಹೋಗಿ, ತೆಂಗಿನಕಾಯಿ ಒಡೆದು, ಉದ್ದಂಡ ನಮಸ್ಕಾರ ಹಾಕಿಬಂದಮೇಲೇ ಬಸ್ಸು ಮುಂದೆ ಹೋಗುತ್ತಿದ್ದುದಂತೆ! ಅದಿಲ್ಲವೆಂದರೆ ತಿಪ್ಪರಲಾಗ ಹೊಡೆದರೂ ಬಸ್ಸು ನಿಂತಲ್ಲಿಂದ ಕದಲುತ್ತಿರಲಿಲ್ಲವಂತೆ! ಅದೇ ನಂಬಿಕೆ ಮುಂದುವರೆದುಬಂದು, ಈಗ ಆ ಕಲ್ಲಿನ ಸುತ್ತ ಒಂದು ಗುಡಿಯನ್ನೇ ಕಟ್ಟಲಾಗಿದೆ. ಅದರ ಬಳಿ ಈಗಲೂ ಕೆಲ ಬಸ್ಸುಗಳನ್ನು ನಿಲ್ಲಿಸಿ ಪೂಜೆ ಸಲ್ಲಿಸಿ ಮುಂದುವರೆಯುತ್ತಾರೆ.&lt;br /&gt;&lt;br /&gt;ಈ ಎಮ್ಮೆಬಸ್ಸಿಗೆ ಒಮ್ಮೊಮ್ಮೆ ಅಚಾನಕ್ ನೆಂಟರು ಬಂದುಬಿಡುತ್ತಿದ್ದರು. ಫೋನಿನ್ನೂ ನಮ್ಮ ಮನೆಗೆ ಬಂದಿಲ್ಲದ ಕಾಲದಲ್ಲಿ ಆಗಂತುಕರಂತೆ ಬಂದಿಳಿಯುತ್ತಿದ್ದ ಇವರು, ಶಾಲೆಗೆ ಧಾಳಿಯಿಡುವ ಇನ್ಸ್‌ಪೆಕ್ಟರಂತೆ ಭಾಸವಾಗುತ್ತಿದ್ದರು. ಆಗಷ್ಟೆ ಊಟ ಮುಗಿಸಿ, ಕಸಮುಸುರೆ ಮುಗಿಸಿ ಮಲಗಲಣಿಯಾಗುತ್ತಿದ್ದ ನಮಗೆ ಈಗ ಇವರನ್ನು ಉಪಚರಿಸಲೇಬೇಕಾದ ಅನಿವಾರ್ಯತೆ. ಅವರಾದರೂ, ತಮ್ಮ ಊರಿಗೆ ಹೋಗಬೇಕಿದ್ದ ಬಸ್ ಬಾರದೆಯೋ, ಕೆಟ್ಟುಹೋಗಿಯೋ, ತಪ್ಪಿಹೋಗಿಯೋ ಆಗಿ, ಮತ್ಯಾವುದೇ ಗತ್ಯಂತರವಿರದೇ ನಮ್ಮಲ್ಲಿಗೆ ಬಂದವರಾಗಿರುತ್ತಿದ್ದರು. ಇವರಿಗೆ ಅನೇಕ ಸಲ ಊಟವಾಗಿರುತ್ತಿರಲಿಲ್ಲ. ಆಗ, ಇವರಿಗಾಗಿ ನಾವು ಹೊಸದಾಗಿ ಅಡುಗೆ ಮಾಡಿ ಬಡಿಸಬೇಕಿತ್ತು. ಅಮ್ಮ ಅಸಹನೆಯಿಂದಲೇ ಮತ್ತೆ ಅಡುಗೆಮನೆ ಪ್ರವೇಶಿಸುತ್ತಿದ್ದಳು. &lt;br /&gt;&lt;br /&gt;ಹೇಗೆ ಎಮ್ಮೆಬಸ್ಸಿಗೆ ಆಗಂತುಕರು ಬಂದಾಗ ಅಸಹನೆಯಾಗುತ್ತಿತ್ತೋ ಹಾಗೇ ಈ ಬಸ್ಸಿಗೆ ಬರಬೇಕಾದವರು ಬಾರದಿದ್ದರೆ ಆತಂಕವಾಗುತ್ತಿತ್ತು. ಪೇಟೆಗೆ ಹೋಗಿದ್ದ ಅಪ್ಪ, ತವರಿಗೆ ಹೋಗಿದ್ದ ಅಮ್ಮ, ಕಾಲೇಜಿಗೆ ಹೋಗಿದ್ದ ಅತ್ತಿಗೆ ಅಥವಾ ಬರುತ್ತೇನೆ ಎಂದು ಫೋನಿಸಿದ್ದ ಯಾರೋ ನೆಂಟರು -ಬಾರದೇ ಹೋದಾಗ ಮನೆಮಂದಿಗೆಲ್ಲ ಟೆನ್ಷನ್ ಶುರುವಾಗುತ್ತಿತ್ತು. ಎಮ್ಮೆಬಸ್ಸು ಮುಂಚೆಯೇ ಬಂತೇ, ಬಸ್ ತಪ್ಪಿಸಿಕೊಂಡರೇ, ಬಸ್ಸಿನಲ್ಲಿ ನಿದ್ರೆ ಬಂದು ಸ್ಟಾಪ್ ತಪ್ಪಿಹೋಯಿತೇ, ಆಗಲೇ ಸದ್ದು ಮಾಡುತ್ತ ಹೋದದ್ದು ಬಸ್ ಅಲ್ಲ ಲಾರಿಯೇ -ಹೀಗೆ ಒಬ್ಬೊಬ್ಬರೂ ತಮಗೆ ತಿಳಿದಂತೆ ಆಲೋಚಿಸುತ್ತ ಆತಂಕದ ಶಮನದಲ್ಲಿ ಮಗ್ನರಾಗಿರುತ್ತಿದ್ದೆವು. &lt;br /&gt;&lt;br /&gt;ನಮ್ಮೆಲ್ಲರ ಚಿಂತೆಯನ್ನು ನಿವಾರಿಸುವಂತೆ ಎಮ್ಮೆಬಸ್ಸು ಅಂದು ತಡವಾಗಿ ಬರುತ್ತಿತ್ತು. ನಮ್ಮೂರ ಬಸ್‌ಸ್ಟಾಂಡ್ ಬಳಿ ರಾಗವಾಗಿ ಹಾರನ್ ಮಾಡುತ್ತಿತ್ತು. ನಮ್ಮ ಮನೆಗೆ ಬರಬೇಕಾದವರನ್ನು ಸುರಕ್ಷಿತವಾಗಿ ಇಳಿಸುತ್ತಿತ್ತು. ಕ್ಲೀನರ್ ಹುಡುಗ ಹೊಡೆದ ಶೀಟಿ ಇಲ್ಲಿಯವರೆಗೂ ಕೇಳಿಸುತ್ತಿತ್ತು. ನಿದ್ದೆಗಣ್ಣ ಪ್ರಯಾಣಿಕರನ್ನು ತೂಗುತ್ತಾ ಕತ್ತಲನ್ನು ಬದಿಗೆ ಸರಿಸುತ್ತಾ ಕಿಟಕಿ-ಕಿಟಕಿಗಳಿಂದ ಬೆಳಕು ಚೆಲ್ಲುತ್ತಾ ಮಾಯಾಪೆಟ್ಟಿಗೆಯಂತೆ ಮುಂದೆ ಸಾಗುತ್ತಿತ್ತು. &lt;br /&gt;&lt;br /&gt;[&lt;i style="color: #660000;"&gt;ತರಂಗ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ.&lt;/i&gt;&lt;span style="color: #660000;"&gt; &lt;/span&gt;]&lt;br /&gt;&lt;br /&gt;- - -&lt;br /&gt;[ಈ ಪ್ರಬಂಧದಲ್ಲೊಂದು ತಪ್ಪಿದೆ.&amp;nbsp; ಎಮ್.ಎಮ್.ಎಸ್.ನ ಲಾಂಗ್‌ಫಾರ್ಮು&amp;nbsp; 'ಮಲ್ಲಿಕಾರ್ಜುನ ಮೋಟಾರ್ ಸರ್ವೀಸಸ್ ' ಅಲ್ಲ.&amp;nbsp; 'ಮೊಹಮ್ಮದ್ ಮೀರ್ ಸಾಹೆಬ್' ಅಂತಲಂತೆ.&amp;nbsp; ಮತ್ತು ಎಸ್.ಟಿ.ಎ. ಎಂದರೆ&amp;nbsp; 'ಸಾಗರ-ತೀರ್ಥಹಳ್ಳಿ-ಆಗುಂಬೆ'.&amp;nbsp; ಮೊಹಮ್ಮದ್ ಮೀರ್ ಎಂಬ ಸಾಗರದವರೊಬ್ಬರು ನಡೆಸುತ್ತಿದ್ದ ಈ ಬಸ್ಸು ಮೊದಲು ಸಾಗರ-ತೀರ್ಥಹಳ್ಳಿ-ಆಗುಂಬೆ ರೂಟಿನಲ್ಲಿ ಚಲಿಸುತ್ತಿತ್ತಂತೆ. ಬರೆದು ಕಳುಹಿಸಿಯಾದಮೇಲೆ ನನಗೆ ತಿಳಿದದ್ದು&amp;nbsp; ಇದು.]&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-1122380282606383593?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/1122380282606383593/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=1122380282606383593' title='16 Comments'/><link rel='edit' type='application/atom+xml' href='http://www.blogger.com/feeds/27009232/posts/default/1122380282606383593'/><link rel='self' type='application/atom+xml' href='http://www.blogger.com/feeds/27009232/posts/default/1122380282606383593'/><link rel='alternate' type='text/html' href='http://hisushrutha.blogspot.com/2011/04/blog-post.html' title='ಎಮ್ಮೆಬಸ್ಸು ಎಂಬ ಪುಷ್ಪಕ ವಿಮಾನ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>16</thr:total></entry><entry><id>tag:blogger.com,1999:blog-27009232.post-4672583282667239891</id><published>2011-03-26T00:50:00.003+05:30</published><updated>2011-03-26T16:57:59.951+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಪ್ರತೀಕ್ಷೆ</title><content type='html'>ಕಾಯುವುದು ಎಂದರೆ ಹೀಗೇ ಮತ್ತೆ&lt;br /&gt;ದರೋಜಿ ಕರಡಿಧಾಮದಲ್ಲಿ &lt;br /&gt;ಒಣತರುಗಳ ನಡುವಿನ ಕಾದಬಂಡೆಗಳಿಗೆ&lt;br /&gt;ಕಾಕಂಬಿ ಸವರಿ ಬಂದು&lt;br /&gt;ಕೆಮೆರಾದ ಮೂತಿಗೆ ಜೂಮ್‌ಲೆನ್ಸ್ ಇಟ್ಟು&lt;br /&gt;ಕಣ್ಣು ನೆಟ್ಟು ಕೂರುವುದು&lt;br /&gt;&lt;br /&gt;ಸದ್ದು ಮಾಡಬೇಡಿ ಅಂತ ಎಚ್ಚರಿಸುತ್ತಾನೆ ಕಾವಲುಗಾರ..&lt;br /&gt;ನವಿಲುಗಳು ದಾಹದಿಂದ ಕೇಕೆ ಹಾಕುವಾಗ&lt;br /&gt;ನರ್ತನದ ಭಂಗಿಗಳ ಉನ್ಮತ್ತ ಮೆಲುಕು&lt;br /&gt;ರೆಂಬಿಯಿಂದಿಳಿದೋಡೋಡಿ ಬರುತ್ತಿರುವ ಅಳಿಲೇ, &lt;br /&gt;ನಿನ್ನ ಚುರುಕು ಕಣ್ಗಳಿಗೆ ಏನಾಹಾರ ಕಂಡಿತು?&lt;br /&gt;&lt;br /&gt;ಅಕೋ, ಆ ಅಲ್ಲಿ ಒಂದಷ್ಟು ದೊಡ್ಡಕಲ್ಲುಗಳಿವೆಯಲ್ಲ,&lt;br /&gt;ಅದರ ಹಿಂದೆಯೇ ಇದೆ ಮರಿಗಳಿಗೆ ಹಾಲೂಡಿಸುತ್ತಿರುವ &lt;br /&gt;ಅಮ್ಮ ಕರಡಿ. ಸ್ವಲ್ಪ ತಡಿ, ಕಂದಮ್ಮನಿಗೆ ಕಣ್ಣು ಹತ್ತಲಿ.&lt;br /&gt;ಆಮೇಲೆ ನೋಡಿ ಮಜ - ಮಜಲು&lt;br /&gt;&lt;br /&gt;ಹೌದಲ್ಲಾ, ಉಬ್ಬೆಯಲ್ಲಿಟ್ಟು ಬಂದಿದ್ದ ಆ &lt;br /&gt;ಕಾಯಿಗಳು ಹಣ್ಣಾದವೇ? &lt;br /&gt;ಒಲೆಯ ಮೇಲಿಟ್ಟ ಹಾಲು&lt;br /&gt;ಇತ್ತ ಬಂದಾಕ್ಷಣ ಉಕ್ಕಿತೇ?&lt;br /&gt;ಬರುತ್ತೇನೆ ಎಂದು ಕೈಕೊಟ್ಟ ನಿನಗೇನು ಗೊತ್ತು&lt;br /&gt;ಎರಡು ಮೆಟ್ಟಿಲು ಹತ್ತಿದರೂ ಸುಸ್ತಾಗುತ್ತ,&lt;br /&gt;ಬಿಸಿಲ ಬೀದಿಯಲ್ಲಿ ಕಣ್ಕತ್ತಲಾಗಿ ಕೂರುತ್ತ,&lt;br /&gt;ಹೊರುವ ಕಷ್ಟ ಒಂಭತ್ತು ತಿಂಗಳು ಹಾಳುಹೊಟ್ಟೆ?&lt;br /&gt;&lt;br /&gt;ಕಾಯುವುದು ಎಂದಾಗಲೆಲ್ಲ ಅದ್ಯಾಕೋ &lt;br /&gt;ಶಬರಿಯ ನೆನಪು..&lt;br /&gt;ಇದ್ಯಾವ ಹಾಳು ಭಲ್ಲೂಕ- &lt;br /&gt;ಹೊರಬರಲು ಎಷ್ಟು ಹೊತ್ತು?&lt;br /&gt;&lt;br /&gt;ಬಂಡೆಗೆ ಸವರಿದ ಕಾಕಂಬಿ ಒಣಗುತ್ತಿದೆ..&lt;br /&gt;ಸಹನೆಯ ಗುಳ್ಳೆಗಳನ್ನು ಒಡೆಯುತ್ತಿರುವ&lt;br /&gt;ಟಿಕ್ ಟಿಕ್ ಕ್ಷಣಗಳೇ, ಶ್..! &lt;br /&gt;ಸದ್ದು ಮಾಡಬೇಡಿ.. ಇನ್ನೆರಡು ಗಳಿಗೆ ಕಾಯಿರಿ.&lt;br /&gt;ತೆರೆ ಸರಿದರಾಯಿತು, ಮೂಡಿಬರುವುದು ಕರಿಕರಡಿ &lt;br /&gt;ನಾಲಿಗೆ ಚಾಚಿ ಮೆಲ್ಲುವುದು ಕಲ್ಲ ಮೇಲಿನ ಸಿಹಿ&lt;br /&gt;&lt;br /&gt;ತಯಾರಿರಿ, ಶಟರ್ ಗುಂಡಿಯ ಮೇಲೆ ಬೆರಳಿಟ್ಟು&lt;br /&gt;ಕೊಡಲು ಭಂಗುರ ಚಿತ್ರಕೊಂದು ಶಾಶ್ವತ ಚೌಕಟ್ಟು&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-4672583282667239891?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/4672583282667239891/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=4672583282667239891' title='9 Comments'/><link rel='edit' type='application/atom+xml' href='http://www.blogger.com/feeds/27009232/posts/default/4672583282667239891'/><link rel='self' type='application/atom+xml' href='http://www.blogger.com/feeds/27009232/posts/default/4672583282667239891'/><link rel='alternate' type='text/html' href='http://hisushrutha.blogspot.com/2011/03/blog-post_26.html' title='ಪ್ರತೀಕ್ಷೆ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>9</thr:total></entry><entry><id>tag:blogger.com,1999:blog-27009232.post-4563316598403189095</id><published>2011-03-16T10:11:00.000+05:30</published><updated>2011-03-16T10:11:01.821+05:30</updated><category scheme='http://www.blogger.com/atom/ns#' term='ಸು-ಲಲಿತ ಪ್ರಬಂಧ'/><category scheme='http://www.blogger.com/atom/ns#' term='ನೆಲಮಾವಿನ ಸೊಪ್ಪು'/><category scheme='http://www.blogger.com/atom/ns#' term='ಉದ್ಯೋಗ ಖಾತರಿ ಯೋಜನೆ'/><category scheme='http://www.blogger.com/atom/ns#' term='ಅಜ್ಜಿ'/><category scheme='http://www.blogger.com/atom/ns#' term='ಲಚ್ಚಮ್ಮನ ಕೆರೆ'/><title type='text'>ಉದ್ಯೋಗ ಖಾತ್ರಿ ಎಂಬ ಯೋಜನೆಯೂ, ನೆಲಮಾವಿನ ಸೊಪ್ಪಿನ ಗೊಜ್ಜೂ..</title><content type='html'>ನಮ್ಮ ಸರ್ಕಾರಗಳು ಮಾಡುವ ಯೋಜನೆಗಳಿಂದ ಎಷ್ಟು ಲಾಭಗಳಿವೆಯೋ ಅಷ್ಟೇ ಅನನುಕೂಲಗಳೂ ಇವೆ ಎಂಬುದಕ್ಕೆ ಇದು ಒಂದು ಉದಾಹರಣೆ. ಈಗ ಕೆಲ ವರ್ಷಗಳ ಹಿಂದೆ ಅನುಷ್ಠಾನಗೊಂಡ ನಮ್ಮ ಕೇಂದ್ರ ಸರ್ಕಾರದ ಯೋಜನೆ ‘ಉದ್ಯೋಗ ಖಾತ್ರಿ ಯೋಜನೆ.’ ಇದು ಬಂದನಂತರ ನಮ್ಮ ಮನೆಗಳಿಗೆ ಕೆಲಸಕ್ಕೆ ಆಳುಮಕ್ಕಳು ಬರುವುದೇ ನಿಂತುಹೋಗಿದೆ! ನಾವು ಕೊಡುವ ಸಂಬಳದ ಮೂರರಷ್ಟು ಸಂಬಳವನ್ನು ಸರ್ಕಾರವೇ ಕೊಡುತ್ತಿದೆ. ಅದೂ ಕೇವಲ ಮೂರು ತಾಸು ಮಾಡುವ ಕೆಲಸಕ್ಕೆ! ಇನ್ನು ಅವರು ಯಾಕಾದರೂ ನಮ್ಮ ಮನೆಗಳಿಗೆ ಕೆಲಸಕ್ಕೆ ಬಂದಾರು? ಇದರಿಂದ ಅವರಿಗೆ ಖಂಡಿತ ಅನುಕೂಲವಾಗಿದೆ. ಮೂರು ತಾಸು ಈ ಕೆಲಸ ಮಾಡಿ, ನಂತರ ಉಳಿಯುವ ದಿನದಲ್ಲಿ ಏನು ಬೇಕೋ ಆ ಕೆಲಸ ಮಾಡಿಕೊಳ್ಳಬಹುದು. ಸೊಪ್ಪು ಕಡಿದು ತಂದು ಗೊಬ್ಬರ ಮಾಡಿ ಮಾರುವುದೋ, ಇಟ್ಟಿಗೆ ಬಿಡುವುದೋ, ಅಗರಬತ್ತಿ ಹೊಸೆಯುವುದೋ ಅಥವಾ ಮತ್ಯಾರದೋ ಮನೆಗೆ ಕೆಲಸಕ್ಕೆ ಹೋಗುವುದೋ -ಹೀಗೆ. ತಮ್ಮ ತಮ್ಮ ಮನೆ ಕೆಲಸವನ್ನು ಮಾಡಿಕೊಳ್ಳಲಿಕ್ಕೂ ಅವರಿಗೆ ಈಗ ಸಾಕಷ್ಟು ಸಮಯ ಸಿಗುತ್ತಿದೆ. &lt;br /&gt;&lt;br /&gt;ಆದರೆ ಇದರಿಂದಾಗಿ ಹೈರಾಣಾಗಿರುವವರು ಎಂದರೆ ಎಷ್ಟೋ ವರ್ಷಗಳಿಂದ ಅವರನ್ನೇ ನಂಬಿಕೊಂಡು ಆರಾಮಾಗಿದ್ದ ಜಮೀನ್ದಾರರುಗಳು. ತೋಟದ ಕೆಲಸಕ್ಕೆ, ಗದ್ದೆಯ ಕೆಲಸಕ್ಕೆ, ಹಿತ್ತಿಲಿನ ಬೇಲಿ ಕಟ್ಟುವುದಕ್ಕೆ, ಮಳೆಗಾಲಕ್ಕೆ ಕಟ್ಟಿಗೆ ಕಡಿದುಕೊಡುವುದಕ್ಕೆ, ಹುಲ್ಲು ಕೊಯ್ಯುವುದೇ ಮೊದಲಾದ ದೈನಂದಿನ ಕೆಲಸಗಳಿಗೆ -ಆಳುಗಳನ್ನೇ ಕಾಯುತ್ತಿದ್ದ ಮಂದಿಗೆ ಈಗ ಕೈ ಮುರಿದಂತಾಗಿದೆ. ಮತ್ತೆ ಈ ಉದ್ಯೋಗ ಖಾತ್ರಿ ಯೋಜನೆಯದು ಅದೇನು ವಿಚಿತ್ರ ನಿಯಮವೋ ಏನೋ (ಅಥವಾ ಅದು ನಮ್ಮಲ್ಲಿ ಊರ್ಜಿತವಾಗಿರುವ ಬಗೆ ಹೀಗಿರಬಹುದು), ಈ ಯೋಜನೆಯಡಿಯಲ್ಲಿ ಕೇವಲ ‘ಮಣ್ಣು’ ಅಥವಾ ‘ಭೂಮಿ’ಗೆ ಸಂಬಂಧಿಸಿದ ಕೆಲಸಗಳನ್ನು ಮಾತ್ರ ಮಾಡಬೇಕಂತೆ! ಅಂದರೆ, ಊರಿನ ರಸ್ತೆಗೆ ಮಣ್ಣು ಹಾಕಿ ಮಟ್ಟ ಮಾಡುವುದೋ, ನೀರು ಹರಿಯುವ ಕಾದಿಗೆ ಸರಿ ಮಾಡುವುದೋ, ಬಾವಿ ತೆಗೆಯುವುದೋ, ಶಾಲೆಯಂತಹ ಸಾರ್ವಜನಿಕ ಆವರಣದ ಬಯಲು ಹದಗೊಳಿಸುವುದೋ, ಕೆರೆಯ ಹೂಳೆತ್ತುವುದೋ, ಇತ್ಯಾದಿ. ಹೀಗಾಗಿ ನಮ್ಮೂರಿನ ಉದ್ಯೋಗ ಖಾತ್ರಿಯ ಅನುಭೋಗಿ ಕೆಲಸಗಾರರೂ ಉಪಯೋಗವಿದೆಯೋ ಇಲ್ಲವೋ, ಇಂಥದೇ ಕೆಲಸಗಳನ್ನು ಮಾಡುತ್ತಾ ಸಂಬಳ ಪಡೆದುಕೊಂಡು ಹಾಯಾಗಿದ್ದಾರೆ. ನಮ್ಮೂರ ಪ್ರಾಥಮಿಕ ಶಾಲೆಯ ಆವರಣವಂತೂ ಈಗ ಗುರುತೂ ಸಿಗದಂತೆ ಆಗಿಹೋಗಿದೆ. ಎದುರಿನ ಜಾರು ನೆಲವನ್ನೆಲ್ಲಾ ಮಣ್ಣು ಹಾಕಿ ಮಟ್ಟಸ ಮಾಡಿ, ಆವರಣದಲ್ಲೊಂದು ಬಾವಿ ತೆಗೆದು, ಇಡೀ ಶಾಲೆಯ ಆವರಣಕ್ಕೆ ಪಾಗಾರ ಹಾಕಿ, ಶಾಲೆಯ ಹಿಂಬಾಗದಲ್ಲೂ ಆಟದ ಬಯಲಿನಂತಹುದೇನನ್ನೋ ಮಾಡಿ, ವೇದಿಕೆಯೊಂದನ್ನು ನಿರ್ಮಿಸಿ... ಈಗ ಹೋಗಿ ನೋಡಿದರೆ ನಾವು ಹೋಗುತ್ತಿದ್ದ ಶಾಲೆ ಇದೇನಾ ಎಂಬಂತೆ ಬದಲಾಗಿಹೋಗಿದೆ! ಆದರೆ ಮಜಾ ಎಂದರೆ, ಇಡೀ ಶಾಲೆಯಲ್ಲಿ ಈಗ ಇರುವ ವಿದ್ಯಾರ್ಥಿಗಳ ಸಂಖ್ಯೆ ಹತ್ತಕ್ಕಿಂತ ಕಮ್ಮಿ ಇರುವುದು! ಇಂಗ್ಲೀಷ್ ಮೀಡಿಯಮ್ಮಿನ ಮೋಹಕ್ಕೆ ಬಿದ್ದಿರುವ ಊರ ಜನಗಳು ದೂರದೂರಿನ ಕಾನ್ವೆಂಟ್ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಾರಿನಲ್ಲಿ ಕಳುಹಿಸತೊಡಗಿರುವುದರಿಂದ, ನಮ್ಮೂರ ಕನ್ನಡ ಪ್ರಾಥಮಿಕ ಶಾಲೆ ಕೆಲ ವರ್ಷಗಳಲ್ಲಿ ಮುಚ್ಚಿಹೋಗಿಬಿಡುತ್ತದೋ ಅಂತ ನನ್ನ ಅನುಮಾನ. ಆದರೇನು ಮಾಡುವುದು? ಇದನ್ನು ತಡೆಯಲಿಕ್ಕಾಗಲೀ ಪ್ರಶ್ನಿಸಲಿಕ್ಕಾಗಲೀ ಬದಲಿಸಲಿಕ್ಕಾಗಲೀ ಯಾರಿಂದಲೂ ಸಾಧ್ಯವಿಲ್ಲದಾಗಿದೆ.&lt;br /&gt;&lt;br /&gt;ಅಮ್ಮ ಹೇಳಿದಳು, ಸಧ್ಯಕ್ಕೆ ನಮ್ಮೂರಿನಲ್ಲಿ ಈ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕೆಲಸವೆಂದರೆ, ಲಚ್ಚಮ್ಮನ ಕೆರೆಯ ಶುದ್ಧೀಕರಣ. ಈ ಲಚ್ಚಮ್ಮನ ಕೆರೆ ಎಂಬುದು ನಮ್ಮೂರಿನ ಹಳೇ ರಸ್ತೆಯ ಆರಂಭದಲ್ಲಿ, ರಸ್ತೆಯಿಂದ ಅನತಿ ದೂರದಲ್ಲಿರುವ ಒಂದು ಪಾಳುಕೆರೆ. ಹಿಂದೊಂದು ಕಾಲದಲ್ಲಿ ಈ ಕೆರೆ, ಅದರ ಪಕ್ಕದಲ್ಲಿರುವ ಗದ್ದೆಗಳಿಗೆ ನೀರೊದಗಿಸುತ್ತಿತ್ತಂತೆ. ಆದರೆ ಈಗ ಅಲ್ಲಿ ಗದ್ದೆ ಮಾಡುವವರೇ ಇಲ್ಲ. ಎಕರೆಗಟ್ಟಲೆ ಜಾಗ ಸುಮ್ಮನೆ ಖಾಲಿ ಮಲಗಿಕೊಂಡಿದೆ. ಕೆರೆಯಲ್ಲಿ ಹೂಳು ತುಂಬಿಕೊಂಡು ಅಲ್ಲೊಂದು ಕೆರೆಯಿತ್ತು ಎಂಬುದನ್ನೇ ಗುರುತಿಸಲಾಗದಂತಾಗಿದೆ. ಒಂದಷ್ಟು ಕಾಲ ಇಲ್ಲಿಯ ಜೌಗು ಮಣ್ಣನ್ನು ಬಳಸಿಕೊಂಡು ಇಲ್ಲಿ ಇಟ್ಟಿಗೆ ತಯಾರಿಸುತ್ತಿದ್ದರು. ನಾವು ಶಾಲೆಗೆ ಹೋಗುವಾಗ ಈ ಇಟ್ಟಿಗೆ ಸುಡುವ ಗೂಡುಗಳಿಂದ ಸದಾ ಹೊಗೆ ಹೊಮ್ಮುತ್ತಿರುವುದನ್ನು ನೋಡುತ್ತಾ ಹೋಗುತ್ತಿದ್ದೆವು. ಹಾಗೆ ಸುಡಲಿಕ್ಕೆಂದು ಜೋಡಿಸಿದ ಇಟ್ಟಿಗೆಯ ಗೂಡುಗಳ ನಿರ್ಮಾಣ, ವರ್ಷಗಳವರೆಗೆ ಹಾಗೇ ಇರುತ್ತಿತ್ತು. ಕೆಂಪುಕೋಟೆಯ ಮೇಲೆ ಹಸಿರು ಹಸಿರಾಗಿ ಪಾಚಿ ಕಟ್ಟಿ ಆಕರ್ಷಕವಾಗಿ ಕಾಣುತ್ತಿತ್ತು.&lt;br /&gt;&lt;br /&gt;ಈ ಲಚ್ಚಮ್ಮನ ಕೆರೆಯ ಪಕ್ಕದಲ್ಲಿರುವ ಜೌಗುನೆಲದಲ್ಲಿ ನೆಲಮಾವಿನ ಸೊಪ್ಪು ಬೆಳೆಯುತ್ತಿತ್ತು. ನಾನು ಮತ್ತು ಅಜ್ಜಿ ಈ ನೆಲಮಾವಿನ ಸೊಪ್ಪನ್ನು ಕೊಯ್ಯಲು ಹೋಗುತ್ತಿದ್ದೆವು. ಸಂಜೆಯಾಗಿ ಬಿಸಿಲು ಆರಿದಮೇಲೆ ಅಜ್ಜಿಯ ಜೊತೆ ನಾನು ಈ ಗದ್ದೆಯ ಕಡೆ ಹೋಗುತ್ತಿದ್ದುದು. ದಾರಿಯಲ್ಲಿ ಸಿಕ್ಕ ಸರೋಜಕ್ಕ-ಸುಜಾತಕ್ಕರು ‘ಓಹೋ, ಎಲ್ಲಿಗ್ ಹೊಂಡ್ಚು ಅಜ್ಜಿ-ಮೊಮ್ಮಗನ ಸವಾರಿ?’ ಅಂತ ಕೇಳಿದರೆ, ‘ಹಿಂಗೇ ವಾಕಿಂಗ್ ಹೊಂಟ್ವೇ’ ಎನ್ನುತ್ತಿದ್ದಳು ಅಜ್ಜಿ. ನಾವು ನೆಲಮಾವಿನ ಸೊಪ್ಪು ಕೊಯ್ಯಲು ಹೋಗುತ್ತಿದ್ದೇವೆಂದರೆ ಇವರು ತಮಗೂ ಸ್ವಲ್ಪ ತರಲು ಹೇಳುವುದಿಲ್ಲವೇ! ಹಾಗಾಗಿ ನಾವು ಸುಳ್ಳು ಹೇಳುವುದು ಅನಿವಾರ್ಯವಿತ್ತು. ಗದ್ದೆಬಯಲಿಗೆ ತಲುಪುವಷ್ಟರಲ್ಲೇ ಅಜ್ಜಿಗೆ ಸುಸ್ತಾಗಿ ಏದುಸಿರು ಬಿಡುತ್ತಿದ್ದಳು. ಪ್ರತಿಸಲವೂ ನನಗೆ ಅಜ್ಜಿ ಅಲ್ಲಿ ಬೆಳೆದಿರುವ ನಾನಾ ಸೊಪ್ಪುಗಳ ನಡುವೆ ಬರೀ ನೆಲಮಾವಿನ ಸೊಪ್ಪನ್ನೇ ಹೇಗೆ ಗುರುತಿಸಿ ಕೀಳಬೇಕೆಂದು ಹೇಳಿಕೊಡುತ್ತಿದ್ದಳು. ಆಮೇಲೆ ನಾವು ಕತ್ತಲಾವರಿಸುವವರೆಗೂ ಬಗ್ಗಿ ಬಗ್ಗಿ ಸೊಪ್ಪು ಕೊಯ್ಯುತ್ತಿದ್ದೆವು. ಕೊಯ್ದ ಸೊಪ್ಪನ್ನು ಅಜ್ಜಿ ತನ್ನ ಸೆರಗಿನಲ್ಲಿ ಕಟ್ಟಿಕೊಳ್ಳುತ್ತಿದ್ದಳು. ನಾನು ನನ್ನ ಅಂಗಿ-ಚಡ್ಡಿಗಳ ಜೇಬುಗಳಲ್ಲೂ ತುಂಬಿಕೊಳ್ಳುತ್ತಿದ್ದೆ. ನಂತರ, ಬೀದಿದೀಪದ ಬೆಳಕಿನೊಂದಿಗೆ ಬೆರೆಯುತ್ತಿದ್ದ ತಿಂಗಳ ಬೆಳಕಿನಲ್ಲಿ, ಸಾಲುಮನೆಯೊಳಗಿರುವ ಜನಗಳಿಗೆ ಕಾಣದಂತೆ, ಸದ್ದು ಮಾಡದಂತೆ, ಸರಸರನೆ ನಡೆದು ನಾವು ಮನೆ ಸೇರಿಕೊಳ್ಳುತ್ತಿದ್ದೆವು.&lt;br /&gt;&lt;br /&gt;ಮನೆಗೆ ಬಂದನಂತರ ಅಜ್ಜಿ ತನ್ನ ಸೆರಗಿನಲ್ಲಿ ಕಟ್ಟಿಕೊಂಡಿದ್ದ ಸೊಪ್ಪನ್ನೆಲ್ಲ ಒಳಮನೆಯಲ್ಲೊಂದೆಡೆ ಸುರುವುತ್ತಿದ್ದಳು. ಆಮೇಲೆ ಅಮ್ಮ ಮತ್ತು ಅಜ್ಜಿ ಸೇರಿ ಈ ಸೊಪ್ಪನ್ನೆಲ್ಲ ಸೋಸುವರು. ಅದೆಷ್ಟೇ ಮುತುವರ್ಜಿಯಿಂದ ಕೊಯ್ದಿದ್ದರೂ ನೆಲಮಾವಲ್ಲದ ಕೆಲ ಅನ್ಯ ಸೊಪ್ಪುಗಳೂ ಇದರಲ್ಲಿ ಸೇರಿಕೊಂಡಿರುತ್ತಿದ್ದವು. ಅಜ್ಜಿಯ ಪ್ರಕಾರ ಅವೆಲ್ಲ ನಾನು ಕೊಯ್ದದ್ದು! ನಾನು ಎಷ್ಟೇ ವಾದಿಸಿದರೂ ‘ನಿಂಗೆ ತಿಳಿತಲ್ಲೆ. ಆನು ಎಷ್ಟ್ ವರ್ಷದಿಂದ ಕೊಯ್ತಿದ್ದಿ, ಯಂಗೆ ಗೊತ್ತಾಗ್ತಲ್ಯಾ?’ ಎಂದು ನನ್ನ ಬಾಯಿ ಮುಚ್ಚಿಸುತ್ತಿದ್ದಳು. ನಾನು ಸಿಟ್ಟು ಮಾಡಿಕೊಂಡು ಅಲ್ಲಿಂದ ಎದ್ದುಹೋಗುತ್ತಿದ್ದೆ.&lt;br /&gt;&lt;br /&gt;ಈ ನನ್ನ ಮುನಿಸು ಹಾರಿಹೋಗುತ್ತಿದ್ದುದು ಅಡುಗೆಮನೆಯಿಂದ ತೇಲಿಬರುತ್ತಿದ್ದ ಅಮ್ಮನ ‘ಊಟಕ್ ಬಾರೋ’ ಕೂಗು ಕೇಳಿದಾಗಲೇ. ಅಂದು ರಾತ್ರಿಯ ಊಟಕ್ಕೆ ನೆಲಮಾವಿನ ಸೊಪ್ಪಿನ ಬೀಸ್ಗೊಜ್ಜು ತಯಾರಾಗಿರುತ್ತಿತ್ತು. ವಿಶಿಷ್ಟ ಪರಿಮಳವನ್ನು ಹೊಂದಿದ ಈ ಸೊಪ್ಪಿನ ಗೊಜ್ಜು ಸೂಜಿಮೆಣಸಿನಕಾಯಿಯ ಖಾರವೂ ಸೇರಿ ಬಾಯಿ ಚಪ್ಪರಿಸುವಷ್ಟು ರುಚಿಯಾಗಿರುತ್ತಿತ್ತು. ಅನ್ನಕ್ಕೆ ಕಲಸಿಕೊಂಡು ಊಟ ಶುರು ಮಾಡಿದರೆ, ಜೊತೆಗೆ ಕರಿದ ಹಲಸಿನ ಹಪ್ಪಳವೂ ಇದ್ದುಬಿಟ್ಟರೆ, ಅವತ್ತು ಎಲ್ಲರಿಗೂ ಒಂದು ತೂಕ ಜಾಸ್ತಿಯೇ ಇಳಿಯುತ್ತಿತ್ತು. ಅಜ್ಜನಂತೂ ಈ ಬೀಸ್ಗೊಜ್ಜನ್ನು ಗಟ್ಟಿಯಾಗಿ ಕಲಸಿಕೊಂಡು, ತಟ್ಟೆಯಲ್ಲೊಂದು ರಿಂಗಿನಂತಹ ಕಟ್ಟೆ ಮಾಡಿ, ಅದರೊಳಗೆ ಕಡಮಜ್ಜಿಗೆ ಸುರುವಿಕೊಂಡು ತನ್ನದೇ ಶೈಲಿಯಲ್ಲಿ ಕತ್ತರಿಸುತ್ತಿದ್ದ. &lt;br /&gt;&lt;br /&gt;ಅಜ್ಜಿಗೆ ದಮ್ಮಿನ ಕಾಯಿಲೆ ಶುರುವಾದಮೇಲೆ ಈ ಗದ್ದೆಬಯಲಿಗೆ ನೆಲಮಾವಿನ ಸೊಪ್ಪು ಕೊಯ್ಯಲು ಹೋಗುವ ಕಾರ್ಯ ನಿಂತೇಹೋಯಿತು. ಎಲ್ಲಾದರೂ ಅಪರೂಪಕ್ಕೆ ಯಾರಾದರೂ ರೈತರು ತಂದುಕೊಟ್ಟರೆ ಬೀಸ್ಗೊಜ್ಜು ಸವಿಯುವ ಅಭಿಯೋಗ ಸಿಗುತ್ತಿತ್ತು. ಅಜ್ಜಿ ತೀರಿಕೊಂಡಮೇಲಂತೂ ನನಗೆ ನೆಲಮಾವಿನ ಸೊಪ್ಪಿನ ಗೊಜ್ಜಿನ ಊಟ ಮಾಡಿದ ನೆನಪೇ ಇಲ್ಲ. ಅಲ್ಲಿ ಆ ಸೊಪ್ಪು ಈಗಲೂ ಬೆಳೆಯುತ್ತಿದೆಯೋ ಇಲ್ಲವೋ ಹೋಗಿ ನೋಡಿದವರೂ ಯಾರೂ ಇರಲಿಕ್ಕಿಲ್ಲ.&lt;br /&gt;&lt;br /&gt;ಈಗ ಅಮ್ಮ ಫೋನಿನಲ್ಲಿ ಲಚ್ಚಮ್ಮನ ಕೆರೆಯ ಪ್ರಸ್ತಾಪವೆತ್ತಿದ್ದೇ ಇದೆಲ್ಲ ನೆನಪಾಗಿ, ನೆಲಮಾವಿನ ಸೊಪ್ಪಿನ ರುಚಿಯೂ ಪರಿಮಳವೂ ಕಾಡತೊಡಗಿ ನಾನು ವ್ಯಸ್ತನಾಗಿ ಕುಳಿತಿದ್ದೇನೆ. ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಲಚ್ಚಮ್ಮನ ಕೆರೆಯಲ್ಲಿ ಮತ್ತೆ ನೀರು ಜಿನುಗಿ, ಪಕ್ಕದ ನೆಲವೆಲ್ಲ ಜೌಗಾಗಿ, ಅಲ್ಲಿ ಎಕರೆಗಟ್ಟಲೆ ನೆಲಮಾವಿನ ಸೊಪ್ಪು ಬೆಳೆದು, ನಾನು ಮುಂದಿನ ಸಲ ಊರಿಗೆ ಹೋದಾಗ ಇರುವಷ್ಟೂ ದಿನ ಅದರದೇ ಅಡುಗೆ ಮಾಡಿಸಿಕೊಂಡು ಉಂಡು, ಆಮೇಲೆ ಬೆಂಗಳೂರಿಗೆ ಬರುವಾಗಲೂ ಒಂದಷ್ಟು ಸೊಪ್ಪು ಕಟ್ಟಿಕೊಂಡು ಬಂದು, ಇಲ್ಲಿನ ನನ್ನ ರೂಮಿನಲ್ಲಿ ಬೀಸ್ಗೊಜ್ಜು ಮಾಡಿಕೊಂಡು ಗಮ್ಮತ್ತಾಗಿ ಉಣ್ಣುವ ಕನಸು ಕಾಣುತ್ತಿದ್ದೇನೆ.&lt;br /&gt;&lt;br /&gt;ಸುಮಾರು ಹೊತ್ತಿನಿಂದ ಸುಮ್ಮನೆ ಕೂತಿರುವ ನನ್ನನ್ನು ಕಂಡು ರೂಂಮೇಟು ‘ಇವತ್ತಿನ ಅಡುಗೆ ಕತೆ ಏನೋ?’ ಅಂತ ಕೇಳಿದ್ದೇ ನಾನು ‘ನೆಲಮಾವಿನ ಸೊಪ್ಪಿನ ಗೊಜ್ಜು’ ಅಂತ ಹೇಳಿ, ಅದಕ್ಕವನು ಕಕ್ಕಾಬಿಕ್ಕಿಯಾಗಿ ‘ವ್ಹಾಟ್?’ ಅಂತ ದೊಡ್ಡ ದನಿಯಲ್ಲಿ ಕಿರುಚಿದ್ದಕ್ಕೆ ನನಗೆ ಎಚ್ಚರಾಗಿ, ‘ವ್ಹಾಟ್? ಸಾರಿ, ಏನ್ ಕೇಳ್ದೆ?’ ಅಂತ ಮರು ಪ್ರಶ್ನಿಸಿದೆ.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-4563316598403189095?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/4563316598403189095/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=4563316598403189095' title='10 Comments'/><link rel='edit' type='application/atom+xml' href='http://www.blogger.com/feeds/27009232/posts/default/4563316598403189095'/><link rel='self' type='application/atom+xml' href='http://www.blogger.com/feeds/27009232/posts/default/4563316598403189095'/><link rel='alternate' type='text/html' href='http://hisushrutha.blogspot.com/2011/03/blog-post_16.html' title='ಉದ್ಯೋಗ ಖಾತ್ರಿ ಎಂಬ ಯೋಜನೆಯೂ, ನೆಲಮಾವಿನ ಸೊಪ್ಪಿನ ಗೊಜ್ಜೂ..'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>10</thr:total></entry><entry><id>tag:blogger.com,1999:blog-27009232.post-966535107108373935</id><published>2011-03-03T12:38:00.000+05:30</published><updated>2011-03-03T12:38:03.868+05:30</updated><category scheme='http://www.blogger.com/atom/ns#' term='ಫಲಿತಾಂಶ'/><category scheme='http://www.blogger.com/atom/ns#' term='ಪ್ರಣತಿ'/><category scheme='http://www.blogger.com/atom/ns#' term='ಪ್ರಬಂಧ ಸ್ಪರ್ಧೆ'/><title type='text'>ಪ್ರಣತಿ- ಪ್ರಬಂಧ ಸ್ಪರ್ಧೆ ಫಲಿತಾಂಶ</title><content type='html'>ನಮ್ಮ ಸಂಸ್ಥೆ ಪ್ರಣತಿ, 'ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ' ಎಂಬ ವಿಷಯದ ಮೇಲೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗೆ ರಾಜ್ಯದ ನಾನಾ ಜಿಲ್ಲೆಗಳ ವಿದ್ಯಾರ್ಥಿಗಳಿಂದ ಪ್ರವೇಶಗಳು ಬಂದಿದ್ದವು. ಅಂತಿಮ ಫಲಿತಾಂಶ ಈ ರೀತಿ ಇದೆ:&lt;br /&gt;&lt;br /&gt;&lt;b&gt;ಪ್ರಥಮ ಬಹುಮಾನ: &lt;/b&gt;ವೀರನಗೌಡ ಪಾಟೀಲ, ಬೆಳಗಾವಿ (ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ)&lt;br /&gt;&lt;b&gt;ದ್ವಿತೀಯ ಬಹುಮಾನ: &lt;/b&gt;ಅಮೃತಾ ಜೆ., ಬೆಂಗಳೂರು (ಬೆಂಗಳೂರಿನ ನ್ಯೂ ಹಾರಿಜೋನ್ ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿ)&lt;br /&gt;&lt;b&gt;ತೃತೀಯ ಬಹುಮಾನ: &lt;/b&gt;ಆನಂದ ಅಲಗುಂಡಗಿ, ಗದಗ (ಹುಬ್ಬಳ್ಳಿಯ ಜಗದ್ಗುರು ಗುರುಸಿದ್ದೇಶ್ವರ ಟೀಚರ್ಸ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿ)&lt;br /&gt;&lt;br /&gt;ಮೂವರೂ ವಿಜೇತರಿಗೆ ಅಭಿನಂದನೆಗಳು. ಭಾಗವಹಿಸಿದ ಎಲ್ಲರಿಗೂ ನಮ್ಮ ಧನ್ಯವಾದಗಳು. ಬಹುಮಾನಗಳನ್ನು ಅಂಚೆಯ ಮೂಲಕ ತಲುಪಿಸಲಾಗುವುದು.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-966535107108373935?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/966535107108373935/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=966535107108373935' title='2 Comments'/><link rel='edit' type='application/atom+xml' href='http://www.blogger.com/feeds/27009232/posts/default/966535107108373935'/><link rel='self' type='application/atom+xml' href='http://www.blogger.com/feeds/27009232/posts/default/966535107108373935'/><link rel='alternate' type='text/html' href='http://hisushrutha.blogspot.com/2011/03/blog-post.html' title='ಪ್ರಣತಿ- ಪ್ರಬಂಧ ಸ್ಪರ್ಧೆ ಫಲಿತಾಂಶ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>2</thr:total></entry><entry><id>tag:blogger.com,1999:blog-27009232.post-1852942860933559970</id><published>2011-02-18T01:09:00.000+05:30</published><updated>2011-02-18T01:09:32.563+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಪೂರ್ಣಾಹುತಿ</title><content type='html'>ಮುಗಿಸಿಯೇ ಬಿಡಬೇಕು ಈ ಕತೆಯನ್ನು..&lt;br /&gt;ಹೇಗಾಯಿತೋ ಹಾಗೆ. ಅಂದು ಅರ್ಧಕ್ಕೆ ನಿಂತಿದ್ದು&lt;br /&gt;ಹಾಗೇ ನಿಂತೇಬಿಟ್ಟಿದೆ. ಕಲ್ಪನೆಯಲ್ಲೇ ಎಳೆದೆಳೆದು&lt;br /&gt;ಎಲ್ಲೆಲ್ಲಿಗೋ ಹೋಗಿ, ಈಗ ತಿಳಿದಿರುವ ಕೊನೆಯೇ&lt;br /&gt;ಅಸ್ಪಷ್ಟ.&lt;br /&gt;&lt;br /&gt;ಯಜ್ಞಕುಂಡದ ಸುತ್ತ ಕೂತ ಋತ್ವಿಜರು&lt;br /&gt;ಮೊಗೆಮೊಗೆದು ಹೊಯ್ಯುತ್ತಿದ್ದಾರೆ ತುಪ್ಪ..&lt;br /&gt;ಯಾವ ದೇವಿಗೋ ಶಾಂತಿಯಂತೆ,&lt;br /&gt;ಗಂಧ-ಚಂದನ ಪ್ರೀತಿಯಂತೆ.&lt;br /&gt;ಅಗ್ನಿದೇವನ ಒಡಲಲ್ಲಿ ನಿರ್ವಿಘ್ನ ಶಾಕ.&lt;br /&gt;ಹೇಗೆ ಹುಡುಕುವುದು ಇಲ್ಲಿ ಮೊದಲ ಕಟ್ಟಿಗೆ?&lt;br /&gt;ಭಸ್ಮದ ನುಣುಪಲ್ಲಿ ಅದ್ಯಾವ ಚಿಗುರಿನ ಕನಸು?&lt;br /&gt;ಮರೆತ ಮಂತ್ರದ ಸಾಲು, ಹೊಗೆ ತರಿಸಿದ ಕಣ್ಣೀರು,&lt;br /&gt;ಇನ್ನೂ ಯಾವ ನೆನಪಿನ ನವೆ?&lt;br /&gt;&lt;br /&gt;ಇಲ್ಲ ಅಂತಲ್ಲ, ಬಿಟ್ಟೇ ಹೋಗಿದ್ದಾನೆ ಕೀಲಿಕೈ..&lt;br /&gt;ಸಣ್ಣ ಕಿಂಡಿಯೊಳಗೆ ತೂರಿಸಿ ಒಮ್ಮೆ ತಿರುವಿದರೆ ಸಾಕು;&lt;br /&gt;ನಿಷ್ಪಂದ ಕತೆಯೂ ಆದೀತು ನಿಷ್ಕಲ&lt;br /&gt;ಆದರೂ ಇದೇಕೆ ಈ ಹಿಂಜರಿಕೆ?&lt;br /&gt;ಬಾಗಿಲು ತೆರೆಯದೇ ಉಳಿಯುವ ಸಾವರಿಕೆ?&lt;br /&gt;&lt;br /&gt;ಪುರೋಹಿತರು ದೊಡ್ಡ ದನಿಯಲ್ಲಿ ಕರೆಯುತ್ತಿದ್ದಾರೆ:&lt;br /&gt;ಪೂರ್ಣಾಹುತಿಗೆ ಸಮಯ, ಎಲ್ಲರೂ ಬನ್ನಿ&lt;br /&gt;ಯಜ್ಞಕಾಷ್ಠದ ಸಿಗುರು ಕೈಗೆ ಚುಚ್ಚದಂತೆ&lt;br /&gt;ಹಿಡಿದು ಒಯ್ಯುತ್ತಿದ್ದೇವೆ ಮನೆಮಂದಿಯೆಲ್ಲ..&lt;br /&gt;ದಶದಿಕ್ಕುಗಳಿಂದಲೂ ಕರೆದ ದೇವತೆಗಳು&lt;br /&gt;ಸಂಪ್ರೀತರಾಗಲೆಂದು ಭರ್ಜರಿ ಹವಿಸ್ಸು&lt;br /&gt;&lt;br /&gt;ಕಣ್ಮುಚ್ಚಿ ಪ್ರಾರ್ಥಿಸುತ್ತಿದ್ದೇನೆ:&lt;br /&gt;ಓ ದಿಕ್ಪಾಲಕರೇ, ನನಗಿವನನ್ನು ಹುಡುಕಿಕೊಡಿ&lt;br /&gt;ಇನ್ನೆಂದೂ ಕೈ ಮಾಡುವುದಿಲ್ಲ, ಮರಳಿ ಬರಲು ಹೇಳಿ&lt;br /&gt;ಗಿಣ್ಣು ಎಂದರೆ ಪ್ರಾಣ, ಈಯ್ದ ಗೌರಿಯ ಸುದ್ದಿ ಕೊಡಿ&lt;br /&gt;ಇನ್ನೂ ಬತ್ತದ ಅವನಮ್ಮನ ಕಣ್ಣಾಸೆಯ ಬಗ್ಗೆ ತಿಳಿಸಿ&lt;br /&gt;ಒಡೆದ ಗಾಜೂ ಕೂಡಿ ಹೊಸದಾಗಿದೆಯೆಂದೆನ್ನಿ&lt;br /&gt;ಹೋಮಹರಕೆಯ ಫಲ ಹುಸಿಹೋಗದಿರಲಿ,&lt;br /&gt;ಬೀಗ ತೆರೆಯುವ ತಿರುವ ನೀಡದೆ ಮುನ್ನಡೆಸಿ&lt;br /&gt;ಕತೆಯ ಪೂರಣದ ದಾರಿ ತೋರಿಸಿ&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-1852942860933559970?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/1852942860933559970/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=1852942860933559970' title='8 Comments'/><link rel='edit' type='application/atom+xml' href='http://www.blogger.com/feeds/27009232/posts/default/1852942860933559970'/><link rel='self' type='application/atom+xml' href='http://www.blogger.com/feeds/27009232/posts/default/1852942860933559970'/><link rel='alternate' type='text/html' href='http://hisushrutha.blogspot.com/2011/02/blog-post_18.html' title='ಪೂರ್ಣಾಹುತಿ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>8</thr:total></entry><entry><id>tag:blogger.com,1999:blog-27009232.post-7345516037848706715</id><published>2011-02-04T01:41:00.001+05:30</published><updated>2011-02-07T16:16:48.165+05:30</updated><category scheme='http://www.blogger.com/atom/ns#' term='ಪುಸ್ತಕಪ್ರೀತಿ'/><category scheme='http://www.blogger.com/atom/ns#' term='ಛಂದ ಪುಸ್ತಕ'/><category scheme='http://www.blogger.com/atom/ns#' term='ಎಂ.ಆರ್. ದತ್ತಾತ್ರಿ'/><category scheme='http://www.blogger.com/atom/ns#' term='ದ್ವೀಪವ ಬಯಸಿ'/><title type='text'>ಟು ದತ್ತಾತ್ರಿ, ವಿಥ್ ಪ್ರೀತಿ</title><content type='html'>ಪ್ರಿಯ ದತ್ತಾತ್ರಿ ಸರ್,&lt;br /&gt;&lt;br /&gt;ನಮಸ್ಕಾರ. ಹೇಗಿದ್ದೀರಿ? &lt;br /&gt;&lt;br /&gt;ನಿನ್ನೆ ರಾತ್ರಿ ಹನ್ನೆರಡಕ್ಕೆ ನಿಮ್ಮ ಕಾದಂಬರಿ 'ದ್ವೀಪವ ಬಯಸಿ' ಓದಿ ಮುಗಿಸಿದೆ. ಇನ್ನೂ ಹೊರಬರಬೇಕಿದೆ. ಅದೆಷ್ಟ್ ಚನಾಗ್ ಬರ್ದಿದೀರಾ! ಗೊಲ್ಲರಹಳ್ಳಿಯಿಂದ ಲಾಸ್ ಏಂಜಲೀಸ್‌ವರೆಗೆ, ಲಾಸ್ ಏಂಜಲೀಸಿನಿಂದ ಅಮೂರ್ತದೆಡೆಗೆ -ಪ್ರತಿ ಪುಟದಲ್ಲೂ ಮುಂದಿನ ಪುಟದಲ್ಲೇನಾಗುತ್ತೋ ಅನ್ನೋ ಕುತೂಹಲ ಹುಟ್ಟಿಸ್ತಾ, ಸಸ್ಪೆನ್ಸನ್ನು ಬೆಳೆಸ್ತಾ, ಹೊಸ ರೂಪಕಗಳೊಂದಿಗೆ ಹೊಸ ರಾಗಗಳೊಂದಿಗೆ ಹೊಸ ಹೊಳಹುಗಳೊಂದಿಗೆ ಸಾಗುವ ನಿಮ್ಮ ಕಾದಂಬರಿ ಓದಿದ್ದು ನನಗೆ ತುಂಬಾ ಖುಶಿ ನೀಡಿತು. ಮುಕ್ತವಾಗಿ, ತುಂಬ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ: ಇತ್ತೀಚೆಗೆ ನಾನು ಓದಿದ ಅತ್ಯುತ್ತಮ ಕಾದಂಬರಿ ಇದು.&lt;br /&gt;&lt;br /&gt;ಶುರುವಿನಲ್ಲೇ ಕಾರ್ಪೋರೇಟ್ ಜಗತ್ತಿನ ಪರಿಮಳ ಚೆಲ್ಲಿ ನನಗೆ 'ಶಿಕಾರಿ'ಯನ್ನು ನೆನಪಿಸಿದ ನಿಮ್ಮ ಕಾದಂಬರಿ, ಆಮೇಲೆ ತಮ್ಮನನ್ನು ಹುಡುಕುವ ಶ್ರೀಕಾಂತನ ನಿರೂಪಣೆ ಓದುವಾಗ 'ಅರೆ, ಅದ್ರಲ್ಲೂ ಹೀಗೇ ಇತ್ತು' ಅನ್ನಿಸಿಬಿಟ್ಟಿತು. ಆದರೆ ಶಿಕಾರಿಯಷ್ಟು ಕ್ಲಿಷ್ಟ ಭಾಷೆಯಲ್ಲಿಲ್ಲದೇ, ಶಿಕಾರಿಗಿಂತ ಆಧುನಿಕವಾಗಿ, ಶಿಕಾರಿಗಿಂತ ಕುತೂಹಲಕಾರಿಯಾಗಿ, ಶಿಕಾರಿಗಿಂತ ಆಪ್ತವಾಗಿ ಓದಿಸಿಕೊಂಡುಹೋಯಿತು.&amp;nbsp; ಮೊದಲ ಪುಟದ ಅಕ್ಷರಗಳಲ್ಲೇ ಪುಟಿದೇಳುವ ಉತ್ಸಾಹ ಮಧ್ಯದಲ್ಲೆಲ್ಲೂ 'ಡಲ್' ಎನಿಸಲಿಲ್ಲ. ನಗರ, ವಿಮಾನ, ವೇಗ, ಕಂಪನಿ, ಸಾಫ್ಟ್‌ವೇರ್, ಪ್ರಾಜೆಕ್ಟ್, ಟ್ರಾಫಿಕ್, ಪೆಟ್ರೋಲ್, ಹಣ, ಅಮೆರಿಕಾ -ಇಂತಹ ಕಾವ್ಯಕ್ಕೆ ದಕ್ಕದ ಪರಿಸರದಲ್ಲಿನ ಕತೆಯಿಟ್ಟುಕೊಂಡೂ ಇಷ್ಟು ನವಿರಾದ ಕಾದಂಬರಿ ಬರೆದ ನಿಮಗೆ ಹ್ಯಾಟ್ಸಾಫ್!&amp;nbsp; ಮತ್ತು, ವಿಮಾನ ನಿಲ್ದಾಣವಿರಬಹುದು, ಕಾನ್ಫರೆನ್ಸ್ ರೂಮ್ ಇರಬಹುದು, ಫೋಟೋ ಎಗ್ಜಿಬಿಷನ್ ಇರಬಹುದು, ಯುದ್ಧವಿರಬಹುದು, ಮನಃಶಾಸ್ತ್ರಜ್ಞರ ಕ್ಲಿನಿಕ್ಕಿರಬಹುದು, ಕೊನೆಗೆ ಗಲಾಟೆಯ ಆರ್ಬಿಟ್ರೇಶನ್ ಹಾಲ್ ಇರಬಹುದು -ಎಲ್ಲೆಡೆ ಉದ್ಭವಿಸುವ ಬುದ್ಧರು ಅಥವಾ ಬುದ್ಧರಂತ ಅವಧೂತರನ್ನು ತೋರಿಸಿದ ನಿಮಗೆ ಶರಣು. ನಿಮ್ಮ ಕಾದಂಬರಿ ಓದುತ್ತಾ, ಪ್ರತಿಯೊಬ್ಬನಲ್ಲೂ ಇರುವ ಒಬ್ಬ ಬಿಕ್ಕಳಿಸುವ ಮನುಷ್ಯನನ್ನು ಕಂಡು ನಾನು ಕಣ್ತುಂಬಿಕೊಂಡಿದ್ದೇನೆ.&lt;br /&gt;&lt;br /&gt;ಪ್ರತಿ ಅಧ್ಯಾಯವೂ ಬೇರೆಬೇರೆ ಕತೆಗಳನ್ನು ಹೇಳುವ -ಆದರೂ ಅವೆಲ್ಲ ಸೇರಿ ಒಂದೇ ಕತೆಯಾಗಿರುವ- ಎಲ್ಲರ ಕತೆಯಲ್ಲೂ ಎಲ್ಲರೂ ಇರುವ ಪರಿಗೆ ಬೆರಗಾಗಿದ್ದೇನೆ. ಜೋಳದಿಂದ ಇಂಧನ ತಯಾರಿಸುವ ಹಿಂದಿರುವ ಲಾಭ ಮತ್ತು ತೊಂದರೆಗಳ ಬಗೆಗೆ ಶ್ರೀಕಾಂತ್ ಮಾಡಿಕೊಳ್ಳುವ, ಸುಮಾರು ಮೂರ್ನಾಲ್ಕು ಪುಟಗಳಿರುವ, ನ್ಯೂಸ್‌ಪೇಪರಿನಲ್ಲೋ ಅಥವಾ ಬೇರ್ಯಾವುದೋ ಮಾಧ್ಯಮದಲ್ಲೋ ಬಂದಿದ್ದರೆ ಕಣ್ಣು ಹಾಯಿಸಲೂ ಸಹ ಸಹ್ಯವಾಗದಿದ್ದ, ನೋಟ್ಸ್ ಸಹ ನಮ್ಮಿಂದ ಸಹನೆಯಿಂದ ಓದಿಸಿಕೊಳ್ಳುತ್ತದೆ ಎಂದರೆ, ಬರೆದ ನಿಮ್ಮ ಕಲೆ ನಿಜಕ್ಕೂ ದೊಡ್ಡದು. ಲೇ‌ಆಫ್ ಡೇ-ಯ ಅಧ್ಯಾಯ ಓದುವಾಗ ಭಯದಿಂದ ನಮ್ಮೆದೆಯ ಢವವೇ ಏರುತ್ತ ಹೋದರೆ, ಯೊಸಿಮಿಟಿಯ ಸ್ವರ್ಗದ ವರ್ಣನೆಯಲ್ಲಿ ಕಾವ್ಯದ ಝರಿಯೇ ಎದೆಯಲ್ಲಿ ಹರಿಯುತ್ತದೆ. ನಿಮ್ಮ ಬರವಣಿಗೆಯ ಶೈಲಿ ಅದೆಷ್ಟು ಆಪ್ತವಾಗಿದೆಯಂದರೆ, ಪ್ರತಿ ಪಾತ್ರದ ತಲ್ಲಣವೂ ನಮ್ಮದಾಗುತ್ತದೆ. ಹಾರ್ವರ್ಡ್ ಬ್ರಿಜ್ಜಿನ ಮೇಲೆ ಶ್ರೀಕಾಂತ್ ಸೈಕಲ್ ತುಳಿಯುವಾಗ ಕಾಣುವ ದೃಶ್ಯಗಳನ್ನೆಲ್ಲಾ ನಾವೇ ಕಾಣುತ್ತ ಸಾಗಿದಂತೆ ಭಾಸವಾದರೆ, ಸಾಂಟಾ ಆಣಾ ಗಾಳಿಯಲ್ಲಿನ ಬೆಂಕಿಯ ಝಳ ನಮ್ಮನ್ನೇ ತಾಕುತ್ತದೆ. ಮರ್ಲಿನ್ ಮನ್ರೋಳ ಎದೆಯೆಡೆಗೆ ಹೋಗುವ ರಸ್ತೆ, ಬುದ್ಧನ ಚೂರಿನ ನುಣುಪು, ಶ್ರೀಲಂಕಾದ ಯೋಧ ಹಿಡಿದ ಫೋಟೋ, ಫ್ರಾಂಕೋನ ಹೆಂಡತಿಯ ಮನೆತುಂಬಿದ ವಸ್ತುಗಳು -ಎಲ್ಲವನ್ನೂ ನಾವೂ ಸವರಿದ್ದೇವೆ, ಸವಿದಿದ್ದೇವೆ. &lt;br /&gt;&lt;br /&gt;ಈ ಕಾದಂಬರಿ ನನಗೆ ಅನೇಕ ಹೊಸ ರೂಪಕಗಳನ್ನು ಕಟ್ಟಿಕೊಟ್ಟಿದೆ, ಪ್ರತಿಮೆಗಳಿಗೆ ನೆಲೆಯಾಗಿದೆ, ಕತೆಗಳಿಗೆ ಸ್ಫೂರ್ತಿಯಾಗಿದೆ, ಅರಿವುಗಳನ್ನು ತೆರೆದಿದೆ, ವಿಷಯಗಳನ್ನು ಸ್ಪಷ್ಟಪಡಿಸಿದೆ, ಪ್ರಶ್ನೆಗಳನ್ನು ಎತ್ತಿದೆ. ಕೊನೆಗೂ ತಿಳಿಯಲಾಗದ ಭೂಷಣ ರಾವ್ ಎಂಬ ನಿಗೂಢ, ಮುಗಿಯದ ಕೃಷ್ಣನ ಹುಡುಕಾಟ, ಅರ್ಥವಾಗದ ನಮ್ಮದೇ ಮನಸುಗಳ ತಾಕಲಾಟ, ದಾರಿತಪ್ಪಿದ ಎಲ್ಲರ ಪರದಾಟ, ಜಗತ್ತು ಸಧ್ಯಕ್ಕಿರುವ ಪರಿಪಾಠ -ಎಲ್ಲವೂ ನಿಮ್ಮ ಕಾದಂಬರಿ ಓದುತ್ತ ನನಗೆ ಹೃದ್ಯವಾಗಿವೆ. ನನ್ನ ಗೊಂದಲಗಳು ಎಲ್ಲರಿಗೂ ಇವೆಯಲ್ಲಾ ಎಂಬ ಸಮಾಧಾನವಾಗಿದೆ. &lt;br /&gt;&lt;br /&gt;ಐದು ದಿನಗಳಲ್ಲಿ, ದಿನಕ್ಕೆ ಐವತ್ತು ಪುಟಗಳಂತೆ 'ದ್ವೀಪವ ಬಯಸಿ' ಓದಿದ್ದು, ಮೈಮರೆತಿದ್ದು ನನಗೆ ದಿವ್ಯಾನುಭವ. ಇಂಥದೊಂದು ಕಾದಂಬರಿ ಕೊಟ್ಟ ನಿಮಗೆ ಧನ್ಯವಾದ. ನಿಮ್ಮ ಹೆಂಡತಿ ಹಣ್ಣನ್ನು ಟ್ರಾಷ್‌ಕ್ಯಾನಿಗಾದರೂ ಹಾಕಲಿ, ಸಿಪ್ಪೆಯನ್ನು ಫ್ರಿಜ್ಜಿನಲ್ಲಾದರೂ ಇಡಲಿ -ಇಷ್ಟೊಳ್ಳೆಯ ಮಾವಿನ ಹಣ್ಣು ತಿನ್ನಿಸಿದ ನಿಮಗೆ ನಾನಂತೂ ಆಭಾರಿ! ನಿಮ್ಮ ಮುಂದಿನ ಕಾದಂಬರಿಗೆ ಈಗಿನಿಂದಲೇ ಕಾಯುವಷ್ಟು ಉತ್ಸಾಹ ಸೃಷ್ಟಿಸಿದ್ದಕ್ಕೆ ಅಭಿನಂದನೆಯೂ!&lt;br /&gt;&lt;br /&gt;ಪ್ರೀತಿಯಿಂದ,&lt;br /&gt;ನಿಮ್ಮ,&lt;br /&gt;&lt;br /&gt;-ಸುಶ್ರುತ ದೊಡ್ಡೇರಿ&lt;br /&gt;&lt;br /&gt;---&lt;br /&gt;&lt;br /&gt;&lt;div style="color: #38761d;"&gt;ಇನ್ನೂ ಓದದವರಿಗೆ, ಪುಸ್ತಕ ವಿವರ:&lt;/div&gt;&lt;div style="color: #38761d;"&gt;&lt;br /&gt;&lt;/div&gt;&lt;div style="color: #38761d;"&gt;&lt;b&gt;ದ್ವೀಪವ ಬಯಸಿ &lt;/b&gt;(ಕಾದಂಬರಿ)&lt;/div&gt;&lt;div style="color: #38761d;"&gt;ಲೇಖಕರು: ಎಂ.ಆರ್. ದತ್ತಾತ್ರಿ&lt;/div&gt;&lt;div style="color: #38761d;"&gt;ಪ್ರಕಾಶನ: ಛಂದ ಪುಸ್ತಕ&lt;/div&gt;&lt;div style="color: #38761d;"&gt;ಪುಟಗಳು: 264; ಬೆಲೆ: 150/-&lt;/div&gt;&lt;div style="color: #38761d;"&gt;&lt;br /&gt;&lt;/div&gt;&lt;span style="color: #38761d;"&gt;ಸಾಹಿತ್ಯ ಸಮ್ಮೇಳನದ ಮಳಿಗೆಗಳಲ್ಲಿ ಖಂಡಿತ ಲಭ್ಯ!&lt;/span&gt;&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-7345516037848706715?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/7345516037848706715/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=7345516037848706715' title='8 Comments'/><link rel='edit' type='application/atom+xml' href='http://www.blogger.com/feeds/27009232/posts/default/7345516037848706715'/><link rel='self' type='application/atom+xml' href='http://www.blogger.com/feeds/27009232/posts/default/7345516037848706715'/><link rel='alternate' type='text/html' href='http://hisushrutha.blogspot.com/2011/02/blog-post.html' title='ಟು ದತ್ತಾತ್ರಿ, ವಿಥ್ ಪ್ರೀತಿ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>8</thr:total></entry><entry><id>tag:blogger.com,1999:blog-27009232.post-8378738222843996150</id><published>2011-01-24T01:10:00.000+05:30</published><updated>2011-01-24T01:10:42.047+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ರಾಯರು ಮತ್ತು ಪದುಮ</title><content type='html'>ಜರ್ಮನ್ ಗ್ರಾಸ್ ಎಂಬುದು ಹಸಿರಲ್ಲ &lt;br /&gt;ಎಂದರೆ ಒಪ್ಪುವದೇ ಇಲ್ಲ ಇವಳು..&lt;br /&gt;ಹಸಿರು ಎಂದರೆ ಕಳೆ, ಲಂಟಾನ, ಚದುರಂಗ, &lt;br /&gt;ಹೂಗಿಡ, ತಬ್ಬುಬಳ್ಳಿ, ಅಡ್ಡಮರ, &lt;br /&gt;ಪೊಟರೆಯಿಂದಿಣುಕುವ ಹಕ್ಕಿಮರಿ,&lt;br /&gt;ಬೆಟ್ಟದ ಮೇಲೆ ಮೇಯುತ್ತಿರುವ ಗಿಡ್ಡ ದನ,&lt;br /&gt;ತರಗೆಲೆಗಳ ಜೊತೆ ಕೊಳೆಯುತ್ತಿರುವ &lt;br /&gt;ಯಾರೂ ತಿನ್ನದ ಹಣ್ಣು, ಅದರೊಡಲ&lt;br /&gt;ಬೀಜದ ಕನಸು ಎಂದೆಲ್ಲ ಹೇಳಿದರೆ&lt;br /&gt;ಹೋಗೆಲೋ ಎನ್ನುತ್ತಾಳೆ;&lt;br /&gt;ಹೆಸರು ಮರೆತು ಮೊರೆತೆದ್ದದ್ದೇ ಹಸಿರು &lt;br /&gt;ಎಂದರೆ ವಾದ ಮಾಡುತ್ತಾಳೆ.&lt;br /&gt;ಕನಸು ಕಾಣದ ನೀನೊಂದು ಪುತ್ಥಳಿ &lt;br /&gt;ಎಂದರೆ ಮೂಗು ಮುರಿಯುವಷ್ಟು ಮುನಿಸು.&lt;br /&gt;&lt;br /&gt;ಅಂಚು ಒದ್ದೆಯಾದ ಲಂಗ ಹಿಂಡುತ್ತ ಲೋಭಾನದ &lt;br /&gt;ಹೊಗೆ ಹರಿಸುತ್ತಿರುವ ತಾಯಿಯ ಬಳೆಯ ಕಿಂಕಿಣಿ &lt;br /&gt;ಸದ್ದಿಗೇ ಮಗು ನಿದ್ದೆ ಹೋದ ಕತೆ ಹೇಳಿದರೆ&lt;br /&gt;ಸಿಲ್ಲಿ ಅನ್ನುತ್ತಾಳೆ. &lt;br /&gt;ಹಗ್ಗ ಬಿಗಿಯಲು ಮರೆತ ದಡಕ್ಕೆಳೆದಿಟ್ಟ ದೋಣಿ &lt;br /&gt;ಅಲೆಯೊಂದಿಗೆ ತೇಲಿ ಹೋಯಿತು ಎಂದರೆ&lt;br /&gt;ನಿರ್ಭಾವುಕವಾಗಿ ಆಕಳಿಸುತ್ತಾಳೆ.&lt;br /&gt;&lt;br /&gt;ನಾನು ಪಾಸಾದದ್ದೆಲ್ಲ ಥಿಯರಿಯಲ್ಲೇ,&lt;br /&gt;ಪ್ರಾಕ್ಟಿಕಲ್ಲಿನಲ್ಲಿ ಸೊನ್ನೆ ಎಂದರೆ&lt;br /&gt;ಥಟ್ಟನೆ ಈರುಳ್ಳಿಯ ರೇಟು ಹೇಳಿ ನನ್ನನ್ನು&lt;br /&gt;ತಬ್ಬಿಬ್ಬು ಮಾಡಿ ತಾನು ಹೊಟ್ಟೆ ಹಿಡಿದುಕೊಂಡು&lt;br /&gt;ನಗುತ್ತಾಳೆ.&lt;br /&gt;&lt;br /&gt;ಇನ್ನೂ ಮಾವನ ಮನೆಯಲಿ ತುಂಬಿದ&lt;br /&gt;ಮಲ್ಲಿಗೆ ಹೂಗಳ ಪರಿಮಳದ ಲಯದಲ್ಲೇ&lt;br /&gt;ತೇಲುತ್ತಿರುವ ರಾಯರು;&lt;br /&gt;ತಾನೇ ಬಂದು ಕಾಫಿ ಕೊಟ್ಟು ಸಕ್ಕರೆ &lt;br /&gt;ಕರಗಿಸಿಕೊಳ್ಳಲು ಸ್ಪೂನು ಕೊಡುವ ಪದುಮ;&lt;br /&gt;ನೀರಾಯಿತು ಅಂತ ಹೇಳಲು ನಾದಿನಿಯೂ ಇಲ್ಲ,&lt;br /&gt;ಅಲ್ಲಿ ಒಳಮನೆಯೂ ಇಲ್ಲ.&lt;br /&gt;&lt;br /&gt;ಈಗ ರಾಯರ ಕವಿತೆಗೆ ಪದುಮಳ ಟ್ವೀಟು&lt;br /&gt;ಆಯುರ್ವೇದ ವೈದ್ಯರಿಗೆ ಅಲೋಪತಿಯ ಟ್ರೀಟು&lt;br /&gt;ಅದೇನರ್ಥವಾಗುತ್ತೋ, ಮಾವನಿಗೆ ಇದಕ್ಕೂ ನಗು.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-8378738222843996150?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/8378738222843996150/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=8378738222843996150' title='13 Comments'/><link rel='edit' type='application/atom+xml' href='http://www.blogger.com/feeds/27009232/posts/default/8378738222843996150'/><link rel='self' type='application/atom+xml' href='http://www.blogger.com/feeds/27009232/posts/default/8378738222843996150'/><link rel='alternate' type='text/html' href='http://hisushrutha.blogspot.com/2011/01/blog-post_24.html' title='ರಾಯರು ಮತ್ತು ಪದುಮ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>13</thr:total></entry><entry><id>tag:blogger.com,1999:blog-27009232.post-4505566897491389141</id><published>2011-01-13T13:31:00.002+05:30</published><updated>2011-01-25T12:27:03.335+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಹಕ್ಕಿ ಸಾಕುವುದು...</title><content type='html'>ಹಕ್ಕಿ ಸಾಕುವುದು ಹೇಗೆ ಅಂತ ನನಗೆಲ್ಲಿ ಗೊತ್ತಿತ್ತು?&lt;br /&gt;ಅಪ್ಪನ ಜೊತೆ ಹೋಗಿದ್ದಾಗ ತೋಟಕ್ಕೆ,&lt;br /&gt;ಪುಟ್ಟಗೆ ಕೂತಿತ್ತು ಸ್ವಾಂಗೆ ಅಟ್ಲಿನ ಮಡಿಲಲ್ಲಿ&lt;br /&gt;ಪೆಟ್ಟಾದ ಹಕ್ಕಿ. ಚಿಂವಿಚಿಂವಿ ಗುಟ್ಟುತ್ತಿದ್ದದರ ಆರ್ತಕ್ಕೆ&lt;br /&gt;ಮನ ಕರಗಿ, ಕೊಕ್ಕ ಕೆಂಪು - ಮೈಯ ಹಸುರಿಗೆ ಪ್ರೀತಿಯುಕ್ಕಿ&lt;br /&gt;ಎತ್ತಿ ಹೊಂಬಾಳೆಯಲ್ಲಿಟ್ಟುಕೊಂಡು ತಂದೇಬಿಟ್ಟೆ&lt;br /&gt;ಮನೆಗೆ.&lt;br /&gt;&lt;br /&gt;ಹಕ್ಕಿಯ ಬೇಕುಬೇಡಗಳೊಂದೂ ಗೊತ್ತಿರಲಿಲ್ಲ..&lt;br /&gt;ಚಿಂವಿಚಿಂವಿ ಗದ್ದಲ ಮೂರು ದಿನಕ್ಕೆ ಬೇಸರ ಬಂದು,&lt;br /&gt;ವಿಚಾರಿಸಲು ಸಮಯ ವಿಳಂಬ; ಗಾಯಕ್ಕೆ ನನಗೆ ತಿಳಿಯದ ಮುಲಾಮು;&lt;br /&gt;ಸಮಾಧಾನಕ್ಕೆ ಶಬ್ದಗಳು ಸಿಗದೇ ಪರಿತಾಪ.&lt;br /&gt;&lt;br /&gt;ಕರೆದುತಂದದ್ದಕ್ಕೆ ಸಾಕುವುದೇ ಶಿಕ್ಷೆ ಎಂದಿತು ಹಕ್ಕಿ.&lt;br /&gt;ಅಪ್ಪ ಗುರುಗುಟ್ಟಿದ; ಅಮ್ಮ ಕಾಳಿಗೆ ಕಾಸು ಕೊಡಲಿಲ್ಲ.&lt;br /&gt;ಹೊರಲಾರದ, ಹೊರಹಾಕಲಾರದ ಇಬ್ಬಂದಿಯಲ್ಲಿ&lt;br /&gt;ತಪ್ಪು ಯಾರದು ಅಂತ ತಿಳಿಯದೇ ಕಂಗಾಲು ನಾನು.&lt;br /&gt;&lt;br /&gt;ಒಂದು ಹಕ್ಕಿ ಸಾಕುವುದು ಇಷ್ಟೆಲ್ಲ ಕಷ್ಟ ಅಂತ ನನಗೆಲ್ಲಿ ಗೊತ್ತಿತ್ತು..?&lt;br /&gt;“ಚೆಲುವು ಚೆಂದ, ಒಲವಿಗರ್ತಿ, ಆಟಕ್ಕಾದರ, ಸ್ಪರ್ಷಕ್ಕೆ ಪುಳಕ,&lt;br /&gt;ರೆಕ್ಕೆ ಬೀಸಿದರೆ ಭಾವರೋಮಾಂಚ, ಚಿಲಿಪಿಲಿಯೋ- ಉಪಮಾತೀತ;&lt;br /&gt;...ಆದರೆ,” ಅಜ್ಜ ತಡೆದು ಹೇಳಿದ,&lt;br /&gt;“..ಹಿಡಿದು ಸಾಕಿದ ದಿನದಿಂದ ನಿನಗಿಲ್ಲ ಹಾರಾಟ; ವಿಹಂಗಮ ನೋಟ.”&lt;br /&gt;&lt;br /&gt;ಹಕ್ಕಿ ಸಾಕುವ ಕಷ್ಟ ನನಗೆ ಗೊತ್ತೇ ಇರಲಿಲ್ಲ.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-4505566897491389141?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/4505566897491389141/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=4505566897491389141' title='13 Comments'/><link rel='edit' type='application/atom+xml' href='http://www.blogger.com/feeds/27009232/posts/default/4505566897491389141'/><link rel='self' type='application/atom+xml' href='http://www.blogger.com/feeds/27009232/posts/default/4505566897491389141'/><link rel='alternate' type='text/html' href='http://hisushrutha.blogspot.com/2011/01/blog-post_13.html' title='ಹಕ್ಕಿ ಸಾಕುವುದು...'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>13</thr:total></entry><entry><id>tag:blogger.com,1999:blog-27009232.post-3401560375862659837</id><published>2010-12-29T00:35:00.000+05:30</published><updated>2010-12-29T00:56:07.587+05:30</updated><category scheme='http://www.blogger.com/atom/ns#' term='ಹೊಸ ವರ್ಷ'/><category scheme='http://www.blogger.com/atom/ns#' term='Greetings'/><category scheme='http://www.blogger.com/atom/ns#' term='ಶುಭಾಶಯ'/><title type='text'>ಇಹವ ಮರೆಸುವ ನಶೆಯ ಬೇಡುತ...</title><content type='html'>ನನ್ನ ಬೆಂಗಳೂರಿನ ಬ್ಯಾಚುಲರ್ಸ್ ಬಿಡಾರಕ್ಕೆ ಬಂದವರನೇಕರು “ಅರೆ, ನೀನು ಮನೇಲಿ ಟೀವೀನೇ ಇಟ್ಕೊಂಡಿಲ್ವಾ?” ಅಂತ ಕೇಳುತ್ತಾರೆ. ಅದ್ಯಾಕೋ, ಟೀವಿ ನನಗೊಂದು ಅವಶ್ಯಕ ವಸ್ತು ಅಂತ ಇದುವರೆಗೆ ಅನ್ನಿಸಿಯೇ ಇಲ್ಲ. ಇಷ್ಟಕ್ಕೂ ಯಾರಾದರೂ -ಅದರಲ್ಲೂ ನಗರವಾಸಿಗಳು- ಟೀವಿ ಇಟ್ಟುಕೊಳ್ಳುವುದಾದರೂ ಯಾಕೆ ಅಂತ ನಾನು ಯೋಚಿಸಿದ್ದಿದೆ. ಆಗ ನನಗೆ ಹೊಳೆದ ಕೆಲ ಪಾಯಿಂಟುಗಳು ಇವು: (೧) ನಿಮ್ಮ ಮನೆಯಲ್ಲಿ ದಿನವಿಡೀ ಮನೆಯಲ್ಲೇ ಇರುವವರಿದ್ದರೆ, ಐ.ಇ., ಕೆಲಸಕ್ಕೆ ಹೋಗದ ಹೆಂಡತಿ, ವಯಸ್ಸಾದ ತಂದೆ-ತಾಯಿ, ನಿರುದ್ಯೋಗಿ ಸಹೋದರಿ ಅಥವಾ ಸಹೋದರ -ಇವರ ಮನರಂಜನೆಗೆ ಟೀವಿ ಬೇಕಾದೀತು. ಅಥವಾ ನಿಮ್ಮದೇ ಬಿಡುವಿನ ವೇಳೆಯಲ್ಲಿ ಮನರಂಜನೆಗೆ ಬೇರ್ಯಾವುದೇ ಆಕರ ನಿಮಗಿಲ್ಲದಿದ್ದರೆ ಟೀವಿಯ ಮೊರೆ ಹೋಗಬಹುದು. (೨) ನಿತ್ಯದ -ಕ್ಷಮಿಸಿ- ಕ್ಷಣಕ್ಷಣದ ಸುದ್ದಿಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ನಿಮಗಿದ್ದರೆ, ಉದಾಹರಣೆಗೆ, (ಅ) ಶೇರುಪೇಟೆಯಲ್ಲಿ ಇಂಥಾ ಶೇರಿನ ಬೆಲೆ ೧೦.೫೦ಕ್ಕೆ ಎಷ್ಟಿತ್ತು, ೧೦.೫೨ಕ್ಕೆ ಎಷ್ಟಾಯಿತು, (ಬ) ಇಂಥಾ ಶಾಸಕನ ಬೆಲೆ ೧೦.೫೦ಕ್ಕೆ ಎಷ್ಟಿತ್ತು, ೧೦.೫೨ಕ್ಕೆ ಎಷ್ಟಾಯಿತು, (ಕ) ಸರ್ಕಾರದ ಯಾವ ಹಗರಣ ೧೦.೫೦ಕ್ಕೆ ಬಯಲಾಗಿತ್ತು, ೧೦.೫೨ಕ್ಕೆ ಯಾವುದಾಯಿತು, (ಡ) ಬಂಗಾರಪ್ಪ ೧೦.೫೦ಕ್ಕೆ ಯಾವ ಪಕ್ಷದಲ್ಲಿದ್ದರು, ೧೦.೫೨ಕ್ಕೆ ಯಾವುದಕ್ಕೆ ಹಾರಿದರು, ಇತ್ಯಾದಿ. (೩) ನೀವು ಕ್ರಿಕೆಟ್, ಇತ್ಯಾದಿ ಆಟದ ಹುಚ್ಚಿನವರಾಗಿದ್ದರೆ. (೪) ನೀವೇ ನಿತ್ಯ ಟೀವಿಯಲ್ಲಿ ಬರುವವರಾಗಿದ್ದರೆ! ಉದಾ, ನೀವು- ನಟ/ನಟಿ/ ಲೈಮ್‌ಲೈಟಿನಲ್ಲಿರುವ ತಾರೆ, ಸಂದರ್ಶಕ, ಯಾಂಕರು, ಹಳ್ಳಿಗೋ ಕಾಡಿಗೋ ಸುಡುಗಾಡಿಗೋ ಹೋಗೋ ಪ್ಯಾಟೆ ಹುಡ್ಗಿ -ಆಗಿದ್ದರೆ. (೫) ನೀವು ಅಮೃತಾಂಜನದ ವಾಸನೆಯ ವ್ಯಸನಿಯಾಗಿದ್ದರೆ, ಅಂದರೆ, ಟೀವಿ ನೋಡಿ ತಲೆನೋವು ಬರಿಸಿಕೊಂಡು ಅಮೃತಾಂಜನ ಸವರಿಕೊಂಡು ಸುಖ ಅನುಭವಿಸುವ ಜಾತಿಯವರಾಗಿದ್ದರೆ ....ನಿಮಗೆ ಟೀವಿ ಬೇಕಾಗಬಹುದು.&lt;br /&gt;&lt;br /&gt;ನನಗೆ ಈ ಯಾವ ನಂಬರೂ ತಾಳೆ ಹೊಂದದ ಕಾರಣ ನಾನು ಟೀವಿ ಇಟ್ಟುಕೊಂಡಿಲ್ಲ ಅಂತ ಅಂದುಕೊಂಡಿದ್ದೇನೆ. ಅಲ್ಲದೇ ಬೆಳಗ್ಗೆ ಮನೆ ಬಿಟ್ಟರೆ ರಾತ್ರಿ ವಾಪಸು ತಲುಪುವ ನಾನು, ಆಮೇಲೆ ಅಡುಗೆ ಮಾಡಿಕೊಂಡು ಉಂಡು, ಪಾತ್ರೆ-ಗೀತ್ರೆ ತೊಳೆದು, ಆ-ಈ ಮ್ಯಾಗಜೀನುಗಳನ್ನು ಓದಿ ಮುಗಿಸಿ, ಪುಸ್ತಕದ ಗೂಡಿನಲ್ಲಿರುವ ಓದದ ಪುಸ್ತಕಗಳನ್ನು ಓದಿ, ಹಾರ್ಡ್‌ಡಿಸ್ಕಿನಲ್ಲಿರುವ ಸಿನೆಮಾ ನೋಡಿ, ಅಷ್ಟರಮೇಲೆ ಬರೆಯುವ ತಲುಬು ಬಂದರೆ ಬರೆದು -ಇಷ್ಟೆಲ್ಲಾ ಮಾಡುವಷ್ಟರಲ್ಲಿ ಬೆಳಗಾಗಲಿಕ್ಕೆ ಇನ್ನು ನಾಲ್ಕೇ ತಾಸಿರುವುದು ಎಂಬ ಸತ್ಯ ಹೊಳೆದು, ಆಹ್- ಇನ್ನು ಟೀವಿ ಎಷ್ಟೊತ್ತಿಗೆ ನೋಡಲಿ, ನಿದ್ರೆ ಎಷ್ಟೊತ್ತಿಗೆ ಮಾಡಲಿ! (ಇದನ್ನೆಲ್ಲಾ ಹೇಳುವುದೂ ಕಷ್ಟ; ಜನ ಮದ್ವೆ ಮಾಡ್ಕೋ ಅಂತಾರೆ!) ಅಲ್ಲದೇ, ನನಗೆ ಜಾಹೀರಾತುಗಳ ಮಧ್ಯದಲ್ಲಿ ಅಷ್ಟಿಷ್ಟು ಸಿನೆಮಾ ನೋಡುವುದಕ್ಕಾಗಲಿ, ಹೇಳಿದ ಸುದ್ದಿಯನ್ನೇ ಹೇಳುವ ನ್ಯೂಸ್‌ಚಾನಲುಗಳನ್ನು ಸಹಿಸಿಕೊಳ್ಳುವುದಕ್ಕಾಗಲೀ, ಹುಚ್ಚುಚ್ಚು ಚರ್ಚೆಗಳ ಕಾಮಿಡಿ ಕಂಡು ಸುಮ್ಮನಿರುವುದಕ್ಕಾಗಲೀ, ಒಂದು ಹಾಡಿನ ಬಂಡಿಯಲ್ಲಿ ಸೋತಿದ್ದಕ್ಕೆ ಪುಟ್ಟ ಮಕ್ಕಳನ್ನು ಜೀವನವೇ ಮುಗಿಯಿತೇನೋ ಎಂಬಂತೆ ತೋರಿಸುವ ರಿಯಾಲಿಟಿ ಶೋಗಳನ್ನು ನೋಡುವುದಕ್ಕಾಗಲಿ, ಸಂಸಾರದ ಸಮಸ್ಯೆಗಳ ಧಾರಾವಾಹಿಗಳನ್ನು ನೋಡಿ ಜೀವನದ ಬಗ್ಗೆ ಜಿಗುಪ್ಸೆ ತಾಳುವುದಕ್ಕಾಗಲೀ ಬಿಲ್‌ಕುಲ್ ಇಷ್ಟವಿಲ್ಲ. ಕ್ರಿಕೆಟ್ಟೊಂದನ್ನು ನಾನೂ ಮಿಸ್ ಮಾಡಿಕೊಳ್ಳುತ್ತಿದ್ದೆನೇನೋ, ಆದರೆ ಬಹಳಷ್ಟು ಮ್ಯಾಚುಗಳು ನನ್ನ ಆಫೀಸಿನ ಸಮಯದಲ್ಲೇ ಇದ್ದು, ಕ್ರಿಕ್ಕಿನ್ಫೋದವನು ಪ್ರತಿ ಬಾಲಿಗೂ ಕಮೆಂಟರಿ ಕೊಟ್ಟು ಉಪಕಾರ ಮಾಡುತ್ತಾನಾದ್ದರಿಂದ -ಟೀವಿ ಇನ್ನೂ ನನ್ನ ಮನೆಗೆ ಪ್ರವೇಶ ಪಡೆದಿಲ್ಲ. &lt;br /&gt;&lt;br /&gt;ಆದರೆ ಈ ಟೀವಿ ಇಲ್ಲದಿರುವುದರಿಂದ ನನಗಾಗದಿದ್ದ ಸಾಕ್ಷಾತ್ಕಾರವೊಂದು ಮೊನ್ನೆ ಗೆಳೆಯನ ಮನೆಯಲ್ಲಿ ಟೀವಿ ನೋಡುತ್ತಿದ್ದಾಗ ಆಗಿಹೋಯಿತು! ನನಗೆ ಜೀವನದ ಕಷ್ಟಗಳು ಮತ್ತು ಭವಿಷ್ಯದ ಪ್ರಪಂಚದ ಬಗೆಗೆ ಇದ್ದ ಕೆಲ ಕಲ್ಪನೆಗಳು ಅತಿರಂಜಿತವಾಗಿದ್ದವೇನೋ ಅನ್ನಿಸಲು ಶುರುವಾಗಿಬಿಟ್ಟಿತು. ಈ ಟೀವಿ ಜಾಹೀರಾತುಗಳು ಬಹಳವೇ ಆಕರ್ಷಕವಾಗಿರುತ್ತವೆ. ಅವುಗಳನ್ನು ನೋಡುತ್ತ ನೋಡುತ್ತ ನಾನು ಜೀವನ ಎಂದರೆ ನೀರು ಕುಡಿದಷ್ಟು ಸರಾಗ ಎಂಬಂತಹ ತೀರ್ಮಾನಕ್ಕೆ ಬಂದೆ. ಅಡುಗೆ ಮಾಡುವುದು ಈಗೊಂದು ಸಮಸ್ಯೆಯೇ ಅಲ್ಲ- ಕೈಲಾಶ್ ಕುಕ್ಕರ್, ಮಿಕ್ಸಿ, ಗ್ರೈಂಡರ್, ಜ್ಯೂಸ್ ಮೇಕರ್, ತವಾ -ಏನು ಬೇಕಾದರೂ ಇದೆ. ಒಂದು ನಿಮಿಷದಲ್ಲಿ ಹೊಸ ಸೊಸೆ ಅಡುಗೆ ಮಾಡಿ ಎಲ್ಲರನ್ನೂ ಇಂಪ್ರೆಸ್ ಮಾಡುತ್ತಾಳೆ. ಸೆಖೆಯಾಯಿತೋ ಕೇತಾನ್ ಫ್ಯಾನಿದೆ, ಸುವಾಸನೆಯೂ ಬೇಕೆಂದರೆ ಏಸಿಯಿದೆ. ಸೊಳ್ಳೆ ಬಂತೋ, ಆಲೌಟ್ ಹಚ್ಚಿ. ಸಂತೂರಿನಿಂದ ಸ್ನಾನ ಮಾಡಿದರೆ ನನ್ನ ಮಮ್ಮಿಯೂ ಹುಡುಗಿಯಾಗುತ್ತಾಳೆ. ಕೋಂಪ್ಲಾನ್ ಕುಡಿದರೆ ಮಾವಿನಕಾಯಿ ಕೈಗೇ ಸಿಗುತ್ತದೆ. ತಲೆಹೊಟ್ಟಾದರೆ ಹೆಡ್ಡೆಂಡ್ ಶೋಲ್ಡರ್ಸ್, ತಲೆನೋವಾದರೆ ಮೆಂಥಾಲ್ ಪ್ಲಸ್, ತಲೆಬಿಸಿಯಾದರೆ ನವರತ್ನ ತೈಲ, ತಲೆ ತಿರುಗಿದರೆ ತಂಪು ಪಾನೀಯ. ಏಶಿಯನ್ ಪೇಯಿಂಟ್ಸ್ ಬಳಿದರೆ ಇದ್ದ ಮನೆಯೇ ಹೊಸತಾಗುತ್ತದೆ, ಡೈರಿಮಿಲ್ಕ್ ತಿನ್ನಿಸಿದರೆ ಉದ್ವಿಗ್ನ ಹೆಂಡತಿ ಶಾಂತಳಾಗುತ್ತಾಳೆ, ವ್ಹಿಸ್ಪರ್ ಹಾಕಿಕೊಂಡ ಹೆಣ್ಣುಮಕ್ಕಳು ಕುಣಿದಾಡತೊಡಗುತ್ತಾರೆ, ಏನಾದ್ರೂ ಏಕ್ಸ್ ಸ್ಪ್ರೇ ಮಾಡ್ಕೊಂಡ್ರೋ- ಸೆಕ್ಸೀ ಹುಡ್ಗೀರೆಲ್ಲಾ ನಿಮ್ ಕಡೀಗೇ! ಆಕ್ವಾಗಾರ್ಡಿನ ನೀರು ಕುಡಿದರೆ, ಲೈಫ್‌ಬಾಯ್‌ನಿಂದ ಸ್ನಾನ ಮಾಡಿದರೆ, ಡೆಟ್ಟಾಲ್‌ನಿಂದ ಕೈ ತೊಳೆದರೆ, ಕೋಲ್ಗೇಟ್‌ನಿಂದ ಹಲ್ಲು ತಿಕ್ಕಿದರೆ, ಡಾಬರ್ ಛವನ್‌ಪ್ರಾಶ್ ತಿಂದರೆ -ನಿಮಗೆ ಯಾವ ಖಾಯಿಲೆಯೂ ಬರುವುದಿಲ್ಲ. ವಯಸ್ಸಾದ ಮೇಲೂ ಚಿಂತೆಯಿಲ್ಲ, ಪೆನ್ಷನ್ ಪ್ಲಾನುಗಳಿವೆ. ಸತ್ತರೆ ವಿಮೆಯಿದೆ, ದೂರದೂರಿನ ಮಗನಿಗೆ ಸುದ್ದಿ ಮುಟ್ಟಿಸಲು ಯಾವಾಗಲೂ ಸಿಗುವ ವೋಡಫೋನ್ ನೆಟ್ವರ್ಕ್ ಇದೆ, ಅವನು ಮನೆ ಮುಟ್ಟಲು ಸೂಪರ್‌ಫಾಸ್ಟ್ ಬೈಕು-ಕಾರುಗಳಿವೆ. ಇನ್ನೇನು ಬೇಕು ಬದುಕಿಗೆ? &lt;br /&gt;&lt;br /&gt;“ಈ ಥರ ಎಲ್ಲಾದರ ಬಗ್ಗೇನೂ ವ್ಯಂಗ್ಯ ಮಾಡಬಹುದು” ಅಂದ ಗೆಳೆಯ. ಅದು ನಿಜ. ಆದರೆ ಇವುಗಳ ಬಗ್ಗೆ&amp;nbsp; ಕನಿಷ್ಟ ವ್ಯಂಗ್ಯವನ್ನಾದರೂ ಮಾಡದಿದ್ದರೆ ನಾನು ಈ ದಿಕ್ಕುತಪ್ಪಿರುವ ಜಗತ್ತಿನಲ್ಲಿ ಆಶಾವಾದಿಯಾಗಿ ಉಳಿಯುವುದಾದರೂ ಹೇಗೆ ಎನ್ನುವುದು ನನ್ನ ಪ್ರಶ್ನೆ. ಎಷ್ಟು ಉಗಿದರೂ ಒರೆಸಿಕೊಳ್ಳುವ, ಒಂದು ಗುಲಗುಂಜಿಯಷ್ಟೂ ಮರ್ಯಾದೆ ಇರುವವರ ಹಾಗೆ ಕಾಣದ ರಾಜಕಾರಣಿಗಳ ಹೊಲಸು, ಲಂಚಕೋರ ಸರ್ಕಾರಿ ಅಧಿಕಾರಿಗಳ ದರ್ಪ, ದಿನಸಿ-ಆಟೋ-ಬ್ಯಾಂಕು-ಹೋಟೆಲ್-ಮಠ-ಐಟಿ-ಮೀಡಿಯಾ-ಆಟ ಎಲ್ಲೆಡೆ ತೋರುವ ಮೋಸ, ಇವತ್ತು ಇಷ್ಟು ಚಂದ ಎದುರಿಗೆ ಮಾತಾಡಿದ ವ್ಯಕ್ತಿಯ ಬಗ್ಗೆ ನಾಳೆ ಬರುವ ಆರೋಪ .....ಇವನ್ನೆಲ್ಲ ಇದ್ದಿದ್ದನ್ನು ಇದ್ದ ಹಾಗೇ - ‘ಲೈಟ್’ ಆಗಿ ತೆಗೆದುಕೊಳ್ಳುವುದು ಹೇಗೆ? ಲೇವಡಿ ಸಹ ಮಾಡದಿದ್ದರೆ, ನಾಳೆ ಇವರುಗಳೊಂದಿಗೇ ವ್ಯವಹರಿಸುವುದಾದರೂ ಹೇಗೆ? ಒಂಥರಾ ಇಡೀ ಜಗತ್ತೇ ದುಡ್ಡಿನ ಹಿಂದೆ ಬಿದ್ದು ಓಡುತ್ತಿರುವಾಗ, ನನ್ನನ್ನು ಬಿಟ್ಟು ಉಳಿದೆಲ್ಲರೂ ಬುದ್ಧಿವಂತರಂತೆ - ವಾಸ್ತವವಾದಿಗಳಂತೆ ಕಾಣುತ್ತಿರುವಾಗ, ನಾನು ಮಾತ್ರ ಭಾವನೆ, ಪ್ರೀತಿ, ಕರುಣೆ, ನಿಷ್ಠೆ, ಪ್ರಾಮಾಣಿಕತೆ ಅಂತೆಲ್ಲ ಆದರ್ಶಗಳನ್ನು ಮೈಮೇಲೆ ಹೇರಿಕೊಂಡು ಹುಚ್ಚನಾಗಿದ್ದೇನೆಯೇ? ಅಥವಾ ಬೇರೊಬ್ಬನ ದೃಷ್ಟಿಯಲ್ಲಿ ನಾನೂ ಭ್ರಷ್ಟನೇ?&lt;br /&gt;&lt;br /&gt;೨೦೧೦ರ ಇಡೀ ವರ್ಷದ ನ್ಯೂಸ್‌ಪೇಪರುಗಳನ್ನು ತಿರುವಿ ಹಾಕಿದರೆ, ಪ್ರತಿದಿನ ಒಂದಲ್ಲಾ ಒಂದು ಹಗರಣ - ಒಂದಲ್ಲಾ ಒಂದು ಕ್ಷೇತ್ರದಲ್ಲಿ ಇದ್ದೇ ಇತ್ತು. ಅದಿಲ್ಲದಿದ್ದರೆ ದುರಂತ. ಖುಶಿಯ ಸುದ್ದಿ ಓದಿದ್ದು ನೆನಪಿಗೇ ಇಲ್ಲದಷ್ಟು. ಅದೇನು ಮಾಧ್ಯಮಗಳೇ ಅವನ್ನು ನಮ್ಮ ಕಣ್ಣಿಗೆ ರಾಚುವಂತೆ ಕಟ್ಟಿಕೊಟ್ಟವೋ ಅಥವಾ ನಮಗೇ ಅವನ್ನು ಚಪ್ಪರಿಸಿಕೊಂಡು ಸವಿಯುವುದು ಅಭ್ಯಾಸವಾಗಿಹೋಯಿತೋ, ಅರಿಯೆ. ನಾಳೆ ಏನಾದರೂ ಸಂತಸದ ವಾರ್ತೆಯಿರಬಹುದು ಅಂತ ಕಾತರಿಸುವುದಕ್ಕೂ ಇವತ್ತು ಭರವಸೆಯೇ ಉಳಿದಿಲ್ಲವಾಗಿದೆ. &lt;br /&gt;&lt;br /&gt;ಹೀಗಿದ್ದಾಗಲೂ ಹೊಸ ವರ್ಷ ಬಂದಿದೆ. ಹೊಸ ಕನಸು ಕಾಣಬೇಕಿದೆ. ಹೊಸ ಹಾಡು ಕೇಳಬೇಕಿದೆ. ಹೊಸ ಗಾಳಿಗೆ ಮೈಯೊಡ್ಡಬೇಕಿದೆ. ಹೊಸ ಸ್ಪರ್ಷಕ್ಕೆ ರೋಮಾಂಚಗೊಳ್ಳಬೇಕಿದೆ. ಬತ್ತಿದ ಪುಪ್ಪುಸಗಳಲಿ ಹೊಸ ಉಸಿರು ತುಂಬಬೇಕಿದೆ. ಮನೆಯ ಬಾಗಿಲಿಗೆ ತೋರಣ ಕಟ್ಟಬೇಕಿದೆ. ಅಂಗಳದಲ್ಲಿ ರಂಗೋಲಿ ಹಾಕಬೇಕಿದೆ. ದಾರಿ ಸಾರಿಸಿ ಎಲ್ಲ ಒಪ್ಪ ಮಾಡಬೇಕಿದೆ. ಹೊಸ ಬಟ್ಟೆಯುಟ್ಟು ಸಿಹಿಯಡುಗೆ ಮಾಡಿ ಹೊಸದೇನಕ್ಕೋ ಕಾಯಬೇಕಿದೆ. &lt;br /&gt;&lt;br /&gt;ಇಸವಿ ಎರಡುಸಾವಿರದ ಹನ್ನೊಂದು ಎಲ್ಲರ ಮನಸಿಗೂ ಹಿತ ತರಲಿ. ಇಹವ ಮರೆಸುವ ನಶೆ ಕೊಡಲಿ. ಇನಿತು ಕಹಿಗೆ ಬೊಗಸೆ ಸಿಹಿಯಿರಲಿ. ಶುಭಾಶಯಗಳು.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-3401560375862659837?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/3401560375862659837/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=3401560375862659837' title='18 Comments'/><link rel='edit' type='application/atom+xml' href='http://www.blogger.com/feeds/27009232/posts/default/3401560375862659837'/><link rel='self' type='application/atom+xml' href='http://www.blogger.com/feeds/27009232/posts/default/3401560375862659837'/><link rel='alternate' type='text/html' href='http://hisushrutha.blogspot.com/2010/12/blog-post_29.html' title='ಇಹವ ಮರೆಸುವ ನಶೆಯ ಬೇಡುತ...'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>18</thr:total></entry><entry><id>tag:blogger.com,1999:blog-27009232.post-8989507482005418258</id><published>2010-12-16T01:26:00.000+05:30</published><updated>2010-12-16T01:26:40.191+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಆಯ್ಕೆ ಎಂಬುದು, ಕೆಲವೊಮ್ಮೆ</title><content type='html'>ಆಯ್ಕೆ ಎಲ್ಲಾ ಸಲ ಸೂಪರ್‌ಮಾರ್ಕೆಟ್ಟಿನ ವ್ಯಾಪಾರದ ಹಾಗಲ್ಲ&lt;br /&gt;ಮುಟ್ಟಿ ಹಿಡಿದು ಒತ್ತಿ ನೋಡಿ ವಜನು ಪರಿಶೀಲಿಸಿ ಕೊಳ್ಳಲು&lt;br /&gt;ಆಗುವುದಿಲ್ಲ. ಕೆಲವೊಮ್ಮೆ ಕಣ್ಣೆದುರಿಗೇ ಹೋದರೂ ಮೋಸ,&lt;br /&gt;ಬಾಯ್ಮುಚ್ಚಿ ನಿಲ್ಲಬೇಕು.&lt;br /&gt;&lt;br /&gt;ಆಯ್ಕೆ ಸಂತೆಯ ವ್ಯಾಪಾರದ ಹಾಗೂ ಅಲ್ಲ&lt;br /&gt;ನಾಲ್ಕು ಕಡೆ ವಿಚಾರಿಸಿ ಗಂಟೆಗಟ್ಟಲೆ ನಿಂತು ಚೌಕಾಶಿ ಮಾಡಿ&lt;br /&gt;ಸರೀ ರೇಟಿಗೆ ಕುದುರಿಸಿ ತರುವ ತರಕಾರಿ-&lt;br /&gt;ಯಂತಲ್ಲ. ಕೆಲವೊಮ್ಮೆ ತಾಜಾ ಕಂಡ ಹಣ್ಣು&lt;br /&gt;ಕತ್ತರಿಸಿದಾಗಲೇ ಬಣ್ಣ ಬಯಲು.&lt;br /&gt;&lt;br /&gt;ಆಯ್ಕೆಯ ವಸ್ತು ದಿನಾ ಮನೆಬಾಗಿಲಿಗೆ ಬರುವುದಿಲ್ಲ&lt;br /&gt;ತಳ್ಳುಗಾಡಿಯವನನ್ನು ಹೇಳಿ ನಿಲ್ಲಲು&lt;br /&gt;ಬುಟ್ಟಿ ಹಿಡಿದು ಬಂದು ಕೊಳ್ಳುವಷ್ಟು ಸುಲಭ&lt;br /&gt;ಅಲ್ಲ. ಕೆಲವೊಮ್ಮೆ ನಾವು ಕಾತರಿಸಿದ್ದು &lt;br /&gt;ಮೆಟ್ಟಿಲಿಳಿದು ಬರುವಷ್ಟರಲ್ಲಿ ಬೇರೆ ಬೀದಿಯಲ್ಲಿ.&lt;br /&gt;&lt;br /&gt;ಆಯ್ದದ್ದು ಈಬೇ ಅಮೆಜಾನುಗಳಲ್ಲಿ ಸಿಗಲೇಬೇಕೆಂದಿಲ್ಲ&lt;br /&gt;ಸರೀ ಎನಿಸಿದ ಬೆಲೆಯ ಸಮಾ ಎನಿಸಿದ ಐಕಾನು ಕ್ಲಿಕ್ಕಿಸಿ,&lt;br /&gt;ಒತ್ತಿ ಕಾರ್ಡಿನ ನಂಬರು ಹಾಕಿಕೊಂಡು ಕಾರ್ಟಿಗೆ, ಬರುವು &lt;br /&gt;ಕಾದಂತಲ್ಲ. ಕೆಲವೊಮ್ಮೆ ಸರಕೇ ಇರುವುದಿಲ್ಲ, ಅಥವಾ&lt;br /&gt;ಬಂದ ಮಾಲು ಚಿತ್ರದಲ್ಲಿದ್ದಂತಿರುವುದಿಲ್ಲ.&lt;br /&gt;&lt;br /&gt;ಆಯ್ಕೆ ಎಂಬುದು ಶೆಟ್ಟರ ಅಂಗಡಿಯ ವ್ಯಾಪಾರದಂತೆ.&lt;br /&gt;ನಮ್ಮೆಲ್ಲ ಪಟ್ಟಿ ಕೇಳಿ ಆತ ಚೀಲಕ್ಕೆ ತುಂಬಿ ಕೊಟ್ಟಂತೆ.&lt;br /&gt;ತಕ್ಕಡಿಯ ತೂಕ ನಂಬಿದಂತೆ. ಹೇಳಿದ ಬೆಲೆ ತೆತ್ತಂತೆ. &lt;br /&gt;ಕೊಂಡಾದ ನಂತರ ಖರೀದಿಯ ನೈಪುಣ್ಯತೆಯ ಬಗ್ಗೆ &lt;br /&gt;ದಾರಿಯಿಡೀ ಯೋಚಿಸಿದಂತೆ. ತಲೆ ಸವರಿಕೊಂಡಂತೆ.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-8989507482005418258?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/8989507482005418258/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=8989507482005418258' title='13 Comments'/><link rel='edit' type='application/atom+xml' href='http://www.blogger.com/feeds/27009232/posts/default/8989507482005418258'/><link rel='self' type='application/atom+xml' href='http://www.blogger.com/feeds/27009232/posts/default/8989507482005418258'/><link rel='alternate' type='text/html' href='http://hisushrutha.blogspot.com/2010/12/blog-post_16.html' title='ಆಯ್ಕೆ ಎಂಬುದು, ಕೆಲವೊಮ್ಮೆ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>13</thr:total></entry><entry><id>tag:blogger.com,1999:blog-27009232.post-236233602853338301</id><published>2010-12-07T13:37:00.000+05:30</published><updated>2010-12-07T13:37:03.179+05:30</updated><category scheme='http://www.blogger.com/atom/ns#' term='ಪ್ರಣತಿ'/><category scheme='http://www.blogger.com/atom/ns#' term='ಪ್ರಬಂಧ ಸ್ಪರ್ಧೆ'/><title type='text'>ಪ್ರಣತಿಯಿಂದ ಪ್ರಬಂಧ ಸ್ಪರ್ಧೆ</title><content type='html'>&lt;div class="separator" style="clear: both; text-align: center;"&gt;&lt;a bitly="BITLY_PROCESSED" href="http://2.bp.blogspot.com/_c2gCy0eVwAM/TP3ov9p8nvI/AAAAAAAAICw/I7FvfI_OACw/s1600/prabandha_pic_1.JPG" imageanchor="1" style="margin-left: 1em; margin-right: 1em;"&gt;&lt;img border="0" height="75" src="http://2.bp.blogspot.com/_c2gCy0eVwAM/TP3ov9p8nvI/AAAAAAAAICw/I7FvfI_OACw/s400/prabandha_pic_1.JPG" width="400" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;/div&gt;&lt;br /&gt;ಸಾಹಿತ್ಯ, ಸಂಸ್ಕೃತಿ, ಪ್ರಕೃತಿ -ಅಂಶಗಳನ್ನು ಧ್ಯೇಯವಾಗಿಸಿಕೊಂಡಿರುವ ನಮ್ಮ ಸಂಸ್ಥೆ ‘ಪ್ರಣತಿ’ಯಿಂದ, ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದೇವೆ. ವಿದ್ಯಾರ್ಥಿಗಳು ‘&lt;b&gt;ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ&lt;/b&gt;’ ಎಂಬ ವಿಷಯದ ಮೇಲೆ ೨೦೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಸ್ಫುಟವಾದ ಕೈಬರಹದಲ್ಲಿ ಅಥವಾ ಡಿ.ಟಿ.ಪಿ. ಮಾಡಿ ಕಳುಹಿಸಬಹುದು. ಪ್ರಬಂಧದ ಜೊತೆ ನಿಮ್ಮ ಕಾಲೇಜ್ ಐಡೆಂಟಿಟಿ ಕಾರ್ಡ್‌ನ ಪ್ರತಿ ಇರಿಸುವುದು ಕಡ್ಡಾಯ. ಸಂಪಾದಕ ಮಂಡಲಿ ಮತ್ತು ವಿಷಯ ತಜ್ಞರು ಆಯ್ದ ಪ್ರಬಂಧಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಪ್ರಬಂಧವನ್ನು ಈ ವಿಳಾಸಕ್ಕೆ ಕಳುಹಿಸಬಹುದು ಅಥವಾ ಇ-ಮೇಲ್ ಮಾಡಬಹುದು. &lt;u&gt;ಕೊನೆಯ ದಿನಾಂಕ: ೩೦ ಡಿಸೆಂಬರ್ ೨೦೧೦&lt;/u&gt;. ವಿಳಾಸ: ಪ್ರಣತಿ, ನಂ. ೪೪೮/ಎ, ೮ನೇ ಮೇನ್, ೭ನೇ ಕ್ರಾಸ್, ತ.ರಾ.ಸು. ರಸ್ತೆ, ಹನುಮಂತನಗರ, ಬೆಂಗಳೂರು - ೫೬೦ ೦೧೯. ಇ-ಮೇಲ್: prabandha@pranati.in. ಯಾವುದೇ ಮಾಹಿತಿಗೆ: ೯೬೧೧೪೫೮೬೯೮ / ೯೯೮೦೦೨೨೫೪೮.&lt;br /&gt;&lt;br /&gt;ನೀವು ಕಾಲೇಜು ವಿದ್ಯಾರ್ಥಿಯಾಗಿದ್ದರೆ ನೀವೇ ಭಾಗವಹಿಸಿ. ಇಲ್ಲವೇ, ನಿಮ್ಮ ಪರಿಚಿತ ವಿದ್ಯಾರ್ಥಿಗಳಿಗೆ ತಿಳಿಸಿ. ;)&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-236233602853338301?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/236233602853338301/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=236233602853338301' title='4 Comments'/><link rel='edit' type='application/atom+xml' href='http://www.blogger.com/feeds/27009232/posts/default/236233602853338301'/><link rel='self' type='application/atom+xml' href='http://www.blogger.com/feeds/27009232/posts/default/236233602853338301'/><link rel='alternate' type='text/html' href='http://hisushrutha.blogspot.com/2010/12/blog-post_07.html' title='ಪ್ರಣತಿಯಿಂದ ಪ್ರಬಂಧ ಸ್ಪರ್ಧೆ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_c2gCy0eVwAM/TP3ov9p8nvI/AAAAAAAAICw/I7FvfI_OACw/s72-c/prabandha_pic_1.JPG' height='72' width='72'/><thr:total>4</thr:total></entry><entry><id>tag:blogger.com,1999:blog-27009232.post-24383498544488238</id><published>2010-12-01T12:27:00.001+05:30</published><updated>2010-12-01T12:29:23.608+05:30</updated><category scheme='http://www.blogger.com/atom/ns#' term='Story'/><category scheme='http://www.blogger.com/atom/ns#' term='ಅಕ್ಕ ಸಮ್ಮೇಳನ'/><category scheme='http://www.blogger.com/atom/ns#' term='ಇಂಥ ಕತೆ'/><title type='text'>ಕಾರಿರುಳೊಳಾಗಸದಿ ತಾರೆ ನೂರಿದ್ದೇನು..</title><content type='html'>ಓಂಪಿ ಫೋನ್ ಮಾಡಿದ್ದಿದ್ದ, ಓಂಪ್ರಕಾಶ್. ಹೋಗೀ ಹೋಗಿ ಈ ಆಸಾಮಿಗೆ ಭಾನುವಾರ ಬೆಳಗಾಮುಂಚೆ, ಅದೂ ಅಜಮಾಸು ಎರಡು ವರ್ಷಗಳ ನಂತರ, ನನಗೆ ಫೋನಿಸುವ ತಲುಬಾದರೂ ಯಾಕೆ ಬಂತಪ್ಪಾ ಅಂತ ಗೊಣಗಿಕೊಳ್ಳುತ್ತಲೇ ಎತ್ತಿದ್ದೆ ಫೋನು, ಎರಡು ಮಿಸ್ಕಾಲುಗಳ ನಂತರ. “ಹಾಯ್ ಅಂಶು.. ಹೇಗಿದೀಯಾ? ಯಾರೂಂತ ಗೊತ್ತಾಯ್ತಾ?” ಕೇಳಿದ. ಅದೇ ಧ್ವನಿ. ಅಥವಾ, ಇನ್ನೂ ಸ್ಟೋರಾಗಿಯೇ ಇದ್ದ ಅವನ ಹೆಸರು ಮೊಬೈಲಿನ ಪರದೆಯಲ್ಲಿ ಡಿಸ್‌ಪ್ಲೇ ಆಗಿದ್ದರಿಂದ, ಇದು ಓಂಪಿ ಕಾಲ್ ಅಂತ ಗೊತ್ತಾಗಿಬಿಟ್ಟಿದ್ದರಿಂದ, ಮನಸು ಅವನ ಧ್ವನಿಯನ್ನು ಎದುರಿಸಲು ತಯಾರಾಗಿಬಿಟ್ಟಿದ್ದರಿಂದ ನನಗೆ ಹಾಗೆ ಅನ್ನಿಸಿದ್ದಿರಬೇಕು: ‘ಅದೇ ಧ್ವನಿ’ ಅಂತ. ಅದಿಲ್ಲದಿದ್ದರೆ, ಓಂಪಿ ಬೇರೆ ಯಾವುದಾದರೂ ನಂಬರಿನಿಂದ ಫೋನ್ ಮಾಡಿದಿದ್ದರೆ ನನಗೆ ಹಾಗೆ ಅನಿಸುತ್ತಿರಲಿಲ್ಲವೇನೋ. ಬಹುಶಃ ಗುರುತೂ ಸಿಗುತ್ತಿರಲಿಲ್ಲವೇನೋ. “ಹೇ ಓಂಪಿ.. ನಿನ್ ವಾಯ್ಸ್ ಮರೀಲಿಕ್ಕೆ ಆಗತ್ತೇನೋ? ಹೌ ಆರ್ ಯೂ ಮ್ಯಾನ್? ಇಷ್ಟು ಕಾಲದ ನಂತರ ನನ್ನ ನೆನಪಾದದ್ದು ಹೇಗೆ?” ತುಂಬಾ ಕಷ್ಟಪಟ್ಟು, ಆದಷ್ಟೂ ಆತ್ಮೀಯತೆ ನಟಿಸುತ್ತ ಕೇಳಿದೆ. &lt;br /&gt;&lt;br /&gt;“ಅಯಾಮ್ ಫೈನ್ ಮ್ಯಾನ್.. ಇವತ್ತು ಬೆಳಗ್ಗೆ ನ್ಯೂಸ್‌ಪೇಪರಲ್ಲಿ ನಿನ್ನ ಹೆಸರು ನೋಡ್ತಿದ್ದ ಹಾಗೇ ನೆನಪಾಯ್ತು.. ಹಾಗೇ ಕಾಲ್ ಮಾಡ್ಬಿಟ್ಟೆ” ಅಂದ. &lt;br /&gt;&lt;br /&gt;‘ನ್ಯೂಸ್‌ಪೇಪರಲ್ಲಿ? ನನ್ ಹೆಸರು??’ ಎರಡು ಕ್ಷಣದ ಮೇಲೆ ಹೊಳೆಯಿತು, ಓಹ್, ಈ ವಾರದ ಸಾಪ್ತಾಹಿಕದಲ್ಲಿ ನನ್ನ ಕತೆ ಬರುತ್ತೆ ಅಂತ ಸಂಪಾದಕರು ಮೇಲ್ ಮಾಡಿದ್ದರು. ಪಬ್ಲಿಷ್ ಆಗಿರಬೇಕು ಹಾಗಾದರೆ. “ಓಹ್ ಫೈನ್.. ನಿಜ ಹೇಳ್ಬೇಕೂಂದ್ರೆ ಇನ್ನೂ ನಾನೇ ನೋಡಿಲ್ಲ ಅದನ್ನ.. ಸಂಡೇ ಅಲ್ವಾ? ಈಗಷ್ಟೇ ಎದ್ದೆ. ಹೆಹ್ಹೆ! ಕತೆ ಬಂದಿದ್ಯಾ? ಓಕೆ ಓಕೆ..” ಮಾತಾಡುತ್ತಲೇ ವರಾಂಡಕ್ಕೆ ನಡೆದು, ಕಿಟಕಿ ಬಳಿ ಬಿದ್ದಿದ್ದ ಪೇಪರ್ ಎತ್ತಿಕೊಂಡೆ. &lt;br /&gt;&lt;br /&gt;“ಯಾ.. ನಿನ್ನ ಬ್ಲಾಗ್ ನೋಡ್ತಿರ್ತೀನಿ ನಾನು.. ಆದ್ರೆ ನಮ್ ಆಫೀಸಲ್ಲಿ ಕಮೆಂಟ್ ಮಾಡ್ಲಿಕ್ಕೆ ಆಗಲ್ಲ.. ಅದೇನೋ, ಐಪಿ ಬ್ಲಾಕ್ ಮಾಡ್ಬಿಟ್ಟಿದಾರೆ. ತುಂಬಾ ದಿನದಿಂದ ಕಾಲ್ ಮಾಡ್ಬೇಕೂ ಅಂದ್ಕೋತಿದ್ದೆ; ಅಂತೂ ಇವತ್ತು ಮುಹೂರ್ತ ಸಿಗ್ತು” ನಗಾಡಿದ. &lt;br /&gt;&lt;br /&gt;“ಇವತ್ತಾದ್ರೂ ಸಿಕ್ತಲ್ಲ!” ನಾನೂ ನಕ್ಕೆ.&amp;nbsp; &lt;br /&gt;&lt;br /&gt;“ಹೇ, ಇವತ್ತು ಏನ್ ಪ್ರೋಗ್ರಾಂ ನಿಂದು? ಏನೂ ಇಲ್ಲಾಂದ್ರೆ ವೈ ಕಾಂಟ್ ವಿ ಮೀಟ್ ಟುಡೇ ಫಾರ್ ಲಂಚ್? ಎಲ್ಲಾದ್ರೂ ಇಬ್ರಿಗೂ ಹತ್ರ ಆಗೋಂತ ಪ್ಲೇಸಲ್ಲಿ? ಯಾಕೋ ತುಂಬಾ ಮಾತಾಡ್ಬೇಕು ಅನ್ನಿಸ್ತಿದೆ ನಿನ್ ಹತ್ರ” ಕೇಳಿದ. &lt;br /&gt;&lt;br /&gt;ಇವತ್ತು ಏನು ಪ್ರೋಗ್ರಾಂ ಇದೆ ಅಂತ ಯೋಚಿಸಿದೆ, ಏನೂ ಹೊಳೆಯಲಿಲ್ಲ. ಓಂಪಿಗೆ ಸಿಗುವುದರಿಂದ ಏನಾದ್ರೂ ತೊಂದರೆ ಇದೆಯಾ ಅಂತ ಯೋಚಿಸಿದೆ, ಏನೂ ಇಲ್ಲ ಅನ್ನಿಸಿತು. “ಪ್ರೋಗ್ರಾಂ ಏನೂ ಇದ್ದಂತಿಲ್ಲ. ಯಾವ್ದಕ್ಕೂ ನಾನು ನಿಂಗೆ ಮೆಸೇಜ್ ಮಾಡ್ತೇನೆ. ಸಿಗೋದಾದ್ರೆ ಎಷ್ಟೊತ್ತಿಗೆ, ಎಲ್ಲಿ ಅಂತ. ರೈಟ್?” ಹೇಳಿದೆ. &lt;br /&gt;&lt;br /&gt;“ಆಲ್ ರೈಟ್! ಸೀ ಯೂ ದೆನ್” ಅಂತಂದು ಕಾಲ್ ಡಿಸ್‌ಕನೆಕ್ಟ್ ಮಾಡಿದ. &lt;br /&gt;&lt;br /&gt;ಈ ಓಂಪ್ರಕಾಶ್ ನನ್ನ ಎಕ್ಸ್-ಕಲೀಗು. ಮಂಗಳೂರಿನ ಹುಡುಗ. ಹಳೆಯ ಆಫೀಸಿನಲ್ಲಿ ನನ್ನ ಜೊತೆ ಕೆಲಸ ಹಂಚಿಕೊಂಡವ. ಪ್ರತಿ ತಿಂಗಳು ಇಪ್ಪತ್ತೈದನೇ ತಾರೀಖಿನ ಹೊತ್ತಿಗೆ ವ್ಯಾಲೆಟ್ಟು ಖಾಲಿ ಮಾಡಿಕೊಂಡು “ಅಂಶು, ಇನ್ನು ಸಂಬಳ ಆಗೋವರೆಗೆ ನೀನೇ ನನ್ನ ದೈವ” ಎಂದು ಕೈಚಾಚಿ ಕೂರುತ್ತಿದ್ದವ. “ಸಂಬಳ ಲೇಟಾಗಿ ಆದಷ್ಟೂ ಒಳ್ಳೇದು ನೋಡು. ಜಾಸ್ತಿ ದಿನಕ್ಕೆ ಬರುತ್ತೆ. ಅದಿಲ್ಲಾ, ಒಂದನೇ ತಾರೀಖೇ ಆಗಿಬಿಟ್ರೆ, ಹೀಗೆ ಮಂತ್ ಎಂಡ್ ಹೊತ್ತಿಗೆ ಕೈ ಖಾಲಿಯಾಗಿಬಿಡತ್ತೆ!” ಎನ್ನುತ್ತ ಪೇಲವ ನಗೆ ನಗುತ್ತಿದ್ದವ. &lt;br /&gt;&lt;br /&gt;“ಅದು ಹ್ಯಾಗೆ ಓಂಪಿ? ನಮಗೆಲ್ಲ ತಿಂಗಳು ಅಂದ್ರೆ ಸಂಬಳದ ದಿನದಿಂದ ಸಂಬಳದ ದಿನದವರೆಗೆ. ಐದನೇ ತಾರೀಖು ಸಂಬಳ ಕೊಟ್ಟರೆ ಮುಂದಿನ ತಿಂಗಳ ಐದರವರೆಗೆ ತಿಂಗಳು; ಏಳನೇ ತಾರೀಖು ಕೊಟ್ಟರೆ ಮುಂದಿನ ಏಳರವರೆಗೆ ತಿಂಗಳು! ಒಂದನೇ ತಾರೀಖಿನಿಂದ ಮೂವತ್ತೊಂದು ಅನ್ನೋದು ಕ್ಯಾಲೆಂಡರಿನಲ್ಲಿ ಅಷ್ಟೇ” ನಾನು ವಾದಿಸುತ್ತಿದೆ.&lt;br /&gt;&lt;br /&gt;“ಅದು ಹಾಗಲ್ಲ ಅಂಶು.. ನನ್ನ ಫ್ರೆಂಡ್ಸ್ ಎಲ್ಲರೂ ಸಾಫ್ಟ್‌ವೇರು-ಐಟಿಗಳಲ್ಲಿ ಕೆಲಸ ಮಾಡೋರು. ಅವರಿಗೆಲ್ಲ ಪ್ರತಿ ತಿಂಗಳೂ ಮೂವತ್ತನೇ ತಾರೀಖೇ ಸಂಬಳ ಅಕೌಂಟಿಗೆ ಕ್ರೆಡಿಟ್ ಆಗಿಬಿಡತ್ತೆ. ತಿಂಗಳ ಮೊದಲ ವೀಕೆಂಡು ಫುಲ್ ಪಾರ್ಟಿ. ನನ್ನೂ ಕರೀತಾರೆ, ಹೋಗದೇ ಇರ್ಲಿಕ್ಕೆ ಆಗಲ್ಲ. ಹೋದ್ರೆ ದುಡ್ಡು ಖರ್ಚಾಗತ್ತೆ. ಅದೇ ಸಂಬಳವೇ ಆಗಿರ್ಲಿಲ್ಲ ಅಂದ್ರೆ, ‘ನನ್ ಸ್ಯಾಲರಿ ಇನ್ನೂ ಇನ್ನೂ ಆಗಿಲ್ಲಪ್ಪ’ ಅಂತಂದು ಜಾರಿಕೊಳ್ಳಬಹುದು. ಅಷ್ಟು ದುಡ್ಡಾದ್ರೂ ಉಳಿಯುತ್ತೆ” ಅಂತ ತರ್ಕ ಮುಂದಿಡುತ್ತಿದ್ದ.&lt;br /&gt;&lt;br /&gt;ಈ ವಕೀಲಿ ವೃತ್ತಿಯೇ ಹೀಗೆ. ಡಿಗ್ರಿ ಮುಗಿಯುತ್ತಿದ್ದಂತೆಯೇ ಒಳ್ಳೆಯ ಸಂಬಳದ ಕೆಲಸಕ್ಕೆ ಸೇರಿಕೊಳ್ಳಬೇಕು ಅಂತ ಇರುವವರು, ದುಡ್ಡುಮಾಡಬೇಕು ಅಂತ ಇರುವವರು ಈ ಫೀಲ್ಡಿಗೆ ಬರಲೇಬಾರದು. ತಂದೆಯೋ ತಾಯಿಯೋ ಲಾಯರ್ರೇ ಆಗಿದ್ದರೆ ಸರಿ; ಅದಿಲ್ಲದಿದ್ದರೆ ಯಾರೋ ಸೀನಿಯರ್ ಕೆಳಗೆ ಸೇರಿಕೊಂಡು, ಕೋಟ್ ಹಾಕಿಕೊಂಡು ಅವರ ಹಿಂದೆ ಪ್ರತಿದಿನ ಫೈಲ್ಸ್ ಹಿಡಿದು ಹೋಗುವುದಿದೆಯಲ್ಲ, ಥೇಟ್ ನಾಯಿ ಪಾಡು ಅದು. ತಿಂಗಳ ಕೊನೆಗೆ ಅವರು ಕೊಡುವ ಒಂದಿಷ್ಟು ದುಡ್ಡು -ಅದು ಈ ಬೆಂಗಳೂರಿನ ಬದುಕಿಗೆ ಒಂದು ವಾರಕ್ಕೂ ಸಾಲುವುದಿಲ್ಲ. ನಾವೂ ಒಂದಷ್ಟು ಕ್ಲೈಂಟುಗಳನ್ನು ಸಂಪಾದಿಸಿ, ಕೈಲೊಂದಿಷ್ಟು ಕಾಸು ಮಾಡಿಕೊಂಡು, ಸ್ವಂತ ಆಫೀಸು-ಗೀಫೀಸು ಅಂತ ಮಾಡಿಕೊಳ್ಳುವ ಹೊತ್ತಿಗೆ ಮೀಸೆ ಹಣ್ಣಾಗಿರುತ್ತೆ. ಆಮೇಲೆ ಎಷ್ಟು ಸಂಪಾದಿಸಿದರೆ ಏನು ಪ್ರಯೋಜನ? &lt;br /&gt;&lt;br /&gt;ಆದರೆ ಈ ಕೆಲಸ ಬಿಟ್ಟು ಎಲ್‌ಪಿ‌ಒ ಒಂದಕ್ಕೆ ಸೇರಿಕೊಂಡಮೇಲೆ ಓಂಪಿಯ ರಿವಾಜೇ ಬದಲಾಗಿಹೋಯ್ತು. ನಾನು ತೆಗೆದುಕೊಳ್ಳುತ್ತಿದ್ದ ಸಂಬಳದ ಎರಡರಷ್ಟು ಅವನಿಗೆ ಅಲ್ಲಿ ಸೇರುವಾಗಲೇ ಸಿಕ್ಕಿಬಿಟ್ಟಿತು. ಮೊದಲ ಸಂಬಳದಲ್ಲಿ ಒಳ್ಳೆಯದೊಂದು ರೆಸ್ಟುರೆಂಟಿನಲ್ಲಿ ತನ್ನೆಲ್ಲ ಐಟಿ ಫ್ರೆಂಡುಗಳನ್ನೂ ಕರೆದು ಪಾರ್ಟಿ ಕೊಟ್ಟ. ಪಾರ್ಟಿ ತುಂಬ ಹುರುಪಿನಿಂದ ಓಡಾಡುತ್ತಿದ್ದ ಓಂಪಿಯನ್ನು ನೋಡಿ ‘ಬಚಾವಾಗಿಬಿಟ್ಟ ಹುಡುಗ’ ಅಂತ ಅಂದುಕೊಂಡೆ. ಆಮೇಲೆ ಒಂದೆರಡು ತಿಂಗಳು ಆಗೀಗ ಕಾಲ್ ಮಾಡ್ತಿದ್ದ. ಆರೇಳು ತಿಂಗಳ ನಂತರ ನಾನೇ ಒಮ್ಮೆ ಫೋನಿಸಿದರೆ, ರಿಸೀವ್ ಮಾಡದೇ ಕಟ್ ಮಾಡಿ, ‘ಡೆಲ್ಲಿಯಲ್ಲಿದ್ದೀನಿ. ರೋಮಿಂಗ್. ವಾಪಸ್ ಬಂದಮೇಲೆ ಕಾಲ್ ಮಾಡ್ತೀನಿ’ ಅಂತ ಎಸ್ಸೆಮ್ಮೆಸ್ ಮಾಡಿದ. ಆಮೇಲೆ ಅದೇನಾನಿಯಿತೋ, ಅವನೂ ಕಾಲ್ ಮಾಡಲಿಲ್ಲ, ನನಗೂ ಆಗಲಿಲ್ಲ; ಓಂಪಿಯೊಂದಿಗಿನ ಸಂಪರ್ಕವೇ ಕಡಿದುಹೋಗಿತ್ತು.&lt;br /&gt;&lt;br /&gt;ಈಗ ಹೆಚ್ಚುಕಮ್ಮಿ ಎರಡು ವರ್ಷಗಳ ನಂತರ ಇದ್ದಕ್ಕಿದ್ದಂತೆಯೇ ಫೋನ್ ಮಾಡಿ ಊಟಕ್ಕೆ ಸಿಗೋಣ ಅಂತ ಕರೆದಿದ್ದ ಅವನ ಆಮಂತ್ರಣವನ್ನು ಯಾಕೋ ಬೇಡ ಅನ್ನಲಾಗಲಿಲ್ಲ. ಪತ್ರಿಕೆಯವರು ನಾನು ಕಳುಹಿಸಿದ್ದ ಕತೆಯನ್ನು ಎಲ್ಲೆಲ್ಲೋ ಎಡಿಟ್ ಮಾಡಿ ಪ್ರಕಟಿಸಿದ್ದರು. ಇವರಿಗೆ ಕಳುಹಿಸುವುದಕ್ಕಿಂತ ಸುಮ್ಮನೆ ಬ್ಲಾಗಿನಲ್ಲಿ ಹಾಕಿಕೊಳ್ಳುವುದು ಬೆಸ್ಟು ಅಂತ ಬೈದುಕೊಳ್ಳುತ್ತ ಪೇಪರನ್ನು ಟೀಪಾಯ್ ಮೇಲೆ ಎಸೆದೆ. ‘ಕೋಸ್ಟಲ್ ಎಕ್ಸ್‌ಪ್ರೆಸ್ ರೆಸ್ಟುರೆಂಟ್, ಕನ್ನಿಂಗ್‌ಹ್ಯಾಂ ರೋಡ್’ ಅಂತ ಓಂಪಿಗೆ ಎಸ್ಸೆಮ್ಮೆಸ್ ಮಾಡಿದೆ. &lt;br /&gt;&lt;br /&gt;* * *&lt;br /&gt;&lt;br /&gt;ರೆಸ್ಟುರೆಂಟಿನ ರೂಫ್ ಗಾರ್ಡನ್ನಿನ ಅಂಗಣದಲ್ಲಿ ಗಿಜಿಗಿಜಿಯಿತ್ತು. ಪುಟ್ಟ ಪುಟ್ಟ ದ್ವೀಪಗಳಂತೆ ಅಲ್ಲಲ್ಲಿರಿಸಿದ ರೌಂಡ್ ಟೇಬಲ್ಲುಗಳ ಸುತ್ತ ಕೂತು ಅವರವರದೇ ಮಾತು-ನಗೆ-ತಿಂಡಿ-ತೀರ್ಥಗಳಲ್ಲಿ ಮುಳುಗಿದ್ದ ಕುಟುಂಬಗಳು, ಜೋಡಿಗಳು, ಗೆಳೆಯರ ಗುಂಪುಗಳು. ಹೊರಗೆ ಮಧ್ಯಾಹ್ನದ ಬಿಸಿಲಿದ್ದರೂ ಒಳಗೆ ಕತ್ತಲೆ ಸೃಷ್ಟಿಸಿ ದೀಪಗಳನ್ನು ಉರಿಸಿದ್ದರು. ಮೂಲೆಯಲ್ಲೆಲ್ಲೋ ಕೂತಿದ್ದ ಓಂಪಿ ಎದ್ದು ನಿಂತು ‘ಇಲ್ಲಿದ್ದೀನಿ’ ಅಂತ ಕೈ ಮಾಡಿದ. ಅತ್ತಲೇ ಹೋದೆ. &lt;br /&gt;&lt;br /&gt;“ಸಾರಿ, ನಾನು ಬಂದು ಆಗಲೇ ಅರ್ಧ ಗಂಟೆ ಆಯ್ತು. ಸುಮ್ನೆ ಕೂರೋಕೆ ಆಗದೇ ಮುಂದುವರೆಸಿಬಿಟ್ಟೆ!” ಅಂತ, ಟೇಬಲ್ಲಿನ ತುದಿಯಲ್ಲಿದ್ದ ಎರಡು ಖಾಲಿ ಬಿಯರ್ ಬಾಟಲಿಗಳನ್ನು ತೋರಿಸಿದ. &lt;br /&gt;&lt;br /&gt;“ಹೇ, ಸರಿಯಾಯ್ತು ಬಿಡು. ಮನೆ ಕ್ಲೀನ್ ಮಾಡ್ತಾ ಕೂತೆ, ಹೊರಡೋದು ಲೇಟ್ ಆಯ್ತು” ಎಂದು ಕೈ ಕುಲುಕಿದೆ. &lt;br /&gt;&lt;br /&gt;“ಸೋ? ಬಿಯರ್?” ಕೇಳಿದ. &lt;br /&gt;&lt;br /&gt;ಮಧ್ಯಾಹ್ನದ ಹೊತ್ತಿಗೆಲ್ಲಾ ಬಿಯರ್ ಕುಡಿಯುವುದು ನನಗೆ ಸಹ್ಯವೇ ಅಲ್ಲದಿದ್ದರೂ, ಕುಡಿಯದಿದ್ದರೆ ಓಂಪಿಯೊಂದಿಗೆ ಸರಿಯಾಗಿ ಪಾಲ್ಗೊಳ್ಳುವುದಕ್ಕೆ ಆಗುವುದಿಲ್ಲವೇನೋ ಎನ್ನಿಸಿ, “ಪಿಂಟ್ ಸಾಕು” ಎಂದೆ. &lt;br /&gt;&lt;br /&gt;“ಎಂಥಾ ಪಿಂಟ್? ಒಂದು ಬಿಯರ್ ಕುಡಿ, ಏನೂ ಆಗಲ್ಲ” ಅಂತಂದು, ಅವನೇ ವೆಯ್ಟರ್‌ನನ್ನು ಕರೆದು ಆರ್ಡರ್ ಮಾಡಿದ. ಮೌನ ಕವಿಯಿತು.&lt;br /&gt;&lt;br /&gt;“ಸೂಪರ್. ಇವತ್ತಿನ ಕತೆ ಚೆನ್ನಾಗಿತ್ತು” ಅವನೇ ಮಾತಿಗೆ ಶುರು ಮಾಡಿದ. “ನೀನು ಬರೀತಿರೋದು ನಂಗೆ ತುಂಬಾ ಖುಶಿ ನೋಡು.. ಆವಾಗ ನಾನು-ನೀನು ಒಟ್ಟಿಗೆ ಕೆಲಸ ಮಾಡ್ತಿರಬೇಕಾದ್ರೆ ನೀನು ಬರೀತಿರ್ಲಿಲ್ಲ ಅಲ್ವಾ? ತುಂಬಾ ಓದ್ತಿದ್ದೆ, ಅದು ನಂಗೊತ್ತು. ಮಾತಾಡ್ಬೇಕಾದ್ರೂ ಒಂಥರಾ ಸಾಹಿತಿ ಥರ ಮಾತಾಡ್ತಿದ್ದೆ. ಕೆಲವರು ವೇದಿಕೆಯಲ್ಲಿ ಬರೆದುಕೊಂಡು ಬಂದ ಭಾಷಣಾನಾ ಓದ್ತಾರಲ್ಲ, ಹಹ್ಹ, ಹಾಗೆ. ಆದ್ರೂ ಮಜಾ ಇತ್ತು ಆ ದಿನಗಳು.. ಕೈಯಲ್ಲಿ ಕಾಸಿಲ್ದಿದ್ರೂ ತುಂಬಾ ಖುಶಿಯಾಗಿ ಇರ್ತಿದ್ವಿ, ಅಲ್ವಾ?”&lt;br /&gt;&lt;br /&gt;ವೇಯ್ಟರ್ ಬಂದು ನನ್ನ ಮುಂದೊಂದು ಗ್ಲಾಸ್ ಇಟ್ಟು ಬಿಯರ್ ಬಗ್ಗಿಸಿ ಹೋದ. ತಣ್ಣಗಿತ್ತು. ಓಂಪಿಯ ಬಿಯರು ಆಗಲೇ ಕೆಲಸ ಮಾಡುತ್ತಿತ್ತು, ಅವನು ಮುಂದುವರೆಸಿದ: “ಬದುಕು ಹೇಗೆಲ್ಲ ಬದಲಾಗಿಹೋಗತ್ತೆ ಅಂತ ಯೋಚಿಸಿದರೆ ಆಶ್ಚರ್ಯ ಆಗುತ್ತೆ ಅಲ್ವಾ ಅಂಶು..? ನಾನು ನಿನ್ ಜೊತೆ ಕೆಲಸ ಮಾಡ್ತಿರಬೇಕಾದ್ರೆ ಲೋಕಲ್ ಬಾರಿಗೆ ಹೋಗಲಿಕ್ಕೆ ದುಡ್ಡು ಇರ್ತಿರಲಿಲ್ಲ. ಸಾಲ ಮಾಡ್ತಿದ್ದೆ ನಿನ್ನ ಹತ್ರ.&amp;nbsp; ಈಗ ನೋಡು, ದುಬಾರಿ ರೆಸ್ಟುರೆಂಟಿನಲ್ಲಿ ಕೂತಿದೀನಿ. ಕಾರು ಇದೆ, ಸ್ವಂತ ಫ್ಲಾಟ್ ಖರೀದಿ ಮಾಡಿದೀನಿ, ಇನ್ನು ಎರಡು ವರ್ಷ: ನನ್ನದೇ ಕಂಪನಿ ಶುರು ಮಾಡ್ತೀನಿ..” ಓಂಪಿ ಹೇಳುತ್ತ ಹೋದ.&lt;br /&gt;&lt;br /&gt;ಯೋಚಿಸುತ್ತಿದ್ದೆ: ತಪ್ಪುತಪ್ಪು ಇಂಗ್ಲೀಷ್ ಬಳಸುತ್ತಿದ್ದ, ಬಾಸ್ ಬಳಿ ಮಾತಾಡಲು ಹೆದರುತ್ತಿದ್ದ, ರೆಸ್ಯೂಮ್ ಮಾಡಿಕೊಡು ಅಂತ ನನ್ನ ಬಳಿ ದುಂಬಾಲು ಬೀಳುತ್ತಿದ್ದ, ತನ್ನ ಕಾಲೇಜ್ ದಿನಗಳ ಹುಡುಗಿಯನ್ನು ನೆನೆದು ಭಾವುಕನಾಗುತ್ತಿದ್ದ ಓಂಪಿ ಇವನೇನಾ ಅಂತ. ಹಣ ಕೊಡುವ ಆತ್ಮವಿಶ್ವಾಸ ಎಂದರೆ ಇದೇ ಇರಬೇಕು. ತನ್ನ ಅಪ್ಪ-ಅಮ್ಮನ ಬಗ್ಗೆ ನನ್ನೊಡನೆ ಹಂಚಿಕೊಂಡಿದ್ದ ಓಂಪಿ. ತನಗೊಬ್ಬ ತಂಗಿಯಿರಬೇಕಿತ್ತು ಅಂತ ಆಶೆ ಪಟ್ಟಿದ್ದ ಓಂಪಿ. ಪತ್ರಿಕೆಯೊಂದರಲ್ಲಿ ಬರುತ್ತಿದ್ದ ಪ್ರೇಮಪತ್ರದ ಅಂಕಣವನ್ನೆಲ್ಲ ಕತ್ತರಿಸಿ ಇಟ್ಟುಕೊಂಡಿದ್ದ ಓಂಪಿ. ತನ್ನ ರೂಂಮೇಟ್ಸ್‌ಗೆ ಹೇಗೆ ಅಡುಗೆ ಮಾಡಲಿಕ್ಕೇ ಬರುವುದಿಲ್ಲ ಅಂತ ಹೇಳಿಕೊಂಡು ನಗುತ್ತಿದ್ದ ಓಂಪಿ. ತಾನು ದುಡಿದ ದುಡ್ಡಲ್ಲಿ ಕೊಂಡ ಮೊಬೈಲನ್ನು ಅತ್ಯಂತ ಅಕ್ಕರಾಸ್ಥೆಯಿಂದ ಸವರಿದ್ದ ಓಂಪಿ. ಹಾಗಾದರೆ, ಶ್ರೀಮಂತನಾದ ನಿಟ್ಟಿನಲ್ಲಿ ಆ ದಿನಗಳ ಆ ಭಾವುಕತೆಯನ್ನೆಲ್ಲ ಕಳಕೊಂಡುಬಿಟ್ಟಿದ್ದಾನಾ ಇವನು ಅಂತ ನಾನು ಆಲೋಚಿಸುತ್ತಿರುವಾಗಲೇ ಓಂಪಿ ನನ್ನಾಲೋಚನೆಯನ್ನು ತುಂಡು ಮಾಡಿದ:&lt;br /&gt;&lt;br /&gt;“ಆದರೆ ನಾನು ಮೊದಲಿನಷ್ಟು ಖುಶಿಯಾಗಿಲ್ಲ ಅನ್ನಿಸ್ತಿದೆ ಅಂಶು.. ಮೊದಲಾದರೆ ಸ್ಯಾಲರಿ ಯಾವಾಗ ಬರುತ್ತೆ ಅಂತ ಕಾಯಬೇಕಿತ್ತು. ಬರ್ತಿದ್ದ ಸ್ವಲ್ಪ ದುಡ್ಡಲ್ಲಿ ಲೈಫನ್ನ ಅಡ್ಜಸ್ಟ್ ಮಾಡೋದ್ರಲ್ಲಿ ಏನೋ ಥ್ರಿಲ್ ಇರ್ತಿತ್ತು. ಅವರಿವರ ಹತ್ರ ಸಾಲ ಮಾಡ್ಕೊಂಡು, ಅವರು ವಾಪಸ್ ಕೇಳ್ದಾಗ ‘ಕೊಡ್ತೀನಿ ಕೊಡ್ತೀನಿ’ ಅಂತ ಮುಂದಿನ ತಿಂಗಳವರೆಗೆ ಸಾಗಹಾಕೋದರಲ್ಲಿ ಮಜಾ ಇರ್ತಿತ್ತು. ರೂಂಮೇಟ್ಸ್ ಜೊತೆ ಜಗಳ ಮಾಡೋದರಲ್ಲಿ, ಭಿಕಾರಿಗಳ ಥರ ಕುಡಿದು ಬೀಳೋದರಲ್ಲಿ ವಿಲಕ್ಷಣ ಸುಖ ಇತ್ತು. ನೆನಪಿದೆಯಲ್ಲ ನಿಂಗೆ, ಬಿ‌ಎಂಟಿಸಿ ಬಸ್ಸಿಗೆ ಬಂದ್ರೆ ದುಡ್ಡು ಖರ್ಚಾಗುತ್ತೆ ಅಂತ, ವೈಯಾಲಿಕಾವಲ್‌ನಿಂದ ಆಫೀಸಿಗೆ ಮೂರು ಕಿಲೋಮೀಟರ್ ನಡೆದೇ ಬರ್ತಿದ್ದೆ. ಬೆಳಗ್ಗೆ ಬೇಗ ಹೊರಟು, ಲೇಟಾಯ್ತು ಅಂತ ಸರಸರ ಹೆಜ್ಜೆ ಹಾಕಿ ಬರೋದರಲ್ಲಿ ಎಂಥಾ ಟೆನ್ಷನ್ ಇರ್ತಿತ್ತು.. ಬಾಸ್ ಬೈದರೆ ಅನ್ನೋ ಹೆದರಿಕೆ.. &lt;br /&gt;&lt;br /&gt;“ಆದರೆ ಈಗ ನೋಡು, ದುಡ್ಡು ನಂಗೊಂದು ತಲೆಬಿಸಿಯ ಸಂಗತಿಯೇ ಅಲ್ಲ. ಸಂಬಳ ಯಾವತ್ತೋ ಅಕೌಂಟಿಗೆ ಕ್ರೆಡಿಟ್ ಆಗಿರುತ್ತೆ, ನನಗೆ ಅತ್ತಕಡೆ ಗಮನಿಸುವ ಗೋಜೂ ಇಲ್ಲ. ಜೇಬಲ್ಲಿ ಹಣ ಇಲ್ಲ ಅಂದಾಗ ಎಟಿ‌ಎಂಗೆ ಹೋಗಿ ಡ್ರಾ ಮಾಡ್ಕೋತೀನಿ. ಶಾಪಿಂಗ್ ಮಾಡ್ಬೇಕು ಅಂದ್ರೆ ಕಾರ್ಡುಗಳಿವೆ. ಅಷ್ಟು ದೊಡ್ಡ ಫ್ಲಾಟಲ್ಲಿ ನಾನು ಒಬ್ಬನೇ ಇರ್ತೀನಿ. ವೀಕೆಂಡುಗಳಲ್ಲಿ ಕಲೀಗುಗಳು, ಬ್ಯುಸಿನೆಸ್ ಪಾರ್ಟ್‌ನರ್‌ಗಳ ಜೊತೆ ಐಶಾರಾಮಿ ಕ್ಲಬ್ಬುಗಳಲ್ಲಿ ಪಾರ್ಟಿ. ಕುಡಿದದ್ದು ಜಾಸ್ತಿಯಾದರೆ ಡ್ರೈವರ್ ಇದಾನೆ, ಕಾರು ಮನೆ ಮುಟ್ಟಿಸುತ್ತೆ. ಒಂಥರಾ ವಿಚಿತ್ರ ನಿರಾಳತೆ.. ತಾಳು, ನಿಂಗೆ ಇನ್ನೊಂದು ಬಿಯರ್ ಹೇಳ್ತೀನಿ” ಓಂಪಿ ಮಾತಾಡಲಿಕ್ಕೇ ಬಂದವನಂತಿದ್ದ. &lt;br /&gt;&lt;br /&gt;ನನಗೆ ಇಲ್ಲಿಗೆ ಬರುವ ಮುನ್ನ, ಓಂಪಿಯನ್ನು ಬಾಹ್ಯವಾಗಿ ಎದುರಿಸುವ ಮುನ್ನ ಕೊಂಚ ಹಿಂಜರಿಕೆಯಿತ್ತು. ಅದೇ ಆಫೀಸು, ಅದೇ ಮನೆ, ಓಂಪಿಗೆ ಯಾವ ರೀತಿಯಲ್ಲೂ ಸರಿಸಮವಲ್ಲದ ದುಡಿಮೆ, ಒಂದೇ ತರಹದ ಜೀವನಕ್ರಮ, ಅವವೇ ಕನಸುಗಳು, ಹುಚ್ಚುಚ್ಚು ಧ್ಯೇಯಗಳು, ನೂರಾರು ಗೊಂದಲಗಳನ್ನಿಟ್ಟುಕೊಂಡು ಬಾಳ್ವೆ ಮಾಡುತ್ತಿರುವ ನಾನು, ಈಗ ಪೂರ್ತಿ ಬದಲಾಗಿರಬಹುದಾದ ಓಂಪಿಯನ್ನು ಹೇಗೆ ಸ್ವೀಕರಿಸಲಿ ಎಂಬ ಅಳುಕಿತ್ತು. ಭವಿಷ್ಯದ ಬಗ್ಗೆ ಸ್ವಲ್ಪವೂ ಮುಂದಾಲೋಚನೆ ಇಲ್ಲದೆ, ನಾಳೆ ಬೆಳಗಾದರೆ ಏನು ಎಂಬ ಬಗ್ಗೆ ಕಲ್ಪನೆ ಸಹ ಇಲ್ಲದೆ, ಬದುಕು ಹೇಗೆ ಬರುತ್ತದೋ ಹಾಗೆ ಎದುರಿಸುವ ತೀರ್ಮಾನದೊಂದಿಗೆ ದಿನಗಳನ್ನು ಕಳೆಯುತ್ತಿರುವ ನಾನು, ಈಗ ಸುಭದ್ರ ನೆಲೆಯ ಮೇಲೆ ನಿಂತಿರಬಹುದಾದ, ಸ್ಪಷ್ಟ ನಿರ್ಧಾರಗಳ, ಪೂರ್ತಿ ಆತ್ಮವಿಶ್ವಾಸಗಳನ್ನು ರೂಢಿಸಿಕೊಂಡಿರಬಹುದಾದ ಓಂಪ್ರಕಾಶನೊಂದಿಗೆ ಏನು ಮಾತನಾಡಿಯೇನು ಎಂಬ ಆತಂಕವಿತ್ತು. ‘ಅರೆ ನೀನೇನೋ, ಇನ್ನೂ ಹಾಗೇ ಇದೀಯ?’ ಅಂತ ಅವನು ಕೇಳಿಬಿಟ್ಟರೆ ಕೊಡಲಿಕ್ಕೆ ನನ್ನ ಬಳಿ ಗಟ್ಟಿಯಾದ ಉತ್ತರ ಸಹ ಇರಲಿಲ್ಲ. ಆದರೆ ಓಂಪಿ, ಆರ್ಥಿಕ ಸ್ವಾತಂತ್ರ್ಯ ಗಳಿಸಿರುವುದೊಂದನ್ನು ಹೊರತುಪಡಿಸಿದರೆ, ನನ್ನ ತರಹುದೇ ಗೊಂದಲಗಳಿಂದ ಬಳಲುತ್ತಿರುವ ಮನುಷ್ಯನಂತೆ ಕಾಣತೊಡಗಿದ. ದೆಸೆಯಿಲ್ಲದ, ಅಂತ್ಯ ಗೋಚರಿಸದ ಸಾಗರದಲ್ಲಿ ದಿಕ್ಕುತಪ್ಪಿದ ಒಂಟಿದೋಣಿಯ ಅಂಬಿಗರೇ ಎಲ್ಲರೂ? ಬಿಯರ್ ಕಹಿ ಕಳೆದುಕೊಳ್ಳತೊಡಗಿತು. &lt;br /&gt;&lt;br /&gt;“ಅಮೃತಾಗೆ ಮದುವೆ ಆಯ್ತು” ಥಟ್ಟನೆ ಹೇಳಿದ ಓಂಪಿ, “ಯು ಸೀ, ಈಗ ಕತೆ ಬರೀಬಹುದು ನೀನು ನನ್ನ ಲೈಫ್ ಬಗ್ಗೆ, ಹಹಹಾ, ಕತೆ!” ಬಿಯರಿಗೆ ಕಹಿ ಮರುಕಳಿಸಿತು. ಜೊತೆಗೆ ಕೆಲಸ ಮಾಡಬೇಕಾದರೆ ದಿನಕ್ಕೊಮ್ಮೆಯಾದರೂ ಪ್ರಸ್ತಾಪವಾಗುತ್ತಿದ್ದ ವಿಷಯ. ಕಾಲೇಜು ದಿನಗಳಿಗೆ ಅವನನ್ನು ಸವಿಸವಿ ನೆನಪಿನ ಮೆರವಣಿಗೆಯಲ್ಲಿ ಒಯ್ಯುತ್ತಿದ್ದ ವಿಷಯ. ಆಫೀಸಿನ ಬಿಜಿಯ ನಡುವೆ, ಟೀಯೊಂದಿಗಿನ ಸಿಹಿಸಿಹಿ ಬಿಸ್ಕೇಟಾಗುತ್ತಿದ್ದ ವಿಷಯ. ಗಿಜಿಗಿಜಿಗುಡುವ ಧಗೆಯ ಸಂತೆಯಲ್ಲಿ ಇದ್ದಕ್ಕಿದ್ದಂತೆ ಮಧುರ ಮಳೆಯೊಂದು ಸುರಿಯತೊಡಗಿ ಎಲ್ಲರನ್ನೂ ಇದ್ದಲ್ಲೆ ಮೋಹಕರನ್ನಾಗಿ ಮಾಡುವಂತೆ, ಓಂಪಿ ತನ್ನ ಹುಡುಗಿಯ ನೆನಪಾದೊಡನೆ ಈಗಷ್ಟೆ ಅರಳಿದ ಹೂವಾಗುತ್ತಿದ್ದ. ನನ್ನ ಬಳಿ ಕತೆ ಹೇಳುತ್ತಿದ್ದ. ಹೇಗಾದ್ರೂ ಮಾಡಿ ಫೋನ್ ನಂಬರ್ ಪತ್ತೆ ಮಾಡಿಕೊಡು ಅಂತ ದುಂಬಾಲು ಬೀಳುತ್ತಿದ್ದ. &lt;br /&gt;&lt;br /&gt;ಅಮೃತಾ ಇವನ ಕಾಲೇಜಿನ ಕ್ಲಾಸ್‌ಮೇಟು. ಥೇಟು ಸಿನಿಮಾ ಶೈಲಿಯಲ್ಲಿತ್ತು ಪ್ರೇಮದ ಕತೆ. ಈ ಪ್ರೀತಿಯಲ್ಲಿ ನೋಡಿದ ತಕ್ಷಣ ಇಷ್ಟವಾಗಿಬಿಡುವುದು ಅಂತೊಂದು ಇರುತ್ತದಲ್ಲ, ಹಾಗೇ ಆಗಿತ್ತು ಓಂಪಿಗೂ. ತಾನು ಇಷ್ಟಪಟ್ಟಿದ್ದ, ಮನಸಲ್ಲೇ ಆರಾಧಿಸಿದ್ದ ಹುಡುಗಿಯನ್ನೇ ಗೆಳೆಯರು ಎತ್ತಿಕಟ್ಟಿದ್ದರು ಕಾಲೇಜಿನ ಗೆಟ್-ಟುಗೆದರ್ ಸಮಾರಂಭದಂದು. ಆವತ್ತು ಕಾಲೇಜಿನಲ್ಲಿ ಬಣ್ಣಬಣ್ಣದ ಸೀರೆಗಳ ಸರಭರ. ಎಷ್ಟೇ ಬೇಡವೆಂದರೂ ಕಣ್ಸೆಳೆವ ತರಳೆಗಳ ನಡುವೆ ಈ ಹಂಸಬಿಳುಪಿನ ಸೀರೆಯ ಹುಡುಗಿ ಸ್ಟೇಜಿಗೆ ಹೋದಳು. ಗಾನದೇವತೆ ಒಲಿದು ಬಂದಂತೆ, ದೂರದಲ್ಲಿ ಕೂತಿದ್ದ ಓಂಪಿ ಪರವಶನಾಗುವಂತೆ ಹಾಡಿದಳು:&lt;br /&gt;&lt;br /&gt;&lt;br /&gt;ಕೋಟಿಪಲ್ಲವಿ ಹಾಡುವ ಕನಸು ಇದು&lt;br /&gt;ಕನಸುಗಾರನ ಕಣ್ಣಿನ ಬೆಳಕು ಇದು ||&lt;br /&gt;&lt;br /&gt;ಅಚಾನಕ್ ಎಂಬಂತೆ, ಪಕ್ಕದಲ್ಲಿದ್ದ ಹುಡುಗ ಇವನ ಕಿವಿಯಲ್ಲಿ ಉಸುರಿಬಿಟ್ಟ: “ಹೇ ನೋಡು, ನಾ ಹೇಳ್ತಿರ್ತಿದ್ದೆನಲ್ಲ, ನಿನ್ ಹಾಗೇ ಇದಾಳೆ ಪಕ್ಕದ ಡಿಪಾರ್ಟ್‌ಮೆಂಟಿನ ಹುಡುಗಿ ಒಬ್ಬಳು ಅಂತ, ಇವಳೇ ಅದು. ಫೇಸ್‌ಕಟ್ಟು, ನಡೆಯೋ ಸ್ಟೈಲು, ಮಾತಾಡೋ ರೀತಿ -ಎಲ್ಲಾ, ಥೇಟ್ ನಿನ್ ಥರಾನೇ. ನಿಂಗೆ ಹಾಗನ್ಸಲ್ವಾ?” ಹೌಹಾರಿಬಿಟ್ಟ ಓಂಪಿ. ಇಷ್ಟು ದಿನ ಯಾವ ಹುಡುಗಿಯನ್ನು ಮನಸಲ್ಲೇ ಅರಸಿಯಂತೆ ಭಾವಿಸಿ ಅರ್ಚಿಸಿದ್ದೆನೋ ಅವಳನ್ನೇ ಗೆಳೆಯರು ಸೇರಿ ತನಗೆ ಎತ್ತಿ ಕಟ್ಟಿದ್ದು ಕಂಡು ಓಂಪಿ ರೋಮಾಂಚಿತನಾದ. ಆಗ ಹೊಳೆದ ಅವನ ಕಣ್ಣ ಮಿಂಚೇ ಸಾಕಾಯಿತು ಕಾಲೇಜೆಲ್ಲ ಹಬ್ಬಲು: ಓಂಪ್ರಕಾಶ್-ಅಮೃತಾ ಪೂಜಾರ್ ಸೂಪರ್ ಜೋಡಿ. ಸ್ವಲ್ಪೇ ದಿನಗಳಲ್ಲಿ ಅದು ಅವಳಿಗೂ ಗೊತ್ತಾಯಿತು. ಮತ್ತಿನ್ನೇನು- ಕಣ್ಣ ಇಷಾರೆ, ಮಾತು, ಸಂಚಲನ, ಸುತ್ತಾಟ, ಪಬ್ಬಾಸ್ ಪಾರ್ಲರಿನಲ್ಲಿ ಐಸ್‌ಕ್ರೀಮು. ಮಂಗಳೂರಿನ ಪ್ರತಿ ಬೀಚಿನ ಮರಳ ಮೇಲೆ ಇವರು ಪರಸ್ಪರರ ಹೆಸರು ಬರೆದರು. ತೆರೆ ಬಂದು ಅಳಿಸಿ ಹೋದಂತೆ ಮತ್ತೆ ಮತ್ತೆ ಬರೆದರು. &lt;br /&gt;&lt;br /&gt;“ಈಗಲೂ ನೆನಪಾಗ್ತಾಳೆ ಅಂಶು.. ಹಾಳಾದವಳು, ಯಾರನ್ನೋ ಮದುವೆ ಮಾಡ್ಕೊಂಡು ಹಾಯಾಗಿದಾಳೆ. ಐಟಿ - ಐಟಿ ಹುಚ್ಚಲ್ಲ ನಮ್ಮ ಜನಕ್ಕೆ- ಯಾರೋ ಸಾಫ್ಟ್‌ವೇರ್ ಇಂಜಿನಿಯರನ್ನೇ ಮದುವೆ ಆದಳು. ಆಗಷ್ಟೆ ಎಲ್‌ಎಲ್‌ಬಿ ಮುಗಿಸಿ ಎರಡು ಸಾವಿರ ರೂಪಾಯಿ ಸಂಬಳಕ್ಕೆ ಯಾರೋ ಸೀನಿಯರ್ ಕೆಳಗೆ ಚಾಕರಿ ಮಾಡ್ತಿರೋ ಬಡ ಲಾಯರ್‌ನ ಯಾರು ಒಪ್ತಾರೆ? ನೋ ನೋ, ಐ ಹ್ಯಾವ್ ನೋ ಕಂಪ್ಲೇಂಟ್ಸ್, ಸರಿಯಿತ್ತು ಅವಳು ಮಾಡಿದ್ದು ಆಗಿನ ಸಮಯಕ್ಕೆ. ಅಪ್ಪನ ದಬಾಯಿಸುವಿಕೆಯ ನಡುವೆ, ಅಳೋ ಅಮ್ಮನ ಮುಂದೆ ಯಾವ ಹುಡುಗಿಯೂ ಕಾನ್ಫಿಡೆನ್ಸ್ ಸಹ ಇಲ್ಲದ ಹುಡುಗನನ್ನ ನೆಚ್ಚಿಕೊಂಡು ಕನಸು ಕಾಣ್ತಾ ಕೂರಲ್ಲ. ಶಿ ವಾಸ್ ರೈಟ್. ಸರಿಯಿತ್ತು ಅವಳ ನಿರ್ಧಾರ. ಆದರೆ ಈಗ ಸಮಸ್ಯೆಯೇನಿದ್ರೂ ನಂದು ಅಷ್ಟೆ: ಇಷ್ಟೆಲ್ಲ ದುಡಕೊಂಡು ನಾನೇನು ಮಾಡ್ಲಿ ಅನ್ನೋದು” ಓಂಪಿಗೆ ನಾನು ಕತೆ ಬರೆಯಬೇಕಿತ್ತು, ಸಿಪ್ಪಿಗೊಂದು ಬಿಕ್ಕಿನ ಕತೆ ಹೇಳಿದ. ನನಗೆ ಹೇಳಬೇಕೆನಿಸುತ್ತಿತ್ತು: ‘ಇಲ್ಲ ಅಂಶೂ.. ಇವಿಷ್ಟನ್ನೇ ಇಟ್ಟುಕೊಂಡು ನಂಗೆ ಕತೆ ಬರೀಲಿಕ್ಕೆ ಆಗಲ್ಲ.. ಜಗತ್ತಿನ ತೊಂಬತ್ತು ಪ್ರತಿಶತ ಪ್ರೇಮವೈಫಲ್ಯದ ಕತೆಗಳೂ ಹೀಗೇ ಇರ್ತವೆ. ಅವನ್ನಾದರೂ ಎಷ್ಟು ಅಂತ ಓದ್ತಾರೆ ಜನ? ಪ್ರೀತಿಯ ಕತೆಗಳನ್ನ ನೋಡಿದರೆ ಸಾಕು, ವಾಕರಿಕೆ ಬರುತ್ತೆ -ಅಷ್ಟೊಂದು ಕತೆಗಳಾಗಿದಾವೆ ಆಗಲೇ. ಐ ಕಾಂಟ್ ರೈಟ್..’ ಊಹುಂ, ಆದರೆ ಓಂಪಿ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಸಧ್ಯ, ಅವನೇ ವಿಷಯ ಬದಲಿಸಿದ:&lt;br /&gt;&lt;br /&gt;“ಹೋಗಲಿ, ಸಾರಿ, ನಿನ್ನ ಕತೆ ಹೇಳು. ಬಾಸ್ ಸರಿಯಾಗಿ ಸಂಬಳ ಕೊಡ್ತಿದಾರಾ? ಕ್ಲೈಂಟೇಲ್ ಹೇಗಿದೆ? ಹೇ, ಯಾವುದಾದರೂ ಹುಡುಗೀನ ಲವ್-ಗಿವ್ ಮಾಡಿದ್ಯೇನೋ? ನಿನ್ನ ಆರ್ಕುಟ್ ಫ್ರೆಂಡ್‌ಲಿಸ್ಟ್ ನೋಡಿದೆ.. ಬರೀ ಹುಡುಗೀರೇ ತುಂಬಿಕೊಂಡಿದಾರೆ. ಬಿಟ್ಟಿರಲ್ಲ ನೀನು, ಯಾರನ್ನಾದ್ರೂ ಸೆಟ್ ಮಾಡ್ಕೊಂಡಿರ್ತೀಯಾ. ಈಗಂತೂ ಸಾಹಿತಿ ಬೇರೆ, ಎರಡು ಕವಿತೆಯ ಸಾಲು ಹೇಳಿದ್ರೆ ಸಾಕು, ಹುಡುಗೀರು ಬಿದ್ದುಹೋಗ್ತಾರೆ. ಟೆಲ್ ಮಿ, ಏನು ವಿಷಯ?”&lt;br /&gt;&lt;br /&gt;ಸಡನ್ನಾಗಿ ನನಗೆ ಸಿಕ್ಕ ಈ ಮಾತನಾಡುವ ಅವಕಾಶದಿಂದಾಗಿ ಅರೆಕ್ಷಣ ತಬ್ಬಿಬ್ಬಾದೆ. ಹೇಳಬೇಕಿನಿಸಿತು, ಹೇಳಿಬಿಟ್ಟೆ: “ನಿಜ ಹೇಳ್ತೀನಿ ಓಂಪಿ, ನಂಗೆ ಪ್ರೀತಿ-ಪ್ರೇಮಗಳಲ್ಲಿ ಒಂಥರಾ ನಂಬಿಕೆಯೇ ಹೊರಟುಹೋಗಿದೆ. ನನ್ನ ಫ್ರೆಂಡ್ಸ್ ಸರ್ಕಲ್ಲಿನಲ್ಲೇ ಅದೆಷ್ಟು ಲವ್ ಫೇಲ್ಯೂರ್ ಕೇಸುಗಳನ್ನ ನೋಡಿಬಿಟ್ಟೆ ಅಂದ್ರೆ, ಬಹುಶಃ ನಾನಿನ್ನು ಬದುಕಿನಲ್ಲಿ ಯಾರನ್ನಾದರೂ ಪ್ರಾಮಾಣಿಕವಾಗಿ-ಮನಸಾರೆ ಪ್ರೀತಿಸಿಯೇನಾ ಅಂತ ಅನುಮಾನ ಶುರುವಾಗಿಬಿಟ್ಟಿದೆ!&amp;nbsp; ಈ ‘ಲವ್ ಆಗೋದು’, ‘ಫಾಲಿಂಗ್ ಇನ್ ಲವ್’ ಅನ್ನೋದೆಲ್ಲ ಮೀನಿಂಗ್‌ಲೆಸ್. ಆ ಥರ ಎಲ್ಲ ಏನೂ ಇಲ್ಲ. ಈಗಿನ ಕಾಲದ ಯಾವ ಹುಡುಗಿಯೂ ಹುಡುಗನ ರೂಪ, ಹಣ, ಕೆಲಸ, ಬ್ಯಾಕ್‌ಗ್ರೌಂಡು, ಆಸಕ್ತಿಗಳನ್ನ ಸ್ಟಡೀ ಮಾಡದೆ ಪ್ರೀತಿಸಲಿಕ್ಕೆ ಶುರು ಮಾಡಲ್ಲ. ಹುಡುಗನೂ ಅಷ್ಟೇ, ಇವಳು ನನಗೆ ತಕ್ಕ ಜೋಡಿಯಾ, ಮನೆಗೆ ತಕ್ಕ ಸೊಸೆಯಾ, ನನ್ನ ಅಭಿರುಚಿಗಳಿಗೆ ಸರಿಸಾಟಿಯಾ ಅಂತೆಲ್ಲ ಯೋಚಿಸದೆ ಮುಂದುವರೆಯುವುದಿಲ್ಲ. ಮತ್ತೆ ಏನು ಗೊತ್ತಾ? ನಮಗೆಲ್ಲ ‘ಅಡ್ಜಸ್ಟ್‌ಮೆಂಟ್ಸ್’ ಅನ್ನೋ ಕಾನ್ಸೆಪ್ಟೇ ಇಲ್ಲವಾಗಿದೆ. ಅದು ಏನೇ ಇರ್ಲಿ, ಸ್ವಲ್ಪ ಸರಿಯಾಗ್ಲಿಲ್ಲ ಅಂದ್ರೂ ಬಿಸಾಕಿಬಿಡ್ತೀವಿ. ಪ್ರೀತಿ-ಬಾಂಧವ್ಯಗಳಿಗೂ ಅನ್ವಯಿಸುತ್ತೆ ಅದು. ಹುಡುಗ - ಹುಡುಗಿ ಇಬ್ಬರಿಗೂ ಆರ್ಥಿಕ ಸ್ವಾತಂತ್ರ್ಯ ಅನ್ನೋದು ಸಿಕ್ಕಿರುವಾಗ, ಪರಸ್ಪರ ಅವಲಂಬನೆಯ ಅವಶ್ಯಕತೆ ಇಲ್ಲದಿರುವಾಗ, ಇವನಿಲ್ಲದಿದ್ದರೆ ಮತ್ತೊಬ್ಬ ಅನ್ನೋ ಜಾಯಮಾನ ಬಂದುಬಿಟ್ಟಿದೆ ಅನ್ನಿಸುತ್ತೆ ನಂಗೆ..” &lt;br /&gt;&lt;br /&gt;“ಯೆಸ್, ಯೂ ಆರ್ ಹಂಡ್ರೆಡ್ ಪರ್ಸೆಂಟ್ ರೈಟ್. ದಿಸ್ ಥಾಟ್ ಆಫ್ ಯುವರ್ಸ್ ಡಿಮಾಂಡ್ಸ್ ಒನ್ ಮೋರ್ ಚಿಯರ್ಸ್!” ಅಂತಂದು ನನ್ನ ಗ್ಲಾಸಿಗೆ ತನ್ನ ಗ್ಲಾಸು ತಂದು ಕುಟ್ಟಿದ ಓಂಪಿ. ನಾನೂ “ಚಿಯರ್ಸ್” ಎಂದೆ ನಗುತ್ತ. &lt;br /&gt;&lt;br /&gt;ಎರಡು ನಿಮಿಷ ಇಬ್ಬರೂ ಮಾತಾಡಲಿಲ್ಲ. ನಮ್ಮ ಹಿಂದಿನ ಟೇಬಲ್ಲಿನವರು ಊಟ ಮುಗಿಸಿ ಹೊರಟಿದ್ದರು. ವೇಯ್ಟರ್ ಬಂದು ನಮಗೆ ಫುಡ್‌ಗೆ ಆರ್ಡರ್ ತೆಗೆದುಕೊಂಡು ಹೋದ. ಓಂಪಿ ಮುಂದುವರೆಸಿದ: “ಆದರೆ, ಇಷ್ಟೆಲ್ಲ ಆಧುನಿಕವಾಗಿರೋ - ಹಣವೊಂದಿದ್ದರೆ ಏನು ಬಯಸ್ತೀವೋ ಅದನ್ನು ಪಡೆಯುವ ವ್ಯವಸ್ಥೆಯಿರುವ ಈ ದಿನಗಳಲ್ಲಿ ಸಹ ಮನುಷ್ಯ ಅಂತರಾಳದಲ್ಲಿ ತುಂಬಾ ಡೆಲಿಕೇಟ್ ಆಗಿದಾನೆ ಅಂತ ನಂಗೆ ಅನ್ಸುತ್ತೆ. ನಾನು ನಿಂಗೆ ಮತ್ತೊಂದು ಘಟನೆ ಹೇಳ್ತೀನಿ, ತುಂಬಾ ಪರ್ಸನಲ್ ಆದದ್ದು. ಓಂಪಿ ಪೂರ್ತಿ ಹಾಳಾಗಿಹೋಗಿದಾನೆ ಅಂತ ಅಂದ್ಕೋಬೇಡ. ಈಗ ಮೂರು ತಿಂಗಳ ಹಿಂದೆ ನಾನು ಒಬ್ಬ ಹುಡುಗಿಯ ಪರಿಚಯ ಮಾಡ್ಕೊಂಡೆ. ಇಟ್ ವಾಸ್ ಫಾರ್ ಸೆಕ್ಸ್. ಎಲ್ಲಾ ಇಂಟರ್‌ನೆಟ್‌ನಲ್ಲಿ ಆಗಿದ್ದು ವ್ಯವಹಾರ. ಜ್ಯೋತಿ ಅಂತ ಅವಳ ಹೆಸರು. ಸೆಕ್ಸ್‌ಗಾಗಿ ಅಂತಲೇ ಮೀಟ್ ಆದ್ವಿ. ಅದು ಮೂರ್ನಾಲ್ಕು ವೀಕೆಂಡುಗಳಿಗೆ ಮುಂದುವರೀತು. ಕೇಳು, ಅವಳೊಬ್ಬ ಪ್ರೊಫೆಶನಲ್ ಎಸ್ಕಾರ್ಟ್ ಮತ್ತು ನಂಗೆ, ಲೆಟ್ ಮಿ ಬಿ ಫ್ರಾಂಕ್, ಇಟ್ ವಾಸ್ ನಾಟ್ ಮೈ ಫಸ್ಟ್ ಟೈಮ್. ಅಂತಹವಳ ಜೊತೆ, ಯು ಬಿಲೀವ್ ಮಿ, ನಂಗೆ ಪ್ರೀತಿ ಆಗಿಹೋಯ್ತು! ನಾನು ಅವಳನ್ನ ಮಿಸ್ ಮಾಡಲಿಕ್ಕೆ ಶುರು ಮಾಡಿದೆ. ಅದೆಷ್ಟು ಹಚ್ಚಿಕೊಂಡು ಬಿಟ್ಟೆ ಅವಳನ್ನ ಅಂದ್ರೆ, ಅವಳಿಗೆ ಈ ಮೊದಲೇ ಮದುವೆ ಆಗಿತ್ತು, ಈಗ ಡೈವೋರ್ಸ್ ಪ್ರೊಸೀಜರ್ ನಡೀತಾ ಇದೆ ಅಂತ ಗೊತ್ತಾದಮೇಲೂ, ನಂಗೆ ಅವಳನ್ನ ಬಿಟ್ಟಿರಲಿಕ್ಕೆ ಆಗಲಿಲ್ಲ. ಅಷ್ಟು ದಿನ ಮರೆತುಹೋಗಿದ್ದ ಆದರ್ಶಗಳೆಲ್ಲ ಮೈಮೇಲೆ ಅಡರಿಕೊಂಡವು. ಸೆಕೆಂಡ್ ಮ್ಯಾರೇಜು, ಇಂಥವಳನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕು, ಬಾಳು ಕೊಡುಬೇಕು ಅಂತೇನೇನೋ ಚಿಂತನೆಗಳು! ಕೊನೆಗೆ ಅವಳೇ ಸಮಾಧಾನ ಮಾಡಿದಳು: ‘ನಿಂಗೆ ವಯಸ್ಸಾದ ಅಪ್ಪ-ಅಮ್ಮ ಇದಾರೆ.. ನಿನ್ನ ಕಂಪನಿಯಲ್ಲಿ, ನಿನ್ನ ಸ್ನೇಹವಲಯದಲ್ಲಿ, ನೀನು ವಾಸಿಸೋ-ವ್ಯವಹರಿಸೋ ಸಮಾಜದಲ್ಲಿ ನಿಂಗೊಂದು ಹೆಸರು ಇದೆ. ನಿಂಗೊಂದು ಬದುಕು-ಭವಿಷ್ಯ ಇದೆ, ಕನಸುಗಳು ಇವೆ. ಆದರೆ ನನಗೆ ಅದ್ಯಾವುದೂ ಇಲ್ಲ ಮತ್ತೆ ನಾನು ನಿನಗೆ ಯಾವ ಥರದಲ್ಲೂ ಜೋಡಿಯಾಗಲ್ಲ. ನಾನು ಇನ್ನು ಯಾವ ಸಂಬಂಧದ ಜೊತೆಗೂ ಬಾಳುವುದಿಲ್ಲ ಅಂತ ತೀರ್ಮಾನಿಸಿಯೇ ಈ ಗಂಡನಿಗೆ ಡೈವೋರ್ಸ್ ಕೊಡ್ತಿರೋದು... ನಾನು ಇಷ್ಟರೊಳಗೆ ನಿನ್ನೊಂದಿಗೆ ಹೇಳಿಕೊಂಡಿರುವ ನನ್ನ ಬಗೆಗಿನ ಬಹಳಷ್ಟು ಸಂಗತಿಗಳು ಸುಳ್ಳು. ನನ್ನ ನಿಜವಾದ ಹೆಸರು ಜ್ಯೋತಿ ಸಹ ಅಲ್ಲ’ ಅಂತೆಲ್ಲ ಕಪಾಳಕ್ಕೆ ಹೊಡೆದಂತೆ ಹೇಳಿ, ಆಮೇಲೆ ನನ್ನ ಸಂಪರ್ಕಕ್ಕೂ ಸಿಗದಹಾಗೆ ತಪ್ಪಿಸಿಕೊಂಡು ಹೋಗಿಬಿಟ್ಳು. ಹೆಹೆ, ಅದಿಲ್ಲದಿದ್ದರೆ ಇಷ್ಟೊತ್ತಿಗೆ ನಾನು ಏನಾಗಿರ್ತಿದ್ದೆನೋ?” ನಕ್ಕ ಓಂಪಿ. ಕ್ಷಣ ಬಿಟ್ಟು ಕೇಳಿದ: “ನಿಂಗೇನನ್ಸುತ್ತೆ ಇದನ್ನ ಕೇಳಿದಾಗ? ಹಹ್ಹಹ್ಹಾ, ಕತೆಗಾರ, ಹೇಳೋ ಫ್ರೆಂಡ್.. ನಿಂಗೇನಾದರೂ ಆಗಿದೆಯಾ ಇಂಥಾ ಅನುಭವ?”&lt;br /&gt;&lt;br /&gt;ಕೋಸ್ಟಲ್ ಎಕ್ಸ್‌ಪ್ರೆಸ್ ರೆಸ್ಟುರೆಂಟಿನ ನಾವು ಕುಳಿತಿದ್ದ ಟೇಬಲ್‌ನ ಪಕ್ಕದಲ್ಲೊಂದು ಕಿಟಕಿಯಿತ್ತು. ಅದರಿಂದ ಬೆಳಕು ಒಳಬರದಂತೆ ಪೂರ್ತಿ ದಪ್ಪ ಪರದೆ ಮುಚ್ಚಿದ್ದರು. ಕಿಟಕಿಯ ಕಟ್ಟೆಯ ಮೇಲೊಂದು ಹೂದಾನಿ. ಅದರೊಳಗೆ ನೀರಿರಬಹುದೇನೋ ಎಂಬ ಭ್ರಮೆ. ಅದರಲ್ಲಿಟ್ಟಿರುವ ಅರೆಗೆಂಪು ಗುಲಾಬಿ ನಿಜವಾದ್ದೋ ಪ್ಲಾಸ್ಟಿಕ್ಕಿನದೋ ಗುಮಾನಿ. ಆ ಹೂವಿನ ಮೇಲಿರುವ ನೀರಹನಿ ತಾಜಾನೋ ಅಥವಾ ಕೃತಕವಾದ್ದೋ -ಈ ಮತ್ತ ಕಣ್ಣುಗಳಿಂದ ಪತ್ತೆ ಹಚ್ಚಲಿಕ್ಕಾಗುತ್ತಿಲ್ಲ..&lt;br /&gt;&lt;br /&gt;“ಓಕೆ. ಈಗ ಬಹಳ ಇಂಪಾರ್ಟೆಂಟ್ ಆದ ವಿಷಯ ಹೇಳ್ತೇನೆ ನಿಂಗೆ..” ಓಂಪಿ ಎಚ್ಚರಿಸಿದ, “ಈಗ ಒಂದು ತಿಂಗಳ ಕೆಳಗೆ ನನಗೆ ಆರ್ಕುಟ್ಟಿನಿಂದ ಒಬ್ಬ ಹುಡುಗಿ ಪರಿಚಯ ಆದ್ಲು. ವಿನಿಷಾ ಅಂತ ಹೆಸರು. ನನ್ನ ಪ್ರೊಫೈಲ್ ನೋಡಿ, ‘ನಿನ್ನ ಆಸಕ್ತಿಗಳು ಮತ್ತು ನನ್ನ ಆಸಕ್ತಿಗಳು ತುಂಬಾ ಸಿಮಿಲರ್ ಇವೆ ಅನ್ನಿಸ್ತು, ಅದಕ್ಕೇ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದೆ’ ಅಂತ ಅಂದ್ಲು.&amp;nbsp; ಚಾಟ್‌ನಲ್ಲಿ ಸಿಕ್ಕಾಗ ಏಕದಂ ಕ್ಲೋಸ್ ಆಗಿ ಮಾತಾಡಲಿಕ್ಕೆ ಶುರುವಿಟ್ಟಳು. ಎಷ್ಟರ ಮಟ್ಟಿಗೆ ಅಂತೀಯ, ತನ್ನ ಪೂರ್ವಾಪರಗಳನ್ನೆಲ್ಲ ನನ್ನ ಬಳಿ ಹೇಳಿಕೊಂಡುಬಿಟ್ಟಳು. ಅವಳ ಫ್ಯಾಮಿಲಿ ಬಗ್ಗೆ, ಅವಳ ಕೆಲಸದ ಬಗ್ಗೆ, ಆಸಕ್ತಿಗಳ ಬಗ್ಗೆ, ಈಗ ಇರೋ ಪಿಜಿಯ ಗೆಳತಿಯರ ಬಗ್ಗೆ, ನೋಡಿದ ಸಿನಿಮಾ ಬಗ್ಗೆ... ಏನೆಲ್ಲ. ಆದರೆ ನಾನು ಅವಳನ್ನ ನಂಬಲಿಲ್ಲ. ಅವಳು ಹೇಳ್ತಿರೋದು ನಿಜವೋ ಸುಳ್ಳೋ ಯಾರಿಗ್ಗೊತ್ತು? ಸುಳ್ಳೇ ನನ್ನ ಜೊತೆ ಫ್ಲರ್ಟ್ ಮಾಡ್ತಿರಬಹುದು. ಅಥವಾ ಅವಳಿಗೆ ಈಗ ಟೈಮ್‌ಪಾಸ್‌ಗೆ, ಜೊತೆಗೆ ಚಾಟ್ ಮಾಡೋಕೆ ಯಾರಾದರೂ ಬೇಕಿರಬಹುದು. ನನ್ನನ್ನ ಈ ಕಾರ್ಯಕ್ಕೆ ಬಳಸಿಕೊಳ್ತಿರಬಹುದು. ನಾನು ಈ ಸಲವೂ ಪೆಗ್ಗು ಬೀಳಬಾರದು ಅಂತ ಗಟ್ಟಿ ಮಾಡಿಕೊಂಡೆ. ಆದರೂ ಅವಳ ಜೊತೆ ಮೃದುವಾದಂತೆ ನಟಿಸಿದೆ. ನನ್ನ ಕತೆಗಳನ್ನೂ ಹಂಚಿಕೊಂಡಂತೆ ಮಾಡಿದೆ. &lt;br /&gt;&lt;br /&gt;“ಆದರೆ ಈಗ ಒಂದು ವಾರದಿಂದ ಅನ್ನಿಸ್ತಿದೆ, ಅವಳದು ಸುಮ್ಮನೆ ಫ್ಲರ್ಟಿಂಗ್ ಅಲ್ಲ, ನಿಜವಾಗಿಯೂ ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾಳೆ ಅಂತ. ನಾನು ಚೆನ್ನಾಗಿ ಮಾತಾಡಿದ ದಿನ ಅವಳೂ ಖುಶಿಯಾಗಿರ್ತಾಳೆ. ನಾನು ಅಲಕ್ಷ್ಯ ಮಾಡಿದ ದಿನ ಬೇಜಾರಾಗಿರ್ತಾಳೆ. ಅವಳ ಸ್ಟೇಟಸ್ ಮೆಸೇಜುಗಳೆಲ್ಲ ನನಗಾಗಿಯೇನೇನೋ ಅಂತ ಅನ್ನಿಸುವಂತಿರುತ್ತೆ. ಹೊರಗೆ ಮೋಡ ಕಟ್ಟಿದ್ದರೆ ಅಲ್ಲಿ ‘ಗರಿಬಿಚ್ಚಿದ ನವಿಲಾಗಿದೀನಿ.. ಮಳೆ ಬಾರದಿದ್ದರೂ ನೀ ಬಾ’ ಅಂತ ಇರುತ್ತೆ, ಜೋರುಮಳೆ ಬಂತೆಂದರೆ ‘ನಿನ್ನ ಪ್ರೀತಿಮಳೆಯ ಮುಂದೆ ಇದು ತುಂತುರು’ ಅಂತ ಇರುತ್ತೆ, ನಾನು ಇನ್ವಿಸಿಬಲ್ ಆದರೆ ಸಾಕು, ‘ಸಣ್ಣ ಕಲ್ಲುಗಳ ಡೊಗರೇ, ಬಚ್ಚಿಟ್ಟುಕೊಳ್ಳುವ ಮೀನಿಗೆ ಏನು ಶಿಕ್ಷೆ?’ ಅಂತ ಹಾಕಿಕೊಂಡಿರುತ್ತಾಳೆ. ‘ನಂಗೆ ಆ ಮೂವಿಗೆ ಹೋಗಬೇಕು, ಒಬ್ಬಳೇ ಹೋಗಲಿಕ್ಕೆ ಆಗಲ್ಲ, ಕರ್ಕೊಂಡು ಹೋಗು’ ಅಂತ ಹೇಳ್ತಾಳೆ. ‘ನಿಂಗೆ ನನ್ನ ಬಗ್ಗೆ ಸ್ವಲ್ಪಾನೂ ಕೇರೇ ಇಲ್ಲ’ ಅಂತ ಕಂಪ್ಲೇಂಟ್ ಮಾಡ್ತಾಳೆ. ‘ಯಾಕೆ ನೀನು ನನ್ನನ್ನ ಅವಾಯ್ಡ್ ಮಾಡ್ತಿದೀಯಾ? ನಾವು ಮೀಟ್ ಆಗೋದು ನಿಂಗೆ ಇಷ್ಟ ಇಲ್ವಾ?’ ಅಂತೆಲ್ಲ ಥೇಟು ಸಿನೆಮಾ ಶೈಲಿಯಲ್ಲಿ ಕೇಳ್ತಿದಾಳೆ. ಆದರೆ ನನಗೆ ಇದು ನನ್ನ ಬದುಕಿನ ಮತ್ತೊಂದು ಸಿನಿಮಾ ಕತೆ ಆಗಲಿಕ್ಕೆ ಇಷ್ಟ ಇಲ್ಲ.&lt;br /&gt;&lt;br /&gt;“ಈಗ ನೀನು ಹೇಳು ಅಂಶು, ನಾನೇನು ಮಾಡಲಿ? ಡು ಯು ಥಿಂಕ್ ಐ ಶುಡ್ ಗೋ ಅಹೆಡ್? ಹೇಳು ನೀನು.. ಇಂಥವನ್ನೆಲ್ಲ ನೀನು ಕರೆಕ್ಟಾಗಿ ಜಡ್ಜ್ ಮಾಡ್ತೀಯ. ಆವಾಗ ಒಟ್ಟಿಗಿದ್ದಾಗ ಹೀಗೆ ನಾನು ಸಮಸ್ಯೆ ಹೇಳ್ಕೊಂಡಾಗಲೆಲ್ಲ ಏನಾದರೂ ಪರಿಹಾರ ಹೇಳ್ತಿದ್ದೆ.. ಕಮಾನ್, ಏನು ಮಾಡಲಿ ನಾನೀಗ?”&lt;br /&gt;&lt;br /&gt;ಒಂದು ಕೈಯಲ್ಲಿ ಕೊನೆಯ ಅರ್ಧ ಗ್ಲಾಸು ಬಿಯರು, ಇನ್ನೊಂದು ಕೈಯಲ್ಲಿ ಈಗಷ್ಟೆ ಸರ್ವರ್ ಬಡಿಸಿ ಹೋಗಿದ್ದ ಜೀರಾ ರೈಸ್ ತುಂಬಿದ್ದ ಚಮಚ ಹಿಡಿದು ನನ್ನೆದುರು ಮ್ಲಾನವಾಗಿ ಕೂತಿದ್ದ ಓಂಪ್ರಕಾಶನ ಮುಖವನ್ನೇ ನೋಡಿದೆ. ಮೂರು ವರ್ಷದ ಹಿಂದೆ ಒಂದು ಫೈಲ್ ಹಿಡಿದು ಇಂಟರ್‌ವ್ಯೂಗೆಂದು ನಮ್ಮ ಆಫೀಸಿಗೆ ಬಂದಿದ್ದ ಓಂಪಿ, ಕೆಲಸದ ಮೊದಲ ದಿನ ಕೈಕುಲುಕಿ ಪರಿಚಯ ಮಾಡಿಕೊಂಡಿದ್ದ ಓಂಪಿ, ಊಟಕ್ಕೆ ದುಡ್ಡು ಜಾಸ್ತಿಯೆಂದು ರೈಸ್‌ಬಾತ್ ತಿನ್ನುತ್ತಿದ್ದ ಓಂಪಿ, ಕೈಕೊಟ್ಟ ಹುಡುಗಿಯ ಕತೆ ಹೇಳುತ್ತ ಕಣ್ತುಂಬಿಸಿಕೊಂಡಿದ್ದ ಓಂಪಿ, ದೊಡ್ಡ ಸಂಬಳದ ಕೆಲಸ ಸಿಕ್ಕಾಗ ಖುಶಿಯಿಂದ ನನ್ನನ್ನು ತಬ್ಬಿಕೊಂಡಿದ್ದ ಓಂಪಿ -ಈಗ ಹಣವಂತ, ಸಕಲ ಸೌಕರ್ಯಗಳನ್ನೂ ಹೊಂದಿರುವ ಮನೆಯಲ್ಲಿ ವಾಸಿಸುತ್ತಿರುವವ, ಕಾರಿನಲ್ಲಿ ಜಮ್ಮಂತ ಓಡಾಡುವವ, ಐಷಾರಾಮಿ ಪಬ್ಬುಗಳಲ್ಲಿ ವೀಕೆಂಡುಗಳನ್ನು ಹರವಿಕೊಂಡವ... ಕೊನೆಗೂ ಹಂಬಲಿಸುತ್ತಿರುವುದು ಹಿಡಿ ಪ್ರೀತಿಗಾಗಿಯೇ? ಡಿವಿಜಿಯವರ ಮಂಕುತಿಮ್ಮನ ಕಗ್ಗ ನೆನಪಾಯಿತು.. ಏನ ಹೇಳಲಿ ಇವನಿಗೆ..? ‘ಪ್ರೀತಿ-ಪ್ರೇಮಗಳಲ್ಲಿ ನಂಬಿಕೆಯೇ ಹೋಗಿಬಿಟ್ಟಿದೆ’ ಅಂತ ಕೇವಲ ಅರ್ಧ ಗಂಟೆ ಮುಂಚೆ ಹೇಳಿದ್ದ ನಾನು ಈಗ ಹೇಗೆ ಇವನಿಗೆ ಸಮಾಧಾನ ಮಾಡಲಿ? ಕೊನೆಗೂ ಜಗತ್ತಿನ ಕಟ್ಟಕಡೆಯ ಜೀವಿಯ ಹೃದಯವೂ ತುಡಿಯುವುದು ಪ್ರೀತಿಸಖ್ಯವೊಂದರ ಸಾಂಗತ್ಯಕ್ಕಾಗಿಯೇ?&lt;br /&gt;&lt;br /&gt;“ಎಕ್ಸ್‌ಕ್ಯೂಸ್ ಮಿ..” ಸಕಾಲಕ್ಕೆಂಬಂತೆ ಬಂದ ಯಾವುದೋ ಮೊಬೈಲ್ ಕಾಲ್ ಅಟೆಂಡ್ ಮಾಡಲೆಂದು ಓಂಪಿ ಎದ್ದು ರೆಸ್ಟ್‌ರೂಮ್ ಕಡೆ ನಡೆದ. ನಾನು ನೀಳ ನಿಟ್ಟುಸಿರು ಬಿಟ್ಟೆ. ಗ್ಲಾಸುಗಳು ಮುಗಿದಿದ್ದವು. ಕ್ಲೀನರ್ ಬಂದು ಖಾಲಿ ಬಾಟಲುಗಳನ್ನು ಎತ್ತಿಕೊಂಡು ಹೋದ. ಟೇಬಲ್ಲಿನ ತುಂಬ ಇದ್ದ ಗೋಬಿ ಮಂಚೂರಿ, ಚಿಕನ್ ಟಿಕ್ಕ, ಜೀರಾ ರೈಸ್, ಆಲೂ ಚಿಪ್ಸ್‌ಗಳ ಸಶೇಷಗಳ ಪ್ಲೇಟುಗಳು, ನೀರಿನ ಗ್ಲಾಸುಗಳು, ತಳದಲ್ಲಿ ಚೂರೇ ಉಳಿದಿದ್ದ ಬಿಯರಿನ ಗ್ಲಾಸುಗಳು, ಪುಟ್ಟ ಆಶ್ ಟ್ರೇ, ನಿಂಬೆಹಣ್ಣಿನ ಚೂರು ತೇಲುತ್ತಿದ್ದ ಫಿಂಗರ್‌ಬೌಲ್, ಈಗಷ್ಟೆ ತಂದಿಟ್ಟುಹೋಗಿದ್ದ ಬಿಲ್ ಕೆಳಗಿನ ಬಡೇಸೋಪಿನ ಬಟ್ಟಲು.. ಎಲ್ಲವುಗಳಲ್ಲಿ ಓಂಪಿ ಕೇಳಿದ ಪ್ರಶ್ನೆಗಳಿದ್ದವು. ಇವನ್ನೆಲ್ಲ ಇಲ್ಲೇ ಬಿಟ್ಟುಹೋಗಿಬಿಡಬಹುದು; ಆದರೆ ಪ್ರಶ್ನೆಗಳು? ಅಕ್ಕ-ಪಕ್ಕ-ಹಿಂದೆ-ಮುಂದಿನ ಟೇಬಲ್ಲುಗಳಲ್ಲಿ ಈಗ ಬೇರೆ ಬೇರೆ ಗುಂಪುಗಳು-ಜೋಡಿಗಳು ಕೂತು ಅವರವರದೇ ಲೋಕಗಳಲ್ಲಿ ಅವರವರದೇ ಸತ್ಯ-ಸುಳ್ಳುಗಳ ವಿನಿಮಯದಲ್ಲಿ ಮುಳುಗಿದ್ದರು. ಕೈ ಬೀಸಿ ನಡೆದ ಅಮೃತಾ, ಬುದ್ಧಿ ಹೇಳಿ ಹೋದ ಜ್ಯೋತಿ, ಪ್ರೀತಿಸು ಎನ್ನುತ್ತಿರುವ ವಿನಿಷಾ.. ಇವರೆಲ್ಲ ಏನು ಮಾಡುತ್ತಿರಬಹುದು ಇವತ್ತಿನ ಈ ಕ್ಷಣದಲ್ಲಿ?&lt;br /&gt;&lt;br /&gt;“ಅಮ್ಮ ಫೋನ್ ಮಾಡಿದ್ದಳು.. ನೋಡದೆ ತಿಂಗಳಾಯ್ತು, ಊರಿಗೆ ಬಾ ಅಂತಿದಾಳೆ. ಇವತ್ತು ಸಂಜೆ ಬೇರೆ ವಿನಿಷಾಗೆ ಸಿಗಬೇಕು. ರಾತ್ರಿ ಬಸ್ಸಿಗೆ ಹೋಗಿಬಿಡಲಾ ಅಂತ ನೋಡ್ತಿದ್ದೇನೆ ಮಂಗಳೂರಿಗೆ.. ಈಗ ವಿನಿಷಾ-ಗಿನಿಷಾ ಅಂತ ಸುದ್ದಿ ಎತ್ತಿದ್ರೆ ಸಾಕು, ಹಾಂ, ಅವ್ಳುನ್ನೇ ಮದುವೆ ಮಾಡ್ಕೋ ಅಂತಾಳೆ! ಏಯ್, ಏನೋ ಯೋಚಿಸ್ತಾ ಕೂತಿದೀಯಾ? ನೀನು ತಲೆ ಕೆಡಿಸಿಕೋಬೇಡವೋ, ನಂಗೊತ್ತು, ನನ್ನ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರ ಇಲ್ಲ ಅಂತ. ಏನು ಹ್ಯಾಗೆ ಬರುತ್ತೋ ಹಾಗೆ ಸ್ವೀಕರಿಸೋದು. ಆ ಕ್ಷಣಕ್ಕೆ ಏನು ಅನ್ನಿಸುತ್ತೋ ಹಾಗೆ ಮಾಡೋದು. ಕಮಾನ್, ಲೆಟ್ಸ್ ಗೆಟ್ ಔಟ್ ಆಫ್ ಹಿಯರ್..” ಅಂತಂದು, ವೇಯ್ಟರಿಗೆ ಬಿಲ್ ಹಣ-ಟಿಪ್ಸು ಕೊಟ್ಟು, ನನ್ನ ಹೆಗಲ ಮೇಲೆ ಕೈ ಹಾಕಿ ಎಳೆದುಕೊಂಡು, ಕೋಸ್ಟಲ್ ಎಕ್ಸ್‌ಪ್ರೆಸ್ ರೆಸ್ಟುರೆಂಟಿನ ಮೆಟ್ಟಿಲುಗಳನ್ನು ಇಳಿಸತೊಡಗಿದ ಓಂಪಿ. ಓಂಪ್ರಕಾಶನನ್ನು ಈ ಭುವಿಗೆ - ಸಾಮಾನ್ಯ ಸ್ಥಿತಿಗೆ ತರಬಲ್ಲ ಏಕೈಕ ವ್ಯಕ್ತಿಯಾಗಿ ಅಲ್ಲೆಲ್ಲೋ ಇರುವ ಅವನ ಅಮ್ಮ ಕಂಡಳು ನನಗೆ.&lt;br /&gt;&lt;br /&gt;“ಕಾರು ಎಲ್ಲಿ ಪಾರ್ಕ್ ಮಾಡಿದೀಯಾ?” ಕೇಳಿದೆ.&amp;nbsp; &lt;br /&gt;&lt;br /&gt;“ಕಾರ್ ತರ್ಲಿಲ್ಲ. ಈ ಟ್ರಾಫಿಕ್ಕಲ್ಲಿ ಯಾರು ಡ್ರೈವ್ ಮಾಡ್ತಾರೆ ಮಾರಾಯಾ.. ಅಲ್ಲದೇ ಇವತ್ಯಾಕೋ ಹಿಂದಿನ ಥರ ಬಸ್ಸಲ್ಲಿ ಓಡಾಡೋಣ ಅನ್ನಿಸ್ತು, ಅದಕ್ಕೇ ಮಿಲ್ಲರ್ಸ್ ರೋಡ್‌ವರೆಗೆ ಬಸ್ಸಲ್ಲಿ ಬಂದು, ಅಲ್ಲಿಂದ ವಾಕ್ ಮಾಡ್ಕೊಂಡು ಬಂದೆ. ಕಾರಿನಲ್ಲಿ ಗ್ಲಾಸುಗಳನ್ನೆಲ್ಲ ಏರಿಸಿ ಕೂತಿದ್ದರೆ ನಾನು ತೀರ ಒಂಟಿ ಅನ್ನಿಸಲಿಕ್ಕೆ ಶುರು ಆಗುತ್ತೆ. ಆದರೆ ಇಲ್ಲಿ ರಸ್ತೆಯಲ್ಲಿ ನೂರಾರು ಜನರ ಮಧ್ಯೆ ನಡೀತಿದ್ರೆ ನಾನೂ ಎಲ್ಲರ ಹಾಗೆ ಅನ್ನೋ ಥರದ ಫೀಲು.. ಕಳೆದುಹೋಗಲಿಕ್ಕೊಂದು ಅವಕಾಶವೂ ಸಿಗತ್ತೆ ನೋಡು..!” ಅಂದು ಪೇಲವವಾಗಿ ನಕ್ಕ. &lt;br /&gt;&lt;br /&gt;ಮನದುಂಬಿ ಬಂದಂತಾಗಿ ಓಂಪಿಯನ್ನು ತಬ್ಬಿಕೊಂಡೆ. “ತುಂಬಾ ಖುಶಿಯಾಯ್ತು, ಇಷ್ಟು ಕಾಲದ ನಂತರ ನಿನ್ನನ್ನ ಮೀಟ್ ಮಾಡಿ.. ಥ್ಯಾಂಕ್ಸ್, ಬಂದಿದ್ದಕ್ಕೆ..” ಅಂದವನು, “ಹೇ, ನೋಡು, ನೀನು ನನ್ನ ಮೇಲೆ ಕತೆ ಬರೆದರೆ ಅದಕ್ಕೊಂದು ಹ್ಯಾಪಿ ಎಂಡಿಂಗ್ ಕೊಡು. ಬೇಕಿದ್ರೆ ವಿನಿಷಾಳನ್ನೇ ಮದುವೆ ಆಗಿ ಆಮೇಲೆ ಸುಖವಾಗಿದ್ದ ಅಂತ ಬರೆ.&amp;nbsp; ಐ ಲೈಕ್ ಸ್ಟೋರೀಸ್ ವಿತ್ ಹ್ಯಾಪಿ ಎಂಡಿಂಗ್!” ಅಂತಂದು ಕಣ್ಣು ಹೊಡೆದ. ಮತ್ತೊಮ್ಮೆ ಕೈ ಕುಲುಕಿದವನು, ಹಿಂದೆ ಸರಿದು ವೇವ್ ಮಾಡಿ, ಸೀದಾ ಫುಟ್‌ಪಾತ್‌ಗುಂಟ ಬಿರಬಿರನೆ ನಡೆಯತೊಡಗಿದ. ನೋಡನೋಡುತ್ತಿದ್ದಂತೆಯೇ ಕನ್ನಿಂಗ್‌ಹ್ಯಾಂ ರಸ್ತೆಯ ಜನಜಂಗುಳಿಯ ನಡುವೆ ಕರಗಿಹೋದ.&lt;br /&gt;&lt;br /&gt;&lt;i style="background-color: white; color: #660000;"&gt;[2010ರ 'ಅಕ್ಕ' ಕಥಾಸ್ಪರ್ಧೆಯಲ್ಲಿ ಆಯ್ಕೆಯಾಗಿ 'ದೀಪ ತೋರಿದೆಡೆಗೆ' ಸಂಕಲನದಲ್ಲಿ ಸೇರಿಕೊಂಡಿರುವ ನನ್ನ ಕತೆ.]&lt;/i&gt;&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-24383498544488238?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/24383498544488238/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=24383498544488238' title='15 Comments'/><link rel='edit' type='application/atom+xml' href='http://www.blogger.com/feeds/27009232/posts/default/24383498544488238'/><link rel='self' type='application/atom+xml' href='http://www.blogger.com/feeds/27009232/posts/default/24383498544488238'/><link rel='alternate' type='text/html' href='http://hisushrutha.blogspot.com/2010/12/blog-post.html' title='ಕಾರಿರುಳೊಳಾಗಸದಿ ತಾರೆ ನೂರಿದ್ದೇನು..'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>15</thr:total></entry><entry><id>tag:blogger.com,1999:blog-27009232.post-6970209064244946315</id><published>2010-11-16T11:25:00.000+05:30</published><updated>2010-11-16T11:25:48.519+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><title type='text'>ಕನಸ ಬೇಯಿಸಲು..</title><content type='html'>ತಳ್ಳುಗಾಡಿಯ ಮೇಲೊಂದು ಸಿಲಾವರದ ಪಾತ್ರೆ-&lt;br /&gt;ಬೇಯಿಸುತ್ತಿದ್ದಾನೆ ಲುಂಗಿಯುಟ್ಟವ ಬಿಸಿನೀರಲ್ಲಿ&lt;br /&gt;ರಾಶಿ ರಾಶಿ ಕಡಲೇಕಾಯಿ ಹಬೆ ಹಬೆ&lt;br /&gt;ಉದ್ದ ಹಿಡಿದರೆ ಎಂಟು; ಜೋತಾಡಿಸಿದರೆ ಗಂಟು&lt;br /&gt;ಒಡೆದರೆ ಎರಡು ಪುಟ್ಟ ಶಿಶುಗಳು ಗರ್ಭದಲ್ಲಿ&lt;br /&gt;ಕೆಲವೊಮ್ಮೆ, ಅದೃಷ್ಟ ಜೋರಿದ್ದರೆ, ಮೂರು.&lt;br /&gt;&lt;br /&gt;ಒಂದು ದಿನ, ಯಾರೋ ಹತ್ತಿರ ಬಂದು &lt;br /&gt;ಕೂತುಬಿಡುತ್ತಾರೆ. ಕೈ ಹಿಡಿದು ಕತೆ ಹೇಳುತ್ತಾರೆ.&lt;br /&gt;ಅಪ್ಪ-ಅಮ್ಮ ತುಂಬಾ ಒಳ್ಳೆಯವರು. &lt;br /&gt;ದೊಡ್ಡಪ್ಪ ಚಿಕ್ಕವನಿದ್ದಾಗಲೇ ಮನೆಯಿಂದ ಓಡಿಹೋಗಿದ್ದಂತೆ.&lt;br /&gt;ಅತ್ತೆ ಇದ್ದಾಳಲ್ಲ -ಅದೇ, ಅಪ್ಪನ ತಂಗಿ-&lt;br /&gt;ಅವಳಿಗೆ ಕಿವಿ ಸ್ವಲ್ಪ ಮಂದ &lt;br /&gt;ಆದರೆ ಸನ್ನೆಯಲ್ಲೇ ಎಲ್ಲಾ ಅರ್ಥ ಮಾಡಿಕೊಳ್ಳುತಾಳೆ&lt;br /&gt;ಮಾವನಿಗೆ ಅವಳ ಮೇಲೆ ಯಾವಾಗಲೂ ಸಿಡುಕು&lt;br /&gt;ಗೊತ್ತಾ? ನನ್ನ ತಂಗಿಗೆ ಗಾಜಿನ ಹೂಜಿಯಲ್ಲಿ &lt;br /&gt;ಮೀನು ಸಾಕಬೇಕು ಅಂತ ಆಸೆಯಿತ್ತು&lt;br /&gt;&lt;br /&gt;ಇಳಿದು ನೋಡಿದರೆ ಕಣ್ಣಾಳ, ಅದೆಷ್ಟೊಂದು ಕತೆಗಳು &lt;br /&gt;ನಿನ್ನಲ್ಲಿ.. ಇಡಲಾಗದೇ ಈ ಪುರಾಣ, ಇತಿಹಾಸ, ಭೂತ-&lt;br /&gt;ವನ್ನೆಲ್ಲ ಕಟ್ಟಿ ಆಚೆ? ಅಳಿಸಿ ಉಳಿದೆಲ್ಲ ಚಿತ್ರ,&lt;br /&gt;ಬಿಡಲಾಗದೆ ಬರೀ ನಾವಿಬ್ಬರ ಮೌನಭಿತ್ತಿಯಲ್ಲಿ?&lt;br /&gt;&lt;br /&gt;ಕಾಯುತ್ತಿದ್ದಾನೆ ತಳ್ಳುಗಾಡಿಯಲ್ಲಿ ಕಡಲೆಕಾಯಿಯವ.. &lt;br /&gt;ಒಂದಷ್ಟು ಬೇಯಿಸದ ಕಾಯಿಗಳೂ ಇವೆಯಂತೆ ಅವನ ಬಳಿ&lt;br /&gt;ಕೇಳಿದರೆ, ಪುಟ್ಟ ಪೊಟ್ಟಣದಲ್ಲಿ ಕಟ್ಟಿಕೊಟ್ಟಾನು&lt;br /&gt;ಬಿಡಾರದಲ್ಲಿ ಒಲೆಯಿದೆ; ಸೂರಂಚಿಂದ ಸುರಿವ ಮಳೆಯಿದೆ&lt;br /&gt;ಹೊಸನೀರಿನಲ್ಲಿ ಬೇಯಿಸೋಣ ಕನಸುಗಳನ್ನು.&lt;br /&gt;ಹಾರೈಸೋಣ ಸಾಕು- ಒಡಲ ಹೂರಣ ಕಹಿಯಿರದಿರಲೆಂದು.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-6970209064244946315?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/6970209064244946315/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=6970209064244946315' title='9 Comments'/><link rel='edit' type='application/atom+xml' href='http://www.blogger.com/feeds/27009232/posts/default/6970209064244946315'/><link rel='self' type='application/atom+xml' href='http://www.blogger.com/feeds/27009232/posts/default/6970209064244946315'/><link rel='alternate' type='text/html' href='http://hisushrutha.blogspot.com/2010/11/blog-post_16.html' title='ಕನಸ ಬೇಯಿಸಲು..'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>9</thr:total></entry><entry><id>tag:blogger.com,1999:blog-27009232.post-447750618978493348</id><published>2010-11-11T17:35:00.001+05:30</published><updated>2010-11-11T17:36:38.064+05:30</updated><category scheme='http://www.blogger.com/atom/ns#' term='ಕನ್ನಡ ಸಾಹಿತ್ಯ ಸಮ್ಮೇಳನ'/><category scheme='http://www.blogger.com/atom/ns#' term='ಪ್ರಣತಿ'/><category scheme='http://www.blogger.com/atom/ns#' term='ಪ್ರೊ. ಜಿ. ವೆಂಕಟಸುಬ್ಬಯ್ಯ'/><title type='text'>ಪ್ರೊ. ಜಿ.ವಿ. -ಎರಡು ಮಾತು</title><content type='html'>ಪ್ರಣತಿಯ ಉದ್ಘಾಟನೆ ಮತ್ತು ಚಿತ್ರಚಾಪ ಬಿಡುಗಡೆ: ಹೊಸ ಸಂಸ್ಥೆ, ಮೊದಲ ಪುಸ್ತಕ ಎಂದಾಗ ಎಲ್ಲರಿಗಿರುವ ಭಯವೇ ನಮಗೂ ಇತ್ತು. ನಾವೇನೋ ಹುಮ್ಮಸ್ಸಿನಲ್ಲಿ ಬರಹ, ಕರೆಕ್ಷನ್ಸು, ಕವರ್ ಪೇಜು, ಒಳಪುಟಗಳಿಗೆ ರೇಖಾಚಿತ್ರಗಳು, ಮುದ್ರಣ, ಇನ್ವಿಟೇಶನ್ನು ಅಂತೆಲ್ಲ ತಯಾರಿ ನಡೆಸಿದ್ದೆವು. ಆದರೆ ಪುಸ್ತಕ ಬಿಡುಗಡೆಗೆ ಯಾರನ್ನು ಕರೆಸುವುದು ಎನ್ನುವ ಗೊಂದಲ ಮಾತ್ರ ದೊಡ್ಡದಾಗಿ ಕಾಡ್ತಿತ್ತು. ಹೇಳಿಕೇಳಿ ನಾವೆಲ್ಲ ಬ್ಲಾಗಿಗಳು. ಅಲ್ಲದೆ ಇನ್ನೂ ಹುಡುಗರು. ಎಲ್ಲೋ ಆಗೀಗ ನಮ್ಮ ಲೇಖನಗಳು-ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿರಬಹುದು ಅಷ್ಟೇ. ಉಳಿದಂತೆ ಹೊರಜಗತ್ತಿಗೆ ನಾವು ಯಾರು ಅಂತಲೇ ಗೊತ್ತಿಲ್ಲ. ಹಾಗಿದ್ದಾಗ, ಈಗ ಇದ್ದಕ್ಕಿದ್ದಂತೆ ಪುಸ್ತಕ ಮಾಡಿದೀವಿ, ಬನ್ನಿ, ಬಿಡುಗಡೆ ಮಾಡಿ ಅಂತ ಕರೆಯೋದಾದರೂ ಹೇಗೆ? ನಮ್ಮ ಪರಿಚಯ ಮಾಡಿಕೊಳ್ಳೋದು ಹೇಗೆ? -ಅಂತೆಲ್ಲ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದೆವು. &lt;br /&gt;&lt;br /&gt;ವಸುಧೇಂದ್ರ, ‘ಹಾಗೆಲ್ಲ ಏನೂ ಇಲ್ಲ ಕಣೋ. ಪುಸ್ತಕ ಬಿಡುಗಡೆ ಅಂದ್ರೆ ಯಾರನ್ನ ಕರೆದ್ರೂ ಬರ್ತಾರೆ. ಬೇಕಿದ್ರೆ ಅನಂತಮೂರ್ತಿಗಳನ್ನ ಕರೀರಿ, ಹೊಸ ಹುಡುಗರ ಬೆನ್ನು ತಟ್ಟಲಿಕ್ಕೆ ಅಂತ ಬರ್ತಾರೆ. ಏನೂ ಮುಜುಗರ ಪಟ್ಕೋಬೇಡಿ. ಅರಾಮಾಗಿ ಹೋಗಿ ಕೇಳಿ’ ಅಂತ ಧೈರ್ಯ ತುಂಬಿದ್ರು. ಆದ್ರೂ ನಮಗೆ ಒಳಗೊಳಗೆ ಪುಕುಪುಕು. &lt;br /&gt;&lt;br /&gt;ಕೊನೆಗೆ ಅರುಣ, ಪ್ರೊ. ಜಿ. ವೆಂಕಟಸುಬ್ಬಯ್ಯನವರ ಹೆಸರನ್ನ ಸೂಚಿಸಿದ. ‘ಅವರು ತನ್ನ ತಾಯಿಗೆ ಪರಿಚಯ. ಆ ಮೂಲಕ ಪರಿಚಯ ಮಾಡ್ಕೋಬಹುದು ನಮ್ಮನ್ನ. ಏನಾದ್ರಾಗ್ಲಿ, ಹೋಗಿ ಕೇಳೋದು ಕೇಳೋಣ’ ಅಂತ. ಆದ್ರೆ ಜಿ.ವಿ. ಹೆಸರು ಕೇಳಿ ನಮಗೆ ಭಯ ಇನ್ನೂ ಜಾಸ್ತಿ ಆಯ್ತು! ಜಿ.ವಿ. ಅಂದ್ರೆ ನಿಘಂಟು ತಜ್ಞ. ನಾವು ಬರೆದಿರೋದರಲ್ಲಿ ಏನಾದ್ರೂ ತಪ್ಪುಗಳಿದ್ರೆ ಅಲ್ಲೇ ಓದಿ ಸರಿಯಾಗಿ ಬೈದು, ‘ಇಂತಾ ಪುಸ್ತಕ ಮಾಡ್ಲಿಕ್ಕೆ ನಾಚ್ಕೆ ಆಗಲ್ವಾ?’ ಅಂತಂದು ಕಳುಹಿಸಿಬಿಟ್ರೆ? ಆದರೆ ನಮಗೆ ಗತ್ಯಂತರವಿರಲಿಲ್ಲ. ಲೈಮ್‌ಲೈಟಿನಲ್ಲಿರೋ, ಯುವ ಸಾಹಿತಿಗಳನ್ನ ಕೇಳಿ ಇಲ್ಲಾ ಅನ್ನಿಸಿಕೊಳ್ಳೋದಕ್ಕಿಂತ ಇದು ವಾಸಿ ಎನ್ನಿಸಿ, ಜಿ.ವಿ.ಯವರನ್ನೇ ಕರೀಲಿಕ್ಕೆ ಮನಸು ಮಾಡಿದೆವು.&lt;br /&gt;&lt;br /&gt;ಮೊದಲು ಅರುಣ ಮತ್ತೆ ವಿಜಯಾ ಜಿ.ವಿ.ಯವರ ಮನೆಗೆ ಫೋನ್ ಮಾಡಿ ಪರಿಚಯ ಹೇಳಿಕೊಂಡು ಒಂದು ದಿನ ಹೋಗಿ ಪುಸ್ತಕದ ಹಸ್ತಪ್ರತಿ ಕೊಟ್ಟುಬಂದ್ರು. “ಏನ್ ಹೇಳಿದ್ರೂರಿ ಜೀವಿ?” ಅಂತ ನಾವೆಲ್ಲ ಒಕ್ಕೊರೊಲಿನಿಂದ ಕೇಳಿದೆವು. “ಏನೂ ಹೇಳ್ಲಿಲ್ಲ ಇನ್ನೂ. ಏನ್ ಮಾಡ್ತಿದೀರಾ ನೀವೆಲ್ಲ ಅಂತ ಕೇಳಿದ್ರು. ಯಾವಾಗಿಂದ ಬರೀತಿದೀರಾ, ಏನು ಓದ್ತೀರಾ, ಯಾರು ನಿಮ್ಮ ಇಷ್ಟದ ಸಾಹಿತಿ ಅಂತೆಲ್ಲ ಕೇಳಿದ್ರು. ನಂಗೆ ಮೊದಲೇ ಟೆನ್ಷನ್ನು, ಅಡಿಗರನ್ನ ಓದ್ತಿರ್ತೀನಿ ಅಂತ ಹೇಳಿದೆ. ಅಡಿಗರ ಕಾವ್ಯದಲ್ಲಿ ಏನು ಇಷ್ಟ ಅಂತ ಕೇಳಿದ್ರು. ಅಯ್ಯೋ, ಅದೆಲ್ಲ ನಂಗೇನ್ ಗೊತ್ತು? ಇಷ್ಟ ಆಗಿದ್ದೆಲ್ಲ ಓದೋವ್ನು ನಾನು! ಏನೋ, ತೋಚಿದ್ದು ಹೇಳಿದೆ ಬೆವರ್ತಾ.. ಆಮೇಲೆ ಅವರೇ ಅಡಿಗರ ಕಾವ್ಯದ ಬಗ್ಗೆ ಸುಮಾರು ಹೊತ್ತು ಮಾತಾಡಿದ್ರು. ನಿಮ್ಮಂತ ಹುಡುಗರು ಓದ್ತಿರೋದು, ಬರೀತಿರೋದು ಖುಶಿ ವಿಷಯ ಅಂತ ಹೇಳಿದ್ರು” ಅಂತ ಹೇಳಿದ ಅರುಣ. “ಹಾಗಾದ್ರೆ ಬರ್ತಾರಂತಾ ಪ್ರೋಗ್ರಾಮಿಗೆ?” ಕೇಳಿದ್ವು. “ಹೂನಪ್ಪಾ. ಖುಶಿಯಿಂದ ಒಪ್ಪಿಕೊಂಡ್ರು” ಅಂತ ಅರುಣ ಹೇಳಿದಾಗ ನಮಗೆಲ್ಲ ನಿರಾಳ. &lt;br /&gt;&lt;br /&gt;ಆಮೇಲೊಂದು ದಿನ, ಕಾರ್ಯಕ್ರಮಕ್ಕೆ ಒಂದು ವಾರ ಮುಂಚೆ, ನಾವು ಚಿತ್ರಚಾಪದಲ್ಲಿ ಬರೆದಿದ್ದ ಐದೂ ಗೆಳೆಯರು ವಿಜಯಾ ಜೊತೆ ಜಿ.ವಿ. ಮನೆಗೆ ಹೋದ್ವು. ಎಲ್ಲರಿಗೂ ಭಯ. ಈಗಾಗ್ಲೇ ಜಿ.ವಿ. ನಮ್ಮ ಹಸ್ತಪ್ರತಿ ಓದಿರ್ತಾರೆ. ಏನು ಹೇಳ್ತಾರೋ ಏನೋ ಅಂತ. ಪುಟ್ಟ ಮನೆಯ ಕದ ತೆರೆದ ಬಿಳಿ ವಸ್ತ್ರಧಾರಿ ನಮ್ಮೆಲ್ಲರಿಗಿಂತ ಕುಳ್ಳಗಿದ್ದರು. ಆಹ್ವಾನ ಪತ್ರಿಕೆ ಕೊಟ್ವಿ. “ಪ್ರಣತಿ -ಹೆಸರು ಯಾರು ಇಟ್ಟಿದ್ದು?” ಕೇಳಿದ್ರು ಜಿ.ವಿ. ಇದ್ದುದರಲ್ಲೇ ನಮ್ಮಲ್ಲಿ ವಿಜಯಾ ಧೈರವಂತೆ! ಮಾತಾಡಿದ್ಲು. ಆಮೇಲೆ ಜಿ.ವಿ. ನಮ್ಮೆಲ್ಲರ ಬಗ್ಗೆ ವಿಚಾರಿಸಿದ್ರು. “ಚನಾಗಿದೆ. ಓದಿದೆ ಎಲ್ಲಾನೂ. ಚಿತ್ರಚಾಪ ಅನ್ನೋ ಹೆಸರೂ ಅರ್ಥಪೂರ್ಣವಾಗಿದೆ....” ಅಂತೆಲ್ಲ ಸುಮಾರು ಹೊತ್ತು ಮಾತಾಡಿದ್ರು. ನಮಗೆ ಸ್ವಲ್ಪ ಧೈರ್ಯ ಬಂತು. “ಕಾರ್ಯಕ್ರಮದ ದಿನ ನಮಗೆ ಒಂದಷ್ಟು ಸಲಹೆಗಳನ್ನೂ ಕೊಡಿ ಸರ್.. ನಮ್ಮ ಹಾಗೇ ಸುಮಾರು ಹೊಸ ಬರಹಗಾರರು ಬಂದಿರ್ತಾರೆ ಅಲ್ಲಿ” ಅಂತ ಕೇಳಿಕೊಂಡ್ವು. “ಖಂಡಿತ ಖಂಡಿತ.. ಆದ್ರೆ.. ಕಾರ್ಯಕ್ರಮದ ದಿನ ಏನಾದ್ರೂ ವಾಹನಕ್ಕೆ ವ್ಯವಸ್ಥೆ ಮಾಡ್ಲಿಕ್ಕೆ ಆಗತ್ತಾ? ಕಾಲು ನೋವು. ಅದಿಲ್ಲಾಂದ್ರೆ ನೆಡ್ಕೊಂಡೇ ಬರ್ತಿದ್ದೆ..!” ಅಂತ ಅದೆಷ್ಟು ಸಣ್ಣ ದನಿಯಲ್ಲಿ ಕೇಳಿದ್ರು ಅಂದ್ರೆ, “ಅಯ್ಯೋ ಖಂಡಿತ ಸರ್.. ಕಾರ್ ಕಳುಹಿಸ್ತೀವಿ” ಅಂತ ಎಲ್ಲರೂ ಒಟ್ಟಿಗೇ ಹೇಳಿದೆವು ನಾವು.&lt;br /&gt;&lt;br /&gt;ಜಿ.ವಿ. ಕಾರ್ಯಕ್ರಮದ ದಿನ ಹೇಳಿದ ಸಮಯಕ್ಕೆ ಬಂದರು. ಪ್ರಣತಿಯನ್ನ ಉದ್ಘಾಟಿಸಿದರು, ಚಿತ್ರಚಾಪವನ್ನ ಬಿಡುಗಡೆ ಮಾಡಿದ್ರು. ನಂತರ ನಮ್ಮೈವರ ಬರಹಗಳ ಬಗ್ಗೆಯೂ ವಿವರವಾಗಿ ಮಾತಾಡಿದ್ರು. ಕನ್ನಡದ ಬಗ್ಗೆ, ಸಾಹಿತ್ಯದ ಬಗ್ಗೆ, ನಗರದ ಜನಗಳ ಭಾಷೆಯ ಬಗ್ಗೆ ಅವರಾಡಿದ ಮೌಲಿಕ ನುಡಿಗಳಿಗೆ ಪ್ರೇಕ್ಷಕರೆಲ್ಲ ತಲೆದೂಗಿದರು. “ಇಲ್ಲಿಯ ಬರಹಗಳನ್ನ ನಾನು ಒಂದಲ್ಲ, ಎರಡು ಸಲ ಓದಿದೆ. ಇವರೆಲ್ಲರಿಗೂ ಉತ್ತಮ ಭವಿಷ್ಯವಿದೆ” ಎಂದಾಗಲಂತೂ ನಮಗಾದ ಸಂತೋಷ ಅಷ್ಟಿಷ್ಟಲ್ಲ. ವಯಸ್ಸು ನೂರಕ್ಕೆ ಸಮೀಪಿಸುತ್ತಿರುವ ಹಿರಿಯರೊಬ್ಬರ ಈ ಹಾರೈಕೆಗಿಂತ ನಮಗಾದರೂ ಇನ್ನೇನು ಬೇಕಿತ್ತು? ಜಿ.ವಿ. ನಮಗೆಲ್ಲ ಹಸ್ತಾಕ್ಷರ ಕೊಟ್ಟರು, ನಾವು ಫೋಟೋ ಬೇಕೆಂದಲ್ಲೆಲ್ಲ ನಿಂತು ಸಹಕರಿಸಿದರು, ಪುಸ್ತಕ ಬಿಡುಗಡೆಯ ನಂತರವಿದ್ದ ಸಂಗೀತ ಕಾರ್ಯಕ್ರಮ ಮುಗಿಯುವವರೆಗೂ ಕೂತಿದ್ದರು. &lt;br /&gt;&lt;br /&gt;&lt;table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"&gt;&lt;tbody&gt;&lt;tr&gt;&lt;td style="text-align: center;"&gt;&lt;a bitly="BITLY_PROCESSED" href="http://2.bp.blogspot.com/_c2gCy0eVwAM/TNvbOsR4EII/AAAAAAAAH9M/eWycOKdpRmI/s1600/IMG+010.jpg" style="margin-left: auto; margin-right: auto;"&gt;&lt;img border="0" height="240" src="http://2.bp.blogspot.com/_c2gCy0eVwAM/TNvbOsR4EII/AAAAAAAAH9M/eWycOKdpRmI/s320/IMG+010.jpg" width="320" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;ಚಿತ್ರಚಾಪ ಬಿಡುಗಡೆ ಸಂದರ್ಭದಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯ&lt;/td&gt;&lt;/tr&gt;&lt;/tbody&gt;&lt;/table&gt;ನಂತರವೂ ಅಷ್ಟೇ. ನಮ್ಮ ಕಾರ್ಯಕ್ರಮಗಳಿಗೆ ಅವರನ್ನು ಕರೆಯಲು ಹೋದಾಗಲೆಲ್ಲ ಆತ್ಮೀಯವಾಗಿ ಸ್ವಾಗತಿಸುವರು, ಯಾವುದೇ ಹಮ್ಮು-ಬಿಮ್ಮು ತೋರಿಸದೆ ನಮ್ಮೊಂದಿಗೆ ಮಾತಾಡುವರು. ನಾವು ಕೇಳುವ ಕನ್ನಡದ ಕುರಿತಾದ, ವ್ಯಾಕರಣದ ಕುರಿತಾದ, ಶಬ್ದಪ್ರಯೋಗದ ಕುರಿತಾದ ಪ್ರಶ್ನೆಗಳಿಗೆ ತಕ್ಷಣ ಉತ್ತರಿಸುವರು. &lt;br /&gt;&lt;br /&gt;ಈ ಹಿರಿಯರಿಗೆ, ಮೇಧಾವಿಗೆ, ನಿರಹಂಕಾರಿಗೆ, ಶಬ್ದಬ್ರಹ್ಮಗೆ ಈಗ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಅವರೊಂದಿಗೆ ಕಳೆದ ಕ್ಷಣಗಳನ್ನು ನೆನೆದಾಗಲೆಲ್ಲ ಇವರಿಗಿಂತ ಸೂಕ್ತರು ಮತ್ಯಾರಿದ್ದರು ಈ ಸ್ಥಾನಕ್ಕೆ ಎಂದೆನಿಸುತ್ತದೆ. ಪ್ರೊ. ಜಿ. ವೆಂಕಟಸುಬ್ಬಯ್ಯರಿಗೆ ನನ್ನ ಮತ್ತು ಪ್ರಣತಿಯ ಅಭಿವಂದನೆ, ನಮಸ್ಕಾರ.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-447750618978493348?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/447750618978493348/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=447750618978493348' title='9 Comments'/><link rel='edit' type='application/atom+xml' href='http://www.blogger.com/feeds/27009232/posts/default/447750618978493348'/><link rel='self' type='application/atom+xml' href='http://www.blogger.com/feeds/27009232/posts/default/447750618978493348'/><link rel='alternate' type='text/html' href='http://hisushrutha.blogspot.com/2010/11/blog-post_11.html' title='ಪ್ರೊ. ಜಿ.ವಿ. -ಎರಡು ಮಾತು'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_c2gCy0eVwAM/TNvbOsR4EII/AAAAAAAAH9M/eWycOKdpRmI/s72-c/IMG+010.jpg' height='72' width='72'/><thr:total>9</thr:total></entry><entry><id>tag:blogger.com,1999:blog-27009232.post-4499557466052949183</id><published>2010-11-03T10:53:00.000+05:30</published><updated>2010-11-03T10:53:05.802+05:30</updated><category scheme='http://www.blogger.com/atom/ns#' term='ಚಳಿ'/><category scheme='http://www.blogger.com/atom/ns#' term='ಲಹರಿಯಲಿ ತೇಲಿ'/><category scheme='http://www.blogger.com/atom/ns#' term='ದೀಪಾವಳಿ'/><category scheme='http://www.blogger.com/atom/ns#' term='ಶುಭಾಶಯ'/><title type='text'>ಚಳಿ, ದೀಪಾವಳಿ, ಪಿರೂತಿ, ಬ್ಲಾ ಬ್ಲಾ</title><content type='html'>‘ಕಿಲಾಡಿ ಮಾಡಿದರೆ ದೂತರು ಬರುತಾರೆ.. ಕಿನ್ನರಾ, ಹುಷಾರು’&lt;br /&gt;‘ಏನ್ ಮಾಡ್ತಾರೆ ಅಮ್ಮಾ ದೂತರು? ಯಾರವರು?’&lt;br /&gt;‘ದೂತರು ಇ‌ಇ‌ಇಷ್ಟು ದಪ್ಪಗಿರ್ತಾರೆ.. ಬಿಳೀ ಗಡ್ಡ.. ದೊಗಲೆ ದೊಗಲೆ ಅಂಗಿ.. ಕಪ್ಪು ಪೈಜಾಮ.. ತಲೆಗೊಂದು ಕೋನ್ ಟೊಪ್ಪಿ..’&lt;br /&gt;‘ಹಾನ್! ಗೊತ್ತಾಯ್ತು.. ದೂತರು ಎಂದರೆ ಕ್ರಿಸ್‌ಮಸ್ ತಾತ ಅಲ್ವಾ ಅಮ್ಮಾ?’&lt;br /&gt;‘ಅಲ್ಲ ಅಲ್ಲ.. ಕ್ರಿಸ್‌ಮಸ್ ತಾತ ಅಲ್ಲ.. ದೂತರ ಮುಖ ಕಪ್ಪ್ಪ್‌ಪಗಿರೊತ್ತೆ.. ಅಲ್ಲಲ್ಲಿ ಗುಳಿ ಬಿದ್ದಿರೊತ್ತೆ.. ಅವರು ಚೂರೂ ನಗೆಯಾಡುವುದಿಲ್ಲ.. ಚೇಷ್ಟೆ ಮಾಡಿದ ಪುಟ್ಟನನ್ನ ಎತ್ಕೊಂಡ್ ಹೋಗೀ...’&lt;br /&gt;‘ಹೋಗೀ...?’&lt;br /&gt;‘ಎತ್ಕೊಂಡ್ ಹೋಗಿ.. ತುಂಬಾ ಕಚಗುಳಿ ಇಟ್ಟು.. ಇಲ್ಲೆಲ್ಲ ಇಲ್ಲೆಲ್ಲ..’&lt;br /&gt;‘ಹಿಹಿಹಿಹಿ... ಏಯ್ ಬಿಡಮ್ಮ.. ಬಿಡಮ್ಮಾ.. ಕಿಕಿಕಿಕಿ..’&lt;br /&gt;‘..ಇಲ್ಲೆಲ್ಲ ಹೀಗೆಲ್ಲ ಕಚಗುಳಿ ಇಟ್ಟು ಪುಟ್ಟನನ್ನ ನಗಿಸ್ತಾರೆ..!’&lt;br /&gt;&lt;br /&gt;&lt;span style="color: #134f5c;"&gt;*&lt;/span&gt; &lt;span style="color: #3d85c6;"&gt;*&lt;/span&gt; &lt;span style="color: #cc0000;"&gt;*&lt;/span&gt;&lt;br /&gt;&lt;br /&gt;ಹಕ್ಕಿಗಳೆಲ್ಲ ತಡವಾಗಿ ಏಳುತ್ತಿವೆ. ಈ ಚಳಿಯಲ್ಲಿ ಮುಂಜಾನೆಯೇ ಹೊರಹಾರಹೊರಟರೆ ರೆಕ್ಕೆಗಳೆಲ್ಲ ಮರಗಟ್ಟಿಹೋಗಲಾರವೇ? ಗೂಡಿನೊಳಗೆ ಬೆಚ್ಚಗೆ, ಹುಲ್ಲಿನೊಳಗೆ ಇನ್ನೂ ಇನ್ನೂ ಇನ್ನೂ ಮುದುಡಿಕೊಂಡು, ಅಮ್ಮನ ರೆಕ್ಕೆ ತೆಕ್ಕೆಯಡಿಯಲ್ಲಿ ಮುರುಟಿಕೊಂಡು ಮಲಗಿರಬೇಕು. ಉಹುಂ, ನಿದ್ದೆ ಮಾಡಬಾರದು; ಎಚ್ಚರಿರಬೇಕು.. ಅಮ್ಮನ ಬಿಸಿ ಉಸಿರು, ಅಪ್ಪನ ಗೊರಕೆ ಸದ್ದು, ದೂರ ಹೊರಳಿ ಹೋಗಿರುವ ತಮ್ಮನ ಬೇರ್ಪಡಿಕೆ, ಎಲ್ಲವನ್ನು ಮುಗುಳ್ನಗುತ್ತ ಅನುಭವಿಸುತ್ತ. ಇಷ್ಟು ಮುಂಚೆ ಹೊರಗೆ ಹಾರಿದರೆ ಈ ಇಬ್ಬನಿಯಲ್ಲಿ ಆಹಾರ ಕಂಡೀತಾದರೂ ಹೇಗೆ? ನಾಲ್ಕು ಮಾರಿನ ಮುಂದೆ ಮತ್ತೇನೂ ಕಾಣುವುದಿಲ್ಲ. ಎಲ್ಲಾ ಬಿಳಿ ಬಿಳಿ ಬೆಳ್ಳಗೆ. ಅಲಾರ್ಮಿಗೆ ಬೈದುಕೊಳ್ಳುತ್ತಾ ನೀನು ಏಳುತ್ತೀ ಹಾಸಿಗೆಯಿಂದ..&lt;br /&gt;&lt;br /&gt;ದುಂಬಿಗಳೂ ತಡವಾಗಿ ಏಳುತ್ತಿವೆ.. ಹೂವು ಅರಳುವುದೇ ತಡ ಈಗ. ಸೂರ್ಯನ ಒಲೆಯಲ್ಲಿ ಶಾಖ ಹೆಚ್ಚಾಗಿ, ಮಂಜೆಲ್ಲ ಕರಗಿ, ಕಿರಣಗಳು ಹೂಮೇಲೆ ಬಿದ್ದು, ಅದು ಅರಳುವ ಹೊತ್ತಿಗೆ ಇನ್ನೊಂದು ಗುಕ್ಕು ನಿದ್ರೆ ತೆಗೆಯಬಹುದು. ದುಂಬಿಗಳಿಗಷ್ಟೇ ಗೊತ್ತು ಹೂವುಗಳ ಚಡಪಡಿಕೆ. ಬೇಗ ಅರಳಬೇಕೆಂಬ ತುಡಿತ. ತಮ್ಮೊಡಲಿನ ಕಂಪನ್ನು ಮೂಜಗಕೆಲ್ಲ ಹರಡಬೇಕೆಂಬ ತಪನೆ. ಸಹಾಯಕ್ಕೆ ಬಾರದ ಸೂರ್ಯನ ಬಗ್ಗೆ ಅಸಹನೆ. ನಿನ್ನ ಮುಡಿಯೇರಿ ನನ್ನ ಕಣ್ಸೆಳೆಯುವ ಚಪಲ.&lt;br /&gt;&lt;br /&gt;ನೀರೂ ಕಾಯುವುದಿಲ್ಲ ಬೇಗ.. ಕಾಯಿಲ್ ಹಾಕಿಟ್ಟು ಎಷ್ಟೊತ್ತಾಯ್ತು? ಗಡಿಯಾರ ನೋಡಿದ್ದೇ ನೋಡಿದ್ದು. ಗಡಿಯಾರ ನಿಂತು ಹೋಗಿದೆಯೇ ಎಂದು ಪರಿಕಿಸಲು ವಾಚು ನೋಡಿದ್ದು. ಆದರೂ ನಂಬಿಕೆ ಬರದೇ ಮೊಬೈಲು ನೋಡಿದ್ದು. ಹೌದು, ಅರ್ಧ ಗಂಟೆ ಮೇಲಾಯ್ತು. ಇನ್ನೂ ಕಾದಿಲ್ಲ ನೀರು. ಮುಟ್ಟಿ ನೋಡಿದರೆ ಐಸ್ ಮುಟ್ಟಿದಂತೆ. ತಣ್ಣಗೆ. ಹಾಗೇ ತಣ್ಣೀರೇ ಹೊಯ್ದುಕೊಂಡರೆ ನಿನ್ನ ಬಂಗಾರು ಬಣ್ಣದ ಮೈತುಂಬ ಚಳಿಗುಳ್ಳೆಗಳೆದ್ದು, ಮೈಪುಳಕಗೊಂಡು, ನನ್ನ ನೆನಪಾಗಿ... ಬೇಡ ಬೇಡ, ನೀರು ಕಾಯಲಿ ಬಿಡು.&lt;br /&gt;&lt;br /&gt;ಬಸ್ಸೂ ತಡವಾಗಿ ಬರುತ್ತದೆ.. ಡ್ರೈವರ್ ಎದ್ದರೂ ಮಂಕಿ ಕ್ಯಾಪ್ ಹಾಕಿದ ಕಂಡಕ್ಟರಿಗಿನ್ನೂ ನಿದ್ದೆ. ಅವನ ಚರ್ಮದ ಚೀಲದೊಳಗೆ ನಾಣ್ಯಗಳೊಂದಿಗೆ ನಿದ್ದೆ ಹೋಗಿರುವ ಪೀಪಳಿ. ನಾಲ್ಕು ಸಲ ಬಟನ್ ಒತ್ತಿದರೂ ಸ್ಟಾರ್ಟಾಗಲು ಒಲ್ಲದ ತಂಡಿ ಬಡಿದ ಎಂಜಿನ್. ಗಾಲಿಗಳಿಗೂ ಒದ್ದೆ ರಸ್ತೆಯ ಮೇಲೆ ಓಡಲು ಸೋಮಾರಿತನ. ನಿನಗೆ ಕಾದೂ ಕಾದೂ ಬೇಸರ. ಆಫೀಸಿನಲ್ಲಿ ಬಾಸ್ ಬೈಯುತ್ತಾರೇನೋ ಅಂತ ಟೆನ್ಷನ್.&lt;br /&gt;&lt;br /&gt;ಎಲ್ಲರಿಗಿಂತ ನೀನೇ ಲೇಟೇನೋ ಅಂದುಕೊಂಡು ಆಫೀಸಿಗೆ ಕಾಲಿಟ್ಟರೆ ಅಂಗಣವೆಲ್ಲ ಬಿಕೋ ಬಿಕೋ.. ಪಾರ್ಕಿಗೆ ಜಾಗಿಂಗಿಗೆ ಹೋಗಿದ್ದ ಬಾಸ್ ಮುದ್ದು ಅಳಿಲಿನ ಮೀಸೆ ಮೇಲೆ ನಿಂತಿದ್ದ ಇಬ್ಬನಿಹನಿಯನ್ನು ನೋಡುತ್ತ ಮೈಮರೆತು ನಿಂತುಬಿಟ್ಟಿದ್ದರಂತೆ.. ಕಲೀಗುಗಳೆಲ್ಲ ಹೊಸದಾಗಿ ಮದುವೆಯಾದವರು: ಹೇಗೆ ತಾನೆ ಬಂದಾರು ಅಷ್ಟು ಮುಂಚೆ? ಸಿಸ್ಟಮ್ ಆನ್ ಮಾಡಿದರೆ ಕಿಂಗ್‌ಫಿಷರ್ ಹಕ್ಕಿಯ ಬ್ಯಾಕ್‌ಗ್ರೌಂಡಿನ ಮೇಲೆ ಪುಟ್ಟ ಪುಟ್ಟ ಐಕಾನುಗಳು. ನಿನ್ನ ಪುಟ್ಟ ಬೆರಳುಗಳಿಂದ ಅದುಮಿದರೆ ಮೌಸೂ ಉಲಿಯುತ್ತದೆ ಹಿತವಾಗಿ ಕ್ಲಿಕ್. ತೆರೆದುಕೊಂಡ ವಿಂಡೋದಲ್ಲಿ ನನ್ನದೇ ಮೇಯ್ಲ್: "ಚಿನಕುರುಳಿ ಹುಡುಗಿಗೆ ಗುಡ್ ಮಾರ್ನಿಂಗ್! ಪಿಂಕ್ ಡ್ರೆಸ್ಸಲ್ಲಿ ಚನಾಗ್ ಕಾಣ್ತಿದೀಯ. ಇನ್ನು ಆರು ದಿನ ನಾನಿರಲ್ಲ. ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗ್ತಿದೀನಿ. ಅಷ್ಟು ದಿನಕ್ಕೆ ಬೇಕಾದಷ್ಟು ಪ್ರೀತೀನ ಇಕೋ ಈ ಮೇಯ್ಲಲ್ಲೇ ಕೊಡ್ತಿದೀನಿ: ತುಂಬಿಸಿಕೋ. ಹ್ಯಾಪಿ ದಿವಾಲಿ. ಲವ್ಯೂ!"&lt;br /&gt;&lt;br /&gt;ಡ್ರೆಸ್ಸಿನ ಪಿಂಕನ್ನೂ ಮೀರಿ ಏರಿದ ಮುಖದ ಕೆಂಪಿಗೆ ತುಟಿಯಂಚ ಮುಗುಳ್ನಗೆ ಮ್ಯಾಚ್ ಆಗುತ್ತದೆ. ಟಕಟಕನೆ ಟೈಪಿಸುತ್ತೀಯ ಎಸ್ಸೆಮ್ಮೆಸ್ ಮೊಬೈಲಿನಲ್ಲಿ: "ಥ್ಯಾಂಕ್ಯೂ ಕಣೋ ಗೂಬೆ.. ನಿಂಗೂ ಹ್ಯಾಪಿ ದೀಪಾವಳಿ. ಊರಲ್ಲಿ ಮಜಾ ಮಾಡು. ಲವ್ಯೂ!" ಗಾವುದಗಳಾಚೆಗಿನ ನನ್ನೂರಲ್ಲಿ ಸಿಗ್ನಲ್ಲನ್ನೇರಿ ಬರುತ್ತದೆ ಸಂದೇಶ ಟಿಣ್ ಟಿಣ್. ನಾನು ಹೊದಿಕೆಯಡಿಯಿಂದ ಕೈತೆಗೆದು ಮೊಬೈಲಿಗಾಗಿ ತಡಕಾಡುತ್ತೇನೆ. &lt;br /&gt;&lt;br /&gt;&lt;span style="color: #e06666;"&gt;*&lt;/span&gt;&lt;span style="color: orange;"&gt; * &lt;/span&gt;&lt;span style="color: #38761d;"&gt;*&lt;/span&gt;&lt;br /&gt;&lt;br /&gt;ವರುಷಗಳ ಹಿಂದೆ ಬರೆದು ಅರ್ಧಕ್ಕೇ ಬಿಟ್ಟಿದ್ದ ಲಹರಿ.&amp;nbsp; ಯಾಕೋ ಈಗ ಈ ಚಳಿಗೆ ಈ ಹವೆಗೆ ಈ ಇದಕ್ಕೆ ಮತ್ತು ಹೊಸದೇನನ್ನೂ ಬರೆಯಲಾಗದ ಬಿಜಿಗೆ, ಸ್ವಲ್ಪ ಸೋಮಾರಿತನಕ್ಕೆ ಸೂಟ್ ಆಗುತ್ತದೆ ಎನ್ನಿಸಿತು; ಕೊನೆಯಲ್ಲಿಷ್ಟು ತೀಡಿ ಪೋಸ್ಟ್ ಮಾಡಿದ್ದೇನೆ. ಈ ದೀಪಾವಳಿಗೆ ಇಷ್ಟೇ.&lt;br /&gt;&lt;br /&gt;ಶುಭಾಶಯಗಳೂ..&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-4499557466052949183?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/4499557466052949183/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=4499557466052949183' title='7 Comments'/><link rel='edit' type='application/atom+xml' href='http://www.blogger.com/feeds/27009232/posts/default/4499557466052949183'/><link rel='self' type='application/atom+xml' href='http://www.blogger.com/feeds/27009232/posts/default/4499557466052949183'/><link rel='alternate' type='text/html' href='http://hisushrutha.blogspot.com/2010/11/blog-post.html' title='ಚಳಿ, ದೀಪಾವಳಿ, ಪಿರೂತಿ, ಬ್ಲಾ ಬ್ಲಾ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>7</thr:total></entry><entry><id>tag:blogger.com,1999:blog-27009232.post-4280792327579911841</id><published>2010-10-14T23:38:00.000+05:30</published><updated>2010-10-14T23:38:05.121+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಹಳಿಗಳನ್ನು ದಾಟುವಾಗ</title><content type='html'>ಮೂರುಮಲ್ಲಿಗೆ ತೂಕದವಳ ದಾವಣಿಯಲ್ಲಿ ಚಿಟ್ಟೆಗಳಿದ್ದವು.. &lt;br /&gt;ಕುಸುಮಕರೆಯ ಸಿಹಿಗನಸನೇ ಉಂಡು ಬೆಳೆದವು-&lt;br /&gt;ರೆಕ್ಕೆ ಬಲಿತಾಗ ಹಾರಲೇ ಇಲ್ಲ; ಮರಳಿ ಕಂಬಳಿ &lt;br /&gt;ಹುಳುಗಳಾಗಿ ಮೈಗೇ ಚುಚ್ಚಿದವು&lt;br /&gt;ಅತ್ತರಿನ ಸಿಡಿಗಾಳಿಗೆ ಒಡ್ಡಿದ ಬಗಲು-&lt;br /&gt;ಹೊಸ ಕಚಗುಳಿಗೆ ಮೈ ನವಿರೇಳಲೇ ಇಲ್ಲ&lt;br /&gt;ಬೋಗುಣಿಯಲ್ಲಿನ ದ್ರಾಕ್ಷಿಗಳನು ಸುತ್ತ ಕೂತ ಜನ&lt;br /&gt;ಹುರಿದು ಮುಕ್ಕುವಾಗ ಸಹ ಬಾರದ ದೇವರು&lt;br /&gt;ಈಗ ಬಂದು ವರವ ಕೇಳು ಎನ್ನುತ್ತಿದ್ದಾನೆ..&lt;br /&gt;&lt;br /&gt;ನೈವೇದ್ಯಕ್ಕಿಲ್ಲಿ ಇನ್ನೇನೂ ಉಳಿದಿಲ್ಲ ಬಾಂಧವಾ..&lt;br /&gt;ಮೊಳೆಯಿಂದ ತಲೆಯವರೆಗೂ ಸುತ್ತಿಯಾಗಿದೆ ಜಾಟಿ.&lt;br /&gt;ಬಿಡುವುದಷ್ಟೇ ಬಾಕಿ ಕೈಬೀಸಿ. ತಿರುಗಿ ತಿರುತಿರು ತಿರುಗಿ &lt;br /&gt;ಸತ್ವ ಮುಗಿದು ಒರಗುವವರೆಗೆ ತಿರುಗಲಿ ಬುಗರಿ.&lt;br /&gt;ನುಣುಪು ನೆಲ ಮಲಗಿಸಿಕೊಳ್ವುದು ಹಾಸಿ ಲೇಪು &lt;br /&gt;ನೇವರಿಸುವುದು ಧೂಳಿನೆಲರು, ಗುನುಗಿ ಜೋ-ಲಾಲಿ&lt;br /&gt;&lt;br /&gt;ಯೋಚಿಸುತ್ತ ನಿಂತೆ ಯಾಕೆ?&lt;br /&gt;ಹಳಿಗಳನ್ನು ದಾಟುವಾಗ ನಿಧಾನ ಮಾಡಬೇಡ..&lt;br /&gt;ಬೆಣಚುಕಲ್ಲುಗಳ ರಾಶಿ ಮೇಲೆ ಊದ್ದಕೆ ಪವಡಿಸಿರುವ &lt;br /&gt;ಈ ಕಂಬಿಗಳು ಎಲ್ಲೂ ಕೂಡುವುದೇ ಇಲ್ಲವಂತೆ&lt;br /&gt;ಭರ್ರನೆ ಹಾದು ಬರುವ ರೈಲು ನೀನು ಹೆಜ್ಜೆ&lt;br /&gt;ಕದಲಿಸುವ ಮೊದಲೇ ಅಪ್ಪಳಿಸಿಬಿಟ್ಟೀತು&lt;br /&gt;&lt;br /&gt;ಎಷ್ಟೊ ಹರಿದಾರಿಯಾಚೆಗಿದೆ ನಿನ್ನ ನಿಲ್ದಾಣ&lt;br /&gt;ಬಂದ ಬಂಡಿಯ ಇಚ್ಛಾನುಸಾರ ನನ್ನ ಪಯಣ&lt;br /&gt;ಮತ್ಯಾವುದೋ ನಿಲ್ಮನೆ, ಇನ್ಯಾವುದೋ ಬಂದರು&lt;br /&gt;ಗೋಗರೆಯದಿರು, ಋಣವಿದ್ದಲ್ಲಿ ಮತ್ತೆ ಸಿಗೋಣ&lt;br /&gt;ಕಾಮನಬಿಲ್ಲನ್ನು ಭೂಮಿಗಿಳಿಸಲು ಸಾಧ್ಯವಾಗುತ್ತದೋ&lt;br /&gt;ನೋಡೋಣ.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-4280792327579911841?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/4280792327579911841/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=4280792327579911841' title='20 Comments'/><link rel='edit' type='application/atom+xml' href='http://www.blogger.com/feeds/27009232/posts/default/4280792327579911841'/><link rel='self' type='application/atom+xml' href='http://www.blogger.com/feeds/27009232/posts/default/4280792327579911841'/><link rel='alternate' type='text/html' href='http://hisushrutha.blogspot.com/2010/10/blog-post_14.html' title='ಹಳಿಗಳನ್ನು ದಾಟುವಾಗ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>20</thr:total></entry><entry><id>tag:blogger.com,1999:blog-27009232.post-1138135965640474141</id><published>2010-10-07T12:55:00.001+05:30</published><updated>2010-10-07T12:55:07.621+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಅರಿಕೆ</title><content type='html'>ಸಂಜೆಮಳೆಯ ದಿನಗಳಿವು.. &lt;br /&gt;ಕೊಚ್ಚಿ ಹೋಗುತ್ತಿರುವ ಚಿಂದಿ ಕನಸುಗಳನ್ನೆಲ್ಲ ಆಯ್ದು&lt;br /&gt;ಒಂದು ಮಾಡಿ ತಿದ್ದಿ ತೀಡಿ ಒಪ್ಪ ಮಾಡುತ್ತಿರುವೆ, &lt;br /&gt;ನೀನು ಅಡ್ಡ ಬರಬೇಡ..&lt;br /&gt;&lt;br /&gt;ಯಾವುದೋ ಮರದ ಕರಿಯೆಲೆ ತೆಗೆದು ಹುಬ್ಬಿಗಿಟ್ಟಿದ್ದೇನೆ&lt;br /&gt;ಯಾವುದೋ ಹೂವಿನ ಪಕಳೆ ಹಿಡಿದು ತುಟಿಗಿಟ್ಟಿದ್ದೇನೆ&lt;br /&gt;ಹರಿದ ಸರದ ಮುತ್ತುಗಳು ಇಲ್ಲಿ ಒಡವೆಯಾಗಿವೆ&lt;br /&gt;ಮುರಿದ ಮಂಟಪ ಕಂಬಗಳು ಕಾಲಾಗಿವೆ&lt;br /&gt;ಸಂಪಿಗೆ ಸಿಗದ್ದಕ್ಕೆ ಬೋರೆಹಣ್ಣು ಇಡಲಿದ್ದೇನೆ ಮೂಗಿಗೆ-&lt;br /&gt;ಈಗ ನೀನು ಅಡ್ಡ ಬರಬೇಡ..&lt;br /&gt;&lt;br /&gt;ನಿನ್ನೊನಪು ಒಯ್ಯಾರ ಈಕೆಗಿಲ್ಲ, &lt;br /&gt;ಹಾಗಂತ ನಾನು ವಿಚಲಿತನಾಗಿಲ್ಲ..&lt;br /&gt;ಇವಳು ಹಲವು ಕನಸುಗಳಿಂದೊಡೆದ ಚೂರುಗಳ ಒಟ್ಟುರೂಪ &lt;br /&gt;ನೂರು ನಿರ್ನಿದ್ರೆ ರಾತ್ರಿಗಳ ನಿಟ್ಟುಸಿರ ಶಾಪ&lt;br /&gt;ಹೊಸಪ್ರೀತಿಯಿಂದಲೇ ತುಂಬಬೇಕಿದೆ ಜೀವಭಾವ&lt;br /&gt;&lt;br /&gt;ಹಾರೈಸಲಣಿಯಾಗು ಅಥವಾ ದಾರಿಬಿಟ್ಟು ನಿಲ್ಲು..&lt;br /&gt;ತೀಡುಗಾಳಿಗೆ ಕಾರುಮೋಡಗಳು ತೇಲಿಹೋಗಲಿ&lt;br /&gt;ಮಿಂಚ ಹೊಳಪಲಿ ಗುಡುಗಿನಬ್ಬರ ಕ್ಷೀಣವಾಗಲಿ&lt;br /&gt;ಮತ್ತೆ ಹೊಮ್ಮಿ ಅರಳಲಿ ಚಿಕ್ಕೆ ಹೂದೋಟ&lt;br /&gt;ನನ್ನ ಕಿನ್ನರಿಗಾಗಲಿ ಚಂದ್ರಿಕೆಯ ಪ್ರಭಾತ.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-1138135965640474141?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/1138135965640474141/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=1138135965640474141' title='12 Comments'/><link rel='edit' type='application/atom+xml' href='http://www.blogger.com/feeds/27009232/posts/default/1138135965640474141'/><link rel='self' type='application/atom+xml' href='http://www.blogger.com/feeds/27009232/posts/default/1138135965640474141'/><link rel='alternate' type='text/html' href='http://hisushrutha.blogspot.com/2010/10/blog-post.html' title='ಅರಿಕೆ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>12</thr:total></entry><entry><id>tag:blogger.com,1999:blog-27009232.post-6873171660721600767</id><published>2010-09-08T19:08:00.000+05:30</published><updated>2010-09-08T19:08:03.960+05:30</updated><category scheme='http://www.blogger.com/atom/ns#' term='ಸು-ಲಲಿತ ಪ್ರಬಂಧ'/><category scheme='http://www.blogger.com/atom/ns#' term='ಶುಭಾಶಯ'/><category scheme='http://www.blogger.com/atom/ns#' term='ಗಣೇಶ ಚತುರ್ಥಿ'/><title type='text'>ಗೆಜ್ಜೆವಸ್ತ್ರ</title><content type='html'>ಕಳೆದ ವರ್ಷದ ಗಣೇಶ ಚತುರ್ಥಿಯಂದು ಅಜ್ಜನ ಮನೆಗೆ ಹೋದಾಗ, “ಸತತ ಇಪ್ಪತ್ತಾರನೇ ವರ್ಷದ ಅಟೆಂಡೆನ್ಸು ಇದು” ಅಂತ ಅಪ್ಪ ಹೇಳಿದಾಗಲೇ ನನಗೂ ಅರಿವಾದದ್ದು ಅದು. ‘ಅರೆ, ಹೌದಲ್ಲಾ!’ ಎಂದುಕೊಂಡೆ. “ಮೊದಲನೇ ಸಲ ಹೊಸಹಬ್ಬಕ್ಕೆ ಅಂತ ನಿಂಗ ಗಂಡ-ಹೆಂಡ್ತಿ ಬಂದಿದ್ದೇ ಇನ್ನೂ ಮೊನ್‌ಮೊನ್ನೆ ಬಂದಂಗಿದ್ದು ನೋಡು ಭಾವಾ” ಅಂತ ಮಾವ ನೆನಪು ಮಾಡಿಕೊಂಡ. ಅದರ ಮುಂದಿನ ಸಲದ ಹಬ್ಬಕ್ಕೆ ಬಹುಶಃ ಅಮ್ಮ ನನ್ನನ್ನೂ ಕರೆದುಕೊಂಡು ಹೋಗಿದ್ದಳಿರಬೇಕು ಅಂತ ಹೊಳೆದು ನಾನು ನಸುನಕ್ಕೆ. &lt;br /&gt;&lt;br /&gt;ಕಳೆದ ಇಪ್ಪತ್ತಾರು ವರ್ಷಗಳಿಂದ ಒಂದು ವರ್ಷವೂ ತಪ್ಪಿಸದೆ ಅಪ್ಪ-ಅಮ್ಮ ಅಥವಾ ನಾನು-ಅಮ್ಮ ಅಥವಾ ನಾನು-ಅಪ್ಪ ಅಥವಾ ನಾವು ಮೂವರೂ ಅಥವಾ ಕನಿಷ್ಟ ನಮ್ಮಲ್ಲಿ ಯಾರಾದರೂ ಒಬ್ಬರು, ಚೌತಿ ಹಬ್ಬದ ದಿನ ನನ್ನ ಅಜ್ಜನ ಮನೆಗೆ ಹೋಗೇ ಹೋಗುತ್ತಿದ್ದೇವೆ. ಯಾಕೆಂದರೆ, ಅಜ್ಜನ ಮನೆಯಲ್ಲಿ ಚೌತಿ ಹಬ್ಬಕ್ಕೆ ಗಣಪತಿ ತರುತ್ತಾರೆ. ಮತ್ತು ನಮ್ಮ ಮನೆಯಲ್ಲಿ ತರುವುದಿಲ್ಲ. &lt;br /&gt;&lt;br /&gt;ಚೌತಿ ಹಬ್ಬಕ್ಕೆ ಒಂದು ತಿಂಗಳಿದೆ ಎನ್ನುವಾಗಲೇ ಅಮ್ಮನಿಗೆ ಗಡಿಬಿಡಿ ಶುರುವಾಗುತ್ತಿತ್ತು. ಅದು ಹಬ್ಬಕ್ಕೆ ನೆಂಟರು ಬರುತ್ತಾರೆ ಅಂತಲೋ, ಮನೆ ಸುತ್ತಮುತ್ತ ಸ್ವಚ್ಚ ಮಾಡಬೇಕು ಅಂತಲೋ, ಚಕ್ಕುಲಿ-ಪಂಚಕಜ್ಜಾಯ ಮಾಡಲು ಸಾಮಗ್ರಿ ತರಿಸಬೇಕು ಅಂತಲೋ ಅಲ್ಲ. ಬದಲಿಗೆ, ಅಮ್ಮನಿಗೆ ಚೌತಿ ಬರುವುದರೊಳಗೆ ‘ಗೆಜ್ವಸ್ತ್ರ’ ಮಾಡಿ ಮುಗಿಸಬೇಕಿರುತ್ತಿತ್ತು. ಪ್ರತಿವರ್ಷದ ಹಬ್ಬಕ್ಕೂ ಅಮ್ಮ ತನ್ನ ತವರುಮನೆಗೆ ಬರುವ ಗಣಪತಿಗೆಂದು ಗೆಜ್ವಸ್ತ್ರ ತಯಾರಿಸುತ್ತಿದ್ದಳು. ಏಕೆಂದರೆ, ಮಾವಂದಿರಿಗಿನ್ನೂ ಮದುವೆಯಾಗಿರಲಿಲ್ಲ. ಅಮ್ಮಮ್ಮನಿಗೆ ವಯಸ್ಸಾಗಿತ್ತು. “ಅವ್ಳಿಗೆ ಹರಿತಲ್ಲೆ. ದಿನಾ ಅಡುಗೆ-ಕಸಮುಸುರೆ ಮಾಡಹೊತ್ತಿಗೇ ಸಾಕ್‌ಸಾಕಾಗಿರ್ತು. ಚೌತಿ ಬಂತು ಅಂದ್ಮೇಲೆ ತಯಾರಿ ಬೇರೆ ಮಾಡ್ಕ್ಯಳವು. ಅಂತಾದ್ರಗೆ ಗೆಜ್ವಸ್ತ್ರ ಹೊಸ್ಕೋತ ಕೂರಕ್ಕೆ ಟೈಮ್ ಎಲ್ಲಿದ್ದು ಅವ್ಳಿಗೆ? ಅದ್ಕೇ ನಾನೇ ಮಾಡ್ಕೊಡ್ತಿ” ಅಂತ ಅಮ್ಮ, ಯಾರೂ ಕೇಳದಿದ್ದರೂ ತನಗೇ ಸಮರ್ಥಿಸಿ ಹೇಳಿಕೊಳ್ಳುತ್ತಿದ್ದಳು. &lt;br /&gt;&lt;br /&gt;ಗೆಜ್ವಸ್ತ್ರ ಎಂದರೆ ಗೆಜ್ಜೆವಸ್ತ್ರ. ಹತ್ತಿಯಿಂದ ಮಾಡಿದ, ಬಿಂದಿ, ಬೇಗಡೆ, ಸಂತ್ರದ ತಗಡು, ಅರಿಶಿಣ-ಕುಂಕುಮಗಳಿಂದ ಅಲಂಕರಿಸಿದ ಮಾಲೆ. ಹತ್ತಿಯನ್ನು ಎಳೆಯೆಳೆಯಾಗಿ ಬಿಡಿಸಿ, ಮಣೆಯ ಮೇಲಿಟ್ಟು ಹೊಸೆದು, ಅದರಲ್ಲೇ ಹೂವುಗಳನ್ನು ಮಾಡಿ, ಹೊಸೆದ ದಾರದಿಂದ ಸುತ್ತುವರೆಸಿ, ಹೂವುಗಳ ಒಡಲಲ್ಲಿ ಬಣ್ಣಬಣ್ಣದ ಸಂತ್ರದ ತಗಡನ್ನು ಕತ್ತರಿಸಿ ಅಂಟಿಸಿ, ಬಳ್ಳಿಗಳಿಗೆ ಹಸಿರು ಬಣ್ಣ ಹಚ್ಚಿ, ಬಿಂದಿಗಳನ್ನು ಅಲ್ಲಲ್ಲಿ ಇಟ್ಟು -ಒಯ್ದು ಗಣಪತಿಯ ಕೊರಳಿಗೆ ಹಾಕಿದರೆ, ಗಣಪತಿ ಚೆಂದವೋ ಗೆಜ್ಜೆವಸ್ತ್ರ ಚೆಂದವೋ? ಉತ್ತರ ಹುಡುಕುವ ಗೊಂದಲದಲ್ಲಿ ಮನಸು ತನ್ಮಯವಾಗಬೇಕು. &lt;br /&gt;&lt;br /&gt;ಅಮ್ಮ ಮಾಡಿದ ಗೆಜ್ಜೆವಸ್ತ್ರ ಅವಳ ತವರೂರಿನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿತ್ತು. ಚೌತಿಯ ಸಂಜೆ ಗಣಪತಿ ನೋಡಲು ಬರುವ ಗುಂಪಿನಲ್ಲಿ ಹಲವರು ಬರುವುದು ಗಣಪತಿ ನೋಡಿ ನಮಸ್ಕರಿಸಿ ಅವನ ಕೃಪೆಗೆ ಪಾತ್ರರಾಗಲಲ್ಲ; ಗಣಪತಿಗೆ ಮಾಡಿದ ಅಲಂಕಾರ ನೋಡಲು. ಗಂಡಸರು-ಮಕ್ಕಳಿಗೆ ಯಾರ್ಯಾರ ಮನೆಯಲ್ಲಿ ಎಷ್ಟು ದೊಡ್ಡ ಮೂರ್ತಿ ತಂದಿದ್ದಾರೆ, ಮಂಟಪ ಹೇಗೆ ಕಟ್ಟಿದ್ದಾರೆ, ದೀಪಾಲಂಕಾರ ಹೇಗೆ ಮಾಡಿದ್ದಾರೆ ಎಂಬುದು ಮುಖ್ಯವಾದರೆ, ಹೆಂಗಸರಿಗೆ ಮಂಟಪಕ್ಕೆ ಎಷ್ಟು ಹೂವು ಹಾಕಿದ್ದಾರೆ, ಪಂಚಕಜ್ಜಾಯದ ರುಚಿ ಹದವಾಗಿದೆಯಾ, ಮನೆಯೊಡತಿ ಎಂಥ ಸೀರೆ ಉಟ್ಟಿದ್ದಾಳೆ, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಈ ವರ್ಷ ಯಾವ ಥರದ ಗೆಜ್ಜೆವಸ್ತ್ರ ಮಾಡಿದ್ದಾರೆ ಎಂಬುದು ಗಮನಿಸುವ ವಿಷಯವಾಗುತ್ತದೆ.&amp;nbsp; “ಈ ವರ್ಷ ಏನ್ ಚನಾಗ್ ಮಾಡಿದ್ಲೇ ಗೆಜ್ವಸ್ತ್ರ ಗೌರೀ.. ದೃಷ್ಟಿ ಆಪಹಂಗೆ ಇದ್ದು” ಅಂತ ದೇವಕಕ್ಕ ಹೇಳಿದರೆ, “ಹೂವಿನ್ ಡಿಸೈನ್ ಅಂತೂ ಹೈಕ್ಲಾಸ್ ಬಿಡು! ಅಷ್ಟ್ ನಾಜೂಕಾಗಿ ಮಾಡಕ್ಕೆ ಎಷ್ಟು ದಿನ ತಗೈಂದ್ಲೇನ” ಅಂತ ಸುಮತಿ ಅತ್ತೆ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಳು. &lt;br /&gt;&lt;br /&gt;ಚೌತಿ ಬಂತೆಂದರೆ ಅಮ್ಮನ ಗಡಿಬಿಡಿಯ ಜೊತೆ ನನ್ನ ಸಂಭ್ರಮವೂ ಸೇರಿಕೊಳ್ಳುತ್ತಿತ್ತು. ಸಾಮಾನ್ಯವಾಗಿ ರಾತ್ರಿ ಮನೆ ಕೆಲಸವನ್ನೆಲ್ಲ ಬೇಗಬೇಗನೆ ಮುಗಿಸಿ, ಕಸಮುಸುರೆ ಪೂರೈಸಿ, ಹಾಲಿಗೆ ಹೆಪ್ಪನ್ನೂ ಹಾಕಿದ ಮೇಲೆ ಅಮ್ಮ ಗೆಜ್ಜೆವಸ್ತ್ರದ ತಯಾರಿಗೆ ಕೂರುತ್ತಿದ್ದುದು. ಪ್ರತಿರಾತ್ರಿ ಕಣ್ಣಿಗೆ ನಿದ್ರೆ ಹತ್ತುವವರೆಗೆ ಗೆಜ್ವಸ್ತ್ರ ಮಾಡುವ ಕುಶಲ ಕೆಲಸದಲ್ಲಿ ಅಮ್ಮ; ಅವಳ ಪಕ್ಕ ಶಾಲೆಯಲ್ಲಿ ಕೊಟ್ಟಿರುತ್ತಿದ್ದ ಹೋಮ್‌ವರ್ಕ್ ಮಾಡುತ್ತ ಕೂತಿರುತ್ತಿದ್ದ ನಾನು. ದೇವರ ಮುಂದೋ, ಸೆಖೆಯಾಗುತ್ತಿದ್ದರೆ ತೆರೆದ ಹಿತ್ಲಕಡೆ ಬಾಗಿಲಿನ ಬಳಿಯೋ ಕೂತು ಕಾರ್ಯತತ್ಪರರಾದ ನಮ್ಮಿಬ್ಬರ ನಡುವಣ ಮೌನಕ್ಕೆ, ಹಾಳೆಯ ಮೇಲೆ ಓಡುವ ನನ್ನ ಪೆನ್ನು ಮತ್ತು ಗುಚ್ಚಿನಿಂದ ಎಳೆಯುವಾಗ ಹತ್ತಿಯೆಳೆಗಳು ಮೃದುಮಧುರ ರವವನ್ನು ಬೆರೆಸುತ್ತಿದ್ದವು. ಎರಡು ಲೆಕ್ಕ ಬಿಡಿಸಿಯೋ ನಾಲ್ಕು ಸಾಲು ಬರೆದೋ ನಾನು ಕತ್ತೆತ್ತಿ ನೋಡಿದರೆ ಅಮ್ಮನ ಕೈಯಲ್ಲಿ ಬಿಳಿಬಿಳಿಯ ಹೂಗಳು ಬಣ್ಣದ ಬೇಗಡೆ ಹಚ್ಚಿಸಿಕೊಂಡು ಸುಂದರಿಯರಾಗುತ್ತಿದ್ದವು. &lt;br /&gt;&lt;br /&gt;ಒಂದು ವರ್ಷ ಅಮ್ಮ, ಚೌತಿಗೆ ತಿಂಗಳಿದೆ ಎನ್ನುವಾಗ, “ಅಪ್ಪೀ, ಇವತ್ತು ಶಾಲಿಂದ ಬರಕ್ಕರೆ ಸಂತ್ರದ ತಗಡು ತಗಂಬಾ. ಗೆಜ್ವಸ್ತ್ರ ಮಾಡಕ್ಕೆ ಶುರು ಮಾಡವು” ಎಂದಳು. ನಾನಾಗ ಉಳವಿಯ ಮೆಡ್ಲಿಸ್ಕೂಲಿಗೆ ಹೋಗುತ್ತಿದ್ದೆ. ಶಾಲೆಯಿಂದ ಬರುವಾಗ ಹೆಗಡೇರ ಅಂಗಡಿಗೆ ಹೋಗಿ “ಸಂತ್ರದ ತಗಡು ಇದೆಯಾ?” ಅಂತ ಕೇಳಿದೆ. “ಹೋ ಇದೆ. ಎಷ್ಟ್ ಬೇಕು?” ಅಂತ ಜಿತೇಂದ್ರಣ್ಣ ಕೇಳಿದ. ಅಮ್ಮ ನನ್ನ ಬಳಿ ಐದು ರೂಪಾಯಿ ಕೊಟ್ಟು ಯಾವುದಾದರೂ ಎರಡು ಬಣ್ಣದ ಸಂತ್ರದ ತಗಡು ತರುವಂತೆ ಹೇಳಿದ್ದಳು. ಜಿತೇಂದ್ರಣ್ಣ ಒಟ್ಟು ಐದು ಬಣ್ಣದ ಸಂತ್ರದ ತಗಡುಗಳನ್ನು ತೋರಿಸಿದ. ಕೆಂಪಿ, ಹಸಿರು, ನೀಲಿ, ಅರಿಶಿಣ ಮತ್ತು ಗುಲಾಬಿ... “ಎಷ್ಟ್&amp;nbsp; ರೂಪಾಯಿ ಒಂದಕ್ಕೆ?” ಅಂತ ಕೇಳಿದೆ. ಜಿತೇಂದ್ರಣ್ಣ “ಒಂದು ರೂಪಾಯಿಗೆ ಒಂದು” ಅಂತ ಹೇಳಿದ. ನನ್ನ ಕಣ್ಣರಳಿತು. “ಹಾಗಾದ್ರೆ ಎಲ್ಲಾ ಬಣ್ಣದ್ದೂ ಒಂದೊಂದು ಕೊಡಿ” ಅಂತ ಕೊಂಡುತಂದೆ. ದಾರಿಯಲ್ಲೆಲ್ಲ ಅಮ್ಮನಿಗೆ ಐದು ಬಣ್ಣದ ತಗಡು ತೋರಿಸಿದಾಗ ಅವಳು ಖುಶಿ ಪಡುವುದನ್ನೂ, ಅಷ್ಟನ್ನೂ ಬಳಸಿ ಅವಳು ತಯಾರಿಸಿದ ಗೆಜ್ವಸ್ತ್ರ ಸುಂದರವಾಗಿ ಮೂಡಿಬರುವುದನ್ನೂ ಕಲ್ಪಿಸಿ ಹಿಗ್ಗಿದೆ. &lt;br /&gt;&lt;br /&gt;ಆದರೆ ಅಮ್ಮ ನನ್ನ ಕಲ್ಪನೆಗಳಿಗೆ ಸಂಪೂರ್ಣ ತದ್ವಿರುದ್ದವಾಗಿ ವರ್ತಿಸಿದಳು. “ಎರಡು ಸಂತ್ರದ ತಗಡು ತಗಂಬಾ ಅಂತ ಹೇಳಿದ್ರೆ ಕೊಟ್ಟಿದ್ದಷ್ಟೂ ದುಡ್ಡು ಖರ್ಚು ಮಾಡ್ಕ್ಯಂಡ್ ಬೈಂದ್ಯಲೋ.. ದುಡ್ಡಿನ ಬೆಲೆಯೇ ಗೊತ್ತಿಲ್ಲೆ ನಿಂಗೆ” ಅಂತ ಅಮ್ಮ ಬೈದುಬಿಟ್ಟಳು! ನಾನು ಸಣ್ಣ ಮುಖ ಮಾಡಿಕೊಂಡೆ.&amp;nbsp; ಐದು ರೂಪಾಯಿಯೆಂದರೆ ಅವಳಿಗೆ ಗಂಟೆಗಟ್ಟಲೆ ಕೂತು ಕೈ ನೋವು ಮಾಡಿಕೊಂಡು ಅಡಿಕೆ ಸುಲಿದು ಸಂಪಾದಿಸಿದ ದುಡ್ಡು. ಅದನ್ನು ನಾನು ಬಣ್ಣದ ತಗಡಿನ ಮೋಹಕ್ಕೆ ತೂರಿಬಂದದ್ದು ಅವಳ ಸಿಟ್ಟಿಗೆ ಕಾರಣವಾಗಿತ್ತು. ಆದರೂ ಎಲ್ಲೋ ವರ್ಷಕ್ಕೊಂದು ಸಲ -ಅದೂ ದೇವರಿಗೆಂದು ಮಾಡುವ ಗೆಜ್ಜೆವಸ್ತ್ರಕ್ಕಾಗಿ ನಾನು ಖರ್ಚು ಮಾಡಿದ ದುಡ್ಡಿಗೆ ಅಮ್ಮ ಇಷ್ಟೆಲ್ಲ ರಂಪ ಮಾಡಬಾರದಿತ್ತು ಅಂತ ನನಗನ್ನಿಸಿತು. ಅವಳು ಅವಲಕ್ಕಿ-ಮೊಸರು ಕೊಡಲು ಬಂದರೆ “ಬ್ಯಾಡ” ಅಂತ ಸಿಟ್ಟು ತೋರಿದೆ. ಕೊನೆಗೆ ಅವಳೇ, “ಎರಡೇ ಬಣ್ಣದ್ದು ತರಕ್ ಹೇಳಿದ ಅಮ್ಮಂಗೆ ಐದೈದ್ ಬಣ್ಣದ್ದು ತಗಬಂದು ಕೊಟ್ರೆ ಖುಶಿಯಾಗ್ತು ಅಂದ್ಕಂಡ್ಯಾ? ಇಲ್ಲೆ.. ಎರಡೇ ಬಣ್ಣ ಬಳಸಿಯೂ ತುಂಬಾ ಚನಾಗ್ ಕಾಣೋಹಂಗೆ ಗೆಜ್ವಸ್ತ್ರ ಮಾಡ್ಲಕ್ಕು. ದೇವರಿಗೆ ನಾವು ಎಷ್ಟು ಖರ್ಚು ಮಾಡಿದ್ದು ಅನ್ನೋದು ಮುಖ್ಯ ಆಗದಿಲ್ಲೆ; ಎಷ್ಟು ಭಕ್ತಿ ಇಟ್ಟು ಮಾಡಿದ್ದು ಅನ್ನೋದು ಮುಖ್ಯ. ಅದು ನಿಂಗೆ ಗೊತ್ತಾಗ್ಲಿ ಅಂತ ಸಿಟ್ಟು ಮಾಡಿದ್ದು ಅಷ್ಟೇ” ಅಂತ ಸಮಾಧಾನ ಮಾಡಿದಳು. ಮತ್ತು ನನಗೆ ಬೇಜಾರಾಗದಿರಲಿ ಅಂತ, ಆ ವರ್ಷ ಐದೂ ಬಣ್ಣದ ಸಂತ್ರದ ತಗಡು ಬಳಸಿ ಅಮ್ಮ ಗೆಜ್ಜೆವಸ್ತ್ರ ಮಾಡಿದಳು. &lt;br /&gt;&lt;br /&gt;ಮಾವನಿಗೆ ಮದುವೆಯಾದಮೇಲೆ ಅಮ್ಮ ತವರಿಗಾಗಿ ಗೆಜ್ವಸ್ತ್ರ ಮಾಡುವುದನ್ನು ಬಿಟ್ಟಳು. “ಶಾಂತತ್ಗಿಗೆ ಯನಗಿಂತ ಎಷ್ಟೋ ಚನಾಗ್ ಮಾಡಕ್ ಬರ್ತು. ನಾ ಮಾಡಿದ್ ತಗಂಡ್ ಹೋದ್ರೆ ನೆಗ್ಯಾಡ್ತ ಅಷ್ಟೇ” ಅಂತ ಕಾರಣ ಕೊಟ್ಟಳು. ಅವಳು ಹೇಳಿದ್ದು ಸತ್ಯವೂ ಆಗಿತ್ತು. ನಾನು ಚೌತಿಗೆ ಅಜ್ಜನ ಮನೆಗೆ ಹೋದಾಗ, ಮಂಟಪದಲ್ಲಿನ ಗಣೇಶ ಶಾಂತತ್ತೆಯ ಹೊಚ್ಚಹೊಸ ಮಾದರಿಯ ಗೆಜ್ಜೆವಸ್ತ್ರದಿಂದ ಕಂಗೊಳಿಸುತ್ತಿದ್ದ.&amp;nbsp; ತವರಿಗೆ ಮಾಡುವುದನ್ನು ಬಿಟ್ಟರೂ ಅಮ್ಮ ಮನೆದೇವರಿಗೆಂದು ಪ್ರತಿ ಚೌತಿಗೂ ಗೆಜ್ವಸ್ತ್ರ ಮಾಡುತ್ತಿದ್ದಳು. ಆದರೆ ಅದರಲ್ಲಿ ಹಿಂದಿನ ವರ್ಷಗಳಲ್ಲಿರುತ್ತಿದ್ದ ಕುಶಲತೆ-ಚಂದ ಇರುತ್ತಿರಲಿಲ್ಲ. ಯಾಕೆ ಅಂತ ಕೇಳಿದರೆ, “ಅಲ್ಲಿಗಾದ್ರೆ ಗಣಪತಿ ಬರ್ತು. ಸುಮಾರ್ ಜನ ನೋಡಕ್ ಬರ್ತ. ಅವ್ರಿಗೆ ಚಂದ ಕಾಣಹಂಗೆ ಇರಕ್ಕಾತಲ? ಇಲ್ಲಾದ್ರೆ ಯಾರೂ ನೋಡೋರ್ ಇಲ್ಲೆ. ನಮ್ಮನೆ ದೇವ್ರಿಗೆ ಇಷ್ಟೇ ಸಾಕು” ಎನ್ನುತ್ತಿದ್ದಳು. ಗೂಡಿನಲ್ಲಿದ್ದ ದೇವರು ಈ ತಾರತಮ್ಯ ಕಂಡು ನಿಟ್ಟುಸಿರು ಬಿಡುತ್ತಿದ್ದ; ಮೂರು ದಿನವಿರುವ ಮಣ್ಣ ಗಣೇಶನ ಸೌಭಾಗ್ಯಕ್ಕೆ ಹೊಟ್ಟೆಕಿಚ್ಚು ಪಡುತ್ತಿದ್ದ. &lt;br /&gt;&lt;br /&gt;ನಮ್ಮ ಮನೆಯಲ್ಲಿ ಅಜ್ಜಿ ತೀರಿಕೊಂಡಮೇಲೆ ಅಮ್ಮ ಚೌತಿ ಹಬ್ಬದ ದಿನ ತವರಿಗೆ ಹೋಗುವುದೂ ಕಡಿದುಹೋಯಿತು. “ಮನೇಲಿ ನೈವೇದ್ಯಕ್ಕೆ ಅನ್ನ ಮಾಡೋರೂ ಇಲ್ಲೆ, ನಾ ಹೆಂಗೆ ಬಿಟ್ಟಿಕ್ ಹೋಗದು?” ಎಂದು ತನ್ನ ಅಳಲನ್ನು ತೋಡಿಕೊಂಡಳು. ಅದು ಹೌದೆಂದು ಎಲ್ಲರೂ ಒಪ್ಪಿದೆವು. ಹೀಗಾಗಿ ಈಗ ನಾಲ್ಕೈದು ವರ್ಷಗಳಿಂದ ಬರೀ ನಾನು-ಅಪ್ಪನೇ ಚೌತಿಗೆ ಅಜ್ಜನ ಮನೆಗೆ ಹೋಗುವುದಾಗಿದೆ. &lt;br /&gt;&lt;br /&gt;ಹೋದವರ್ಷ ಹೀಗೇ ಚೌತಿಗೆಂದು ನಾವು ಹೊರಟಿದ್ದಾಗ ಬಂದ ಮಧು ತಮಾಷೆ ಮಾಡುತ್ತಿದ್ದ: “ಇಷ್ಟು ವರ್ಷ ಪ್ರತಿ ಹಬ್ಬಕ್ಕೂ ಅಜ್ಜನ್ ಮನಿಗೆ ಹೋಪ್ದಾತು; ಇನ್ನು ಮದ್ವೆ ಆದ್ಮೇಲೆ ಹೆಂಗಂದ್ರೂ ಹೆಂಡ್ತಿ ಮನಿಗೆ ಹೋಪ್ದಾತು! ನೀನು ಮನೇಲಿ ಹಬ್ಬ ಮಾಡೋದು ಯಾವಾಗ?” ಅಂತ. &lt;br /&gt;&lt;br /&gt;ಇವತ್ತು ಅದು ನೆನಪಾದದ್ದೇ ಮನೆಗೆ ಫೋನ್ ಮಾಡಿದೆ: “ಅಮ್ಮಾ, ಈ ವರ್ಷ ಗೆಜ್ವಸ್ತ್ರ ಮಾಡಿದ್ಯಾ? ಮುಂಚೆಯೆಲ್ಲಾ ಎಷ್ಟ್ ಚನ್‌ಚನಾ ಡಿಸೈನ್ಸ್ ಮಾಡ್ತಿದ್ದೆ.. ಬಿಡಡ ಅಮ್ಮಾ.. ಅದೂ ಒಂದು ಕಲೆ. ಬಿಟ್ರೆ ಮರ್ತೇ ಹೋಗ್ತು” ಅಂತ ಹೇಳಿದೆ. &lt;br /&gt;“ಇನ್ನು ಮರೆತರೆ ಎಷ್ಟು ಬಿಟ್ರೆ ಎಷ್ಟು ಬಿಡಾ.. ಮುಂದೆಲ್ಲ ಇದ್ನೆಲ್ಲ ಕೇಳೋರಾದ್ರೂ ಯಾರಿದ್ದ?” ಎಂದಳು. &lt;br /&gt;“ಹಂಗಲ್ಲ ಅಮ್ಮಾ, ಈಗ ನೀನು ನೆನಪು ಇಟ್ಕಂಡಿದ್ರೆ ಮುಂದೆ ನಿನ್ ಸೊಸೆಗೆ ಹೇಳಿಕೊಡ್ಲಕ್ಕು.. ಅವ್ಳಿಗೂ ಇಂತಹುದರಲ್ಲಿ ಆಸಕ್ತಿ ಇದ್ದು ಅಂತ ಆದ್ರೆ, ಅತ್ತೆ ನೋಡಿ ಅವಳೂ ಕಲಿತ” ಎಂದೆ. &lt;br /&gt;“ಆಂ, ಎಂತಂದೇ? ಸೊಸೆಯಾ?” ಅಮ್ಮ ಆ ಕಡೆಯಿಂದ ಧ್ವನಿಯೇರಿಸಿದಳು. &lt;br /&gt;“ಎಂತಿಲ್ಲೆ” ಎಂದವನೇ ನಕ್ಕು ಫೋನ್ ಇಟ್ಟುಬಿಟ್ಟೆ. &lt;br /&gt;&lt;br /&gt;&lt;span style="color: #0b5394;"&gt;*&lt;/span&gt; &lt;span style="color: lime;"&gt;*&lt;/span&gt; &lt;span style="color: red;"&gt;*&lt;/span&gt;&lt;br /&gt;&lt;br /&gt;ಗೆಜ್ಜೆವಸ್ತ್ರ ಧರಿಸಿದ ಬ್ರಹ್ಮಚಾರಿ ಗಣೇಶ ನಿಮಗೆ ಒಳ್ಳೇದು ಮಾಡಲಿ. ಶುಭಾಶಯಗಳು.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-6873171660721600767?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/6873171660721600767/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=6873171660721600767' title='26 Comments'/><link rel='edit' type='application/atom+xml' href='http://www.blogger.com/feeds/27009232/posts/default/6873171660721600767'/><link rel='self' type='application/atom+xml' href='http://www.blogger.com/feeds/27009232/posts/default/6873171660721600767'/><link rel='alternate' type='text/html' href='http://hisushrutha.blogspot.com/2010/09/blog-post.html' title='ಗೆಜ್ಜೆವಸ್ತ್ರ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>26</thr:total></entry><entry><id>tag:blogger.com,1999:blog-27009232.post-4013256465143430015</id><published>2010-08-30T10:42:00.001+05:30</published><updated>2010-08-31T14:17:57.923+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><category scheme='http://www.blogger.com/atom/ns#' term='ಲಹರಿಯಲಿ ತೇಲಿ'/><title type='text'>ಆಗಸ್ಟ್ ತಿಂಗಳೇ ಹೀಗೆ</title><content type='html'>ಇದ್ದಕ್ಕಿದ್ದಂತೆ ಮಧ್ಯರಾತ್ರಿಯಲ್ಲಿ ಸುರಿಯಲು ಶುರುವಿಡುವ ಮಳೆ&lt;br /&gt;ಊರಲ್ಲಿ ಯಾರೋ ತೀರಿಕೊಂಡರಂತೆ ಎಂಬ ಸುದ್ದಿ&lt;br /&gt;ಯಾಕೋ ನಿದ್ದೇನೇ ಬರ್ತಿಲ್ಲ ಅಂತ ಹುಡುಗಿಯ ಎಸ್ಸೆಮ್ಮೆಸ್ಸು&lt;br /&gt;ಕರವೀರದ ಹೂವನ್ನು ಸೀಪಿದ ಸಿಹಿಯ ನೆನಪು&lt;br /&gt;ಬಾನಿಯಲ್ಲಿ ನೆನೆಸಿಟ್ಟ ಮೈಲುತುತ್ತ ಕಂಡರೆ &lt;br /&gt;ನಾಳೆ ಕೊಳೆ ಔಷಧಿ ಹೊಡೆಯಲು ಶೀನ ಬರುತ್ತಾನೋ ಇಲ್ಲವೋ ಚಿಂತೆ&lt;br /&gt;ಈ ಆಗಸ್ಟ್ ತಿಂಗಳೇ ಹೀಗೆ&lt;br /&gt;&lt;br /&gt;ಒಂದಕ್ಕೊಂದು ಸಂಬಂಧವಿಲ್ಲದ ಚಿತ್ರಗಳನ್ನು ಜೋಡಿಸಿ ಮಾಡಿದ ಕೊಲಾಜ್&lt;br /&gt;ಅದರಲ್ಲೇ ಅರ್ಥ ಹುಡುಕುವ ಹುಂಬತನ&lt;br /&gt;ಜಾರುವ ಬಚ್ಚಲುಕಲ್ಲಿಗೆ ಬ್ಲೀಚಿಂಗ್ ಪೌಡರ್ ಹೊಯ್ದು ತರೆದು ತರೆದು ಕೈನೋವು&lt;br /&gt;ನಿಂಬೆಹಣ್ಣು ಹಿಂಡುವಾಗ ಬೀಜವೂ ಬಿದ್ದುಹೋಗಿ ಎಲ್ಲಾ ಕಹಿಕಹಿ&lt;br /&gt;ಮಲ್ಲಿಗೆ ಕ್ಯಾಲೆಂಡರಿನಲ್ಲಿ ಸೈಕಲ್ ಪ್ಯೂರ್ ಅಗರಬತ್ತಿಯ ಜಾಹೀರಾತು&lt;br /&gt;ಎಷ್ಟೇ ಪ್ರಯತ್ನಪಟ್ಟರೂ ನಗು ತಾರದ ಗಂಗಾವತಿ ಬೀಚಿಯ ಜೋಕು&lt;br /&gt;ಛೇ, ಈ ಆಗಸ್ಟ್ ತಿಂಗಳೇ ಹೀಗೆ&lt;br /&gt;&lt;br /&gt;ಊರ ಗಣಪೆ ಮಟ್ಟಿಯ ಮರೆಯಲ್ಲಿ ನೀಲಿಹೂವೊಂದು ಬಿಟ್ಟಂತೆ ಕನಸು&lt;br /&gt;ಕಲಾಸಿಪಾಳ್ಯದ ಬೀದಿನಾಯಿ ಬೆದೆಗೆ ಬಂದು ಅಂಡರ್‌ಪಾಸ್ ಕೆಳಗೆ ಕಾಮಕೇಳಿ&lt;br /&gt;ಕನ್ನಡ ನಿಘಂಟಿನ ಕೊನೇಪುಟದಲ್ಲಿ ಳಕಾರದ ಆತ್ಮಹತ್ಯೆ&lt;br /&gt;ಮಿಥುನ ರಾಶಿಯನ್ನು ಹಾದುಹೋಗುವಾಗಲೆಲ್ಲ ಇನ್ಸಾಟ್-ಬಿ ಉಪಗ್ರಹಕ್ಕೆ ಏನೋ ಪುಳಕ&lt;br /&gt;ಸೋರುತ್ತಿರುವ ನಲ್ಲಿ ಕೆಳಗಿನ ಬಕೇಟಿನಲ್ಲಿ ಕ್ಷಣಕೊಂದು ಅಲೆಯ ಉಂಗುರ&lt;br /&gt;ಶನಿವಾರದ ಜಾಗರದ ಪರಿಣಾಮ, ಶಂಕರ ಭಾಗವತರ ಮದ್ದಲೆಗೆ ಭಾನುವಾರ ಮೈಕೈ ಸೆಳೆತ&lt;br /&gt;ಏನು ಮಾಡೋದು, ಈ ಆಗಸ್ಟ್ ತಿಂಗಳೇ ಹೀಗೆ&lt;br /&gt;&lt;br /&gt;ಟೀವಿಯಲ್ಲಿ ಕತ್ರೀನಾ ಕೈಫಿಗೆ ಈ ಚಳಿಯಲ್ಲೂ ದಿನಕ್ಕೆ ನೂರಾ‌ಎಂಟು ಸಲ ಸ್ನಾನ &lt;br /&gt;ಅಂಬೋಲಿ ಘಾಟಿನಲ್ಲಿ ಹಸಿದ ಇಂಬಳದ ಅಂಗುಲ-ಅಂಗುಲ ನಡಿಗೆ&lt;br /&gt;ನೈಟ್ ಬಸ್ಸು ನಿಂತ ಡಾಬಾದಲ್ಲಿ ಅಣ್ಣಾವ್ರ ಹಾಡಿನ ಉಸ್ತುವಾರಿ&lt;br /&gt;ಅಲ್ಲಲ್ಲೆ ನಿಲ್ಲುವ ಮನಸುಗಳಿಗೆ, ಅರಳಲಣಿಯಾಗಿರುವ ಮೊಗ್ಗುಗಳಿಗೆ&lt;br /&gt;ನೀರು ಜಿನುಗಿಸುತಿರುವ ಒರತೆಗಳಿಗೆ, ಅಂಚೆಪೆಟ್ಟಿಗೆಯಲ್ಲಿರುವ ಪತ್ರಗಳಿಗೆ&lt;br /&gt;ಮುತ್ತಮಧುಗ್ರಾಹೀ ಅಧರಗಳಿಗೆ, ಬೆಳ್ಳಿನೂಪುರ ಘಲ್ಲುಘಲ್ಲೆನೆ ಉಷೆ&lt;br /&gt;ಹೇಳಿದೆನಲ್ಲಾ, ಈ ಆಗಸ್ಟ್ ತಿಂಗಳೇ ಹೀಗೆ.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-4013256465143430015?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/4013256465143430015/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=4013256465143430015' title='29 Comments'/><link rel='edit' type='application/atom+xml' href='http://www.blogger.com/feeds/27009232/posts/default/4013256465143430015'/><link rel='self' type='application/atom+xml' href='http://www.blogger.com/feeds/27009232/posts/default/4013256465143430015'/><link rel='alternate' type='text/html' href='http://hisushrutha.blogspot.com/2010/08/blog-post_30.html' title='ಆಗಸ್ಟ್ ತಿಂಗಳೇ ಹೀಗೆ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>29</thr:total></entry><entry><id>tag:blogger.com,1999:blog-27009232.post-6395507546151296740</id><published>2010-08-26T10:32:00.000+05:30</published><updated>2010-08-26T10:32:11.468+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಆಮ್‌ಲೆಟ್ಟು -೨</title><content type='html'>ಆಮ್ಲೆಟ್ ಆಗದ ಒಂದು ಮೊಟ್ಟೆ&lt;br /&gt;ತಾನೂ ಕವಿತೆಯಾಗುತ್ತೇನೆ ಎಂದಿತು&lt;br /&gt;ಪರ್ಮನೆಂಟ್ ಮಾರ್ಕರ್ ಪೆನ್ನಿನಿಂದ&lt;br /&gt;ಅದಕ್ಕೆ ಕಣ್ಣು ಮೂಗು ಬಾಯಿ ಬರೆದು&lt;br /&gt;ಶೋಕೇಸಿನಲ್ಲಿಟ್ಟು &lt;br /&gt;&lt;br /&gt;ದೋಶಮುಕ್ತನಾಗಲು ತೀರ್ಥಯಾತ್ರೆಗೆ ಹೊರಟೆ&lt;br /&gt;ವಾಪಸು ಬಂದು ನೋಡಿದರೆ&lt;br /&gt;ಅಂಗಳದ ತುಂಬ ಪುಟ್ಟಪುಟ್ಟ ಮರಿಗಳು&lt;br /&gt;ಕಿಂವ್‌ಕಿಂವ್‌ಕಿಂವ್‌ಕಿಂವ್ ಗಲಾಟಿ&lt;br /&gt;ಯಾವುದೋ ಒಂದು ಮರಿ ಎತ್ತಿಕೊಂಡು &lt;br /&gt;ಹೆಸರೇನು ಕೇಳಿದೆ&lt;br /&gt;ಕವಿತೆ ಅಂತ ಹೇಳಿತು&lt;br /&gt;&lt;br /&gt;ಒಳಗೆ ಹೋಗಿ ನೋಡಿದರೆ &lt;br /&gt;ಮುಖ ಒಡೆದು ಚೂರಾಗಿ&lt;br /&gt;ಶೋಕೇಸೆಲ್ಲ ರಾಡಿ.&lt;br /&gt;ಕಾಲಿಗೆ ಬಂದು ಮುತ್ತಿಕೊಳ್ಳುವ ಮರಿಗಳನ್ನು ನೋಡುತ್ತ &lt;br /&gt;ಒಂದು ಮೊಟ್ಟೆಯೊಳಗೆ ಒಂದೇ ಕೋಳಿ&lt;br /&gt;ಒಂದು ಕೋಳಿಯಿಂದ ನೂರಾರು ಮೊಟ್ಟೆ&lt;br /&gt;ಅಂತೆಲ್ಲ ಬರೆಯಬಹುದು ಎಂದುಕೊಂಡೆ,&lt;br /&gt;ಅಂತೂ ಚರ್ಚೆ ಮುಗಿಸಿದ ಮಹಾನುಭಾವರು ಹೊರಬಂದು&lt;br /&gt;ಹೋಯ್, ಭಾರೀ ಲಾಯ್ಕಿವೆಯೋ ಮರಿಗಳು&lt;br /&gt;ಎಂದರು.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-6395507546151296740?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/6395507546151296740/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=6395507546151296740' title='11 Comments'/><link rel='edit' type='application/atom+xml' href='http://www.blogger.com/feeds/27009232/posts/default/6395507546151296740'/><link rel='self' type='application/atom+xml' href='http://www.blogger.com/feeds/27009232/posts/default/6395507546151296740'/><link rel='alternate' type='text/html' href='http://hisushrutha.blogspot.com/2010/08/blog-post_26.html' title='ಆಮ್‌ಲೆಟ್ಟು -೨'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>11</thr:total></entry><entry><id>tag:blogger.com,1999:blog-27009232.post-5357298217787848084</id><published>2010-08-23T09:42:00.000+05:30</published><updated>2010-08-23T09:42:38.395+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಆಮ್‌ಲೆಟ್ಟು</title><content type='html'>ಮೊಟ್ಟೆ ವೆಜ್ಜೋ ನಾನ್ವೆಜ್ಜೋ ಎಂಬ&lt;br /&gt;ಕುರಿತು ನಿನ್ನೆ ಆದ ಭಾರೀ ಚರ್ಚೆ&lt;br /&gt;ಯಲ್ಲಿ ನಾನು ಭಾಗವಹಿಸಲಿಲ್ಲ.&lt;br /&gt;ಕಾರಣ ಇಷ್ಟೇ: &lt;br /&gt;ಸ್ವಲ್ಪ ಅಬ್ಬೊತ್ತಿದರೂ ಒಡೆದು &lt;br /&gt;ಹೋಗಿಬಿಡುತ್ತದೇನೋ ಎನಿಸುವ ಮೊಟ್ಟೆಯ&lt;br /&gt;ತಲೆಯನ್ನಷ್ಟೇ ಚಮಚೆಯಿಂದ ತಟ್ಟಿ ಒಡೆದು &lt;br /&gt;ಹಾರಿಸುವ ಕಾರ್ಯದಲ್ಲಿ ನಾನು ಗರ್ಕನಾಗಿದ್ದೆ.&lt;br /&gt;ಅದರೊಡಲ ಸರ್ವಸಾರವನ್ನೂ &lt;br /&gt;ಬಸಿದು ಲೋಟಕೆ ಪುಳಕ್ಕನೆ &lt;br /&gt;ಈರುಳ್ಳಿ-ಮೆಣಸಿನಕಾಯಿಗಳೊಂದಿಗೆ ಇಷ್ಟೇ&lt;br /&gt;ಉಪ್ಪು ಹಾಕಿ ಲೊಳಲೊಳ ಕಲಸಿ&lt;br /&gt;ಹೊಯ್ದು ಚೊಂಯನೆ ಕಾದ ಕಾವಲಿಯ ಮೇಲೆ&lt;br /&gt;ಇಷ್ಟಗಲವಾಪ ಭೂಪಟದ್ಯಾವುದೋ ಖಂಡದಂತ &lt;br /&gt;ದೋಸೆಯನ್ನು ಬಿಸಿಬಿಸಿ ಸವಿಯುವ &lt;br /&gt;ನನ್ನಿಷ್ಟದ ಕೈಂಕರ್ಯದಲ್ಲಿ ನಿಮಗ್ನನಾಗಿದ್ದೆ.&lt;br /&gt;&lt;br /&gt;ಜಗುಲಿಯಲ್ಲಿಯ ಮಾತು ಕೇಳಿಸುತ್ತಿತ್ತು:&lt;br /&gt;ರಕ್ತವಿರುವುದಿಲ್ಲ, ಹಾಗಾಗಿ ತಿನ್ನಲಡ್ಡಿಯಿಲ್ಲ ಎಂದರು ಯಾರೋ.&lt;br /&gt;ಮತ್ಯಾರೋ ಅಂದರು, &lt;br /&gt;ಸಸ್ಯಜನ್ಯವಾಗಿದ್ದರೆ ಮಾತ್ರ ಅದು ಸಸ್ಯಾಹಾರ&lt;br /&gt;ಅಲ್ಲದೇ,&lt;br /&gt;ಯಾವ ಜಾತಿಯವರ ಮನೆಯ ಕೋಳಿಯೋ ಏನೋ&lt;br /&gt;ಏನು ತಿಂದು ಬೆಳೆದಿತ್ತೋ ಏನೋ&lt;br /&gt;ಎಂಥ ಹುಂಜವ ಕೂಡಿತ್ತೋ ಏನೋ&lt;br /&gt;ಈಯ್ದು ಎಷ್ಟು ದಿನವಾಯ್ತೋ ಏನೋ&lt;br /&gt;ಇಂಥ ಕುಲ-ಜಾತಿ-ಭೂತಗಳ ತಿಳಿಯದ&lt;br /&gt;ಪದಾರ್ಥ ಸೇವನೆಗೆ ವರ್ಜ್ಯವೇ ಸರಿ&lt;br /&gt;ಎಂಬ ತೀರ್ಮಾನಕ್ಕೆ ಅವರು ಬರುವಷ್ಟರಲ್ಲಿ&lt;br /&gt;&lt;br /&gt;ನಾನು ತೇಗಿ, ಆಹ್, ಅದ್ಭುತವಾಗಿತ್ತು ಆಮ್ಲೆಟ್ಟು&lt;br /&gt;ಎಂದದ್ದಕ್ಕೆ ಎಲ್ಲರೂ ತಿರುಗಿ ನನ್ನನ್ನೇ&lt;br /&gt;ನೋಡಿದರು. &lt;br /&gt;ಅಂಡಾಕೃತಿಯ ಅವರ ತಲೆಯ &lt;br /&gt;ಮೇಲುಳಿದಿದ್ದ ಕೆಲವೇ ಕೂದಲುಗಳೂ&lt;br /&gt;ನಿಮಿರಿ ನಿಂತಿದ್ದನ್ನು ನಾನು ಗಮನಿಸಿದೆ.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-5357298217787848084?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/5357298217787848084/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=5357298217787848084' title='19 Comments'/><link rel='edit' type='application/atom+xml' href='http://www.blogger.com/feeds/27009232/posts/default/5357298217787848084'/><link rel='self' type='application/atom+xml' href='http://www.blogger.com/feeds/27009232/posts/default/5357298217787848084'/><link rel='alternate' type='text/html' href='http://hisushrutha.blogspot.com/2010/08/blog-post_23.html' title='ಆಮ್‌ಲೆಟ್ಟು'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>19</thr:total></entry><entry><id>tag:blogger.com,1999:blog-27009232.post-2610199881183416134</id><published>2010-08-10T13:03:00.003+05:30</published><updated>2010-08-10T14:23:01.385+05:30</updated><category scheme='http://www.blogger.com/atom/ns#' term='ಕಿ.ರಂ. ನಾಗರಾಜ. ಪ್ರೊ. ಸಿದ್ದಲಿಂಗಯ್ಯ'/><category scheme='http://www.blogger.com/atom/ns#' term='ಮುಳ್ಳಯ್ಯನ ಗಿರಿ'/><category scheme='http://www.blogger.com/atom/ns#' term='ಚಾರಣದ ಹಾದಿ'/><category scheme='http://www.blogger.com/atom/ns#' term='ದ.ರಾ. ಬೇಂದ್ರೆ'/><title type='text'>ಕೀರಂ, ಬೇಂದ್ರೆ, ಸಿದ್ದಲಿಂಗಯ್ಯ ಮತ್ತು ಮಂಜು ಮುಚ್ಚಿದ ಮುಳ್ಳಯ್ಯನ ಗಿರಿ</title><content type='html'>ಮೆಜೆಸ್ಟಿಕ್ಕಿನ ಕೆ‌ಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಒಟ್ಟೊಟ್ಟಿಗೆ ಐದಾರು ಗೆಳೆಯರ ಎಸ್ಸೆಮ್ಮೆಸ್ಸುಗಳು ಬಂದವು. ಎಲ್ಲದರಲ್ಲೂ ಇದ್ದಿದ್ದು ಒಂದೇ ಸಾಲು: ಕಿ.ರಂ. ನಾಗರಾಜ್ ಇನ್ನಿಲ್ಲ. ಮುಳ್ಳಯ್ಯನಗಿರಿಯ ಚಾರಣಕ್ಕೆಂದು ಹೊರಟಿದ್ದ ನಾನು ಹನ್ನೊಂದು ಗಂಟೆಗಿದ್ದ ಚಿಕ್ಕಮಗಳೂರಿನ ಬಸ್ ಕಾಯುತ್ತ ನಿಂತಿದ್ದೆ. ಈ ಎಸ್ಸೆಮ್ಮೆಸ್ಸುಗಳನ್ನು ಓದುತ್ತಿದ್ದಂತೆ ನಾನು ನಿಂತಿದ್ದ ಸ್ಥಳ, ಸುತ್ತಲಿದ್ದ ಜಂಗುಳಿ, ಗಂಟಲು ಸರಿ ಮಾಡಿಕೊಳ್ಳುತ್ತಿದ್ದ ಮೈಕು, ಬರಬೇಕಿದ್ದ ಬಸ್ಸು, ಇನ್ನೂ ಕೂಡಿಕೊಳ್ಳಬೇಕಿದ್ದ ಗೆಳೆಯರು -ಎಲ್ಲಾ ಅರೆಕ್ಷಣ ಮಾಯವಾಗಿ, ಕಣ್ಮುಂದೆ ಜಟೆ ಹರಡಿದ ಕೀರಂರ ಮುಖ, ಕಿವಿಯಲ್ಲಿ ಅವರ ಸಣ್ಣ ಒಡಕಲು ದನಿ ತುಂಬಿಕೊಂಡವು.&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;/div&gt;&lt;div class="separator" style="clear: both; text-align: center;"&gt;&lt;/div&gt;&lt;table class="tr-caption-container" style="float: left; text-align: left;" cellpadding="0" cellspacing="0"&gt;&lt;tbody&gt;&lt;tr&gt;&lt;td style="text-align: center;"&gt;&lt;a href="http://2.bp.blogspot.com/_c2gCy0eVwAM/TGD-M5QpqtI/AAAAAAAAHQM/opvXkD1hyws/s1600/IMG_3924.JPG" imageanchor="1" style="margin-left: auto; margin-right: auto;"&gt;&lt;img src="http://2.bp.blogspot.com/_c2gCy0eVwAM/TGD-M5QpqtI/AAAAAAAAHQM/opvXkD1hyws/s320/IMG_3924.JPG" border="0" width="320" height="240" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;ಪ್ರಣತಿಯ ಬ್ಲಾಗರ್ಸ್ ಮೀಟ್‌ನಲ್ಲಿ ಮಾತಾಡುತ್ತಿರುವ ಕಿ.ರಂ. ನಾಗರಾಜ್&lt;/td&gt;&lt;/tr&gt;&lt;/tbody&gt;&lt;/table&gt;ಈ ಕೀರಂರ ಬಗ್ಗೆ ರಶೀದ್ ತಮ್ಮ ಮೈಸೂರ್‌‍ ಪೋಸ್ಟ್ ಬ್ಲಾಗಿನಲ್ಲಿ ಬರೆದಿದ್ದು ಓದಿದ್ದೆ. ಒಮ್ಮೆ ಮಂಗಳೂರಿಗೆ ಬಂದಿದ್ದ ಕೀರಂರನ್ನು ರಶೀದ್ ತಮ್ಮ ಬೈಕಿನಲ್ಲಿ ಕೂರಿಸಿಕೊಂಡು ಕಡಲು ತೋರಿಸಲು ಕರೆದೊಯ್ದದ್ದು, ಅಲ್ಲೊಂದು ಮುಳುಗಿದ ಹಡಗು ತೋರಿಸಿದ್ದು, ಅದ್ಯಾವುದೋ ಮೀನಿನ ಕಥೆ ಹೇಳಿದ್ದು, ಆ ಮೀನು ಹೆಕ್ಕಿಕೊಂಡು ಬರುವ ಮೊಹಮ್ಮದ್ ಅಲಿ ಎಂಬ ಪಾತ್ರ, ಇವನ್ನೆಲ್ಲ ಪುಟ್ಟ ಹುಡುಗನಂತೆ ನೋಡುತ್ತ ನಿಂತಿದ್ದ ಕೀರಂ.. ಆ ಬರಹ ಎಷ್ಟು ಚೆನ್ನಾಗಿತ್ತೆಂದರೆ, ನನಗೆ ಕೀರಂ ಎಂದರೆ ಕಡಲನ್ನು ನೋಡುತ್ತ ನಿಂತ ಪುಟ್ಟ ಬಾಲಕ ಎಂಬ ಚಿತ್ರವೇ ಮನಸಲ್ಲಿ ಅಚ್ಚಾಗಿಹೋಗಿತ್ತು. ಮುಂದೆ ಕೀರಂ ನಾವು ಪ್ರಣತಿಯಿಂದ ಆಯೋಜಿಸಿದ್ದ ಬ್ಲಾಗರ್ಸ್ ಮೀಟ್‌ಗೆ ಅಭ್ಯಾಗತರಂತೆ ಬಂದುಬಿಟ್ಟಿದ್ದರು. ನಮಗೋ ಭಯ: ಮೊದಲೇ ಚಿಕ್ಕದೊಂದು ಹಾಲ್ ಬುಕ್ ಮಾಡಿಕೊಂಡು ನೂರಾರು ಜನರನ್ನು ಕರೆದುಬಿಟ್ಟಿದ್ದೇವೆ, ಈಗ ಇಂತಹ ಹಿರಿಯರೆಲ್ಲ ಬಂದುಬಿಟ್ಟರೆ, ಹಾಲ್ ತುಂಬಿಹೋಗಿಬಿಟ್ಟರೆ, ಇವರನ್ನೆಲ್ಲ ಎಲ್ಲಿ ಕೂರಿಸೋದಪ್ಪ ಅಂತ.. ಆದರೆ ಕೀರಂ ಮಾತ್ರ ಸಭೆಯೊಳಗೆ ಎಲ್ಲರಂತೆ ಕೂತಿದ್ದು, ಕೊನೆಗೆ ಚರ್ಚೆಯ ಸಮಯ ಬಂದಾಗ ಮುಂದೆ ಹೋಗಿ, ಸರಳ ಕನ್ನಡದ ಕುರಿತೇನೋ ತಮ್ಮ ಒಡಕಲು ದನಿಯಲ್ಲಿ ಮಾತಾಡಿದ್ದರು. ಆಗಲೂ ಅವರು ನನಗೆ ಪುಟ್ಟ ಹುಡುಗನಂತೆಯೇ ಕಂಡಿದ್ದರು. ಮತ್ತೊಮ್ಮೆ ಮೇಫ್ಲವರಿನಲ್ಲಿ ಲಂಕೇಶ್ ಬಗ್ಗೆ ಮಾತಾಡುವಾಗ - ನಾನು ತೀರ ಅವರ ಹತ್ತಿರದಲ್ಲೇ ಕೂತಿದ್ದೆ, ಅವರು ನಗುವಾಗಲೂ ಪುಟ್ಟ ಹುಡುಗಂತೆಯೇ ಕಾಣುತ್ತಾರೆ ಅಂತ ಅವತ್ತು ನಂಗೆ ತುಂಬ ಅನಿಸಿತ್ತು. ಆಮೇಲೆ ಅವರು ಛಂದ ಕಾರ್ಯಕ್ರಮದಲ್ಲಿ ಕುಂವೀ ಬಗ್ಗೆ ಮಾತಾಡುವಾಗಲೂ ಅಷ್ಟೇ.&lt;br /&gt;&lt;br /&gt;ಈಗ ಹೀಗೆ ಅಚಾನಕ್ಕಾಗಿ ಬಂದ ಕೀರಂರ ಸಾವಿನ ಸುದ್ದಿಯನ್ನು ಹೇಗೆ ಸ್ವೀಕರಿಸಬೇಕೋ ತಿಳಿಯಲಿಲ್ಲ. ಅಷ್ಟೊತ್ತಿಗಾಗಲೇ ಬಂದು ಸೇರಿಕೊಂಡಿದ್ದ ಅರುಣ, ಕೀರಂ ತನ್ನ ಅಮ್ಮನ ಸಾಲಿನಲ್ಲಿ ಹೇಗೋ ನೆಂಟರು, ಅಮ್ಮನಿಗೆ ಗೊತ್ತಾಗಿದೆಯೋ ಇಲ್ವೋ, ತಿಳಿಸ್ತೀನಿ ಅಂತ ಫೋನಿಗೆ ಟ್ರೈ ಮಾಡತೊಡಗಿದ. ಅಷ್ಟೊತ್ತಿಗೆ ಶ್ರೀಕಾಂತನೂ ಬಂದ. ಬಸ್ ಹುಡುಕಲು ಹೊರಟೆವು.&lt;br /&gt;&lt;br /&gt;ಚಿಕ್ಕಮಗಳೂರಿನಲ್ಲಿ ತುಂತುರು ಹನಿಗಳ ಮುಂಜಾವಿನಲ್ಲಿ ಇಳಿದು ಪೇಪರ್ ಕೊಂಡರೆ ಮುಖಪುಟದಲ್ಲೇ ಕೀರಂ ಸಾವಿನ ಸುದ್ದಿ ಬಂದಿತ್ತು. ಚಿಕ್ಕಮಗಳೂರಿನಿಂದ ಬಾಬಾಬುಡನ್ ಗಿರಿಗೆ ಹೋಗುವ ಬಸ್ಸಿನಲ್ಲಿ ಹೋಗಿ ಮಧ್ಯದಲ್ಲೆಲ್ಲೋ ಇಳಿದು ನಾವು ಟ್ರೆಕ್ ಶುರು ಮಾಡಬೇಕಿತ್ತು.  ಆಗಷ್ಟೆ ತೆರೆದ ಕಾಮತ್ ಹೋಟೆಲಿನಲ್ಲಿ ತಿಂಡಿ ತಿಂದ ನಾವು, ಬಾಬಾಬುಡನ್ ಗಿರಿಯ ಬಸ್ ಹತ್ತಿದೆವು. ಬಸ್ಸಿನಲ್ಲಿ ನಾನು ಜೋಗಿಯವರ ರೂಪರೇಖೆ ಅಂಕಣ ಓದಿದೆ. ಯಾರದೋ ಕತೆಯಲ್ಲಿ ಓದುಗ ಒಂದಾಗುವ ಕುರಿತು ಬರೆಯಹೊರಟಿದ್ದ ಜೋಗಿ, ಬೇಂದ್ರೆ ಕವನವೊಂದನ್ನು ಉದಾಹರಿಸಿದ್ದರು. ಅದರಲ್ಲೂ ಕೀರಂ ಪ್ರಸ್ತಾಪವಿತ್ತು. ಅದು ಕೀರಂಗೆ ಇಷ್ಟವಾದ ಬೇಂದ್ರೆಯವರ ಕವನವಂತೆ. ಕವನ ಓದುತ್ತ ಓದುತ್ತ ನಾನೂ ಅದರಲ್ಲಿ ಒಂದಾದೆ. ಊರಾಚೆಗೊಂದು ಕೈಮರ, ಅಲ್ಲೊಂದು ತಣ್ಣಗೆ ಹರಿವ ಗುಪ್ತಗಾಮಿನಿ, ಅದರಾಚೆಗೊಂದು ದಟ್ಟ ಕಾಡು, ನಡುವಲ್ಲೊಂದು ತಪ್ಪಿ ಬೆಳೆದ ಮಾಮರ, ಆ ಮರದಲ್ಲಿ ಕೂತು ದಿನವಿಡೀ ಕುಹೂ ಕುಹೂ ಎಂದು ಹಾಡುವ ಕೋಗಿಲೆ. ಕವಿತಾನಾಯಕಿಗೆ ಈ ಕೋಗಿಲೆ ಹಾಡು ಎಂದರೆ ಏನೋ ಸೆಳೆತ. ಹಾಡು ಕೇಳುತ್ತ ಕೇಳುತ್ತ ಆಕೆ ಮೈಮರೆಯುತ್ತಾಳೆ. ಎಲ್ಲಿ ಹೋದರೂ ಹಾಡು ಅವಳನ್ನು ಹಿಂಬಾಲಿಸುತ್ತದೆ, ದಿನವಿಡೀ ಕಾಡುತ್ತದೆ -ಎನ್ನುವಾಗ ಅದು ಬರೀ ಕೋಗಿಲೆ ದನಿಯಲ್ಲ, ಅತೀತದೆಡೆಗಿನ ಕರೆ ಎಂಬರ್ಥ ಪಡೆಯುತ್ತದೆ ಕವನ. ಅಷ್ಟರಲ್ಲಿ ನಾವು ಇಳಿಯಬೇಕಿದ್ದ ಸ್ಥಳ ಬಂದಿತ್ತು, ಬೇಂದ್ರೆ ಕರೆದೊಯ್ದಿದ್ದ ಕಾಡಿನಲ್ಲಿ ಕಳೆದುಹೋಗಿದ್ದ ನನ್ನನ್ನು ತಟ್ಟಿ ಎಚ್ಚರಿಸಿದ ಅರುಣ್. ಕೆಳಗಿಳಿದರೆ ಎದುರಿಗೆ ಅಂಬರಚುಂಬಿತ ಗಿರಿ.&lt;br /&gt;&lt;br /&gt;ಬೇಂದ್ರೆಯ ಕವಿತೆಯ ನಾಯಕಿಯಂತೆಯೇ ಇರಬೇಕು ನಮ್ಮೆಲ್ಲರ ಪಾಡು. ಏಕೆಂದರೆ, ಕೋಟೆ ಬೆಟ್ಟ ಹತ್ತಿಳಿದು ತಿಂಗಳಾಗಿರಲಿಲ್ಲ, ಮತ್ತೆ ಕರೆದಿತ್ತು ಚಾರಣದ ಹಾದಿ. ಇದೆಂತಹ ಹುಚ್ಚೋ- ಭಾರಚೀಲ ಹೊತ್ತು ಬೆಟ್ಟವೇರುವುದು? ಸುರಿವ ಮಳೆಯಲಿ ತೊಯ್ದು ಜ್ವರ ಬರಿಸಿಕೊಳ್ಳುವುದು? ತಂಡಿಗಾಳಿಗೆ ಮುಖವೊಡ್ಡಿ ತಲೆನೋವಿಗೀಡಾಗುವುದು? ಮಂಜಮುಂಜಾವಿನ ದಟ್ಟಹಸಿರಲಿ ದಾರಿ ತಪ್ಪಿ ಕಕ್ಕಾಬಿಕ್ಕಿಯಾಗುವುದು? ನೋಯ್ವ ಕಾಲನು ತೀಡಿ ಮತ್ತೆ ನಡೆಯಲಣಿಯಾಗುವುದು? ಮುಳ್ಳಯ್ಯನಗಿರಿಯ ಏರು ಸರ್ಪದಾರಿಯಲಿ ಬರೀ ಬೇಂದ್ರೆಯದೇ ಕನವರಿಕೆ.&lt;br /&gt;&lt;br /&gt;ಅರುಣ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ..’ ಅಂತ ಸಿದ್ದಲಿಂಗಯ್ಯನವರ ಹಾಡು ಹೇಳತೊಡಗಿದ. ಇದ್ದಕ್ಕಿದ್ದಂತೆ ಬೆಟ್ಟಕ್ಕೆ ಕವಿದಿದ್ದ ಶ್ವೇತವರ್ಣದ ಮಂಜೆಲ್ಲ ಬೆಳದಿಂಗಳಾಗಿಹೋಯಿತು. ಬೇಂದ್ರೆಯ ಹುಡುಗಿಯ ಚೆಲುವಾದ ಮೈಬಣ್ಣವನ್ನು ಸುಡುತ್ತಿರುವ ಬೆಳ್ಳಿಕಿರಣಗಳು ಸುತ್ತೆಲ್ಲ ಸುರಿಯುತ್ತಿರುವಂತೆ ಭಾಸವಾಯಿತು. ‘ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ..’ ಹಾಡಿಗೆ ನಮ್ಮ ಏದುಸಿರು ಮತ್ತು ಸುರಿವ ಮಳೆಯ ತಟ್ತಟ ಸಾಥ್ ಆದವು. ನೀರಹನಿಯಾಶ್ರಿತ ಜೊಂಡು ಹುಲ್ಲುಗಳೆಲ್ಲ ಮೊಲದ ಹಿಂಡಿನಂತೆ ಕಾಲಿಗೆ ಮುತ್ತತೊಡಗಿದವು. ಈ ಹಾಡನ್ನ ಎಸ್ಪಿಬಿಯ ಸುಶ್ರಾವ್ಯ ಕಂಠದಲ್ಲಿ ಕೇಳುವುದಕ್ಕಿಂತ ಅಪ್ಪಗೆರೆ ತಿಮ್ಮರಾಜು ಕುಣಿದಾಡಿಕೊಂಡು ಹಾಡುವ ಶೈಲಿಯೇ ಚಂದ ಅಂತ ಎಷ್ಟೋ ಬಾರಿ ನಾನು ಯೋಚಿಸಿದ್ದೆ. ಸಿದ್ದಲಿಂಗಯ್ಯನವರ ಎದುರಿಗೇ ಅವರು ಹಾಡಿದ್ದನ್ನು ನಾನು ನೋಡಿದ್ದೆ. ಸಭೆಯನ್ನೊಮ್ಮೆ, ಪಕ್ಕವಾದ್ಯದವರನ್ನೊಮ್ಮೆ, ಕವಿಯನ್ನೊಮ್ಮೆ ನೋಡುತ್ತ, ತುಂಬುನಗೆ ಚಿಮ್ಮಿಸುತ್ತ, ಮಧ್ಯದಲ್ಲೊಂದು ಸಲ ಮುಗಿದೇಹೋಯಿತೇನೋ ಎನ್ನುವಂತೆ ಹಾಡಿನ ಬಂಡಿಯನ್ನು ಗಕ್ಕನೆ ಬ್ರೇಕ್ ಹಾಕಿ ನಿಲ್ಲಿಸಿ, ಇಡೀ ಪ್ರೇಕ್ಷಕವೃಂದದ ಎದೆಬಡಿತವನ್ನು ಕ್ಷಣಕಾಲ ಹಿಡಿದು-ಬಿಟ್ಟಂತೆ, ಗಳಿಗೆಯ ನಂತರ ಮತ್ತೆ ಮುಂದುವರೆಸುವ ಪರಿ.. ವಾಹ್! ಕವಿಯ ಕಣ್ಣಲ್ಲಿ ಮಂಜ ಪದರ! ಆ ಹಾಡು, ಈ ಭಾವ, ಆ ಮಂಜು, ಈ ನೋಟ ಯಾಕೆ ನಿರಂತರವಾಗಬಾರದು? ಆಗಿಬಿಟ್ಟರೆ ಇದೂ ಬೇಸರ ಬಂದು ಮತ್ತೇನಕ್ಕೋ ತುಡಿಯುತ್ತೇವೆಯೋ? ರೇಖಾ ತನಗೆ ನಿಪ್ಪಟ್ಟು ಬೇಕು ಅಂತ ಹಟ ಶುರು ಮಾಡಿದ್ದಳು.&lt;br /&gt;&lt;br /&gt;ಮುಳ್ಳಯ್ಯನ ಗಿರಿಯ ಸೌಂದರ್ಯವೂ ನಾಶವಾಗುವುದಕ್ಕೆ ಇನ್ನು ಹೆಚ್ಚು ಕಾಲ ಬೇಕಿಲ್ಲ ಅಂತ ಮೇಲೆ ತಲುಪಿದಾಗ ನಮಗೆ ತಿಳಿಯಿತು. ಶೃಂಗದವರೆಗೂ ಪ್ರವಾಸೋದ್ಯಮ ಇಲಾಖೆಯವರು ಟಾರ್ ಎಳೆದುಬಿಟ್ಟಿದ್ದಾರೆ. ಇಂಥ ಮಳೆಗಾಲದಲ್ಲೇ ಅಲ್ಲಿ ಹದಿನೈದಿಪ್ಪತ್ತು ಕಾರು-ಜೀಪುಗಳಿದ್ದವು. ಏರಿಸಿದ ಅರೆಪಾರದರ್ಶಕ ಗಾಜಿನ ಹಿಂದೆ ಗ್ಲಾಸುಗಳು ಖಾಲಿಯಾಗುತ್ತಿದ್ದವು. ರಸ್ತೆಬದಿಯಲ್ಲೆಲ್ಲ ಒಡೆದ ಬಾಟಲಿಗಳು. ಸಿಗರೇಟಿನ ಪ್ಯಾಕುಗಳು. ಇನ್ನೆರಡು ವರ್ಷಗಳಲ್ಲಿ ಇಲ್ಲಿ ರೆಸಾರ್ಟುಗಳು ಬಂದು, ಐಷಾರಾಮಿ ಲಾಡ್ಜುಗಳು ತಲೆಯೆತ್ತಿ, ವೆಬ್‌ಸೈಟುಗಳು ಪ್ರವಾಸಿಗರನ್ನು ಆಕರ್ಶಿಸಿ... ‘ಮುಗೀತು ಬಿಡು, ಇನ್ನು ನಾವು ಒಂದು ದಿನದ ಟ್ರೆಕ್‌ಗೆ ಹೊಸ ಜಾಗ ಹುಡುಕ್ಕೋಬೇಕು’ ಅಂತ ಶ್ರೀಕಾಂತ ನಿಟ್ಟುಸಿರು ಬಿಟ್ಟ. ಟಾರು ಬಳಿದ ಕಡುಗಪ್ಪು ರಸ್ತೆಯಲ್ಲಿ ಮಾತೇ ಇಲ್ಲದೆ ನಾವು ವಾಪಸು ನಡೆಯತೊಡಗಿದೆವು. ಬೇಂದ್ರೆಯ ಹಾಡಿನ ಹುಡುಗಿಯ ಮೇಲೆ ಸುರಿದ ಸಿದ್ದಲಿಂಗಯ್ಯನವರ ಕವಿತೆಯ ಬೆಳದಿಂಗಳ ಬಗ್ಗೆ ಕೀರಂ ಸ್ವರ್ಗದಲ್ಲಿ ಉಪನ್ಯಾಸ ಕೊಡುತ್ತಿದ್ದರು.&lt;br /&gt;&lt;br /&gt;// &lt;a href="http://picasaweb.google.com/hisushrutha/MullayyanaGiri#"&gt;ಫೋಟೋಸ್&lt;/a&gt; //&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-2610199881183416134?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/2610199881183416134/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=2610199881183416134' title='7 Comments'/><link rel='edit' type='application/atom+xml' href='http://www.blogger.com/feeds/27009232/posts/default/2610199881183416134'/><link rel='self' type='application/atom+xml' href='http://www.blogger.com/feeds/27009232/posts/default/2610199881183416134'/><link rel='alternate' type='text/html' href='http://hisushrutha.blogspot.com/2010/08/blog-post_10.html' title='ಕೀರಂ, ಬೇಂದ್ರೆ, ಸಿದ್ದಲಿಂಗಯ್ಯ ಮತ್ತು ಮಂಜು ಮುಚ್ಚಿದ ಮುಳ್ಳಯ್ಯನ ಗಿರಿ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_c2gCy0eVwAM/TGD-M5QpqtI/AAAAAAAAHQM/opvXkD1hyws/s72-c/IMG_3924.JPG' height='72' width='72'/><thr:total>7</thr:total></entry><entry><id>tag:blogger.com,1999:blog-27009232.post-5662704129957925827</id><published>2010-08-02T11:49:00.000+05:30</published><updated>2010-08-02T11:49:47.320+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಸ್ಥಿತ್ಯಂತರ</title><content type='html'>&lt;span style="color: #660000;"&gt;"ಹೂವಿಗಿಂತ ಅರಳು ಮೊಗ್ಗು ಯಾಕೆ ಚಂದ ಹೇಳು? -ಪೂರ್ತಿ ಬಿರಿಯದೆ, ಒಳಗೆ ಸೊಬಗಿದೆ ಅಂತ ಹೇಳುವ ಬಗೆಗೆ.."&lt;/span&gt;&lt;br /&gt;&lt;b style="color: #20124d;"&gt;-ಸಿಂಧು&lt;/b&gt;&lt;br /&gt;&lt;br /&gt;&lt;span style="color: lime;"&gt;&lt;span style="color: #0b5394;"&gt;* &lt;/span&gt;&lt;span style="color: #e06666;"&gt;*&lt;/span&gt;&lt;/span&gt;&lt;br /&gt;&lt;br /&gt;ಸುರುಗಿಟ್ಟರೆ ಮಾಲೆಯಲ್ಲೇ ಅರಳಿತು&lt;br /&gt;ಚೂರೂ ತೋರಲಿಲ್ಲ ನಗುವಾಗ ಅಳುಕು.&lt;br /&gt;ಚುಚ್ಚಿದಾಗ ಸೂಜಿ, ಹೊರ-&lt;br /&gt;ಬಂದ ಬಿಳೀರಕ್ತ: ತಡೆಯಲೇ ಇಲ್ಲ&lt;br /&gt;ನಿರ್ದಯಿ ಕೈ.&lt;br /&gt;ಒತ್ತೊತ್ತಿ ತಲೆಯೆತ್ತಿ ಕೇಳಿತು:&lt;br /&gt;ಪ್ರೇಯಸಿಯ ಮುಡಿಗೋ, ದೇವತೆಯ ಅಡಿಗೋ?&lt;br /&gt;ಅವೆರಡಕ್ಕೂ ನಿನ್ನ ಸ್ಪರ್ಶದ ಅರ್ಹತೆಯೇ ಇಲ್ಲ ಅಂತಂದು,&lt;br /&gt;ಮೃದುನೀಳಕಾಯ ನೇವರಿಸಿ&lt;br /&gt;ಬಿಸಿಲ ಬಯಲ ಕಲ್ಲುಬಂಡೆಯ ಮೇಲೆ ಇಟ್ಟು &lt;br /&gt;ಪಕ್ಕದಲ್ಲಿ ತೆಪ್ಪಗೆ ತಲೆತಗ್ಗಿಸಿ ಕೂತುಬಿಟ್ಟೆ.&lt;br /&gt;&lt;br /&gt;ಕವಿತೆ ಬರೆದು ಮುಗಿಯುವಷ್ಟರಲ್ಲಿ&lt;br /&gt;ಕಲ್ಲು ಕರಗಿ, ಸಂಜೆ ಮಾಗಿ&lt;br /&gt;ಸೊರಗಿದ ಹೂವುಗಳ ಮೊಗದಲ್ಲಿ&lt;br /&gt;ಹೊಳೆದ ವಿನೀತ ಕಾಂತಿ ಕಂಡು-&lt;br /&gt;ಸೊಬಗ ತೋರದ ಮೊಗ್ಗು, &lt;br /&gt;ಘಮವ ಬೀರಿದ ಹೂವುಗಳಿಗಿಂತ &lt;br /&gt;ನೋವ ಮೀರಿದ ಈ ಬಾಡಿದ ಬೆಕ್ಕೇ ಚಂದ &lt;br /&gt;ಎಂದೆನಿಸಿ ಮುದ್ದು ಉಕ್ಕಿ ಬಂದುಬಿಟ್ಟಿತು.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-5662704129957925827?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/5662704129957925827/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=5662704129957925827' title='14 Comments'/><link rel='edit' type='application/atom+xml' href='http://www.blogger.com/feeds/27009232/posts/default/5662704129957925827'/><link rel='self' type='application/atom+xml' href='http://www.blogger.com/feeds/27009232/posts/default/5662704129957925827'/><link rel='alternate' type='text/html' href='http://hisushrutha.blogspot.com/2010/08/blog-post.html' title='ಸ್ಥಿತ್ಯಂತರ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>14</thr:total></entry><entry><id>tag:blogger.com,1999:blog-27009232.post-8265719279894138719</id><published>2010-07-15T09:34:00.001+05:30</published><updated>2010-07-15T09:35:50.794+05:30</updated><category scheme='http://www.blogger.com/atom/ns#' term='ಸು-ಲಲಿತ ಪ್ರಬಂಧ'/><category scheme='http://www.blogger.com/atom/ns#' term='ಕೋಸು'/><category scheme='http://www.blogger.com/atom/ns#' term='ಕೆ.ಪಿ. ಪೂರ್ಣಚಂದ್ರ ತೇಜಸ್ವಿ'/><title type='text'>ನಾನೂ ಪಾಕಕ್ರಾಂತಿ ಮಾಡಿದೆ!</title><content type='html'>ಹೆಚ್ಚುಕಮ್ಮಿ ಎರಡೂವರೆ ವರ್ಷಗಳಿಂದ ಜೊತೆಗಿದ್ದ ನನ್ನ ರೂಂಮೇಟು ರೂಮ್ ಬಿಟ್ಟು ಹೋದದ್ದು ಎಲ್ಲದಕ್ಕೂ ನಾಂದಿ. ಊರಲ್ಲಿ ಅಂಗಡಿ ತೆರೆಯುವುದಾಗಿ ಹೇಳಿ ಬೆಂಗಳೂರು ಬಿಟ್ಟುಹೊರಟ ಅವನನ್ನು ನಾನೂ ಖುಶಿಯಿಂದಲೇ ಕಳುಹಿಸಿಕೊಟ್ಟೆ. ಖುಶಿ ಯಾಕಪ್ಪಾ ಅಂದ್ರೆ, ಎಲ್ಲರೂ ಊರು ಬಿಟ್ಟು ಬೆಂಗಳೂರು ಸೇರಿಕೊಳ್ಳುತ್ತಿರುವಾಗ ಇವನೊಬ್ಬ ಧೈರ್ಯ ಮಾಡಿ ವಾಪಸು ಊರಿಗೆ ಹೋಗುತ್ತೀನಿ ಎನ್ನುತ್ತಿದ್ದಾನಲ್ಲಾ ಅಂತ. ಊರಿಗೆ ಹೊರಡುವ ಹಿಂದಿನ ದಿನ ಅವನು ಕೇಳಿದ್ದ: "ನಾ ಬಿಟ್ ಹೋದ್ಮೇಲೆ ನಿನ್ ಗತಿ ಏನು? ಬೇರ್ ರೂಂಮೇಟ್ ಹುಡುಕ್ಕೊಳ್ತೀಯೋ ಅಥವಾ ಒಬ್ಬನೇ ಇರ್ತೀಯೋ?" ಅಂತ. ಅದಕ್ಕೆ ನಾನು, "ಅದೇನಯ್ಯಾ ಪಿಚ್ಚರ್ರಲ್ಲಿ ಮೊದಲನೇ ಹೆರಿಗೆ ಟೈಮಲ್ಲಿ ಹೆಂಡ್ತಿ ಕೇಳ್ದಂಗೆ ಕೇಳ್ತಿದೀಯಾ? ಯಾರನ್ನಾದ್ರೂ ಸೇರಿಸಿಕೊಳ್ತೇನಪ್ಪಾ, ಒಬ್ಬನೇ ಯಾಕೆ ಇಷ್ಟೆಲ್ಲ ರೆಂಟ್ ಪೇ ಮಾಡ್ಕೊಂಡ್ ಇರ್ಲಿ? ಯಾರಾದ್ರೂ ಸಿಗೋವರೆಗೆ ಒಬ್ಬನೇ ಇರ್ತೀನಿ" ಅಂತ ಹೇಳಿ ಜೋಶಲ್ಲೇ ಕಳುಹಿಸಿಕೊಟ್ಟಿದ್ದೆ.&lt;br /&gt;&lt;br /&gt;ಆದರೆ ಆತ ಅದೇನು ಶಾಪ ಹಾಕಿ ಹೋಗಿದ್ದನೋ ಏನೋ, ಸುಮಾರು ಮೂರು ತಿಂಗಳಾದರೂ ನನಗೊಬ್ಬ ಹೊಸ ರೂಂಮೇಟ್ ಸಿಗಲಿಲ್ಲ. ಬೆಂಗಳೂರಿನಲ್ಲಿ ಕೆಲಸ ಸಿಗುವುದು ಕಷ್ಟ, ಒಳ್ಳೆಯ ಬಾಡಿಗೆ ಮನೆ ಸಿಗುವುದು ಕಷ್ಟ, ಸೂಪರ್ರಾಗಿರೋ ಹುಡುಗಿ ಸಿಗುವುದು ಕಷ್ಟ ಅಂತೆಲ್ಲ ಗೊತ್ತಿತ್ತು; ಆದರೆ ಒಬ್ಬ ಪುಟಗೋಸಿ ರೂಂಮೇಟ್ ಸಿಗುವುದು ಇಷ್ಟೊಂದು ಕಷ್ಟ ಅಂತ ಖಂಡಿತ ಗೊತ್ತಿರಲಿಲ್ಲ. ಸುಮಾರು ಫ್ರೆಂಡ್ಸಿಗೆ ಹೇಳಿದೆ, ಎಸ್ಸೆಮ್ಮೆಸ್ ಕಳುಹಿಸಿದೆ, ಗೂಗಲ್ಲಿನಲ್ಲಿ ಸ್ಟೇಟಸ್ ಮೆಸೇಜ್ ಮಾಡ್ಕೊಂಡೆ... ಊಹುಂ, ಏನೂ ಉಪಯೋಗ ಆಗಲಿಲ್ಲ. ಇನ್ನು ವಿಜಯ ಕರ್ನಾಟಕದಲ್ಲಿ ಜಾಹೀರಾತು ಕೊಡೋದೊಂದೇ ಉಳಿದ ಮಾರ್ಗ ಅನ್ನೋ ಹಂತ ಹೆಚ್ಚುಕಮ್ಮಿ ತಲುಪಿಯೇಬಿಟ್ಟಿದ್ದೆ. &lt;br /&gt;&lt;br /&gt;ನನ್ನ ಹುಡುಕಾಟದ ಸಂದರ್ಭದಲ್ಲಿ ಕೆಲವರು ಹೇಳಿದ್ರು, ‘ಇನ್ನೂ ಎಂಥಾ ರೂಂಮೇಟ್ ಹುಡುಕ್ತಾ ಕೂರ್ತೀಯಾ? ಮದ್ವೆ ಆಗ್ಬಿಡು’ ಅಂತ. ಅಲ್ಲ ಸಾರ್, ಒಬ್ನೇ ಇದ್ರೆ ಖರ್ಚು ಜಾಸ್ತಿ ಅಂತ ರೂಂಮೇಟ್ ಹುಡುಕ್ತಾ ಇದ್ರೆ, ಇವ್ರು ಖರ್ಚು ಡಬಲ್ ಆಗೋ ದಾರಿ ಹೇಳ್ತಿದಾರಲ್ಲಾ..? ಅದ್ಯಾಕೆ ಎಲ್ಲರೂ ಮತ್ತೊಬ್ಬರನ್ನು ಗುಂಡಿಗೆ ತಳ್ಳಲಿಕ್ಕೇ ನೋಡ್ತಾರೆ? ನಾನು ಸುಖವಾಗಿರೋದು ಜನಕ್ಕೆ ಬೇಕಾಗೇ ಇಲ್ಲ. ಇದೊಂದು ಪಾಪಿ ಜನರ ಹಾಳು ದುನಿಯಾ -ಅಂತೆಲ್ಲ ಜನಗಳಿಗೆ, ಈ ಜಗತ್ತಿಗೆ ಹಿಡಿ ಶಾಪ ಹಾಕಿದ್ದೆ.&lt;br /&gt;&lt;br /&gt;ಹಾಗಂತ ರೂಂಮೇಟ್ ಇಲ್ಲದಿದ್ದುದಕ್ಕೆ ಅಷ್ಟೆಲ್ಲ ವ್ಯಥೆ ಪಡುವ ಅವಶ್ಯಕತೆಯೇನೂ ನನಗಿರಲಿಲ್ಲ. ಏಕಾಂಗಿತನವನ್ನೇ ಬಹುವಾಗಿ ಇಷ್ಟಪಡುವ ನಾನು, ಅವನು ಹೊರಡುತ್ತಿದ್ದೇನೆ ಎಂದಾಗ ನನಗೆ ಸಿಗಬಹುದಾದ ಅಲ್ಟಿಮೇಟ್ ಪ್ರೈವೆಸಿಯನ್ನು ನೆನೆದು ಖುಶಿ ಪಟ್ಟಿದ್ದೆ ಸಹ. ಆದರೆ ಅವನು ಊರಿಗೆ ಹೋದದ್ದರ ಪರಿಣಾಮ ಆದ ದೊಡ್ಡ ನಷ್ಟವೆಂದರೆ, ಕನಿಷ್ಟ ರಾತ್ರಿಯಾದರೂ ನಮ್ಮ ಮನೆಯಲ್ಲಿ ಮಾಡಲ್ಪಡುತ್ತಿದ್ದ ನಳಪಾಕಕಾರ್ಯ ನಿಂತುಹೋಯಿತು!&lt;br /&gt;&lt;br /&gt;ನನ್ನ ರೂಂಮೇಟು ತುಂಬಾ ಒಳ್ಳೆಯ ಕುಕ್ ಆಗಿದ್ದ. ಸಾರು ಸಾಂಬಾರುಗಳಲ್ಲದೇ, ತಂಬುಳಿ, ಗೊಜ್ಜು, ಸಾಸ್ವೆ ಇತ್ಯಾದಿ ನಮ್ಮೂರ ಕಡೆ ಅಡುಗೆ ಮಾಡುವುದರಲ್ಲಿ ನಿಷ್ಣಾತನಾಗಿದ್ದ. ಹೇಗೆ ಕೆಟ್ಟ ಚಟಗಳ ದಾಸನಾಗಿ ಹಾದಿತಪ್ಪಿದ ಹುಡುಗನೊಬ್ಬ ಮದುವೆಯಾದಮೇಲೆ ಹೆಂಡತಿಯ ದೆಸೆಯಿಂದ ಸದ್ಗೃಹಸ್ತನಾಗಿ ಬದಲಾಗಿಬಿಡುತ್ತಾನೋ ಹಾಗೆ ಹೋಟೆಲ್ ಊಟದ ಪ್ರೀತಿಯಲ್ಲಿ ಕುರುಡನಾಗಿದ್ದ ನನ್ನನ್ನು ಅದರಿಂದ ಹೊರಬರುವಂತೆ ಮಾಡುವುದರಲ್ಲಿ ಈತ ಯಶಸ್ವಿಯಾಗಿದ್ದ. ಕಟ್ಟು ಸಾರು, ತೊವ್ವೆ, ಮಾವಿನ್‌ಕಾಯಿ ನೀರ್ಗೊಜ್ಜು, ಕೆಂಪು ಹರಿವೆಸೊಪ್ಪಿನ ಮುಧುಳಿ, ಟೊಮೆಟೋ ಸಾಸ್ವೆ, ಸೌತೆಕಾಯಿ ಬೀಸ್ಗೊಜ್ಜುಗಳೇ ಮೊದಲಾದ ಹಳ್ಳಿ ಅಡುಗೆ ಮಾಡಿ ಬಡಿಸಿ ನನ್ನನ್ನು ಮೋಡಿ ಮಾಡಿದ್ದ. ಮದುವೆಯಾದರೆ ಇವನಂಥವಳನ್ನೇ -ಐ ಮೀನ್, ಇವನ ಹಾಗೆ ಅಡುಗೆ ಮಾಡುವವಳನ್ನೇ ಮದುವೆಯಾಗಬೇಕು ಎಂಬ ತೀರ್ಮಾನಕ್ಕೆ ನಾನು ಬರುವಂತೆ ಮಾಡಿದ್ದ.&lt;br /&gt;&lt;br /&gt;ಹಾಗಂತ ನಾನೇನು ಅವನ ನಳಪಾಕದ ಮೋಡಿಗೆ ಮರುಳಾಗಿ ಪೂರ್ತಿ ಶರಣಾಗಿ ಹೋಗಿದ್ದೆನೆಂದುಕೊಳ್ಳಬೇಡಿ.. ಹೇಗೆ ನಾಲ್ಕು ಪೋಲಿಗಳ ಮಧ್ಯೆ ಒಬ್ಬ ಸಭ್ಯ ಹುಡುಗನಿದ್ದರೆ ಅವನನ್ನೂ ತಮ್ಮೆಡೆಗೇ ಎಳೆದುಕೊಳ್ಳಲು ಪೋಲಿಗಳು ಗಾಳ ಹಾಕುತ್ತಿರುತ್ತಾರೋ ಹಾಗೇ ನಾಲ್ಕು ಜನ ಒಳ್ಳೆಯವರ ಮಧ್ಯೆ ಒಬ್ಬ ಕೆಟ್ಟು ಹೋದವನಿದ್ದರೆ ಅವನನ್ನೂ ತಮ್ಮೆಡೆಗೇ ಎಳೆದುಕೊಂಡು ತಮ್ಮಂತೆಯೇ ಸಜ್ಜನನನ್ನಾಗಿ ಮಾಡುವ ಹವಣಿಕೆಯಲ್ಲಿರುತ್ತಾರೆ ಒಳ್ಳೆಯವರು. ಈ ಸದ್ಗೃಹಸ್ತನಾಗುವುದು, ಸಭ್ಯಸಾಚಿಯಾಗುವುದು, ಒಳ್ಳೆಯ ಮಾಣಿಯಾಗುವುದು ಸಹ ಅತ್ಯಂತ ಡೇಂಜರಸ್ ನಡೆ. ಏಕೆಂದರೆ ಒಮ್ಮೆ ನೀವು ‘ಒಳ್ಳೇ ಜನ’ ಅಂತ ಪೇಟೆಂಟ್ ಆಗಿಬಿಟ್ಟಿರಿ ಎಂದರೆ, ಆಮೇಲೆ ಒಳ್ಳೆಯವರಾಗೇ ಇರಬೇಕಾಗುತ್ತದೆ! ಒಳ್ಳೆಯವನಾಗಿರುವ ಕಷ್ಟಗಳು ಅಷ್ಟಿಷ್ಟಲ್ಲ. ಆ ಮೃತ್ಯುಕೂಪದಿಂದ ಕಷ್ಟಪಟ್ಟು ಹೊರಬಂದಿದ್ದ ನನಗೆ ಮತ್ತೆ ಅದಕ್ಕೇ ಬೀಳುವ ಮನಸ್ಸಿರಲಿಲ್ಲ.  ಹೀಗಾಗಿ, ನನ್ನ ರೂಂಮೇಟು ರಾತ್ರಿ ಮಲಗುವ ಮುನ್ನ ‘ಕಷಾಯ ಕುಡಿತ್ಯೇನಲೇ ಭಟ್ಟಾ?’ ಅಂತೇನಾದರೂ ಕೇಳಿದರೆ, ನಾನು ಸುತಾರಾಂ ನಿರಾಕರಿಸುತ್ತಿದ್ದೆ. ಕಷಾಯ ಕುಡಿಯುವುದು ನನ್ನ ಪ್ರಕಾರ ಅತ್ಯಂತ ಕಡು-ಒಳ್ಳೆಯವರ ಲಕ್ಷಣ. ಕಾಫಿಯನ್ನೋ, ಕೋಲಾವನ್ನೋ ಅಥವಾ ಯು ನೋ, ಇನ್ನೇನನ್ನೋ ಕುಡಿಯುವುದು ನನ್ನಂಥವರಿಗೆ ಹೇಳಿಸಿದ್ದು ಎಂಬುದು ನನ್ನ ನಂಬುಗೆಯಾಗಿತ್ತು. ಆದ್ದರಿಂದ, ಅವನು ಬಾರ್ಲಿ ಹಾಲುನೀರು, ಅತ್ತಿಚಕ್ಕೆ ಕಷಾಯ, ಜೀರ್ಗೆ ಬಿಸ್ನೀರು ಅಂತೆಲ್ಲ ಘಮಘಮದ ಪೇಯಗಳನ್ನು ಮಾಡಿಕೊಂಡು ಕುಡಿಯುವಾಗ ನನಗೂ ಟೇಸ್ಟ್ ನೋಡುವ ಆಶೆಯಾಗುತ್ತಿತ್ತಾದರೂ ‘ಒಳ್ಳೆಯವ’ನಾಗಿಬಿಡುವ ಭಯಕ್ಕೆ ತಡೆದುಕೊಂಡು ಸುಮ್ಮನಿರುತ್ತಿದ್ದೆ.&lt;br /&gt;&lt;br /&gt;ಇವನು ಬಿಟ್ಟುಹೋದಮೇಲೆ ನಾನು ಡೈವೊರ್ಸ್ ಪಡೆದ ಗಂಡನಂತಾದೆ. ಹಳೇ ಫ್ರೆಂಡುಗಳ ಪಡ್ಡೆ ಗ್ಯಾಂಗ್ ಹುಡುಕಿಕೊಂಡು ಹೋಗುವವನಂತೆ ಮತ್ತೆ ಹೋಟೆಲುಗಳತ್ತ ಮುಖ ಮಾಡಿದೆ. ಆದರೆ ಇಷ್ಟು ದಿನ ತಮ್ಮನ್ನು ನಿರ್ಲಕ್ಷಿಸಿದ್ದಕ್ಕೆ ನನ್ನ ಮೇಲೆ ಕೋಪಗೊಂಡಿದ್ದ ಹೋಟೆಲ್ ಫುಡ್ಡು, ನನಗೆ ಅವು ರುಚಿಯೇ ಅಲ್ಲ ಎನಿಸುವಂತೆ ಮಾಡಿದುವು. ಮನೆ ಊಟಕ್ಕಾಗಿ ಹಾತೊರೆಯುವಂತಾಯಿತು. ರೂಂಮೇಟನ್ನು ಮಿಸ್ ಮಾಡಿಕೊಳ್ಳತೊಡಗಿದೆ.&lt;br /&gt;&lt;br /&gt;ಆದರೆ ನಾನೇನು ತೀರಾ ಪಾಕಶಾಸ್ತ್ರವೆಂಬ ಸಬ್ಜೆಕ್ಟಿನಲ್ಲಿ ಫೇಲ್ ಆದವನೇನಲ್ಲ. ಡಿಸ್ಟಿಂಕ್ಷನ್ನು, ಫಸ್ಟ್‌ಕ್ಲಾಸು ಅಲ್ಲದಿದ್ದರೂ ಜಸ್ಟ್ ಪಾಸಿಗಿಂತ ಸ್ವಲ್ಪ ಮೇಲೇ ಇದ್ದೆ. ಚಿಕ್ಕವನಿದ್ದಾಗಲೇ ಮನೆಯಲ್ಲಿ ಬೆಲ್ಲ ಕಾಯಿಸಿ ಚಾಕಲೇಟ್ ತಯಾರಿಸಿ ಊರ ಹುಡುಗರ ಮೆಚ್ಚುಗೆ ಗಳಿಸಿದ್ದೆ. ಬೆಂಗಳೂರಿಗೆ ಬಂದಮೇಲೂ ನನ್ನ ರೂಂಮೇಟ್ ಆಫೀಸಿನಿಂದ ಬರುವುದು ತಡವೆಂದಾದಾಗಲೆಲ್ಲ ನಾನೇ ಅಡುಗೆ ಮಾಡುವ ಅನಿವಾರ್ಯತೆಗೆ ಬಿದ್ದು, ಎಂಟಿ‌ಆರ್ ರಸಂ, ಬೀಟ್‌ರೂಟ್ ಹುಳಿ, ಹುಣಿಸೇಹಣ್ಣಿನ ಗೊಜ್ಜು, ಇತ್ಯಾದಿ ಪಾಕಗಳಲ್ಲಿ ಸೈ ಎನಿಸಿಕೊಂಡಿದ್ದೆ. ಅಷ್ಟೇ ಅಲ್ಲ; ಹಾಲು ಕಾಯಿಸಲು ಇಟ್ಟು ಏನನ್ನೋ ಓದುತ್ತಾ ಮೈಮರೆತು ಅದು ಅಲ್ಲಿ ಉಕ್ಕಿ ಪಾತ್ರೆ ಪೂರ್ತಿ ಸೀದುಹೋದಮೇಲೂ, ಒಲೆ, ಗ್ಯಾಸ್‌ಕಟ್ಟೆ, ಪಾತ್ರೆಯನ್ನೆಲ್ಲ ಕ್ಲೀನ್ ಮಾಡಿ ರೂಂಮೇಟ್ ಬರುವುದರೊಳಗೆ ಮತ್ತರ್ಧ ಲೀಟರ್ ಹಾಲು ತಂದು ಕಾಯಿಸಿಟ್ಟು ಏನೂ ಆಗದವನಂತೆ ನಾಟಕ ಮಾಡುವ ಕಲೆ ಕರಗತ ಮಾಡಿಕೊಂಡಿದ್ದೆ.  ಪೂರ್ಣಚಂದ್ರ ತೇಜಸ್ವಿಯವರ ಪಾಕಕ್ರಾಂತಿಯಿಂದ ಪಾಠ ಕಲಿತಿದ್ದ ನಾನು, ಅವರು ಮಾಡಿದ ತಪ್ಪುಗಳೊಂದನ್ನೂ ಮಾಡಬಾರದು ಅಂತ ನಿರ್ಧಸಿದ್ದೆ.&lt;br /&gt;&lt;br /&gt;ಕುಕ್ಕರ್ ಇಡುವಾಗ ತಳದಲ್ಲಿ ನೀರು ಸರಿಯಾಗಿ ಹಾಕದೆ ಇಟ್ಟೋ ಅಥವಾ ಅಡಿಯ ಪ್ಲೇಟ್ ಇಡದೆಯೋ ಅಥವಾ ಗ್ಯಾಸ್ಕೆಟ್ ಹಾಕುವುದನ್ನು ಮರೆತೋ ಹೋಗಿ ಆಮೇಲೆ ಅನಾಹುತವಾದಮೇಲೆ ತಲೆಯ ಮೇಲೆ ಕೈ ಹೊತ್ತು ಕೂರುವ ಸಾಮಾನ್ಯ ಅರೆಪಾಕತಜ್ಞರಂಥವ ನಾನಾಗಿರಲಿಲ್ಲ. ಬದಲಿಗೆ, ಕುಕ್ಕರ್ ಒಲೆಯ ಮೇಲಿಟ್ಟು ಬಂದು ಅರ್ಧ ಗಂಟೆಯಾದರೂ ಅದು ಕೂಗದಿದ್ದಾಗ -ಕನಿಷ್ಟ ಬುಸುಬುಸು ಸದ್ದು ಮಾಡುವುದಕ್ಕೂ ಶುರುವಿಡದಿದ್ದಾಗ- ಅರೆ, ಇದೇನಾಯ್ತೆಂದು ಒಳಗೆ ಹೋಗಿ ನೋಡಿದರೆ, ಸ್ಟೊವ್ ಆನ್ ಮಾಡುವುದನ್ನೇ ಮರೆತಿದ್ದೆ! ಸ್ಟೊವ್ ಹಚ್ಚದಿದ್ದರೂ ಕೂಗುವುದಕ್ಕೆ ಅದೇನು ಸೋಲಾರ್ ಕುಕ್ಕರ್ರೇ? ಅಥವಾ ಸೋಲಾರ್ ಕುಕ್ಕರ್ ಆಗಿದ್ದರೂ ಕೂಗುವುದಕ್ಕೆ ಇದೇನು ಹಗಲೇ? ಅಥವಾ ರಾತ್ರಿಯಾಗಿದ್ದರೂ ಬೆಳಗುವುದಕ್ಕೆ ಸೂರ್ಯನಿಗೇನು ಮರುಳೇ? ಇರಲಿ, ಆದರೂ ತಪ್ಪು ಮಾಡಿ ಮರುಳಾಗುವ ಉಳಿದ ನಳರಿಗಿಂತ ನಾನು ಕಡಿಮೆ ಬೆಪ್ಪನಾಗಿದ್ದಕ್ಕೆ ಖುಶಿ ಪಟ್ಟೆ.&lt;br /&gt;&lt;br /&gt;ಅಂದು ಸಂಜೆ ಆಫೀಸಿನಿಂದ ಬಂದವನು, ತರಕಾರಿ ಕೊಳ್ಳಲೆಂದು ಅಂಗಡಿ ಮುಂದೆ ನಿಂತಿದ್ದಾಗ ವಿನಾಯಕ ಕೋಡ್ಸರ ಎಂಬ ಗೆಳೆಯ ಫೋನ್ ಮಾಡಿದ. “ಏನಯ್ಯಾ ಮಾಡ್ತಿದೀಯಾ?” ಅಂತ ಕೇಳಿದ. “ತರಕಾರಿ ಕೊಳ್ಳೋಕೆ ಅಂತ ಬಂದಿದೀನಿ ಮಾರಾಯ. ಇಲ್ಲಿ ಹತ್ತಾರು ಶೆಲ್ಫುಗಳಲ್ಲಿ ನೂರಾರು ಜಾತಿಯ ಹಲವಾರು ಬಣ್ಣದ ತರಕಾರಿಗಳನ್ನ ಇಟ್ಟಿದಾರೆ. ಯಾವ್ದುನ್ನ ತಗಳೋದು ಯಾವ್ದುನ್ನ ಬಿಡೋದು ಗೊತ್ತಾಗ್ತಾ ಇಲ್ಲ. ಎಲ್ಲಾ ಸಿಕ್ಕಾಪಟ್ಟೆ ರೇಟ್ ಬೇರೆ” ಅಂತ ಹೇಳಿದೆ. ಅದಕ್ಕೆ ಅವನು, “ಒಂದು ಕೋಸ್ಗೆಡ್ಡೆ ತಗೊಂಬಿಡಪ್ಪಾ.. ನಿಂಗೆ ಎರಡು ದಿನಕ್ಕೆ ಸಾಕು. ಚೀಪ್ ಅಂಡ್ ಬೆಸ್ಟ್” ಅಂತ ಸಲಹೆ ಕೊಟ್ಟ. ಹಾಗೆ ಹೇಳುವುದರ ಮೂಲಕ ಅವನು ನನ್ನನ್ನು ಎಂತಹ ತಪ್ಪು ದಾರಿಗೆ ಎಳೆಯುತ್ತಿದ್ದಾನೆ ಎಂಬ ಅರಿವು ನನಗೆ ಆ ಕ್ಷಣದಲ್ಲಿ ಆಗಲಿಲ್ಲ. ಎಲೆಕೋಸಿನ ಗೆಡ್ಡೆ ಕೊಂಡು ತಂದುಬಿಟ್ಟೆ.&lt;br /&gt;&lt;br /&gt;ಮನೆಗೆ ಬಂದು ಕತ್ತರಿಸಿ, ಅದರ ಸ್ವಲ್ಪ ಭಾಗವನ್ನು ಬಳಸಿ, ಅವತ್ತಿಗೆ ಒಂದು ಭರ್ಜರಿ ಸಾಂಬಾರು ಮಾಡಿ ಉಂಡುಬಿಟ್ಟೆ. ಮರುದಿನ ಮತ್ತೆ ತರಕಾರಿ ಕೊಳ್ಳುವ ಗೋಜಿಲ್ಲದಿದ್ದುದರಿಂದ ಆಫೀಸಿನಿಂದ ನೇರವಾಗಿ ಮನೆಗೆ ಬಂದೆ. ತರಕಾರಿ ಬಾಸ್ಕೆಟ್ಟಿನಲ್ಲಿ ಎಲೆಕೋಸು ಮುದ್ದಾಗಿ ಕೂತಿತ್ತು. ಮತ್ತಷ್ಟು ಕತ್ತರಿಸಿ ಈ ಸಲ ಪಲ್ಯ ಮಾಡಿದೆ. ಬರೀ ಪಲ್ಯ ಕಲಸಿಕೊಂಡು ತಿನ್ನಲಿಕ್ಕಾಗುತ್ತದೆಯೇ? ಮಜ್ಜಿಗೆ ತಂಬುಳಿ ಮಾಡಿಕೊಂಡೆ.  ಮರುದಿನ ಬಂದು ಬಾಸ್ಕೆಟ್ ನೋಡಿದರೆ ಕೋಸುಗೆಡ್ಡೆ ಇನ್ನೂ ಹಾಗೇ ಇದೆ! ನನಗೆ ಎಲೆಕೋಸಿನ ಗೆಡ್ಡೆ ಒಂದು ಮುಗಿಯದ ಸಂಪತ್ತಾಗಿ ಕಂಡಿತು. ಒಂದೇ ಒಂದು ಗೆಡ್ಡೆ ಕೊಂಡುತಂದರೆ ಮೂರ್ನಾಲ್ಕು ದಿನಕ್ಕಾಗುವ ಇದು ಅತ್ಯಂತ ಒಳ್ಳೆಯ ತರಕಾರಿ ಅಂತ ತೀರ್ಮಾನಿಸಿದೆ. ಯಾಕೋ ಜನರಿಗೆ ಇದರ ಅರಿವೇ ಇಲ್ಲ, ಇದನ್ನು ಸರಿಯಾಗಿ ಪ್ರಮೋಟ್ ಮಾಡಿದ್ದೇ ಹೌದಾದರೆ ನಮ್ಮ ದೇಶದ ಬಡತನ ನಿವಾರಣೆ ಶೀಘ್ರದಲ್ಲೇ ಆಗುತ್ತದೆ, ಯಾರೂ ಹಸಿವಿನಿಂದ ಸಾಯುವುದು ಬೇಕಿಲ್ಲ ಅನ್ನಿಸಿತು. ದ್ರೌಪದಿಯ ಸೀರೆಯಂತೆ ಎಷ್ಟು ಬಿಡಿಸಿದರೂ ಮುಗಿಯದ ಇದರ ಪದರಗಳನ್ನು ಬಿಡಿಸುತ್ತಾ ಭವ್ಯ ಭಾರತದ ಕನಸು ಕಂಡೆ. ಮೊಸರು ಬೆರೆಸಿ ಸಾಸ್ವೆ ಮಾಡುವುದರೊಂದಿಗೆ, ನನ್ನ ರೂಮಿನಲ್ಲಿ ಮೂರನೇ ದಿನವೂ ಕೋಸ್ಗೆಡ್ಡೆ ಅಮೋಘ ಪ್ರದರ್ಶನ ಕಂಡಿತು.&lt;br /&gt;&lt;br /&gt;ಸಮಸ್ಯೆ ಶುರುವಾದದ್ದು ನಾಲ್ಕನೇ ದಿನ ಬೆಳಗ್ಗೆ! ಸಾಮಾನ್ಯವಾಗಿ ಏಳುತ್ತಿದ್ದಂತೆಯೇ ಹಸಿವಾಗುವ ಹೊಟ್ಟೆ, ಇವತ್ಯಾಕೋ ತುಂಬಿಕೊಂಡೇ ಇದ್ದಂತೆ, ಭಾರ ಭಾರ ಅನ್ನಿಸಿತು. ಒಂದು ಕಾಫಿ ಕುಡಿದರೆ ಸರಿಯಾದೀತು ಅಂತ ನೋಡಿದರೆ, ಎರಡು ಸಿಪ್ ಕುಡಿಯುವಷ್ಟರಲ್ಲಿ ಮುಂದೆ ಕುಡಿಯುವುದು ಸಾಧ್ಯವೇ ಇಲ್ಲ ಎಂಬಂತೆ ವಾಕರಿಕೆ ಬರಲಾರಂಭಿಸಿತು. ಸರಿ, ಟಾಯ್ಲೆಟ್ಟಿಗೆ ಹೋಗಿಬಂದೆ. ಯಾಕೋ ಕಾರಣವೇ ಇಲ್ಲದೆ ತೀರಾ ಆಲಸಿತನದ ಭಾಸವಾದರೂ ತಯಾರಾಗಿ ಆಫೀಸಿಗೆ ಹೊರಟೆ. ಮಧ್ಯೆ ಹೋಟೆಲ್ಲಿನಲ್ಲಿ ತಿಂಡಿ ತಿನ್ನಲು ಪ್ರಯತ್ನಿಸಿದರೆ ಅದೂ ಸಾಧ್ಯವಾಗಲಿಲ್ಲ. ಮಧ್ಯಾಹ್ನ ಊಟಕ್ಕೆ ಅಂತ ಹೋಗಿ, ಒಂದು ತುತ್ತು ತಿನ್ನುವಷ್ಟರಲ್ಲಿ ತೇಗು ಬಂತು! ಅದರ ಮೇಲೆ ಮತ್ತೆರಡು ತೇಗು! ಆಗ ಅರ್ಥವಾಯಿತು, ನನ್ನ ಹೊಟ್ಟೆಯೊಳಗೆ ಪೂರ್ತಿ ಗ್ಯಾಸ್ ತುಂಬಿಕೊಂಡಿದೆ!&lt;br /&gt;&lt;br /&gt;ಗೋಬರ್ ಗ್ಯಾಸು, ಸಿಲಿಂಡರ್ ಗ್ಯಾಸು, ಹೈಡ್ರೋಜನ್ ಗ್ಯಾಸು, ಟಿಯರ್ ಗ್ಯಾಸುಗಳಂತೆ ಈ ಹೊಟ್ಟೆಯೊಳಗೆ ತುಂಬಿಕೊಳ್ಳುವ ಗ್ಯಾಸೂ ಒಂದು. ಆದರೆ ಅವೆಲ್ಲ ಒಂದಲ್ಲಾ ಒಂದು ರೀತಿಯಲ್ಲಿ ಉಪಯೋಗಕ್ಕೊಳಗಾಗುತ್ತವಾದರೆ, ಈ ಗ್ಯಾಸಿನಿಂದ ಯಾವುದೇ ಪ್ರಯೋಜನವಿಲ್ಲ. ಬದಲಿಗೆ, ಟ್ರಬಲ್ಲೇ ಹೆಚ್ಚು! ಉದಾನವಾಯು, ಅಪಾನವಾಯುಗಳಂತಹ ಕ್ರಿಯೆಗಳಿಂದ ಮಾತ್ರ ಇದನ್ನು ಹೊರಹಾಕಲಿಕ್ಕೆ ಸಾಧ್ಯ.  ಸರಿ, ಮೊದಲಿಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ನನಗೇ ಗೊತ್ತಿದ್ದ ಒಂದೆರಡು ಮಾತ್ರೆ ನುಂಗಿದೆ. ಸರಿ ಹೋದೀತೆಂದು ಕಾದೆ. ಆದರೆ ಊಹುಂ, ತೇಗಮೊರೆತ ಮುಂದುವರೆಯಿತು. ಮನೆಗೆ ಫೋನ್ ಮಾಡಿ ಹೇಳೋಣವೆನಿಸಿದರೂ ಸುಮ್ಮನೆ ಅವರಿಗೂ ಟೆನ್ಷನ್ ಕೊಡೋದು ಬೇಡ ಅಂತ ಸುಮ್ಮನಾದೆ. ಕಷ್ಟ ಪಟ್ಟು ಆ ರಾತ್ರಿ ಕಳೆದೆದ್ದರೆ, ಮರುದಿನ ಬೆಳಗ್ಗೆ ಹೊಟ್ಟೆನೋವು ಸಹ ಸೇರಿಕೊಂಡಿತು. ಅದಕ್ಕೂ ಮಾತ್ರೆಗಳನ್ನು ನುಂಗಿದೆ. ಎರಡನೇ ದಿನ ಸಂಜೆಯೂ ಸಮಸ್ಯೆ ಗುಣವಾಗುವ ಲಕ್ಷಣ ಕಾಣದೇ ಹೋದ್ದರಿಂದ, ಇದು ಯಾಕೋ ಗ್ರಹಚಾರ ಕೆಟ್ತಲ್ಲಪ್ಪಾ ಅಂತ, ಸೀದಾ ಅಮ್ಮನಿಗೆ ಫೋನ್ ಮಾಡಿದೆ:&lt;br /&gt;&lt;br /&gt;ನಾನು: ಎಂಥಕ್ ಹಿಂಗಾತು ಅಂತ ಗೊತ್ತಿಲ್ಲೆ ಅಮ್ಮ, ಹೊಟ್ಟೇಲಿ ಗ್ಯಾಸ್ ತುಂಬಿಕೊಂಡಿದ್ದು ಅನ್‌ಸ್ತು, ಬರೀ ತೇಗು.&lt;br /&gt;ಅಮ್ಮ: ಏನು ತಿಂದೆ ನಿನ್ನೆ?&lt;br /&gt;ನಾನು: ಕೋಸುಗೆಡ್ಡೆ ಸಾಸ್ವೆ&lt;br /&gt;ಅಮ್ಮ: ಮೊನ್ನೆ?&lt;br /&gt;ನಾನು: ಕೋಸುಗೆಡ್ಡೆ ಪಲ್ಯ, ತಂಬ್ಳಿ&lt;br /&gt;ಅಮ್ಮ: ಆಚೆ ಮೊನ್ನೆ?&lt;br /&gt;ನಾನು: ಕೋಸುಗೆಡ್ಡೆ ಹುಳಿ&lt;br /&gt;&lt;br /&gt;‘ನಿಂಗೇನಾದ್ರೂ ತಲೆ ಸರಿ ಇದ್ದಾ?’ ಅಂತ ಬೈದಳು ಅಮ್ಮ. ನನ್ನ ತಲೆ ಸರಿಯಿರುವುದರ ಬಗ್ಗೆ ಅಮ್ಮನಿಗೆ ಅನುಮಾನಗಳಿರುವುದು ನನಗೆ ಗೊತ್ತಿರಲಿಲ್ಲ. ಈಗ ಆತಂಕವಾಯಿತು: ಮಗನ ತಲೆಯ ಬಗ್ಗೆ ಅಮ್ಮನಿಗೇ ಅನುಮಾನಗಳಿದ್ದುಬಿಟ್ಟರೆ, ಮೊದಲೇ ಮದುವೆಯಾಗದ ಹುಡುಗ, ಇನ್ನು ಬೇರೆಯವರನ್ನು ಹೇಗಪ್ಪಾ ನಂಬಿಸೋದು ಅಂತ.. ಅಮ್ಮ ಮುಂದುವರಿಸಿದಳು: ‘ಎಲೆಕೋಸು ಅಜೀರ್ಣಕ್ಕೆ ನಂಬರ್ ವನ್ನು. ಒಂದು ದಿನ ತಿಂದ್ರೇ ಕಷ್ಟ; ಇನ್ನು ನೀನು ಮೂರ್ಮೂರ್ ದಿನ ಅದನ್ನೇ ತಿಂದಿದ್ಯಲ, ಆರೋಗ್ಯ ಹಾಳಾಗ್ದೇ ಮತ್ತಿನೆಂತಾಗ್ತು?’ ಈಗ ನನಗೆ ಅರ್ಥವಾಯಿತು. ಹೊಟ್ಟೆಯೊಂದೇ ನನಗೆ ಸರಿಯಿಲ್ಲದಿರುವುದು, ತಲೆ ಸರಿಯಿದೆ ಅಂತ ಸಮಾಧಾನ ಮಾಡಿಕೊಂಡೆ. 'ಎಲೆಲೆ ಕೋಸೇ!' ಅಂದುಕೊಂಡೆ. ಆಮೇಲೆ ಅಮ್ಮ, ಓಮಿನ ಕಾಳು ಬತ್ತಿಸಿದ ನೀರು ಕುಡಿಯುವಂತೆ, ಬೆಳ್ಳುಳ್ಳಿ-ಶುಂಟಿ ಜಜ್ಜಿ ಮೊಸರಿಗೆ ಹಾಕಿಕೊಂಡು ಉಣ್ಣುವಂತೆ, ಹೆಸರುಬೇಳೆ ಬೇಯಿಸಿ ಹಾಲು-ಸಕ್ಕರೆ ಬೆರೆಸಿ ಸೇವಿಸುವಂತೆ, ಇಷ್ಟೆಲ್ಲ ಮಾಡಿದಮೇಲೂ ಹುಷಾರಾಗದಿದ್ದರೆ ಹೋಗಿ ಡಾಕ್ಟರನ್ನು ಕಾಣುವಂತೆ ಸೂಚಿಸಿ ಫೋನಿಟ್ಟಳು. ಇಷ್ಟೆಲ್ಲ ಮಾಡಿದ ಮೇಲೆ ಗುಣವಾಗದಿರುವುದಕ್ಕೆ ಛಾನ್ಸೇ ಇಲ್ಲ ಅಂತ ನನಗನ್ನಿಸಿತು.&lt;br /&gt;&lt;br /&gt;ಈ ಹಿಂದೆಯೂ ಇಂಥದೇನಾದರೂ ತೊಂದರೆಯಾದರೆ ನಾನು ರೂಂಮೇಟಿಗೂ ಹೇಳದೆ ಇಂಗ್ಲೀಷ್ ಮಾತ್ರೆ ನುಂಗಿ ಹುಷಾರು ಮಾಡಿಕೊಳ್ಳುತ್ತಿದ್ದೆ. ಅವನಿಗೆ ಹೇಳಿದರೆ ಅಮ್ಮನ ಹಾಗೆಯೇ, ಒಳ್ಳೆಯವರ ಹುಟ್ಟುಲಕ್ಷಣದಂತೆ, ಏನೇನೋ ಹಳ್ಳಿ ಔಷದಿ ಮಾಡಿಕೊಂಡು ಕುಡಿಯುವಂತೆ ಹೇಳುತ್ತಿದ್ದ. ಹಾಗಾಗಿ ನಾನು ಅವನಿಗೆ ಹೇಳಲಿಕ್ಕೇ ಹೋಗುತ್ತಿರಲಿಲ್ಲ. ಆದರೆ ಈ ಸಲದ ಖಾಯಿಲೆ ಇಂಗ್ಲೀಷ್ ಔಷಧಿಗಳಲ್ಲಿ ಹುಷಾರಾಗುವ ಹಾಗೆ ಕಾಣಲಿಲ್ಲ. ಅಮ್ಮ ಹೇಳಿದ ಸಲಹೆಗಳನ್ನು ಜಾರಿಗೆ ತರಲೆಂದು ನಾನು ಅಡುಗೆ ಮನೆಗೆ ಹೋದೆ. ಓಮಿನ ಕಾಳಿನ ಕಷಾಯ, ಶುಂಟಿ ಕಷಾಯ, ಬೆಳ್ಳುಳ್ಳಿ ಗೊಜ್ಜು -ಇವನ್ನೆಲ್ಲ ಮಾಡಲಿಕ್ಕೆ ಐಟೆಮ್ ಎಲ್ಲಿದೆಯಪ್ಪಾ ಅಂತ ಶೆಲ್ಫಿನ ಡಬ್ಬಿಗಳಲ್ಲಿ ತಡಕಾಡತೊಡಗಿದೆ. ನನ್ನ ರೂಂಮೇಟು ಬಿಟ್ಟು ಹೋಗಿದ್ದ ಸರಕಿನಲ್ಲಿ ಅವೆಲ್ಲ ಇರಲೇಬೇಕೆಂಬುದು ನನ್ನ ಅಂದಾಜು. ಸರಿಯಾದ ಟೈಮಿಗೆ ಅವನೇ ಫೋನ್ ಮಾಡಿದ:&lt;br /&gt;&lt;br /&gt;"ಎಂಥ ಮಾಡ್ತಿದ್ಯೋ? ಡಬ್ಬಿ ಮುಚ್ಚಳ ತೆಗ್ದು-ಹಾಕಿ ಮಾಡೋ ಸೌಂಡ್ ಬರ್ತಾ ಇದ್ದು?" ಕೇಳಿದ.&lt;br /&gt;&lt;br /&gt;"ಹೆಹೆ.. ಎಂತಿಲ್ಲೆ ಮಾರಾಯಾ.. ಈ ಓಮಿನ್ ಕಾಳು ಮತ್ತೆ ಶುಂಟಿ ಎಲ್ಲಿದ್ದು ಅಂತ ಹುಡುಕ್ತಿದ್ದಿ.." ಎಂದೆ.&lt;br /&gt;&lt;br /&gt;"ಏನಂದೇ..?! ಓಮಿನ್ ಕಾಳಾ? ನಿಂಗಾ? ನಾನು ಯಾರ ಹತ್ರ ಮಾತಾಡ್ತಾ ಇದ್ದಿ ಅಂತ ಕನ್‌ಫ್ಯೂಸ್ ಆಗ್ತಾ ಇದ್ದು.. ಹಲೋ..?" ಬೇಕಂತಲೇ ನಾಟಕ ಮಾಡಿದ.&lt;br /&gt;&lt;br /&gt;ಅವನಿಗೆ ವಿಷಯ ಹೇಳದೇ ವಿಧಿಯಿರಲಿಲ್ಲ; ಹೇಳಿದೆ. ನಾನೂ ತೇಜಸ್ವಿಯವರಂತೆ ಪಾಕಕ್ರಾಂತಿ ಮಾಡುವುದಕ್ಕೆ ಮುಂದಾದದ್ದು, ಆ ಕ್ರಾಂತಿಯಿಂದಾದ ಪರಿಣಾಮಗಳು, ಈಗ ಉಂಟಾಗಿರುವ ಕರುಣಾಜನಕ ಸ್ಥಿತಿ, ಎಲ್ಲಾ.&lt;br /&gt;&lt;br /&gt;ಆ ಕಡೆಯಿಂದ ಗಹಗಹ ನಗು: "ನನ್ ಮಗನೇ, ನಾ ಇದ್ದಾವಾಗ ಒಂದು ದಿನ ಕಷಾಯ ಕುಡಿ ಅಂದ್ರೆ ಕುಡಿತಿರ್ಲೆ ಹೌದಾ? ಈಗ ನೋಡು.. ಹೆಂಗಾತು ಧಗಡಿ! ಹಹ್ಹಹ್ಹಾ..!"&lt;br /&gt;&lt;br /&gt;ನನಗೆ ವಿಪರೀತ ಕೋಪ ಬಂದರೂ ಈ ಅಸಹಾಯಕತೆಯಲ್ಲಿ ಏನೂ ಹೇಳಲಿಕ್ಕೆ ಮನಸು ಬರಲಿಲ್ಲ. ಕೊನೆಗೆ ಅವನೇ ತಡೆದುಕೊಂಡು, ನೋಡು ಇಂಥಾ ಸಣ್ಣ ಕರಡಿಗೆಯಲ್ಲಿ ಇದೆ ಓಮಿನ್ ಕಾಳು ಅಂತ ಹೇಳಿದ. ಅಲ್ಲೇ ಇತ್ತು. ಬತ್ತಿಸಿಕೊಂಡು ಕುಡಿದೆ. ಇವತ್ತು ಮುಂಜಾನೆ ಏಳುವ ಹೊತ್ತಿಗೆ ಸಮಸ್ಯೆಯೆಲ್ಲ ಮಾಯ!&lt;br /&gt;&lt;br /&gt;ಪ್ರೀತಿಯುಕ್ಕಿ, ರೂಂಮೇಟಿಗೆ ಎಸ್ಸೆಮೆಸ್ ಮಾಡಿದೆ: "ಥ್ಯಾಂಕ್ಯೂ ದೋಸ್ತಾ.. ಹುಷಾರಾತು.. ಎಲ್ಲಾ ಓಮಿನ್ ಕಾಳಿನ ದೆಸೆ."  ನಿಮಿಷದೊಳಗೆ ಅವನಿಂದ ರಿಪ್ಲೇ: "ಯು ಆರ್ ವೆಲ್ಕಮ್ಮು. ಬರೀ ಅಡುಗೆ ಮಾಡಕ್ಕೆ ಬಂದ್ರೆ ಆಗಲ್ಲೆ, ಯಾವ್ದುನ್ನ ಎಷ್ಟ್ ಮಾಡವು ಅಂತಾನೂ ಗೊತ್ತಿರವು. ತಿಳ್ಕ: ಕೋಸು ಮತ್ತು ಕೂಸು -ಈ ಎರಡೂ ವಿಷ್ಯಗಳಲ್ಲಿ ಭಾಳಾ ಹುಷಾರಾಗಿರವು. ಇನ್ಮೇಲಿಂದ ಡೈಲೀ ರಾತ್ರಿ ಮಲ್ಗಕ್ಕರೆ ಕಷಾಯ ಮಾಡ್ಕ್ಯಂಡ್ ಕುಡಿ. ಯಾವ ಖಾಯಿಲೆಯೂ ಬರದಿಲ್ಲೆ."&lt;br /&gt;&lt;br /&gt;ಈಗ ರಾತ್ರಿಯಾಗಿದೆ. ನಾನು ಮನೆಯಲ್ಲಿ ಒಬ್ಬನೇ ಇದ್ದೇನೆ. ಅಕ್ಕಪಕ್ಕದ ಮನೆಯವರೆಲ್ಲ ಮಲಗಿದ್ದಾರೆ. ನಿಧಾನಕ್ಕೆ ಅಡುಗೆ ಮನೆಗೆ ಹೋಗುತ್ತೇನೆ. ಎರಡನೇ ಶೆಲ್ಫಿನ ಮೂಲೆಯಲ್ಲಿರುವ ಪುಟ್ಟ ಕರಡಿಗೆಯ ಮುಚ್ಚಳ ತೆರೆಯುತ್ತೇನೆ. ಯಾವುದೋ ಮರದ ಚಕ್ಕೆ. ಕಲ್ಲಿನ ಮೇಲಿಟ್ಟು ಜಜ್ಜಿ ಹಾಲಿಗೆ ಹಾಕಿ ಕುದಿಸುತ್ತೇನೆ. ಉದ್ದ ಲೋಟಕ್ಕೆ ಬಗ್ಗಿಸಿಕೊಂಡು ಬಂದು ಖುರ್ಚಿಯಲ್ಲಿ ಕೂತು ಒಂದೊಂದೆ ಗುಟುಕು ಕುಡಿಯುತ್ತೇನೆ. ಕಿಟಕಿ-ಬಾಗಿಲುಗಳು ಮುಚ್ಚಿವೆ. ಯಾರೂ ನೋಡುತ್ತಿಲ್ಲ, ನಾನು ಒಳ್ಳೆಯವನಾದದ್ದು ಯಾರಿಗೂ ಗೊತ್ತಾಗಲಿಲ್ಲ ಅಂತ ಧೈರ್ಯ ತಂದುಕೊಳ್ಳುತ್ತೇನೆ. ಬಿಸಿಬಿಸಿ ಕಷಾಯದ ಲೋಟದಿಂದ ಹೊಮ್ಮುತ್ತಿರುವ ಘಮಘಮ ಹಬೆಯ ಹಿಂದೆ ತೇಲುತ್ತಿರುವ ವಿಧವಿಧ ಚಿತ್ರಗಳು: ಪದರ ಪದರದ ಕೋಸು, ಅದನ್ನು ರೆಕಮಂಡ್ ಮಾಡಿದ ಮಾಣಿ, ಫೋನ್ ಹಿಡಿದ ಅಮ್ಮ, ಗಹಗಹ ನಕ್ಕ ರೂಂಮೇಟ್, ಇವೆಲ್ಲವನ್ನೂ ದಾಟಿ ಬರುತ್ತಿರುವ ಅದ್ಯಾವುದೋ ಸೂಪ್-ಸೂಪರ್ ಕೂಸು... ಕಷಾಯ ಭಲೇ ರುಚಿಯೆನಿಸುತ್ತದೆ. ಮತ್ತೆ ಅಡುಗೆ ಮನೆಗೆ ಹೋಗಿ, ಖಾಲಿ ಲೋಟಕ್ಕೆ ಪಾತ್ರೆಯ ತಳದಲ್ಲಿದ್ದ ಚೂರು ದ್ರವವನ್ನೂ ಬಗ್ಗಿಸಿಕೊಂಡು... ...&lt;br /&gt;&lt;br /&gt;[&lt;span style="font-style: italic;"&gt;ಮಾರ್ಚ್ ೨೦, ೨೦೧೦&lt;/span&gt;]&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-8265719279894138719?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/8265719279894138719/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=8265719279894138719' title='34 Comments'/><link rel='edit' type='application/atom+xml' href='http://www.blogger.com/feeds/27009232/posts/default/8265719279894138719'/><link rel='self' type='application/atom+xml' href='http://www.blogger.com/feeds/27009232/posts/default/8265719279894138719'/><link rel='alternate' type='text/html' href='http://hisushrutha.blogspot.com/2010/07/blog-post_15.html' title='ನಾನೂ ಪಾಕಕ್ರಾಂತಿ ಮಾಡಿದೆ!'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>34</thr:total></entry><entry><id>tag:blogger.com,1999:blog-27009232.post-8620759220335681550</id><published>2010-07-07T10:02:00.000+05:30</published><updated>2010-07-07T10:02:08.235+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ರೇಶಿಮೆ ಸೀರೆ</title><content type='html'>ಬೆರಳು ಮಾಡಿ ತೋರಿಸಿದ ಸೀರೆಯನ್ನು&lt;br /&gt;ಮೆತ್ತೆ ತುಂಬ ಹಾಸಿ ತೋರಿಸಿ&lt;br /&gt;ಸರಭರ ಸದ್ದಿಗೆ ಪಟಪಟ ಮಾತು ಬೆರೆಸುವ&lt;br /&gt;ಸೆರಗಿನ ಬಂಗಾರು ಶಂಕುಗಳನ್ನು&lt;br /&gt;ಸವರಿ ನವಿರಲಿ ನೆರಿಗೆ&lt;br /&gt;ಮೂಡದ ಹಾಗೆ ಇಡುವವ&lt;br /&gt;ಕನಸು ಕಂಗಳ ಹುಡುಗನೇ ಇರಬೇಕು&lt;br /&gt;ಎಂದೆನಿಸಿದ ಕ್ಷಣವೇ ಕಚ್ಚಿಕೊಂಡದ್ದು&lt;br /&gt;ನಾಲಗೆ.&lt;br /&gt;&lt;br /&gt;ಎಲ್ಲಾ ಸರಿ, ನೀನು ಹೀಗೆ,&lt;br /&gt;ಹಣೆಯ ಮೇಲೆ, ಬೈತಲೆ ದಾರಿ&lt;br /&gt;ಶುರುವಿಗೂ ಮುನ್ನ, ಒಂದು ಹುಂಡಿ&lt;br /&gt;ಹುಡಿ ಕುಂಕುಮ ಇಟ್ಟುಕೊಂಡರೆ&lt;br /&gt;ಲಕ್ಷಣವಾಗಿ ಕಾಣುತ್ತೀ-&lt;br /&gt;ನನ್ನಮ್ಮನ ಹಾಗೆ&lt;br /&gt;ಎಂದ ನಿನ್ನ ಬೆನ್ನಿಗೆ ಸದಾ&lt;br /&gt;ಕಾಮನಬಿಲ್ಲಿತ್ತು.&lt;br /&gt;ಬಿಸಿಲಲ್ಲೇ ಸುರಿಯತೊಡಗಬೇಕಾದರೆ&lt;br /&gt;ಮಳೆಗೆ ಹುಚ್ಚೆಷ್ಟಿರಬೇಡ ಹೇಳು?&lt;br /&gt;&lt;br /&gt;ಶಾರೆ ನೀರು ಸಾಕು;&lt;br /&gt;ಹಸಿಹಸಿರು ಹೆಸರುಕಾಳು, ಸೆಖೆಯುಬ್ಬೆಯಲ್ಲೂ&lt;br /&gt;ಬಿಳಿ ಹೊಟ್ಟೆಯೊಡೆದು&lt;br /&gt;ಇಷ್ಟುದ್ದ ಬಯಕೆ ಮೊಳಕೆ.&lt;br /&gt;ಇಷಾರೆ ನೋಟ ಸಾಕಾಯ್ತು;&lt;br /&gt;ಪ್ರೀತಿಯುಕ್ಕಿ, ಕೆಂಪು ಹಳದಿ &lt;br /&gt;ಸೀರೆ ತೆರೆ ಮರೆ ಅಟ್ಟಣಿಗೆ ಕುಲುಕು&lt;br /&gt;ಪಿಸುಮಾತು.&lt;br /&gt;&lt;br /&gt;ನಂಬಿ ಬಂದಿದ್ದೇನೆ ಹುಡುಗಾ..&lt;br /&gt;'ಒಂದಲ್ಲಾ ಒಂದು ದಿನ, ಈ&lt;br /&gt;ದುಡಿದ ಚಿಲ್ಲರೆ ಕಾಸಿನಿಂದಲೇ&lt;br /&gt;ಅಮ್ಮನಿಗೊಂದು ರೇಶಿಮೆ ಸೀರೆ ಕೊಂಡೊಯ್ತೇನೆ ನೋಡು'&lt;br /&gt;ಎಂಬ ನಿನ್ನ ಒದ್ದೆ ಆಶೆ ಕೇಳಿದಾಗಲೇ&lt;br /&gt;ಚಿತ್ತೈಸಿಹೋದದ್ದು ಈ ಸಂಲಗ್ನ.&lt;br /&gt;&lt;br /&gt;'ಬಾಯಿ ಮುಚ್ಚೇ ಬೋಸುಡಿ'&lt;br /&gt;ಎಂಬ ನನ್ನಮ್ಮನ ಬೈಗುಳಕ್ಕೆ&lt;br /&gt;ಬಾಗಿಲನ್ನೇ ಮುಚ್ಚಿ ಬಂದಿದ್ದೇನೆ..&lt;br /&gt;ಈಗ ನೀನೇ ಗತಿ, ನೀನೇ ಧೃತಿ.&lt;br /&gt;ಅತ್ತೆಯ ಬಳಿಗೆ ಕರೆದೊಯ್ಯಿ,&lt;br /&gt;ಕಾಲು ಮುಟ್ಟಿ ನಮಸ್ಕಾರ ಮಾಡುತ್ತೇನೆ.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-8620759220335681550?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/8620759220335681550/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=8620759220335681550' title='20 Comments'/><link rel='edit' type='application/atom+xml' href='http://www.blogger.com/feeds/27009232/posts/default/8620759220335681550'/><link rel='self' type='application/atom+xml' href='http://www.blogger.com/feeds/27009232/posts/default/8620759220335681550'/><link rel='alternate' type='text/html' href='http://hisushrutha.blogspot.com/2010/07/blog-post.html' title='ರೇಶಿಮೆ ಸೀರೆ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>20</thr:total></entry><entry><id>tag:blogger.com,1999:blog-27009232.post-3187408515398527916</id><published>2010-06-16T11:55:00.000+05:30</published><updated>2010-06-16T11:55:39.849+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಉದ್ಯಾನದಲ್ಲೊಂದು ಸಂಜೆ..</title><content type='html'>ಇಂದು ಸಂಜೆ ಹೀಗಾಯಿತು&lt;br /&gt;ಬರಬೇಕಿದ್ದ ಮಳೆ&lt;br /&gt;ಬಾರದೆ ಹೋಯಿತು.&lt;br /&gt;&lt;br /&gt;ಉದ್ಯಾನದ ನವಿಲು ಕಾಲಿಗೆ &lt;br /&gt;ಗೆಜ್ಜೆಕಟ್ಟಿ ಇಷ್ಟಗಲ &lt;br /&gt;ಗರಿಬಿಚ್ಚಿ ಕುಣಿದಿದ್ದಷ್ಟೇ ಬಂತು,&lt;br /&gt;ಯಾವುದೋ ಗಾಳಿಗೆ ತೇಲಿ ಮೋಡ &lt;br /&gt;ದೂರ ಹೋಗಿಬಿಟ್ಟಿತು.&lt;br /&gt;ಕೊನೆಗದು ಪಾಪ ಸುಸ್ತಾಗಿ&lt;br /&gt;ಇದ್ದ ಎರಡು ಕಾಳು ತಿಂದು&lt;br /&gt;ನಾಲ್ಕು ಕೊಕ್ಕು ನೀರು ಕುಡಿದು&lt;br /&gt;ಕಣ್ಮುಚ್ಚಿ ಮಲಗಿಬಿಟ್ಟಿತು.&lt;br /&gt;&lt;br /&gt;ಅಷ್ಟರಮೇಲೇ ಶುರುವಾದದ್ದು ಇವೆಲ್ಲ ರಗಳೆ:&lt;br /&gt;ಅವಳ ಕಣ್ಣನ್ನು ಕೊಳಕ್ಕೆ &lt;br /&gt;ಹೋಲಿಸುವ ಬದಲು ಬಾಯ್ತಪ್ಪಿ&lt;br /&gt;ಹೊಂಡಕ್ಕೆ ಹೋಲಿಸಿದ್ದಕ್ಕೆ&lt;br /&gt;ಶರಂಪರ ಕಿತ್ತಾಡಿ ರಂಪ.&lt;br /&gt;ಹೋಗಿದ್ದು ಕೊಂಚ ತಡವಾಗಿತ್ತಷ್ಟೇ,&lt;br /&gt;ಅಷ್ಟಕ್ಕೇ &lt;br /&gt;ಕಿತ್ತಿಟ್ಟುಕೊಂಡಿದ್ದ ಹೂಗಿಡದ &lt;br /&gt;ಪಕಳೆಗಳನ್ನೆಲ್ಲ ಮೈಮೇಲೆ ಅರ್ಚಿಸಿ&lt;br /&gt;ಓಟ.&lt;br /&gt;&lt;br /&gt;ಹೂಮಳೆ ತೋಯ್ದ ರೋಮಾಂಚನಕ್ಕೆ &lt;br /&gt;ಹೋದರೆ ಅಟ್ಟಿಸಿಕೊಂಡು, ಮಲಗಿದ್ದ&lt;br /&gt;ನವಿಲಿಗೆ ಎಚ್ಚರಾಗಿ ಬೆದರಿ &lt;br /&gt;ಗರಿ ಫಡಫಡಿಸಿದ ಗಾಳಿಗೆ&lt;br /&gt;ಮೋಡ ಮಳೆಯಾಗಿ ಒದ್ದೆ ತೊಪ್ಪೆ.&lt;br /&gt;&lt;br /&gt;ಈಗ ನವಿಲ ಗೂಡಿನಲ್ಲಿ &lt;br /&gt;ಮೂವರು: ಚಳಿಯಿಂದ ರಕ್ಷಣೆಗೆ&lt;br /&gt;ಒಂದಕ್ಕೆ ರೆಕ್ಕೆ, ಇನ್ನೆರಡಕ್ಕೆ ತೆಕ್ಕೆ.&lt;br /&gt;ತಬ್ಬಿ ನಿದ್ದೆ.&lt;br /&gt;&lt;br /&gt;[&lt;i&gt;02 ಡಿಸೆಂಬರ್, 2009&lt;/i&gt;]&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-3187408515398527916?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/3187408515398527916/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=3187408515398527916' title='16 Comments'/><link rel='edit' type='application/atom+xml' href='http://www.blogger.com/feeds/27009232/posts/default/3187408515398527916'/><link rel='self' type='application/atom+xml' href='http://www.blogger.com/feeds/27009232/posts/default/3187408515398527916'/><link rel='alternate' type='text/html' href='http://hisushrutha.blogspot.com/2010/06/blog-post_16.html' title='ಉದ್ಯಾನದಲ್ಲೊಂದು ಸಂಜೆ..'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>16</thr:total></entry><entry><id>tag:blogger.com,1999:blog-27009232.post-1158297595143644860</id><published>2010-06-07T10:41:00.001+05:30</published><updated>2010-06-07T18:16:28.388+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ರಂಗೋಲಿ</title><content type='html'>&lt;b&gt;೧&lt;/b&gt;&lt;br /&gt;ಕಾವಲಿಯ ಮೇಲೆ ಹಾಕಿದ ರವೆ&lt;br /&gt;ದೋಸೆಯಂತೆ ಅದನ್ನೂ ನೀಟಾಗಿ ಸಟ್ಟುಗದಿಂದ&lt;br /&gt;ಎತ್ತುವಂತಿದ್ದರೆ ಮಡಿಚಿ&lt;br /&gt;ಚೀಲದಲ್ಲಿಟ್ಟು ಒಯ್ಯುತ್ತಿದ್ದೆ ನಾನು..&lt;br /&gt;&lt;br /&gt;ತಾಸುಗಟ್ಟಲೆ ಕೂತು ತದೇಕ,&lt;br /&gt;ಜತನದಿಂದ ಹಾಕಿದ್ದ ಆ ರಂಗೋಲಿ&lt;span style="color: rgb(204, 0, 0);"&gt;*&lt;/span&gt;&lt;br /&gt;ಆಮೇಲೆ ಏನಾಯಿತು?&lt;br /&gt;ಬಿಳಿ ಬಣ್ಣದ ಪುಡಿಹಾಸ ಮೇಲೆ&lt;br /&gt;ಕೈಕೈ ಹಿಡಿದಾಡುತ್ತಿದ್ದ ಪುಟ್ಟ ಬಾಲಕರು&lt;br /&gt;ಇನ್ನೂ ಎಷ್ಟು ಹೊತ್ತು ಹಾಗೇ ಇದ್ದರು?&lt;br /&gt;ಹಸಿಹಸಿರು ಗಿಡದ ರೆಂಬೆ&lt;br /&gt;ಬಾಡಲಿಲ್ಲ ತಾನೆ?&lt;br /&gt;ಎವೆಯಿಕ್ಕದ ಗೂಬೆಯ ಕಣ್ಣನ್ನು&lt;br /&gt;ಹಾರಿ ಬಂದ ಹರಾಮಿ ಧೂಳು ಮುಚ್ಚಿತಾ?&lt;br /&gt;ಕಳೆಗುಂದಿದವೇ ಚಂದ್ರ-ಚುಕ್ಕಿ&lt;br /&gt;ಕರಗಿದಂತೆ ಇರುಳು?&lt;br /&gt;&lt;br /&gt;ಮರುಮುಂಜಾನೆ ಕಸ ಗುಡಿಸಲು ಬಂದ&lt;br /&gt;ಕೆಲಸದವಳು ನಿಂತಳೇ ಬೆರಗಾಗಿ?&lt;br /&gt;ಗೂಬೆ-ಗಿಡ-ಹುಡುಗರ ಹೆಡೆಮುರಿ&lt;br /&gt;ಕಟ್ಟಿ ಒಯ್ಯುವ ಮುನ್ನ ಅವಳು,&lt;br /&gt;ಪೊರಕೆ ಮೈತಡವಿದ ಕ್ಷಣ ಆದ&lt;br /&gt;ಕಚಗುಳಿಗೆ ರಂಗೋಲಿಯ ಕಣಗಳು&lt;br /&gt;ನಾಚಿದವಾ?&lt;br /&gt;ಬದುಕಲ್ಲಿ ಖುಶಿ ಕ್ಷಣಿಕ ಎಂದು&lt;br /&gt;ಬಿಕ್ಕಳಿಸಿತಾ ಮಿಶ್ರಬಣ್ಣ?&lt;br /&gt;&lt;br /&gt;ಬಣ್ಣಗಳು ಬಿಡಿಬಿಡಿಯಾಗಿದ್ದರಷ್ಟೇ ಅರ್ಥ.&lt;br /&gt;ಕಲಸಿಬಿಟ್ಟರೆ ಎಲ್ಲಿ ರಂಗೋಲಿ?&lt;br /&gt;&lt;br /&gt;&lt;b&gt;೨&lt;/b&gt;&lt;br /&gt;ಎಂದು ಬರೆದಿಟ್ಟಿದ್ದ ನನ್ನ ಕವನ ಓದಿದ ಗೆಳೆಯ,&lt;br /&gt;"ಅಯ್ಯೋ ಭಾವುಕ ಹುಚ್ಚನೇ,&lt;br /&gt;ವರುಷಗಟ್ಟಲೆ ಜೋಪಾನ ಮಾಡಿದ್ದ ನನ್ನ ಹುಡುಗಿಗೆ&lt;br /&gt;ನಿನ್ನೆ ಯಾರೊಂದಿಗೋ ಮದುವೆಯಾಯ್ತು"&lt;br /&gt;ಎಂದು, ನಗುತ್ತ ಹೊರಟುಹೋದ.&lt;br /&gt;&lt;br /&gt;--&lt;br /&gt;&lt;span style="color: rgb(204, 0, 0);"&gt;* &lt;/span&gt;&lt;span style="font-style: italic;"&gt;ಛಂದ ಪುಸ್ತಕ, ತನ್ನ ಸ್ಪರ್ಧೆಯಲ್ಲಿ ಗೆದ್ದ ಮುಖಪುಟವನ್ನು ಪುಸ್ತಕ ಬಿಡುಗಡೆ ಸಮಾರಂಭದ ದಿನ ರಂಗೋಲಿ ಹಾಕಿಸಿತ್ತು.&lt;/span&gt;&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-1158297595143644860?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/1158297595143644860/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=1158297595143644860' title='12 Comments'/><link rel='edit' type='application/atom+xml' href='http://www.blogger.com/feeds/27009232/posts/default/1158297595143644860'/><link rel='self' type='application/atom+xml' href='http://www.blogger.com/feeds/27009232/posts/default/1158297595143644860'/><link rel='alternate' type='text/html' href='http://hisushrutha.blogspot.com/2010/06/blog-post_07.html' title='ರಂಗೋಲಿ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>12</thr:total></entry><entry><id>tag:blogger.com,1999:blog-27009232.post-2267287470399027408</id><published>2010-05-31T12:03:00.003+05:30</published><updated>2010-05-31T12:12:57.146+05:30</updated><category scheme='http://www.blogger.com/atom/ns#' term='ಮಾವಿನಕಾಯಿ ನೀರುಗೊಜ್ಜು'/><category scheme='http://www.blogger.com/atom/ns#' term='ಸು-ಲಲಿತ ಪ್ರಬಂಧ'/><title type='text'>ಮಾವಿನ್‌ಕಾಯ್ ನೀರ್ಗೊಜ್ಜು ಎಂಬ ಅಮೃತಪಾನವು...</title><content type='html'>ಸುಖಗಳಲ್ಲಿ ಉತ್ಕೃಷ್ಟವಾದ ಸುಖಕ್ಕೆ ಪರಮಸುಖ ಅಂತಲೂ ರುಚಿಗಳಲ್ಲಿ ಶ್ರೇಷ್ಠವಾದ ರುಚಿಗೆ ಪರಮರುಚಿ ಅಂತಲೂ ಹೆಸರು. ಈ ಪರಮಸುಖ ಎಂಬುದು ಅತ್ಯಂತ ಕಾಸ್ಟ್ಲೀ ಐಟಮ್ ಆಗಿದ್ದು, ಇದನ್ನು ಪಡೆಯಲು ಕಠಿಣ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ ಎಂಬುದು ವಿದಿತ. ಅಂದರೆ ಸಾಮಾನ್ಯ ಮನುಷ್ಯರಾದ ನಮಗೆ ಪರಮಸುಖವನ್ನು ಅನುಭವಿಸುವ ಯೋಗವಿಲ್ಲ ಎಂದಾಯಿತು. ಹಾಗೆಂದಾಗ, ಇದಕ್ಕೊಂದು ಶಾರ್ಟ್‌ಕಟ್ ಇರಬೇಕಲ್ಲವೇ? ತನಗೆ ದುರ್ಗಮವಾದ ಎಲ್ಲವಕ್ಕೂ ಶಾರ್ಟ್‌ಕಟ್ ಕಂಡುಹಿಡಿದಿರುವ ಮನುಷ್ಯ, ಇದಕ್ಕೂ ಒಂದು ಮಾರ್ಗವನ್ನು ಶೋಧಿಸಿದ್ದಾನೆ. ನನ್ನ ಪ್ರಕಾರ, ಪರಮಸುಖವನ್ನು ಪಡೆಯಲಿಕ್ಕಿರುವ ಸರಳವಾದ ಮಾರ್ಗ ಪರಮರುಚಿಯಾದ ಆಹಾರವನ್ನು ಸೇವಿಸುವುದು! ಇನ್ನೂ ನೇರವಾಗಿ ಹೇಳಬೇಕೆಂದರೆ, ಮಾವಿನ್‌ಕಾಯ್ ನೀರ್ಗೊಜ್ಜನ್ನು ನಿಧನಿಧನಿಧಾನವಾಗಿ ಕುಡಿಯುವುದು!&lt;br /&gt;&lt;br /&gt;ನಾನೀಗ ಹೇಳುತ್ತಿರುವ ಮಾವಿನಕಾಯಿ ನೀರುಗೊಜ್ಜು ಎಂಬ ಪೇಯವನ್ನು ಇಷ್ಟರೊಳಗೆ ಸೇವಿಸಿಲ್ಲ ಎಂದಾದರೆ ಜಗತ್ತಿನ ಅತಿ ನತದೃಷ್ಟ ವ್ಯಕ್ತಿಗಳಲ್ಲಿ ನೀವೂ ಒಬ್ಬರು. ಎಳನೀರು, ಕಬ್ಬಿನಹಾಲು, ಕಾಫಿ, ಟೀ, ಜ್ಯೂಸು, ಕೋಕು -ಗಳಂತಹ ಪದಾರ್ಥಗಳನ್ನು ಕುಡಿಯುತ್ತಾ ಮೈಮರೆತಿರುವ ನೀವು, ಭಗವದ್ದರ್ಶನಕ್ಕೊಳಗಾಗಬಹುದಾದ ನೀರ್ಗೊಜ್ಜಿನಂತಹ ಪೇಯದ ರುಚಿಯಿಂದ ವಂಚಿತರಾಗಿದ್ದೀರಿ. ಬಿಯರು, ವಿಸ್ಕಿ, ರಮ್ಮು, ವೈನುಗಳೇ ಮೊದಲಾದ ಮಾದಕ ದ್ರವ್ಯಗಳಿಗೂ ಸಡ್ಡು ಹೊಡೆಯಬಲ್ಲಂತಹ ಕಿಕ್ಕು ನಮ್ಮ ಮಾವಿನಕಾಯಿ ನೀರ್ಗೊಜ್ಜು ಸೇವಿಸುವುದರಿಂದ ಸಿಗುತ್ತದೆ ಎಂದರೆ ನೀವು ನಂಬಲಾರಿರಿ.&lt;br /&gt;&lt;br /&gt;ಹಾಗೆ ನೋಡಿದರೆ ಮಾವಿನಕಾಯಿ ನೀರುಗೊಜ್ಜು ಒಂದು ಪೇಯವಲ್ಲ. ಮೂಲತಃ ಇದು ಅನ್ನಕ್ಕೆ ಬೆರೆಸಿಕೊಂಡು ಉಣ್ಣಬೇಕಾದ ಪದಾರ್ಥ. ಬಿರುಬೇಸಗೆಯ ಮಧ್ಯಾಹ್ನಗಳಲ್ಲಿ, ಸಾಂಬಾರು-ಸಾರುಗಳಂತಹ ಬಿಸಿ ಪದಾರ್ಥಗಳನ್ನು ಉಣ್ಣಲು ನಿರಾಕರಿಸುವ ಬಾಯಿಗೆ, ಹಿತವೆನಿಸುವಂತಹ ತಣ್ಣನೆಯ ನೀರು-ನೀರು ಅಡುಗೆ ಇದು. ಚೂರೇ ಅನ್ನವಿದ್ದರೂ ತಟ್ಟೆತುಂಬ ಗೊಜ್ಜು ಹೊಯ್ದುಕೊಂಡು ಸುರಿಯುವುದು ಮಲೆನಾಡ ಮನೆಗಳ ಊಟದ ಸರ್ವೇಸಾಮಾನ್ಯ ದೃಶ್ಯ.&lt;br /&gt;&lt;br /&gt;ವಸಂತ ಮಾಸ ಪ್ರಕೃತಿಗೆ ತರುವ ಸಿರಿಗಳಲ್ಲೊಂದು ಚಿಗುರಿದ ಮಾವು ಎನ್ನಬೇಕೋ ಅಥವಾ ಚಿಗುರಿದ ಮಾವಿನ ತರುವಿನ ಸಿರಿಯೇ ವಸಂತ ಮಾಸ ಎನ್ನಬೇಕೋ ಎಂಬ ಗೊಂದಲ ಕವನ ಬರೆಯಲು ಕುಳಿತ ಕವಿಗಳನ್ನು ಅದೆಷ್ಟೋ ವರ್ಷಗಳಿಂದ ಕಾಡುತ್ತ ಬಂದಿದೆ. ಆದರೆ, ಈ ಹಚ್ಚನೆ ಹಸುರಿನ ಮಾಮರದೆಲೆಗಳ ಮರೆಯಲಿ ಜೋತುಕೊಳ್ಳತೊಡಗುವ ಪುಟ್ಟಪುಟ್ಟ ಮಾವಿನ ಮಿಡಿಗಳು ಕೋಗಿಲೆ ಕೂಗಿಗೆ ಹುಳಿ ತುಂಬಿಕೊಳ್ಳುತ್ತಾ ಹಿಗ್ಗಿ ಹಿಗ್ಗಿ ಕಾಯಿಯಾಗುವ ಪರಿಯಿದೆಯಲ್ಲ, ಅದು ಈ ಕವಿಗಳ ಉಪಮೆ-ರೂಪಕ ಅಲಂಕಾರಗಳ ಮೇರೆ ಮೀರಿದ ಅದ್ಭುತ.&lt;br /&gt;&lt;br /&gt;ಹೀಗೆ ಬೆಳೆದ ಎರಡು ಮಾವಿನಕಾಗಳನ್ನು ನೀವೀಗ ಕತ್ತರಿಸಿ ತರುತ್ತೀರಿ. ಹುಷಾರು: ಅಲ್ಲೂ ನಿಯಮವಿದೆ. ಮಾವಿನಕಾಯಿಯನ್ನು ನೀವು ತೊಟ್ಟಿನ ಸಮೇತ ಕತ್ತರಿಸಬೇಕು. ಏಕೆಂದರೆ, ಮಾವಿನಕಾಯಿಯ ಪರಿಮಳ ಇರುವುದು ಅದರ ತೊಟ್ಟಿನ ಬುಡದಲ್ಲಿ ಶೇಖರವಾಗಿರುವ ಸೊನೆಯಲ್ಲಿ. ಈ ಸೊನೆಯನ್ನು ನಾವು ಮುಂದೆ ಮಾಡಲಿರುವ ಗೊಜ್ಜಿಗೆ ಬೆರಸಿದರೇನೇ ದೊರೆಯುವುದು ನೀರ್ಗೊಜ್ಜಿನ ನಿಜವಾದ ಸೊಗಸು. ಹೀಗಾಗಿ, ಕೊಯ್ಯುವಾಗ ಮಾವಿನಕಾಯಿಯನ್ನು ಒಂದರ್ಧ ಅಡಿಯಷ್ಟು ತೊಟ್ಟನ್ನು ಬಿಟ್ಟೇ ಕೊಯ್ಯಬೇಕು. ಈಗ, ಕೊಯ್ದು ತಂದ ಮಾವಿನಕಾಯಿಯನ್ನು ಪಾತ್ರೆಯ ಮೇಲೆ ಹಿಡಿದು ತೊಟ್ಟಿನ ಬುಡದಲ್ಲಿ ಮುರಿಯಿರಿ. ಸೊನೆಯಷ್ಟೂ ಪಾತ್ರೆಗೆ ಸುರಿಯಿತಾ? ಈಗ ಮಾವಿನ ಕಾಯಿಯನ್ನು ಸಣ್ಣ ಸಣ್ಣ ಸ್ಲೈಸುಗಳನ್ನಾಗಿ ಮಾಡಿ ಮಿಕ್ಸಿಗೆ ಹಾಕಿ. ಹಾಗೇ ಸ್ವಲ್ಪ ತೆಂಗಿನಕಾಯಿಯನ್ನೂ ತುರಿದು ಹಾಕಿ. ಬೀಸಿ. ಹಸಿಮೆಣಸು ನುರಿಯಿರಿ. ಉಪ್ಪು ಹಾಕಿ. ನೀರು ಬೆರೆಸಿ. ಕೊಬ್ಬರಿ ಎಣ್ಣೆ-ಹಿಂಗು-ಸಾಸಿವೆ ಕಾಳಿನ ಒಗ್ಗರಣೆ ಕೊಡಿ. ಅಷ್ಟೇ: ಅಪರೂಪದ, ಪರಿಮಳಭರಿತ, ಪರಮರುಚಿಯ ನೀರ್ಗೊಜ್ಜು ಇದೀಗ ರೆಡಿ!&lt;br /&gt;&lt;br /&gt;ದೇವಾನುದೇವತೆಗಳ ಕಾಲದಿಂದಲೂ ಚಾಲ್ತಿಯಲ್ಲಿರುವ ಈ ಅಡುಗೆ ಮಲೆನಾಡಿನ ಪರಂಪರೆಗಳಲ್ಲಿ ಅತ್ಯುನ್ನತ ಸ್ಥಾನವನ್ನು ಗಳಿಸಿದೆ ಎಂದೆಲ್ಲ ನಾನು ಹೇಳುವುದಿಲ್ಲ. ಹಾಗೆ ಹೇಳಲಿಕ್ಕೆ ನನ್ನ ಬಳಿ ಯಾವುದೇ ಆಧಾರವಿಲ್ಲ. ರಿಸರ್ಚ್ ಮಾಡುವಷ್ಟೆಲ್ಲ ಸಮಯವಿಲ್ಲ. ನಾನು ಹೇಳುವುದಿಷ್ಟೇ: ಈ ನೀರ್ಗೊಜ್ಜನ್ನು ನೀವು ಒಂದು ಬಟ್ಟಲಿನಲ್ಲಿ ಹಾಕಿಕೊಂಡು ಚಕ್ಲುಪಟ್ಟೆ ಹೊಡೆದು ಕುಳಿತುಕೊಳ್ಳಿ. ಕಣ್ಣು ಮುಚ್ಚಿಕೊಳ್ಳಿ. ಚರಾಚರ ವಸ್ತುಗಳಿಂದ ಕೂಡಿದ ಇಹಲೋಕವನ್ನು ಕ್ಷಣಕಾಲ ಮರೆತುಬಿಡಿ. ದೇವರನ್ನು ಕಾಣುವ ಸಮಯ ಸನ್ನಿಹಿತವಾಗುತ್ತಿದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ಬಟ್ಟಲನ್ನು ಬಾಯಿಯ ಬಳಿಗೆ ಒಯ್ಯಿರಿ. ಪರಿಮಳವನ್ನು ಆಘ್ರಾಣಿಸಿ. ಬಟ್ಟಲನ್ನು ತುಟಿಗೆ ತಾಗಿಸಿ. ಹಾಗೇ ಒಂದು ಸಿಪ್ ಗುಟುಕರಿಸಿ. ಯೆಸ್ಸ್ಸ್ಸ್!&lt;br /&gt;&lt;br /&gt;ಕಾಲ ಹಾಳಾಗಿದೆ, ಮನುಷ್ಯ ಹಾಳಾಗಿದ್ದಾನೆ, ಬದುಕು ಬರಡಾಗಿದೆ, ಸ್ವಾರಸ್ಯವೆಲ್ಲ ಹೊರಟೋಗಿದೆ ...ಇತ್ಯಾದಿ ನಿಮ್ಮ ನಿರಾಶಾವಾದವನ್ನೆಲ್ಲ ಕಳೆದು ಮತ್ತೆ ಬದುಕಿನತ್ತ ಮುಖ ಮಾಡಿಸುವ ಅಮೃತ ಈ ಮಾವಿನಕಾಯಿ ಗೊಜ್ಜು. ಇದು ಹುಳಿಯಿದ್ದಷ್ಟೂ ರುಚಿ, ಖಾರವಿದ್ದಷ್ಟೂ ಬಾಯಿಸೆಳೆತ, ಪರಿಮಳವಿದ್ದಷ್ಟೂ ಮಜಾ ಮತ್ತು ಹೇರಳವಾಗಿದ್ದಷ್ಟೂ ಖರ್ಚು! ಮಾವಿನಕಾಯಿ ನೀರ್ಗೊಜ್ಜನ್ನು ಗುಟುಕು-ಗುಟುಕಾಗಿ ಕುಡಿಯಬೇಕು... ಒಂದು ಬಟ್ಟಲು ಮುಗಿಯುತ್ತಿದ್ದಂತೆ ಮತ್ತೊಂದು ಬಟ್ಟಲು. ಇದರ ಗಮ್ಮತ್ತೇ ಅಂಥದು: ಖಾರವೆನಿಸಿದರೂ ಬಿಡಲಾಗದು, ಹುಳಿಯೆನಿಸಿದರೂ ಮುಖ ಹಿಂಡಲಾಗದು!&lt;br /&gt;&lt;br /&gt;ಹುಳಿಯಿರುವ ಯಾವುದೇ ಮಾವಿನಕಾಯಿಯಿಂದಲಾದರೂ ನೀರ್ಗೊಜ್ಜನ್ನು ಮಾಡಬಹುದಾದರೂ ಅಪ್ಪೆ, ಕಂಚಪ್ಪೆ, ಜೀರಿಗೆಗಳಂತಹ ಜಾತಿಯ ಕಾಯಿಗಳು ಹೆಚ್ಚು ಪ್ರಸಿದ್ಧ. ಅವು ತಮ್ಮ ವಿಶಿಷ್ಟ ರುಚಿ ಮತ್ತು ಪರಿಮಳವನ್ನು ಗೊಜ್ಜಿಗೆ ನೀಡುವುದರಿಂದ ಪೇಯದ ಸೊಗಡು ಹೆಚ್ಚುತ್ತದೆ.&lt;br /&gt;&lt;br /&gt;ಮಾವಿನಕಾಯಿ ನೀರ್ಗೊಜ್ಜು ಕುಡಿಯಲು ಸ್ವಲ್ಪ ಮಟ್ಟಿನ ರಸಿಕತೆಯೂ ಬೇಕಾಗುತ್ತದೆ ಎಂದರೆ ತಪ್ಪಾಗಲಾರದು. ನಾನು ನೋಡಿದ ಹಾಗೆ, ಸಾಮಾನ್ಯವಾಗಿ ಹುಳಿಯನ್ನು ದ್ವೇಷಿಸುವ ಗಂಡಸರೇ ಮಾವಿನಕಾಯಿ ನೀರ್ಗೊಜ್ಜನ್ನು ಕುಡಿಯುವುದು ಹೆಚ್ಚು! ಹೆಂಗಸರು ಅದೇಕೋ ಇದನ್ನು ಅನ್ನಕ್ಕೆ ಬೆರೆಸಿ ಉಣ್ಣುವುದನ್ನೇ ಇಷ್ಟ ಪಡುತ್ತಾರೆ. ಆದರೆ ಗಂಡಸರು ಬಟ್ಟಲಿಗೆ ಹಾಕಿಕೊಂಡು ಕುಡಿಯುತ್ತಾರೆ. ಅದು ಸರಿಯೇ: ನೀರ್ಗೊಜ್ಜನ್ನು ಅನ್ನಕ್ಕೆ ಬೆರೆಸಿ ಉಣ್ಣುವುದರಲ್ಲಿ ಅಂತಹ ಮಜಾ ಏನೂ ಇಲ್ಲ. ಆದರೆ ಅದನ್ನು ಕುಡಿಯುವುದುದಿದೆಯಲ್ಲ, ಆಹ್! ಬ್ರಹ್ಮಾನಂದ ಓಂಕಾರ, ಆತ್ಮಾನಂದ ಸಾಕಾರ!&lt;br /&gt;&lt;br /&gt;ಮಲೆನಾಡು ಹವ್ಯಕರ ಮದುವೆಮನೆ ಊಟಗಳಲ್ಲಿ ನೀರ್ಗೊಜ್ಜು ಒಂದು ಖಾಯಂ ಐಟಮ್ಮು. ಅದು ಮಾವಿನಕಾಯಿಯ ಸೀಸನ್ ಆಗಿರಬೇಕಷ್ಟೇ: ತಿಳಿಸಾರು, ಸಾಂಬಾರು, ಚಿತ್ರಾನ್ನಗಳು ಆದಮೇಲೆ ಬರುವ ಪದಾರ್ಥವೇ ನೀರ್ಗೊಜ್ಜು. ಈ ನೀರ್ಗೊಜ್ಜನ್ನು ದೊನ್ನೆಗೆ ಹಾಕಿಸಿಕೊಂಡು ಕುಡಿಯಬೇಕು. ನೀರ್ಗೊಜ್ಜನ್ನು ದೊನ್ನೆಯಲ್ಲಿ ಕುಡಿಯುವ ಅನುಭವವೇ ಬೇರೆ. ಹೊಂಬಾಳೆಯಿಂದ ಮಾಡಿದ ಈ ದೊನ್ನೆ ಅದಾಗಲೇ ತಿಳಿಸಾರು ಹಾಕಿಸಿಕೊಂಡಿದ್ದ ದೊನ್ನೆ. ಈಗ ಅದನ್ನೇ ಖಾಲಿಮಾಡಿ ನೀರ್ಗೊಜ್ಜು ತುಂಬಿಸಿಕೊಳ್ಳುವುದು. ನೀರ್ಗೊಜ್ಜಿನ ನಂತರ ಬರುವ ಖೀರಿಗೂ ಇದೇ ದೊನ್ನೆ! ನೀರ್ಗೊಜ್ಜು ಬಡಿಸುವವರು ಮತ್ತೊಂದು ರೌಂಡು ಬರಲೇಬೇಕು. ಅದಿಲ್ಲದಿದ್ದರೆ ಪಂಕ್ತಿಯಲ್ಲಿರುವ ಎಲ್ಲರೂ ಅವರಿಗೆ ಶಾಪ ಹಾಕುವುದು ಖಾಯಂ. ಉರಿಬಿಸಿಲ ದಗೆಯಲ್ಲಿ, ಚಪ್ಪರದ ಕೆಳಗೋ ಶಾಮಿಯಾನಾದ ಕೆಳಗೋ ಬೆವರುತ್ತ ಊಟಕ್ಕೆ ಕೂತಿರುವವರಿಗೆ ಈ ನೀರ್ಗೊಜ್ಜು ಕೊಡುವ ರಿಲೀಫು -ಅದು ಶಬ್ದಗಳಿಗೆ ಮೀರಿದ್ದು. ಗ್ರಂಥಗಳೇನಾದರೂ ಹೊಮ್ಮುವುದಿದ್ದರೆ ಆಮೇಲೇ ಅದು ಹೊಮ್ಮುವುದು! ಮತ್ತೀ ಬಡಿಸುತ್ತಿರುವವರಿದ್ದಾರಲ್ಲಾ, ಇವರೂ ಈಗಾಗಲೇ ಕನಿಷ್ಟ ಎರಡು ದೊನ್ನೆ ನೀರ್ಗೊಜ್ಜು ಕುಡಿದಿರುತ್ತಾರೆಂಬುದನ್ನು ನೀವು ಗಮನಿಸಬೇಕು. ಅಡುಗೆಮನೆಯಲ್ಲಿ ನೀರ್ಗೊಜ್ಜಿನ ದೊಡ್ಡ ಕೌಳಿಗೆಗೇ ‘ಡೈರೆಕ್ಟ್ ಅಕ್ಸೆಸ್’ ಇರುವ ಇವರು, ತಾವು ಮೂರನೆಯದೋ-ನಾಲ್ಕನೆಯದೋ ಪಂಕ್ತಿಗೆ ಕೂರುವಷ್ಟರಲ್ಲಿ ಖಾಲಿಯಾಗಿಬಿಟ್ಟಿದ್ದರೆ ಎಂಬ ಮುಂಜಾಗ್ರತೆಯಿಂದ, ಅಲ್ಲೇ ಇರುವ ದೊನ್ನೆಗಳಲ್ಲಿ ಗೊಜ್ಜನ್ನು ಬಗ್ಗಿಸಿ ಬಗ್ಗಿಸಿಕೊಂಡು ಕುಡಿದು ಬಾಯಿ ಚಪ್ಪರಿಸಿಕೊಂಡಿರುತ್ತಾರೆ.&lt;br /&gt;&lt;br /&gt;ನೀರ್ಗೊಜ್ಜು ಕುಡಿದುಬಿಟ್ಟರೆ ಅಷ್ಟಕ್ಕೇ ಮುಗಿಯಲಿಲ್ಲ; ಕೈ ತೊಳೆದು ಬಂದು ಸಣ್ಣದೊಂದು ಕವಳ ಹಾಕಿ ಗೋಡೆಗೊರಗುತ್ತೀರಿ ನೋಡಿ, ಆಮೇಲೆ ಇರುವುದು ಮಜಾ! ತೂಕಡಿಸಿ ತೂಕಡಿಸಿ ಬರುವ ಜೋಂಪು ನಿಮ್ಮನ್ನು ನಿದ್ರಿಸದೇ ಇರಲು ಸಾಧ್ಯವೇ ಇಲ್ಲವೆಂಬಂತೆ ಮಾಡುತ್ತದೆ. ಅದಕ್ಕೇ ನಾನು ಮೊದಲೇ ಹೇಳಿದ್ದು: ಯಾವ ಮಾದಕ ದ್ರವ್ಯಕ್ಕಿಂತಲೂ ಕಮ್ಮಿಯೇನಲ್ಲ ಇದು ಎಂದು. ಮಾವಿನಕಾಯಿ ನೀರ್ಗೊಜ್ಜು ಕುಡಿದಮೇಲೆ ಮಲಗಲೇಬೇಕು. ಅದಕ್ಕೆ ತಯಾರಾಗಿಯೇ ನೀವು ಇದನ್ನು ಸೇವಿಸಬೇಕು. ಊಟದ ನಂತರ ಯಾವುದೋ ಕೆಲಸ ಇಟ್ಟುಕೊಂಡು ಇದನ್ನು ಕುಡಿಯುವುದು ತರವಲ್ಲ. ಮಲೆನಾಡ ಹವ್ಯಕರು ಮಧ್ಯಾಹ್ನವೂ ಸೊಂಪು ನಿದ್ರೆ ತೆಗೆಯುವುದಕ್ಕೆ ಬರೀ ಕೆಲಸವಿಲ್ಲದಿರುವ - ಸೋಮಾರಿತನವಷ್ಟೇ ಕಾರಣವಲ್ಲ; ಅದರ ಹಿಂದೆ ಮಾವಿನ್‌ಕಾಯ್ ನೀರ್ಗೊಜ್ಜಿನ ಕೈವಾಡವೂ ಇದೆ ಎಂಬುದು ಕೆಲವರಿಗಷ್ಟೇ ತಿಳಿದ ಗುಟ್ಟು.&lt;br /&gt;&lt;br /&gt;ಒಮ್ಮೆ ಈ ಗೊಜ್ಜಿನ ಪಾನದಲ್ಲಿರುವ ಸ್ವರ್ಗಸುಖಕ್ಕೆ ಬಲಿಯಾದಿರೋ, ನೀವಿದರ ಫ್ಯಾನ್ ಆದಿರಿ ಅಂತಲೇ ಅರ್ಥ. ಇನ್ನು, ತರಕಾರಿ ಮಾರ್ಕೆಟ್ಟಿಗೆ ಹೋಗಿ ಮಾವಿನಕಾಯಿ ಕೊಂಡುತಂದು ಸ್ವತಃ ಗೊಜ್ಜು ತಯಾರಿಸುತ್ತೀರೋ ಅಥವಾ ಅಧಿಕಮಾಸ ಕಳೆದು ಇದೀಗ ಶುರುವಾಗಿರುವ ಸಾಲುಸಾಲು ಮಲೆನಾಡ ಮದುವೆಮನೆಗಳಿಗೆ ಲಗ್ಗೆ ಇಡುತ್ತೀರೋ, ನಿಮಗೆ ಬಿಟ್ಟಿದ್ದು.&lt;br /&gt;&lt;br /&gt;&lt;br /&gt;[&lt;span style="color: rgb(102, 0, 0);"&gt;&lt;span style="color: rgb(0, 0, 153);"&gt;&lt;span style="font-weight: bold;"&gt;ನೋಟ್: &lt;/span&gt;ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಿತ.  ಬರೆಯುವ ಭರದಲ್ಲಿ ಮಾವಿನಮರ ಚಿಗುರಿದ ಮೇಲೆ ಕಾಯಿ ಬಿಡುತ್ತೆ ಅಂತೇನೋ ಆಗಿಬಿಟ್ಟಿತ್ತು; ಅದನ್ನಿಲ್ಲಿ ತಿದ್ದಿದ್ದೇನೆ.  ಮತ್ತೆ ಕೆಲವರು "ತಮ್ಮ ಕಡೆ ನೀರ್ಗೊಜ್ಜಿಗೆ 'ಅಪ್ಪೆಹುಳಿ' ಅಂತ ಕರೀತಾರೆ, 'ಮಾವಿನ್‌ಕಾಯ್ ಟ್ರೊಂಯ್' ಅಂತ ಕರೀತಾರೆ, ನೀವದನ್ನ ಮೆನ್ಷನ್ನೇ ಮಾಡಿಲ್ಲ, ನಮ್ಗೆ ಸಖತ್ ಬೇಜಾರಾಯ್ತು" ಅಂತ ಆಕ್ಷೇಪವೆತ್ತಿದ್ದಾರೆ. ಅವರಿಗೆ ನಮ್ಮನೆಗೆ ಬಂದ್ರೆ ಒಂದೊಂದ್ ಲೋಟ ಗೊಜ್ಜು ಕುಡಿಸುವುದಾಗಿ ಹೇಳಿ ಸಮಾಧಾನ ಮಾಡಿದ್ದೇನೆ. &lt;/span&gt;&lt;span style="color: rgb(0, 0, 153);"&gt;ಥ್ಯಾಂಕ್ಯೂ.&lt;/span&gt; &lt;span style="color: rgb(255, 0, 0);"&gt;;)&lt;/span&gt; &lt;/span&gt;]&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-2267287470399027408?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/2267287470399027408/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=2267287470399027408' title='25 Comments'/><link rel='edit' type='application/atom+xml' href='http://www.blogger.com/feeds/27009232/posts/default/2267287470399027408'/><link rel='self' type='application/atom+xml' href='http://www.blogger.com/feeds/27009232/posts/default/2267287470399027408'/><link rel='alternate' type='text/html' href='http://hisushrutha.blogspot.com/2010/05/blog-post_31.html' title='ಮಾವಿನ್‌ಕಾಯ್ ನೀರ್ಗೊಜ್ಜು ಎಂಬ ಅಮೃತಪಾನವು...'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>25</thr:total></entry><entry><id>tag:blogger.com,1999:blog-27009232.post-2032970758170712136</id><published>2010-05-13T12:34:00.001+05:30</published><updated>2010-05-13T12:35:06.413+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಪ್ರಶ್ನೆ -೨</title><content type='html'>ಮ್ಯಾಂಗೋ ಫ್ಲೇವರಿನ ಐಸ್‌ಕ್ರೀಂ&lt;br /&gt;ತಿಂದು ಮಲಗಿದ ರಾತ್ರಿ&lt;br /&gt;ಕನಸಲ್ಲಿ ರಸಪುರಿ ಹಣ್ಣು&lt;br /&gt;ತೂಗುತ್ತಿರುವ ಮಾವಿನ ಮರ ಕಂಡಿತ್ತು,&lt;br /&gt;ಹಸುರೆಲೆಗಳ ನಡುವೆ ಕೂತಿದ್ದ ಕಪ್ಪು&lt;br /&gt;ಕೋಗಿಲೆ ಕೂಗಿದ್ದಕ್ಕೆ ಎಚ್ಚರಾಯ್ತು&lt;br /&gt;ಎಂದು ನಾ ಹೇಳಿದರೆ ನೀನು ಕ್ಲೀಷೆಯೆಂದು&lt;br /&gt;ಬದಿಗೆ ಸರಿಸಿಬಿಡಬೇಡ-&lt;br /&gt;ನನ್ನ ಸತ್ಯ ನನಗೆ&lt;br /&gt;ಯಾವ ಕನಸೂ ಸುಳ್ಳಲ್ಲ&lt;br /&gt;ಎಲ್ಲ ವಿಸ್ಮಯಗಳಿಗೂ ಅರ್ಥ ಬೇಕೆಂದು&lt;br /&gt;ಹಾತೊರೆಯುವುದಾದರೂ ಏಕೆ?&lt;br /&gt;ಉತ್ತರ ಸಿಕ್ಕಮೇಲೆ ಪ್ರಶ್ನೆಗೆ ಬೆಲೆಯೆಲ್ಲಿ?&lt;br /&gt;&lt;br /&gt;ಕೇಳದೇ ಉಳಿದ ಪ್ರಶ್ನೆಗಳನ್ನು&lt;br /&gt;ಕೆಡದಂತೆ ಇಡಲು ಹಾಟ್‌ಬಾಕ್ಸು,&lt;br /&gt;ಫ್ಲಾಸ್ಕು, ಫ್ರಿಜ್ಜು -ಏನೂ ಬೇಕಿಲ್ಲ;&lt;br /&gt;ಮನದ ಮೂಲೆಗೆ ಬೀಸಾಡಿದರೂ ಸಾಕು&lt;br /&gt;ಹಾಗೇ ಇರುತ್ತವೆ, ಪಾಪ.&lt;br /&gt;&lt;br /&gt;ರಾತ್ರಿಯೆಲ್ಲ ಕೂತು ಉರು&lt;br /&gt;ಹೊಡೆದುಕೊಂಡು ಬಂದ ಭಾಷಣ&lt;br /&gt;ವೇದಿಕೆ ಹತ್ತುವವರೆಗೂ ಸರಿಯಾಗಿಯೇ ನೆನಪಿತ್ತು&lt;br /&gt;ಗಂಟಲೊಣಗಿದ್ದು, ತಡವರಿಸಿದ್ದು&lt;br /&gt;ಆಮೇಲೇ.&lt;br /&gt;ಅತಿಥಿಗಳ ಬಗ್ಗೆ ಸಭಾಸದರಿಗೂ ಅನುಕಂಪ&lt;br /&gt;ಇದೂ ಕನಸಾಗಿದ್ದರೆ ಅಂತ ಎಷ್ಟೇ ಬಯಸಿದರೂ&lt;br /&gt;&lt;br /&gt;ಕೋಗಿಲೆ ಕೂಗುವುದೇ ಇಲ್ಲ.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-2032970758170712136?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/2032970758170712136/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=2032970758170712136' title='16 Comments'/><link rel='edit' type='application/atom+xml' href='http://www.blogger.com/feeds/27009232/posts/default/2032970758170712136'/><link rel='self' type='application/atom+xml' href='http://www.blogger.com/feeds/27009232/posts/default/2032970758170712136'/><link rel='alternate' type='text/html' href='http://hisushrutha.blogspot.com/2010/05/blog-post_13.html' title='ಪ್ರಶ್ನೆ -೨'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>16</thr:total></entry><entry><id>tag:blogger.com,1999:blog-27009232.post-7056594769032989319</id><published>2010-05-07T13:37:00.000+05:30</published><updated>2010-05-07T13:37:34.457+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಪ್ರಶ್ನೆ -೧</title><content type='html'>ಕೇಳಬೇಕಾದ ಪ್ರಶ್ನೆಗಳನ್ನು&lt;br /&gt;ಕೇಳಬೇಕಾದಾಗಲೇ ಕೇಳಬೇಕು&lt;br /&gt;ಕಳುಹಿಸಬೇಕಾದ ಪತ್ರಗಳನ್ನು&lt;br /&gt;ಕಳುಹಿಸಬೇಕಾದಾಗಲೇ ಕ....&lt;br /&gt;&lt;br /&gt;ಶುಭ್ರ ಬಿಳಿ ಹಾಳೆಯಲ್ಲಿ &lt;br /&gt;ಕಡುಗಪ್ಪು ಅಕ್ಷರಗಳಲ್ಲಿ ಬರೆದ ಪ್ರಶ್ನೆಗಳನ್ನು &lt;br /&gt;ತುಸುಹಳದಿ ಬಣ್ಣದ ಕವರಿನೊಳಗೆ&lt;br /&gt;ಮಡಿಚಿ ಮಡಿಚಿ ಹಾಕಿ &lt;br /&gt;ಕೆಂಪು ಬಣ್ಣದ ಅಂಚೆಪೆಟ್ಟಿಗೆಯೊಳಗೆ&lt;br /&gt;ಬೀಳಿಸಿದರೆ ಟಣ್ ಎಂಬ ಶಬ್ದ.&lt;br /&gt;ಏಕೆ ಕೈ ತಡೆಯಬೇಕು?&lt;br /&gt;&lt;br /&gt;ನೋಡಲ್ಲಿ, ನೀನು ನಂಬಬೇಕೆಂದಿಲ್ಲ-&lt;br /&gt;ಕುರೂಪಿ ಕಾಗೆ ಹೇಗೆ ಕ್ರಾಗುಟ್ಟುತ್ತಿದೆ&lt;br /&gt;ಅಪಶಕುನ! ಅಪಶಕುನ!!&lt;br /&gt;&lt;br /&gt;ನಿಜಕ್ಕೂ ಬರೆದೆನಾ ಪತ್ರ?&lt;br /&gt;ಇಲ್ಲ, ಕೈ ತಡೆದುದು ಪತ್ರ ಹಾಕುವಾಗಲ್ಲ;&lt;br /&gt;ಬರೆಯುವಾಗಲೇ!&lt;br /&gt;ಮತಿ ಹೇಳುತ್ತದೆ:&lt;br /&gt;ಪ್ರತಿ ಮಾತನ್ನೂ ಯೋಚಿಸಿ ಆಡುವುದನ್ನು &lt;br /&gt;ರೂಢಿಸಿಕೊಂಡ ದಿನದಿಂದಲೇ ಆದದ್ದು&lt;br /&gt;ಈ ಹಿನ್ನಡೆ. &lt;br /&gt;ನುಗ್ಗಿಬಿಟ್ಟಿದ್ದರೆ ಅಂದೇ, &lt;br /&gt;ಇನ್ನೆಲ್ಲೋ ಇರುತ್ತಿದ್ದೆ. &lt;br /&gt;ಇದೇ ನಿನ್ನ ಮಿತಿ.&lt;br /&gt;&lt;br /&gt;ಇದ್ದೀತೇನೋ, ಸ್ಮೃತಿಯ ಕಡಲಲಿ&lt;br /&gt;ಮುಳುಗಿದವ ಕ್ಷಮಾದಾಯಿಯ ಮುಂದೆ&lt;br /&gt;ಸದಾ ಸ್ವಯಂ ಅಭ್ಯರ್ಥಿ; &lt;br /&gt;ಪ್ರಶ್ನೆ ಪ್ರಚ್ಛನ್ನ.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-7056594769032989319?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/7056594769032989319/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=7056594769032989319' title='12 Comments'/><link rel='edit' type='application/atom+xml' href='http://www.blogger.com/feeds/27009232/posts/default/7056594769032989319'/><link rel='self' type='application/atom+xml' href='http://www.blogger.com/feeds/27009232/posts/default/7056594769032989319'/><link rel='alternate' type='text/html' href='http://hisushrutha.blogspot.com/2010/05/blog-post.html' title='ಪ್ರಶ್ನೆ -೧'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>12</thr:total></entry><entry><id>tag:blogger.com,1999:blog-27009232.post-7981094761064154947</id><published>2010-04-26T11:45:00.002+05:30</published><updated>2010-04-26T14:58:55.534+05:30</updated><category scheme='http://www.blogger.com/atom/ns#' term='Birthday'/><category scheme='http://www.blogger.com/atom/ns#' term='ಖುಶಿ'/><category scheme='http://www.blogger.com/atom/ns#' term='ಹುಟ್ಟು ಹಬ್ಬ'/><title type='text'>ನಾಲ್ಕು ವರ್ಷಗಳ ಕೊನೆಗೆ ನಾಲ್ಕು ಮಾತು</title><content type='html'>ಕೈಯಲ್ಲಿ ಅಕ್ಷರಗಳ ಮೂಟೆಯಿದೆ. ಅದನ್ನು ತೂಗಲಿಕ್ಕೆ, ಅದಕ್ಕೆ ಬೆಲೆ ಕಟ್ಟಲಿಕ್ಕೆ ಸಾಧ್ಯವೇ ಇಲ್ಲ. ಏ-ಫೋರ್ ಅಳತೆಯ, ಅತ್ಯುತ್ತಮ ಗುಣಮಟ್ಟದ ಹಾಳೆ ಬಳಸಿದ, ಮುನ್ನೂರಾ ಇಪ್ಪತ್ತು ಪುಟಗಳ ಈ ಬೃಹತ್ ಪುಸ್ತಕದ ಪುಟಗಳನ್ನು ತೆರೆದರೆ, ಕನ್ನಡ ಸಾರಸ್ವತ ಲೋಕದ ಅಷ್ಟೂ ಮುಂಚೂಣಿ ಮಂದಿ ಅಲ್ಲಿದ್ದಾರೆ. ಕುವೆಂಪು-ಬೇಂದ್ರೆ-ಮಾಸ್ತಿಯವರ ಕೈಬರಹಗಳನ್ನು ನೋಡಿ ತೆರೆದ ಪುಟದಲ್ಲೇ ಪುಳಕಗೊಂಡು ನಿಂತುಬಿಡುವ ಮನವನ್ನು ತಹಬಂದಿಗೆ ತಂದುಕೊಳ್ಳುತ್ತಾ ಮುಂದೆ ಹೋದರೆ, ಅನಂತಮೂರ್ತಿ, ಕಾರ್ನಾಡ, ಕಾಯ್ಕಿಣಿ, ಚಿತ್ತಾಲ, ಕಾಗಿನೆಲೆ, ರಶೀದ್, ಸುನಂದಾ, ಜೋಗಿ, ನುಗಡೋಣಿ, ವಸುಧೇಂದ್ರ, ವೈದೇಹಿ, ಪ್ರತಿಭಾ, ಕುಂವೀ, ಎಚ್ಚೆಸ್ವಿ, ಕಂಬಾರ, ಬಿ‌ಆರ್‌ಎಲ್.... ಹೀಗೆ ನೀವು ಅತಿ ಪ್ರೀತಿ ಪಟ್ಟು ಓದುವ ಅಷ್ಟೂ ಬರಹಗಾರರು ಇಲ್ಲಿ ಒಟ್ಟಿಗೇ ಎದುರುಗೊಂಡು ನಿಮಗೆ ಎಚ್ಚರ ತಪ್ಪುವಂತೆ ಮಾಡುತ್ತಾರೆ. ನಿಮಗೆ ಇಷ್ಟವಾಗುವ ಎಲ್ಲದೂ ಇಲ್ಲಿದೆ. ಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಪರಿಚಯ, ಚಿತ್ರ, ಸಂವಾದ, ಲೇಖನ.... ಯಾವುದೇ ಭಾಷೆಯ ಸಾಹಿತ್ಯ ಪ್ರಾಕಾರವೊಂದರಲ್ಲಿ ಏನೇನು ಇರಲಿಕ್ಕೆ ಸಾಧ್ಯವೋ ಅಷ್ಟೂ ಇಲ್ಲಿವೆ. ಪುಟಗಳ ಸಂಯೋಜನೆಯಂತೂ ಅದೆಷ್ಟು ಮುದ್ದಾಗಿದೆಯೆಂದರೆ, ಓದುವುದು ಹಾಗಿರಲಿ; ಈ ಪುಸ್ತಕವನ್ನು ನೋಡಿ ಮುಗಿಸಲಿಕ್ಕೇ ಒಂದು ತಾಸು ಬೇಕು! ಕಷ್ಟಸಾಧ್ಯವಲ್ಲ; ವರ್ಣಿಸುವುದು ಅಸಾಧ್ಯ ಎನ್ನುವಷ್ಟರ ಮಟ್ಟಿನ ಪುಸ್ತಿಕೆಯೊಂದನ್ನು ಕೈಗೆ ಬಂದಿದೆ. ಇಂಥದೊಂದು ಅದ್ಭುತ ಕೆಲಸವೊಂದು ಕನ್ನಡದಲ್ಲಿ ಆಗಿದೆ, ಅದರ ಬಿಡುಗಡೆಗೆ ನಾವು ಸಾಕ್ಷಿಯಾಗಿದ್ದೇವೆ, ಆ ಗ್ರಂಥವನ್ನು ಗರಿಗರಿಯಾಗಿ ಪಡೆಯುವಲ್ಲಿ - ಅದರ ಮೈ ಸವರುವಲ್ಲಿ - ಪುಟಗಳ ಹೊಸ ಪರಿಮಳದೊಂದಿಗೆ ಓದುವ ಆನಂದದಲ್ಲಿ ಭಾಗಿಯಾಗಿದ್ದೇವೆ ಎನ್ನುವುದು ಬಹುಶಃ ನಮ್ಮ ಭಾಗ್ಯ ಎಂತಲೇ ನನಗನಿಸುತ್ತದೆ. ಇಷ್ಟೊಂದು ಖುಶಿ-ಉದ್ವೇಗಗಳನ್ನು ನಮಗೆ ಕೊಟ್ಟಿರುವ, ಇಂಥದೊಂದು ಹೆಮ್ಮೆ ಪಡಬಹುದಾದ ಅಕ್ಷರಗುಚ್ಛವನ್ನು ಕೈಗಿಟ್ಟಿರುವ ವಿವೇಕ ಶಾನಭಾಗ್ ಮತ್ತು ಬಳಗದವರಿಗೆ ಹ್ಯಾಟ್ಸ್ ಆಫ್! ಇದು ‘ದೇಶ ಕಾಲ’ ಪತ್ರಿಕೆಯ ವಿಶೇಷ ಸಂಚಿಕೆ.&lt;br /&gt;&lt;br /&gt;&lt;span style="color: rgb(255, 102, 0);"&gt;* &lt;span style="color: rgb(51, 51, 255);"&gt;* &lt;/span&gt;*&lt;/span&gt;&lt;br /&gt;&lt;br /&gt;ಪ್ರತಿಯೊಂದರಲ್ಲೂ ಮನರಂಜನೆಯೇ ಮೂಲಮಂತ್ರವಾಗಿರುವ ಇಂದಿನ ಮನುಜ ಮನಸ್ಥಿತಿಯ ನಡುವೆ ಇಂಥ ಅಪರೂಪಗಳೇ ಇರಬೇಕು ನಮ್ಮನ್ನು ಇನ್ನೂ ಸೃಜನಶೀಲವಾಗಿ ಇಟ್ಟಿರುವ ಆಕರಗಳು. ಒಂದು ಕತೆ ಓದಿದಾಗ ಆಗುವ ಖುಶಿ, ಒಂದು ಕವಿತೆ ಓದುವಾಗ ಆಗುವ ಅನುಭವ, ಒಂದು ಕಾದಂಬರಿ ಓದಿ ಮುಗಿಸಿದಾಗ ಆಗುವ ಬದಲಾವಣೆ, ಒಂದು ಒಳ್ಳೆಯ ಸಿನೆಮಾ ನೋಡಿದಾಗ ಆಗುವ ಆನಂದ, ಒಂದು ಅತ್ಯುತ್ತಮ ಕಲಾಕೃತಿ ನೋಡುತ್ತಾ ಮೈಮರೆಯುವ ಸುಖ,  ಒಂದ್ಯಾವುದೋ ಹಾಡು ಕೇಳುತ್ತಾ ಕಳೆದುಹೋಗುವುದರಲ್ಲಿನ ಮಜ... ಇವನ್ನು ಅನುಭವಿಸದ ಮನುಷ್ಯ ನಿಜಕ್ಕೂ ಅದೃಷ್ಟಹೀನ. ಇವು ಕೇವಲ ನಮ್ಮ ದಿನದ ಭವಗಳನ್ನು ಗೆಲ್ಲುವ ಮನರಂಜನೆಯ ಸಾಧನಗಳಾಗಿರದೆ ನಮ್ಮ ನಾಳೆಯ ನಡಿಗೆಗೆ ಕಿಂಚಿತ್ತು ಉತ್ಸಾಹ ತುಂಬುವ ಮಾನಸೋಲ್ಲಾಸದಾಯಕ ಔಷಧಿಗಳಾಗಿವೆ.&lt;br /&gt;&lt;br /&gt;ಇವನ್ನು ನಮಗೆ ಕೊಡಮಾಡುವ ಮಂದಿ ನಮ್ಮಿಂದ ಆದಷ್ಟೂ ದೂರವಿದ್ದಷ್ಟೂ ಒಳ್ಳೆಯದು ಅಂತ ಗೆಳೆಯ ಕಾರ್ತಿಕ್ ಪರಾಡ್ಕರ್ ಬರೆದಿದ್ದ. ಎಷ್ಟು ಸತ್ಯ! ಲೇಖಕನಿರಬಹುದು, ನಟನಿರಬಹುದು, ಆಟಗಾರನಿರಬಹುದು, ಹಾಡುಗಾರನಿರಬಹುದು- ಆತ ನಮ್ಮಿಂದ ತುಸು ದೂರದ ವೇದಿಕೆಯ ಮೇಲೇ ನಿಂತು ಯಕ್ಷಿಣಿ ಮಾಡುತ್ತಿರಬೇಕು. ಆಗಲೇ ಅದು ಚಂದ. ಆಗಲೇ ಅದಕ್ಕೊಂದು ಮಾಂತ್ರಿಕ ಪುಳಕ. ಆಗಲೇ ಅದರೆಡೆಗೊಂದು ಕಾತರ. ಅದೇ ಆ ವ್ಯಕ್ತಿಯೊಂದಿಗೆ ನಾವು ಒಡನಾಡುತ್ತಿದ್ದೆವಾದರೆ ಅಥವಾ ಆತನ ವೈಯಕ್ತಿಕ ಬದುಕಿನ ಫ್ಯಾಂಟಸಿಗಳು ಜಾಹೀರಾಗಿಬಿಟ್ಟವೆಂದರೆ ಆಗುವ ನಿರಾಶೆಯಿದೆಯಲ್ಲ, ಅದು ಹೇಳತೀರದ್ದು.&lt;br /&gt;&lt;br /&gt;ಮೊನ್ನೆ ರಾಜಾಜಿನಗರದ ಟಿವಿ ಶೋರೂಮ್ ಒಂದನ್ನು ಹಾದುಹೋಗುತ್ತಿದ್ದೆ. ಐಪಿ‌ಎಲ್ ಟ್ವೆಂಟಿಟ್ವೆಂಟಿಯ ಚಾಂಪಿಯನ್ಸ್ ಲೀಗ್ ಅರ್ಹತಾ ಸುತ್ತಿನ - ಆರ್‌ಸಿಬಿ ಮತ್ತು ಡೆಕ್ಕನ್ ಚಾರ್ಜರ್ಸ್ ನಡುವಿನ ಪಂದ್ಯ ನಡೆಯುತ್ತಿತ್ತು. ಶೋರೂಮಿನವನು ರಸ್ತೆಗೆ ಅಭಿಮುಖವಾಗಿ ಇಟ್ಟಿದ್ದ ದೊಡ್ಡ ಸ್ಕ್ರೀನಿನ ಟೀವಿಯಲ್ಲಿ ಈ ಪಂದ್ಯವನ್ನು ನೋಡುತ್ತ ಸುಮಾರು ಜನ ಫುಟ್‌ಪಾತಿನಲ್ಲಿ ನಿಂತಿದ್ದರು. ನಾನೂ ನಿಂತುಕೊಂಡೆ. ಹಿಂದಿನ ದಿನವಷ್ಟೇ ಐಪಿ‌ಎಲ್‌ನಲ್ಲಿನ ಹಗರಣಗಳು, ಮ್ಯಾಚ್ ಫಿಕ್ಸಿಂಗಿನ ಅವ್ಯವಹಾರಗಳು ಸುದ್ದಿಯಾಗಿದ್ದವಷ್ಟೇ? ಡೆಕ್ಕನ್ ಚಾರ್ಜರ್ಸ್ ತಂಡದ ವಿಕೆಟ್ಟುಗಳು ಒಂದರ ಹಿಂದೆ ಒಂದು ಬೀಳತೊಡಗಿದಂತೆ ಅಲ್ಲಿದ್ದ ಗುಂಪಿನಲ್ಲಿದ್ದವನೊಬ್ಬ "ಥೂ, ಎಲ್ಲಾ ಫಿಕ್ಸಿಂಗು ಕಣ್ರೋ.. ಎಲ್ಲಾ ಮೋಸ. ನಾವ್ ಒಳ್ಳೇ ಬಕರಾಗಳ ಥರ ಅವರ ವಿಕೆಟ್ ಹೋದ್ರೆ ಖುಶಿ ಪಡ್ತಾ ನಮ್ಮವರದ್ದು ಹೋದ್ರೆ ಬೇಜಾರ್ ಮಾಡ್ಕೊಳ್ತಾ, ಅವರು ಸೋತ್ರೆ ಪಟಾಕಿ ಹೊಡೀತಾ ನಮ್ಮವರು ಸೋತ್ರೆ ಸಿಗರೇಟು ಸೇದ್ತಾ ಮನಸಿಗೆಲ್ಲ ಹಚ್ಕೊಂಡು ಫೀಲ್ ಮಾಡ್ಕೊಳ್ತಾ ಇರ್ತೀವಿ. ಆದ್ರೆ ಅಲ್ಲಿ ನಡೆಯೋದು ಎಲ್ಲಾ ಮುಂಚೇನೇ ಡಿಸೈಡೆಡ್ಡು. ಕರ್ಮ, ನಮಗೆ ಬುದ್ಧಿ ಇಲ್ಲ" ಅಂತಂದು, ಗುಂಪಿನಿಂದ ಅಗಲಿ ದಢದಢನೆ ನಡೆದು ಹೋಗಿಬಿಟ್ಟ!&lt;br /&gt;&lt;br /&gt;ಕ್ರೀಡೆ- ಆಡುವವನಿಗೆ ಮಾತ್ರ ಪಂದ್ಯ, ದುಡ್ಡು ತರುವ ಜಾಬ್; ನೋಡುವವನಿಗೆ ಯಾವತ್ತೂ ಮನರಂಜನೆ. ಸಿನೆಮಾ ಅಥವಾ ಧಾರಾವಾಹಿ- ಅಭಿನೇತ್ರುವಿಗೆ ಅದೊಂದು ವೃತ್ತಿ, ಅನ್ನ ಕೊಡುವ ಉದ್ಯಮ; ಅದೇ ನೋಡುವವನಿಗೆ ಅದರಲ್ಲಿನ ಕತೆ, ತಿರುವು, ಸಂಭಾಷಣೆ -ಎಲ್ಲಾ ನಿತ್ಯಸಂತೋಷ ಕರುಣಿಸುವ ಸಾಧನಗಳು. ಕತೆ, ಕವಿತೆ, ಹಾಡು- ಅವುಗಳ ಕರ್ತೃವಿಗೆ ತನ್ನ ಸೃಜನಶೀಲತೆಯನ್ನು ಹೊರಹಾಕುವ ಮಾರ್ಗಗಳು; ಅದೇ ಅವನ್ನು ಓದುವ-ಆಲಿಸುವ ಸಾಮಾನ್ಯ ಮನುಷ್ಯನಿಗೆ ಅವು ಮನಸ್ಸಂಪ್ರೀತಿಗೊಳಿಸುವ ಕೇಂದ್ರಗಳು. ಆದರೆ ನಮ್ಮನ್ನು ಮರುಳು ಮಾಡುವ ಇವೆಲ್ಲಕ್ಕೂ ಕೇವಲ ಯಕ್ಷಿಣಿಗಾರನ ಮೇಲೆ ಬೀಳುವ ಒಂದು ಕಲ್ಲು ಮಸುಕು ತೊಡಿಸಿಬಿಡುತ್ತದೆ. ನಮ್ಮನ್ನು ಎಚ್ಚರಗೊಳಿಸುತ್ತದೆ, ಆದರೆ ಅಷ್ಟೇ ಮಟ್ಟಿಗೆ ಅದರಿಂದಾಗಿ ನಾವು ಅನುಭವಿಸುತ್ತಿದ್ದ ಮುಗ್ಧಸುಖ ಇಲ್ಲವಾಗುತ್ತದೆ.&lt;br /&gt;&lt;br /&gt;&lt;span style="color: rgb(204, 102, 0);"&gt;* &lt;span style="color: rgb(51, 51, 255);"&gt;* &lt;/span&gt;*&lt;/span&gt;&lt;br /&gt;&lt;br /&gt;ಊರಲ್ಲಿದ್ದಾಗ, ಮನೆಗೆ ಬರುತ್ತಿದ್ದ ಪತ್ರಿಕೆಗಳಲ್ಲಿರುತ್ತಿದ್ದ ಕತೆಗಳು, ಅಪ್ಪ ಲೈಬ್ರರಿಯಿಂದ ತರುತ್ತಿದ್ದ ಕಾದಂಬರಿಗಳನ್ನು ಓದುವಾಗ ನನ್ನಲ್ಲಿ ಇರುತ್ತಿದ್ದ ಮುಗ್ಧತೆ ಈಗ ಇಲ್ಲವಾಗಿದೆ. ಅದಕ್ಕೂ ಮುಂಚೆ ಬಾಲಮಂಗಳ-ಚಂದಮಾಮ ಓದುತ್ತಿದ್ದಾಗಿನ ದಿನಗಳಂತೂ ಬಿಡಿ. ಡಿಂಗ, ಫಕ್ರು, ಲಂಬೋದರರು ನನ್ನ ಹೀರೋಗಳಾಗಿದ್ದರು. ಕಿಂಕಿಣಿ ಹಕ್ಕಿ ನನ್ನ ಫ್ರೆಂಡ್ ಆಗಿತ್ತು. ವಿಕ್ರಮಾದಿತ್ಯನ ರಾಜಧಿರಿಸು ಕಣ್ಮುಂದೆ ಬರುತ್ತಿತ್ತು. ಬೇತಾಳ ರಾತ್ರಿಯ ಕನಸಲ್ಲೂ ಬಂದು ಎಚ್ಚರಾಗಿಸುತ್ತಿತ್ತು.  ಆಮೇಲೆ ಸ್ವಲ್ಪ ದೊಡ್ಡವನಾದಮೇಲೆ ಓದತೊಡಗಿದ ಕತೆಗಳೆಲ್ಲ ಸುಮ್ಮನೆ ಖುಶಿ ಕೊಡುತ್ತಿದ್ದವು. ಕಾದಂಬರಿಯೊಂದನ್ನು ಓದಿ ಅದರ ನಾಯಕ/ನಾಯಕಿಯ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ, ಹಾಗೆಯೇ ಆಗುವ ಕನಸು ಕಾಣುತ್ತಿದ್ದೆ. ಯಾವುದೋ ಪಾತ್ರವನ್ನು ನನ್ನೊಂದಿಗೆ ಹೋಲಿಸಿ ಖುಶಿಸಬಹುದಾದ-ದುಃಖಿಸಬಹುದಾದ ಸಾಧ್ಯತೆ ಇತ್ತು ಆಗ.&lt;br /&gt;&lt;br /&gt;ಆದರೆ ದೊಡ್ಡವನಾಗುತ್ತ ಹೋದಂತೆ, ಮುಗ್ಧತೆಯನ್ನು ಕಳೆದುಕೊಳ್ಳುತ್ತ ಹೋದಂತೆ - ದಿನಗಳಲ್ಲಿದ್ದ ಸ್ವಾರಸ್ಯವೂ ಇಲ್ಲವಾಗತೊಡಗಿದೆ. ಬಹುಶಃ ಬದುಕೇ ಬೇರೆ ಕಲೆಯೇ ಬೇರೆ ಎಂಬ ಅರಿವೇ ಇದಕ್ಕೆ ಕಾರಣವಿರಬೇಕು. ಈಗ ಎಲ್ಲವೂ ಸ್ವಲ್ಪೇ ದಿನಕ್ಕೆ, ಸ್ವಲ್ಪೇ ಹೊತ್ತಿಗೆ ಬೇಸರ ಬರುತ್ತದೆ. ಬೆಂಗಳೂರು, ಕೆಲಸ, ಟ್ರಾಫಿಕ್ಕು, ಮಾಲುಗಳು, ಶಾಪಿಂಗು, ಪಾರ್ಟಿಗಳು, ಟಿವಿ, ಇಂಟರ್ನೆಟ್ಟು, ಮೊಬೈಲು, ಫ್ಲರ್ಟಿಂಗು, ಬ್ಲಾಗಿಂಗು, ಕಾರ್ಟೂನು, ಪಾರ್ನು.... ಎಲ್ಲವೂ ಬೇಸರ ಬಂದು - ಅಥವಾ ಕೇವಲ ಆ ಕ್ಷಣಕ್ಕೆ ಸುಖ ಕೊಡುವ, ಮುಗುಳ್ನಗೆ ಹೊಮ್ಮಿಸುವ ಸಾಧನಗಳಷ್ಟೇ ಆಗಿ ಉಳಿದುಬಿಟ್ಟಿರುವ ಈ ದಿನಗಳಲ್ಲಿ, ನನ್ನನ್ನು ಇನ್ನೂ ಆಶಾವಾದಿಯಾಗಿಯೇ ಉಳಿಸಲು ಇರುವ ಉಪಕರಗಳೇನು? ಹೆಚ್ಚೆಚ್ಚು ತಿಳಿದುಕೊಳ್ಳುತ್ತ ಹೋದಂತೆ ಹೆಚ್ಚೆಚ್ಚು ಗೊಂದಲಗಳಿಗೀಡಾಗುತ್ತಿರುವ ನನ್ನನ್ನು ಕೂರಿಸಿಕೊಂಡು ಸಮಾಧಾನ ಹೇಳುವ ಪ್ರವಾದಿ ಹಿಮಾಲಯದ ಯಾವ ತಪ್ಪಲಲ್ಲಿದ್ದಾನೆ?&lt;br /&gt;&lt;br /&gt;ಕನಿಷ್ಟ ನನ್ನ ವಿಷಯದಲ್ಲಿ ಇನ್ನೂ ಸಾಹಿತ್ಯ ಈ ಕೆಲಸವನ್ನು ಮಾಡುತ್ತಿದೆ. ಮೊದಲಿನ ಮುಗ್ಧತೆಯಿಂದಲ್ಲದಿದ್ದರೂ, ಈಗಲೂ ಕತೆ ಓದಿ ಕಣ್ತುಂಬಿಸಿಕೊಳ್ಳುತ್ತೇನೆ. ಕವಿತೆಯ ಕಾಡುವಿಕೆಗೆ ಮನಸೋಲುತ್ತೇನೆ. ಪ್ರಬಂಧದ ಗುಂಗನ್ನು ಮನಸಾ ಅನುಭವಿಸುತ್ತೇನೆ. ಪ್ರವಾಸಕಥನದ ನಾಯಕನೊಂದಿಗೆ ಗುಡ್ಡವೇರುತ್ತೇನೆ. ಲಹರಿಗಳ ಝರಿಯಲ್ಲಿ ತೇಲುತ್ತೇನೆ.&lt;br /&gt;&lt;br /&gt;ಈ ನನ್ನ ಸಂತೋಷವಾದರೂ ಚಿರವಾಗಿರಲಿ. ಯಕ್ಷಿಣಿಗಾರನ ಇಂದ್ರಜಾಲ ಮೋಡಿ ಮಾಡುತ್ತಿರಲಿ ಎಂಬುದಷ್ಟೇ ಸಧ್ಯದ ಪ್ರಾರ್ಥನೆ.&lt;br /&gt;&lt;br /&gt;&lt;span style="color: rgb(204, 102, 0);"&gt;* &lt;span style="color: rgb(51, 51, 255);"&gt;*&lt;/span&gt; *&lt;/span&gt;&lt;br /&gt;&lt;br /&gt;ಬ್ಲಾಗು ಶುರುಮಾಡಿ ನಾಲ್ಕು ವರ್ಷ ಆಗಿದೆ! ಎಲ್ಲದರಂತೆ ಇದರಲ್ಲೂ ಉತ್ಸಾಹ ಕಮ್ಮಿಯಾಗಿದ್ದು ನಿಜ. ಈ ವರ್ಷ ನಾನು ಮಾಡಿದ ಒಟ್ಟು ಪೋಸ್ಟುಗಳ ಸಂಖ್ಯೆ ಕೇವಲ ಮೂವತ್ತು. ಅದರಲ್ಲಿ ಕವಿತೆಗಳೇ ಹನ್ನೊಂದು. ಈಗಲೂ ಪೆನ್ನು ಹಿಡಿದರೆ ಯಾಕೋ ಕವಿತೆಯೇ ಮೂಡುತ್ತದೆ. ಉಳಿದಂತೆ ಆರು ಪ್ರಬಂಧ, ಮೂರ್ನಾಲ್ಕು ಲಹರಿ, ಒಂದಷ್ಟು ಸಾಂದರ್ಭಿಕ ಬರಹಗಳನ್ನು ಬರೆದಿದ್ದೇನೆ. ಈ ವರ್ಷ ಒಂದೇ ಒಂದೂ ಕತೆ ಬರೆಯಲಾಗಲಿಲ್ಲ ಎಂಬುದು ಸಾಧನೆ! ಹಾಗೆಯೇ ಈ ವರ್ಷ ಒಂದೇ ಒಂದು ಚಾರಣವನ್ನೂ ಮಾಡಲಿಲ್ಲ ಎಂಬುದೂ! ‘ಹೊಳೆಬಾಗಿಲು’ -ನನ್ನ ಮೊದಲ ಪ್ರಬಂಧ ಸಂಕಲನ ಹೊರಬಂದಿದ್ದು, ಸುಮಾರು ಜನ ಅದನ್ನೋದಿ ‘ಚನಾಗಿದೆ’ ಅಂದದ್ದು ಖುಶಿ ಕೊಟ್ಟ ಸಂಗತಿ. ‘ಪ್ರಣತಿ’ಯಿಂದಲೂ ಈ ವರ್ಷ ಹೆಚ್ಚು ಕಾರ್ಯಕ್ರಮ ಮಾಡಲಾಗಲಿಲ್ಲ. ನನ್ನ-ಶ್ರೀನಿಧಿಯ ಪುಸ್ತಕ ಬಿಡುಗಡೆ, ನಂತರದ್ದೊಂದು ಗಮಕ ಕಾರ್ಯಕ್ರಮ ಬಿಟ್ಟರೆ, ಆಮೇಲೇನೂ ನಡೆದಿಲ್ಲ. ಕನಿಷ್ಟ ನಮ್ಮ ಟೀಮ್‍ಗೆ ತಿಂಗಳಿಗೊಮ್ಮೆ ಒಟ್ಟಿಗೆ ಸೇರಲೂ ಆಗುತ್ತಿಲ್ಲವೆಂಬುದು ಕಹಿಸತ್ಯ.&lt;br /&gt;&lt;br /&gt;ಆದರೂ ದಕ್ಕಿರುವ ಗೆಳೆಯರ ಪ್ರೀತಿ ಹಾಗೆಯೇ ಇದೆ ಎಂಬುದೊಂದು ಸಮಾಧಾನ. ಸಿಗುತ್ತಿರುವ ಹೊಸ ಗೆಳೆಯರು ಮತ್ತು, ನಾಳೆ ಏನಾದರೂ ಆಗಿಬಿಡಬಹುದೇನೋ ಎಂಬ ಕ್ಷೀಣ ಆಸೆಯೊಂದಿಗೆ ಬದುಕು ಮುಂದುವರೆದಿದೆ. ಬಿರುಬಿಸಿಲಿನ ದಿನಗಳಲ್ಲೇ ಸಂಜೆಹೊತ್ತಿಗೊಂದು ಸಣ್ಣಮಳೆ, ಕೆಲವೊಮ್ಮೆ ಗಾಳಿ - ಬೀಳುವ ಮರಗಳು, ಗುಡುಗಿಗೆ ನಡುಗುವ - ಮಿಂಚಿಗೆ ಹೊಳೆಯುವ ಭೂಮಿ. ತೇಲಿ ಬರುವ ಎಂಡಿ ಪಲ್ಲವಿ ಹಾಡು, ನೆನಪಾಗುವ ಜಯಂತ ಕಾಯ್ಕಿಣಿ ಕತೆ, ಬರೆಯಲು ಬೇಡುವ ಕವಿತೆ.&lt;br /&gt;&lt;br /&gt;ಬದುಕು ಸಾಗಿದೆ. ನಿಮ್ಮ ಪ್ರೀತಿಗೆ ಕೃತಜ್ಞತೆ ಹೇಳಲು ನನ್ನಲ್ಲಿ ಶಬ್ದಗಳು ಇಲ್ಲವಾಗಿದೆ. ಥ್ಯಾಂಕ್ಯೂ. &lt;span style="color: rgb(204, 0, 0);"&gt;:-)&lt;/span&gt;&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-7981094761064154947?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/7981094761064154947/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=7981094761064154947' title='32 Comments'/><link rel='edit' type='application/atom+xml' href='http://www.blogger.com/feeds/27009232/posts/default/7981094761064154947'/><link rel='self' type='application/atom+xml' href='http://www.blogger.com/feeds/27009232/posts/default/7981094761064154947'/><link rel='alternate' type='text/html' href='http://hisushrutha.blogspot.com/2010/04/blog-post_5838.html' title='ನಾಲ್ಕು ವರ್ಷಗಳ ಕೊನೆಗೆ ನಾಲ್ಕು ಮಾತು'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>32</thr:total></entry><entry><id>tag:blogger.com,1999:blog-27009232.post-7287304371634134964</id><published>2010-04-19T14:20:00.000+05:30</published><updated>2010-04-19T14:21:17.142+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಗೋಕುಲ ವಿರಹ</title><content type='html'>ರಾತ್ರಿ ಅಂಥಾ ಮಳೆ ಬಂದಿತ್ತು ಅಂತ&lt;br /&gt;ಗೊತ್ತಾಗಿದ್ದು ಬೆಳಗ್ಗೆ ಎದ್ದಮೇಲೇ.&lt;br /&gt;&lt;br /&gt;ನಂಬಲಿಲ್ಲ ನಾನು,&lt;br /&gt;ಚೂರೂ&lt;br /&gt;ಒದ್ದೆಯಾಗಿರಲಿಲ್ಲವಲ್ಲ ನೀನು&lt;br /&gt;ನಡೆದು ಬರುವಾಗ ತಡರಾತ್ರಿ&lt;br /&gt;ಕನಸಿನಲ್ಲಿ?&lt;br /&gt;&lt;br /&gt;ನೆಂದಿದ್ದರೆ, ಮೆತ್ತನೆ ವಸ್ತ್ರದಲ್ಲಿ&lt;br /&gt;ನಿನ್ನ ತಲೆ ಒರೆಸಿ&lt;br /&gt;ಗರಿಗರಿ ಷರಾಯಿ ತೊಡಿಸಿ&lt;br /&gt;ಬೆಚ್ಚನೆ ಹಾಲು ಕುಡಿಸಿ&lt;br /&gt;ಅಂತಃಪುರದ ಸೋಪಾನದಲ್ಲಿ&lt;br /&gt;ರಜಾಯಿ ಸಮೇತ ಬಳಸಿ&lt;br /&gt;ತಟ್ಟುತ್ತಿದ್ದೆ ಚುಕ್ಕು.&lt;br /&gt;&lt;br /&gt;ಆದರೆ, ಬಂದ ನೀನು&lt;br /&gt;ಒದ್ದೆಯಾಗಿರಲೇ ಇಲ್ಲವಲ್ಲ..?&lt;br /&gt;ಹಾಗಾದರೆ ಗಂಧವತೀ ಭೂಮಿ&lt;br /&gt;ಸುಳ್ಳು ಹೇಳುತಿದೆಯೇ?&lt;br /&gt;ಬಿದ್ದಿರುವ ತರಗೆಲೆಗಳು ಒದ್ದೆಯಾಗಿವೆ ಏಕೆ?&lt;br /&gt;ಭವಂತಿ ಅಂಗಳದಲ್ಲಿ ನೀರು ಹೇಗೆ?&lt;br /&gt;&lt;br /&gt;ಎಚ್ಚರಾದಾಕ್ಷಣ ಪಕ್ಕದಲ್ಲಿ ತಡವಿ&lt;br /&gt;ನೀನಿಲ್ಲದ್ದು ತಿಳಿದು ಬಾಗಿಲಿಗೆ ಓಡೋಡಿ ಬಂದು&lt;br /&gt;ಎಲ್ಲಿ ಹೋದ ನನ್ನಿನಿಯ ಎಲ್ಲಿ ಹೋದ ಕಾಂತ&lt;br /&gt;ಅಂತ ಅರಮನೆಯನ್ನೆಲ್ಲ ಹುಚ್ಚಿಯಂತೆ ಹುಡುಕುವಾಗ&lt;br /&gt;ಸಖಿಯರು ಬಂದು ಸಮಾಧಾನ ಮಾಡುತ್ತಾರೆ:&lt;br /&gt;ಬಿಡು, ಬಿದ್ದದ್ದು ಎಂದಿನಂತೆ ಒಣ ಕನಸು ಅಂತ.&lt;br /&gt;&lt;br /&gt;ಹೌದು, ಬಿಡದ ಭ್ರಮೆ ನನಗೆ..&lt;br /&gt;ಕೃಷ್ಣ ಬಿಟ್ಟುಹೋದಮೇಲೆ&lt;br /&gt;ಗೋಕುಲದಲ್ಲಿ ಮಳೆಯೆಲ್ಲಿ ಆಗಿದೆ?&lt;br /&gt;ಈ ಒದ್ದೆ, ಈ ಒಸರು ಎಲ್ಲ&lt;br /&gt;ರಾಧೆ ಮತ್ತವಳ ಸಖಿಯರ&lt;br /&gt;ಕಣ್ಣೀರ ಹರಿವಿನ ಕುರುಹು&lt;br /&gt;ಎಂಬುದು ಹೊಳೆಯದೆ ಹೋಯಿತಲ್ಲ..&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-7287304371634134964?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/7287304371634134964/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=7287304371634134964' title='26 Comments'/><link rel='edit' type='application/atom+xml' href='http://www.blogger.com/feeds/27009232/posts/default/7287304371634134964'/><link rel='self' type='application/atom+xml' href='http://www.blogger.com/feeds/27009232/posts/default/7287304371634134964'/><link rel='alternate' type='text/html' href='http://hisushrutha.blogspot.com/2010/04/blog-post_19.html' title='ಗೋಕುಲ ವಿರಹ'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>26</thr:total></entry><entry><id>tag:blogger.com,1999:blog-27009232.post-7714622618918490427</id><published>2010-04-12T09:32:00.002+05:30</published><updated>2010-04-12T10:24:25.375+05:30</updated><category scheme='http://www.blogger.com/atom/ns#' term='ಬಿಸಿಲು'/><category scheme='http://www.blogger.com/atom/ns#' term='ಸು-ಲಲಿತ ಪ್ರಬಂಧ'/><title type='text'>ಬಿಸಿಲಿದು ಬರಿ ಬಿಸಿಲಲ್ಲವೋ..</title><content type='html'>ಬಿಸಿಲು.. ಹಂಸತೂಲಿಕಾತಲ್ಪದ ಮೇಲೆ ಮುದುಡಿ ಮಲಗಿದ್ದ ರಾಜಕುವರಿಯಂಥ ಚೆಲುವೆಯ ಕೆನ್ನೆ ಮೇಲೆ ಎಳೆಕಿರಣಗಳನ್ನು ಹೊಳೆಸಿ ಎಬ್ಬಿಸಿ ಬೆಳಗಾಗಿಸಿದ ಬಿಸಿಲು.. ಬೆಚ್ಚನೆಯ ಗೂಡಿನ ಮೆತ್ತನೆಯ ಹಾಸಿನ ಮೇಲೆ ಕಂದಮ್ಮಗಳೊಂದಿಗೆ ತಂಗಿದ್ದ ಅಮ್ಮ ಹಕ್ಕಿಗೆ ಕಾಳು ತರುವ ನೆನಪು ತರಿಸಿದ ಬಿಸಿಲು.. ರಾತ್ರಿಯಿಡೀ ಕತ್ತು ತಿರುಗಿಸಿ ತಿರುಗಿಸಿ ದಣಿದಿದ್ದ ಮುದಿ ಗೂಬೆ ಹಕ್ಕಿಗೆ ಬೆಳಗಾದ ಸುದ್ದಿ ಹೇಳಿ ವಿರಾಮ ಒದಗಿಸಿದ ಬಿಸಿಲು.. ಪ್ರತಿದಿನ ಬರುವ ಬಿಸಿಲು. ಪ್ರತಿ ರಾತ್ರಿಗೆ ಇತಿಶ್ರೀ ಹಾಡುವ ಬಿಸಿಲು. ಪ್ರತಿ ಪರ್ಣದಲ್ಲಿ ಪತ್ರಹರಿತ್ತು ತುಂಬುವ ಬಿಸಿಲು.&lt;br /&gt;&lt;br /&gt;ಮಳೆಯ ಹಾಗಲ್ಲ ಬಿಸಿಲು. ಚಳಿಯ ಹಾಗಲ್ಲ ಬಿಸಿಲು. ಮಳೆ ಬಾರದೆ ಹೋಗಬಹುದು. ಚಳಿ ಬೀಳದೆ ಹೋಗಬಹುದು. ಆದರೆ ಬಿಸಿಲು ಹಾಗಲ್ಲ. ಅದು ಎಲ್ಲ ದಿನ ಬರುತ್ತದೆ ಕಿರಣಗಳನ್ನು ಹೊತ್ತು. ಅದು ಸೂರ್ಯನಿಷ್ಠೆ. ಕುವೆಂಪು ಹಾಡಿದಂತೆ: ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ..&lt;br /&gt;&lt;br /&gt;ಸೂರ್ಯೋದಯಕ್ಕಿಂತ ಮೊದಲು ಅರುಣೋದಯ. ಮೂಡಲ ಮನೆಯ ಗೋಡೆಗೆ ಕೆಂಬಣ್ಣ ಬಳಿಯುತ್ತ ಬರುವ ಅವ.. ಆ ಕೆಂಪ ಹಿನ್ನೆಲೆಯಲ್ಲಿ ಗಿಳಿವಿಂಡು ಹಾರುತ್ತ ಹೋದಂತೆ, ತಾನ್ ಮೇಲೇರಿ ಬರುತ್ತಾನೆ ರವಿ.. ದಿನವರಳಿದ ಜಗದ ತುಂಬ ಅವಸರ ಈಗ. ಎಲ್ಲರಿಗು ತರಾತುರಿ. ಪೇಪರ್ ಹುಡುಗರು, ಹಾಲಿನ ಹುಡುಗರು, ಹೂವಿನ ಹುಡುಗಿಯರು ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಳ್ಳದಂತೆ ಕಾಯುತ್ತದೆ ಬಿಸಿಲು. ಪಾರ್ಕಿನ ಗಾರ್ಡುಗಳು ಜಾಗಿಂಗ್‌ಗೆ ಬರುವ ದಪ್ಪ ಮನುಷ್ಯರನ್ನು ಆಕಳಿಸುತ್ತ ಒಳಬಿಟ್ಟುಕೊಳ್ಳುವಾಗ ಅವರ ಬಾಯೊಳಗೂ ಪ್ರವೇಶಿಸುತ್ತದೆ ಬಿಸಿಲು. ದೊಡ್ಡ ಅಪಾರ್ಟ್‌ಮೆಂಟ್ ಬಿಲ್ಡಿಂಗಿನ ಬೇಸ್‌ಮೆಂಟ್ ಫ್ಲೋರಿನ ಕಾರ್ ಗರಾಜಿನಲ್ಲಿ ಮಲಗಿದ್ದ ಸೆಕ್ಯುರಿಟಿಯವನ ಮೈಮೇಲೂ ಬಿದ್ದು ಅವನನ್ನೂ ಎಚ್ಚರಿಸುತ್ತದೆ ಬಿಸಿಲು. ಕೋಲು ಹಿಡಿದ ಗೊಲ್ಲ ಕೂಗುತ್ತ ಹೋಗುತ್ತಾನೆ ಹಳ್ಳಿಯ ಮನೆ ಮನೆ ಮುಂದೆ: ದನ ಹೊಡಿರೋ...&lt;br /&gt;&lt;br /&gt;ದನದ ಮಂದೆ ಬೆಟ್ಟದ ಹುಲ್ಲುಗಾವಲಿನತ್ತ ಸಾಗುತ್ತ ಸಾಗುತ್ತ ಹೋದಹಾಗೆ ಬಿಸಿಲು ಏರುತ್ತ ಏರುತ್ತ ಹೋಗುತ್ತದೆ. ಸೂರ್ಯ ಮೇಲೇರಿದಷ್ಟೂ ಬಿಸಿಲಿನ ಪ್ರಖರತೆ ಹೆಚ್ಚು. ಅಮ್ಮ ಈಗ ಸಂಡಿಗೆ ಹಚ್ಚಿದ ಚಾಪೆಯನ್ನು ಅಂಗಳದಲ್ಲಿ ತಂದು ಹಾಸುತ್ತಿದ್ದಾಳೆ. ತೊಳೆದ ಬಟ್ಟೆಗಳನ್ನು ತಂದು ಟೆರೇಸಿನಲ್ಲಿ ಒಣಗಿಸುತ್ತಿದ್ದಾಳೆ ಕೆಲಸದವಳು. ತನ್ನ ಕ್ಯಾಬಿನ್ನಿನ ಎ.ಸಿ. ಆನ್ ಮಾಡುವಂತೆ ಹೇಳುತ್ತಿದ್ದಾನೆ ಬಾಸ್ ಆಫೀಸ್ ಬಾಯ್‌ಗೆ. "ಅರೆ, ಇದೇನಣ್ಣ ಬಿಸಿಲು ಹಿಂಗೆ ಏರ್ತಿದೆ?" ಕೇಳುತ್ತಾನೆ ದಾರಿಹೋಕ ಎಳನೀರಿನವನಿಗೆ. ದೊಡ್ಡ ರಾಶಿಯಿಂದ ಸರೀ ಸೀಯಾಳ ಹುಡುಕಿ ತೆಗೆಯುತ್ತ ಉತ್ತರಿಸುತ್ತಾನೆ ಎಳನೀರಿನವ: "ಬೇಸಿಗೆ ಅಲ್ವೇನಣ್ಣೋ.."&lt;br /&gt;&lt;br /&gt;ಬಿಸಿಲಿಗೆ ಬೇಸಗೆಯಲ್ಲಿ ಹಬ್ಬ. ಎಲ್ಲರೂ ತನಗೆ ಹೆದರುವವರೇ! ಮೀಸೆ ತಿರುವುತ್ತಾನೆ ಸೂರ್ಯ. ಆತ ವರ್ಷ, ಶರದ್, ಹೇಮಂತ, ಶಿಶಿರ -ಅಂತ ಹೆಚ್ಚುಕಮ್ಮಿ ನಾಲ್ಕು ಋತು ಕಾದಿದ್ದಾನೆ. ಇದೀಗ ತನ್ನ ಮಹಿಮೆಯನ್ನು ತೋರಿಸುವ ಸಮಯ. "ಈ ಸಲ ಮಳೆ ಸರಿಯಾಗಿ ಆಗ್ಲೇ ಇಲ್ಲ", "ಯಾಕೋಪ್ಪ, ಈ ವರ್ಷ ಚಳೀನೇ ಬೀಳ್ಲಿಲ್ಲ" ಇತ್ಯಾದಿ ದೂರುಗಳು ಅವನಿಗೂ ಕೇಳಿಸಿವೆ. ಹಾಗಂತ ಆತ ಹಿಂಜರಿದು ಕೂತಾನೆಯೇ? ಇಲ್ಲ.. ಮಳೆಗಾಲದಲ್ಲಿ ಮಳೆ ಬರಲಿ ಬಾರದಿರಲಿ, ಚಳಿಗಾಲದಲ್ಲಿ ಚಳಿ ಬೀಳಲಿ ಬೀಳದಿರಲಿ; ಆದರೆ ಬೇಸಗೆಯಲ್ಲಿ ಬಿಸಿಲು ಮಾತ್ರ ಇರಲೇಬೇಕು. ಅದು ಸೂರ್ಯನಿಷ್ಠೆ!&lt;br /&gt;&lt;br /&gt;ವಾಚು ನೋಡಿಕೊಳ್ಳುತ್ತಿರುವ ಸೂರ್ಯ, ಗಂಟೆ ಹನ್ನೆರಡು ದಾಟಿದ್ದೇ ಈಗ ಸೀದ ನೆತ್ತಿಗೆ ಬಂದಿದ್ದಾನೆ. ಕಟ್ಟಿಗೆ ಒಡೆಯುತ್ತಿರುವ ಆಳಿನ ಬರಿಮೈಯಿಂದ ಅದೇನದು ಹಾಗೆ ದಂಡಿದಂಡಿ ಇಳಿಯುತ್ತಿರುವುದು? ಬಸ್ಸಿಗಾಗಿ ಗಂಟೆಯಿಂದ ಕಾಯುತ್ತಿರುವ ಗೃಹಿಣಿ ಅದೇನದು ನಿಮಿಷಕ್ಕೊಮ್ಮೆ ಕರ್ಚೀಫಿನಿಂದ ಒರೆಸಿಕೊಳ್ಳುತ್ತಿರುವುದು? ಬೈಕಿನಲ್ಲಿ ಊರೆಲ್ಲ ಸುತ್ತಿದ ಸೇಲ್ಸ್‌ಬಾಯ್‌ನ ಅಂಗಿಯೇಕೆ ಹಾಗೆ ಒದ್ದೆಮುದ್ದೆಯಾಗಿದೆ? ಎಲ್ಲಕ್ಕು ಉತ್ತರ ಬೆವರು! ಎಲ್ಲಕ್ಕು ಕಾರಣ ಅಗೋ, ಅಲ್ಲಿ ನೆತ್ತಿಯಲ್ಲಿ ಉರಿಯುತ್ತಿರುವ ಬೆಂಕಿಯುಂಡೆ. ಕಣ್ಬಿಟ್ಟು ನೋಡಲೂ ಆಗದಷ್ಟು ಪ್ರಜ್ವಲತೆ.&lt;br /&gt;&lt;br /&gt;ಜ್ಯೂಸ್ ಅಂಗಡಿಯವನ ಮಿಕ್ಸರುಗಳಿಗೀಗ ಬಿಡುವೇ ಇಲ್ಲ. ಒಂದಾದ ತಕ್ಷಣ ಮತ್ತೊಂದು ಜಾರ್ ತೊಳೆದು, ಕತ್ತರಿಸಿದ ಹಣ್ಣು ಹಾಕಿ ಗುರ್‌ಗುಡಿಸುತ್ತಾರೆ ಹುಡುಗರು. ಐಸ್‌ಕ್ಯಾಂಡಿಯವನ ನೀಲಿಡಬ್ಬಿ ನೋಡನೋಡುತ್ತಲೇ ಖಾಲಿಯಾಗಿದೆ. ರಸ್ತೆಬದಿಯಲ್ಲಿ ಹಾಕಿಕೊಂಡಿರುವ ಕಲ್ಲಂಗಡಿ ರಾಶಿ ಮುಂದೆ ಜನವೋ ಜನ. ನಂದಿನಿ ಕೌಂಟರಿನವನು ನಿನ್ನೆಯೇ ಹೇಳಿ ತರಿಸಿದ್ದಾನೆ ನೂರು ಪ್ಯಾಕ್ ಎಕ್ಸ್‌ಟ್ರಾ ಮಸಾಲಮಜ್ಜಿಗೆ. "ಕೋಲ್ಡ್ ಬಿಸ್ಲೇರಿ ಖಾಲಿಯಾಗಿದೆ" ಅಂದಿದ್ದಕ್ಕೆ "ಇಟ್ಸೋಕೆ. ವಾರ್ಮೇ ಕೊಡಿ" ಅಂತ ಇಸಕೊಂಡು, ಅಲ್ಲೇ ಬಾಟಲಿಯ ಮುಚ್ಚಳವನ್ನು ಕರಕರನೆ ತಿರುಗಿಸಿ ತೆರೆದು ಕುಡಿಯುತ್ತಿದ್ದಾನೆ ಗ್ರಾಹಕ. ಐಪಿ‌ಎಲ್ ಟ್ವೆಂಟಿಟ್ವೆಂಟಿಯ ಟೈಮ್‌ಔಟಿನಲ್ಲಿ ಸ್ಲೈಸು, ಮಾಜಾಗಳನ್ನು ‘ಸರ್ ಉಠಾಕೆ’ ಕುಡಿಯುತ್ತಿದ್ದಾರೆ ಕ್ರೀಡಾಪಟುಗಳು. ಆದರೂ ಹಿಂಗುತ್ತಿಲ್ಲವಲ್ಲ ದಾಹ, ಇದೆಂತಹ ಬಿಸಿಲು..&lt;br /&gt;&lt;br /&gt;ಪಾರ್ಕಿನಲ್ಲಿ ಚಿಮ್ಮುತ್ತಿರುವ ಕಾರಂಜಿಯಲ್ಲಿ ರೆಕ್ಕೆಗಳನ್ನು ಫಡಫಡಿಸುತ್ತ ಮೀಯುತ್ತಿದೆ ಯಾವುದೋ ಒಂದು ಹಕ್ಕಿ. ಆ ತುಂತುರಿಂದ ಹಾದ ಬೆಳಕು ಪಕ್ಕದ ಮರದ ಗೆಲ್ಲುಗಳ ಮೇಲೆ ಮೂಡಿಸಿರುವ ಸಣ್ಣ ಕಾಮನಬಿಲ್ಲು ಯಾರ ಕಣ್ಣಿಗೂ ಬೀಳದೆಹೋಗುತ್ತಿದೆ. ಮಕ್ಕಳೆಲ್ಲ ಹಾರಿಕೊಂಡಿದ್ದಾರೆ ಈಜುಕೊಳದಲ್ಲಿ. ಬಿಂದಿಗೆ ಬಿಂದಿಗೆ ತಣ್ಣೀರನ್ನು ಮೈಮೇಲೆ ಹೊಯ್ದುಕೊಳ್ಳುತ್ತ ಕುಣಿದಾಡುತ್ತಿದ್ದಾನೆ ರಜೆಯ ಮಜದಲ್ಲಿರುವ ಯುವಕ. ಕಾಗೆ ಹಾರಿಸಲು ಬಂದಿದ್ದ ಗೃಹಿಣಿ ಒಂದೆರಡು ಹಪ್ಪಳ ಮುಟ್ಟಿನೋಡಿ ಇವತ್ತು ಸಂಜೆಯೇ ತೆಗೆಯಬಹುದು ಅಂತ ತೀರ್ಮಾನಿಸಿದ್ದಾಳೆ. ಕತ್ತಲ ಒಳಮನೆಯಲ್ಲೀಗ ನೆಲದಿಂದ ಸೂರಿನ ಗವಾಕ್ಷಿಯವರೆಗೆ ಒಂದು ಬೆಳಕಕೋಲು ನೆಟ್ಟುನಿಂತಿದೆ. ಸ್ನಾನ ಮಾಡಿ ಮಲಗಿಸಿದ್ದ ಹಸಿಗೂಸಿಗೆ ಎಚ್ಚರಾಗಿ ಅಂಬೆ ಹರಿದುಕೊಂಡು ಬಂದು ಈ ಬಿಸಿಲಕೋಲನ್ನು ಕೈಚಾಚಿ ಅಚ್ಚರಿಯಿಂದ ಮುಟ್ಟುತ್ತಿದೆ. ಬತ್ತುತ್ತಿರುವ ಈ ನದಿಯಿಂದ ಬೇರೆ ದೊಡ್ಡ ನದಿಗೆ ಆದಷ್ಟು ಬೇಗ ಸೇರಿಕೊಳ್ಳುವ ತವಕದಲ್ಲಿ ಈಜುತ್ತಿದೆ ಒಂದು ಒಂಟಿಮೀನು. ವಿಧಾನಮಂಡಳದ ಕಲಾಪದ ನಡುವೆಯೇ ದಣಿವಿಗೆ ನಿದ್ರೆ ಹೋಗಿದ್ದಾರೆ ಯಾರೋ ಸಚಿವರು. ಇದೇ ಅವಕಾಶ ನೋಡಿ ಅವರ ಫೋಟೋ ತೆಗೆಯುತ್ತಿದ್ದಾನೆ ಫೋಟೋ ಜರ್ನಲಿಸ್ಟ್.&lt;br /&gt;&lt;br /&gt;ಗಂಟೆಯೀಗ ಮೂರಾಗಿದೆ. ಪಶ್ಚಿಮದತ್ತ ಜಾರಲೋ ಬೇಡವೋ ಎಂದು ಯೋಚಿಸುತ್ತಿರುವ ಸೂರ್ಯನ ಬ್ಯಾಟಿಂಗ್ ಇನ್ನೂ ಬಿರುಸಿನಿಂದಲೇ ಸಾಗಿದೆ. ಗೊಲ್ಲರ ಹುಡುಗ ಈಗ ದನಕರುಗಳನ್ನೆಲ್ಲ ತಪ್ಪಲಲ್ಲಿ ಮೇಯಲು ಬಿಟ್ಟು ತಾನೊಂದು ಮರದ ತಣ್ಣೆಳಲ್ಲಿ ಮಲಗಿ ನಿದ್ದೆ ಹೋಗಿದ್ದಾನೆ. ಇಂದಾದರೂ ಮಳೆ ಬಂದೀತೆ ಎಂದು ಮುಗಿಲಿನತ್ತ ಕೈ ಅಡ್ಡ ಹಿಡಿದು ತಲೆಯಿತ್ತಿ ನೋಡುತ್ತಿದ್ದಾನೆ ಉತ್ತರ ಕರ್ನಾಟಕದ ರೈತ. ಊಹುಂ, ಮೋಡಗಳ ಸುಳಿವೇ ಇಲ್ಲ. ಮರದ ಒಂದೆಲೆಯೂ ಅಲ್ಲಾಡುತ್ತಿಲ್ಲ. ಮದುವೆಗೆ ಹೆದರಿದ ಕಪ್ಪೆಗಳು ಎಲ್ಲೋ ಕಲ್ಲಸಂದಿಯಲ್ಲಿ ಅಡಗಿ ಕೂತಿವೆ. ಆಫೀಸಿನಲ್ಲಿರುವವರಿಗೂ ತೂಕಡಿಕೆ ಬರುತ್ತಿದೆ. ಯಾಕೋ ಸುಮ್ಮನೆ ಸುಸ್ತು. ಮಧ್ಯಾಹ್ನ ಊಟ ಮಾಡಲೂ ಸೇರಲಿಲ್ಲ. ತುಂಬಿ ತಂದಿಟ್ಟುಕೊಂಡ ಬಾಟಲಿಯಲ್ಲಿನ ನೀರು ಇದ್ದಲ್ಲೇ ಬಿಸಿಯಾಗಿದೆ. ದೇವಸ್ಥಾನದ ಕಲ್ಲು ಹಾಸಿನಮೇಲೆ ಬರಿಗಾಲಲ್ಲಿ ನಡೆಯುತ್ತಿರುವ ದಂಪತಿಗಳ ಕಾಲು ಚುರುಕ್ ಎಂದಿದೆ. ಭಟ್ಟರು ಪರ್ಜನ್ಯ ಮಾಡಿಸುವ ಯೋಚನೆ ಮಾಡುತ್ತಿದ್ದಾರೆ. ಸ್ಕೂಲ್ ಮುಗಿಸಿ ಹೊರಟ ಹುಡುಗನ ಸೈಕಲ್ಲಿನ ಚಕ್ರಕ್ಕೆಲ್ಲ ಟಾರು ರಸ್ತೆಯ ಡಾಂಬರು ಕರಗಿ ಅಂಟಿದೆ. ರಸ್ತೆ ಬದಿಯಲ್ಲಿ ನಿಂತು ಬಗ್ಗಿ ನೋಡಿದರೆ ದೂರ, ಭುವಿಯೊಳಗಿನ ನೀರೇ ಆವಿಯಾಗುತ್ತಿರುವಂತೆ ಹಬೆಯಾಡುವುದು ಕಾಣಿಸುತ್ತದೆ.&lt;br /&gt;&lt;br /&gt;ಸಂಜೆಯಾಗುವ ಲಕ್ಷಣಗಳು ಈಗ.. ಊಹುಂ, ಸೂರ್ಯನ ಪ್ರತಾಪವಿನ್ನೂ ಮುಗಿದಿಲ್ಲ. ಒಂದು ನಕ್ಷತ್ರದ ಒಡಲಲ್ಲಿ ಅದೆಷ್ಟು ಬೆಂಕಿ ಹಾಗಾದರೆ? ಅಳಿದುಳಿದ ಕಿರಣಗಳನ್ನೆಲ್ಲ ಬೀಸುತ್ತಿದ್ದಾನೆ ಸೂರ್ಯ.. ಉದುರಿದ ಎಲೆಗಳ ಮೇಲೆ ಭಾರ ಹೆಜ್ಜೆಗಳನ್ನಿಡುತ್ತ ನಡೆದಿರುವ ಮುದುಕನೇ, ಪಡುವಣ ಬಾನಂಚಿನಲ್ಲಿ ಹೊಳೆಯುತ್ತಿರುವ ದಿನಕರನನ್ನು ನೋಡದಿರು.. ಮೊದಲೇ ಮಂಜಾಗಿರುವ ನಿನ್ನ ಕಣ್ಣು ಸುಟ್ಟುಹೋದೀತು. ಒಂದು ಬೇಸಗೆಯ ಈ ಒಂದು ದಿನ ಅದೆಷ್ಟು ನೀರು ಕುಡಿದರು ಜನ? ಎಷ್ಟು ಬೆವರು ಹರಿಸಿದರು? ಅವರು ಹಾಕಿದ ಶಾಪಗಳೆಲ್ಲ ಸೂರ್ಯನ ಯಜ್ಞಕುಂಡಕ್ಕೆ ತುಪ್ಪವಾಯಿತೆ? ಅವರು ಬಿಟ್ಟ ನಿಟ್ಟುಸಿರೆಲ್ಲ ಉರಿವ ಬೆಂಕಿಗೆ ಧೂಪವಾಯಿತೆ? ಪ್ರಶ್ನೆಗಳು ಮುಗಿಯುವ ಮೊದಲೇ ಮರೆಯಾಗುತ್ತಿದ್ದಾನೆ ಸೂರ್ಯ..&lt;br /&gt;&lt;br /&gt;ಕತ್ತಲಾವರಿಸಿದರೂ ಸೆಖೆಯೇನು ಕಮ್ಮಿಯಾಗಿಲ್ಲ.. ಕೊಟ್ಟಿಗೆಗೆ ಮರಳಿದ ಜಾನುವಾರು ಬಕೀಟುಗಟ್ಟಲೆ ನೀರು ಕುಡಿಯುತ್ತಿವೆ. ಕೆಲಸ ಮುಗಿಸಿ ಮನೆಗೆ ಬಂದವರೆಲ್ಲ ಬೆವರ ವಾಸನೆಯ ಬಟ್ಟೆ ಬಿಚ್ಚೊಗೆದು ಫ್ಯಾನಿನ ಕೆಳಗೆ ಅಂಗಾತ ಬಿದ್ದಿದ್ದಾರೆ. ಇಂದು ರಾತ್ರಿಯ ಊಟಕ್ಕೆ ನೀರುಮಜ್ಜಿಗೆ ಸಾಕು. ಹೆಚ್ಚೆಂದರೆ ಒಂದು ಹುಣಸೇಹಣ್ಣಿನ ಗೊಜ್ಜು. ಬಿಸಿಬಿಸಿಯ ಸಾರು-ಹುಳಿ ಯಾರಿಗೂ ಬೇಡ. ಜ್ವರ ಬರುತ್ತೆ ಅಂತ ಹೆದರಿಸಿದರೂ ಕೇಳುತ್ತಿಲ್ಲ, ಮಗಳು ಫ್ರಿಜ್ ವಾಟರೇ ಬೇಕೆಂದು ಹಟ ಮಾಡುತ್ತಿದ್ದಾಳೆ. ರಸ್ತೆಯ ಮೇಲೆ ಕಾರ್ಪೋರೇಶನ್ ನೀರಿಗೆ ಕಾದ ಸಾಲು ಕೊಡಗಳು. ಪಕ್ಕದ ಮನೆಯ ಬ್ಯಾಚುಲರ್ ಹುಡುಗರು ಟೆರೇಸಿನ ಮೇಲೆ ಚಾಪೆ ಹಾಸಿ ಮಲಗುತ್ತಿದ್ದಾರೆ. ಲೋಡ್ ಶೆಡ್ಡಿಂಗ್ ಅಂತೆ, ಕರೆಂಟ್ ಹೋಯ್ತು. ಗ್ಲೋಬಲ್ ವಾರ್ಮಿಂಗ್ ಬಗ್ಗೆ ನಾಳೆ ಕೊಡಬೇಕಿರುವ ಲೆಕ್ಚರಿಗೆ ತಯಾರಾಗುತ್ತಿದ್ದ ಪ್ರೊಫೆಸರ್ ಉಫ್ ನಿಟ್ಟುಸಿರು ಬಿಡುತ್ತಿದ್ದಾರೆ. ಬಿಸಿಗಾಳಿ ಬೀಸುತ್ತಿದ್ದ ಫ್ಯಾನೂ ಇಲ್ಲ ಈಗ. ನಿದ್ರೆ ಬಾರದೆ ಹೊರಳಾಡುತ್ತಿರುವ ಎಲ್ಲ ಜೀವಗಳ ತಪನೆ ಒಂದೇ: ಬೀಸಿಬರಬಾರದೆ ಒಂದು ಹೊಯ್ಲು ತಣ್ಣನೆ ಗಾಳಿ? ಇದ್ದಕ್ಕಿದ್ದಂತೆ ಸುರಿಯಲು ಶುರುವಿಡಬಾರದೇ ಒಂದು ಅಡ್ಡಮಳೆ?&lt;br /&gt;&lt;br /&gt;ಊಹುಂ, ಬೇಸಗೆಯ ಬವಣೆಗಳು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಮರುಮುಂಜಾನೆ ಮತ್ತೆ ಅದೇ ಹಾಳು ಸೂರ್ಯ ಹುಟ್ಟುತ್ತಿದ್ದಾನೆ. ಬಿದ್ದ ಇಬ್ಬನಿಯಿಂದ ಕೊಂಚ ತಣ್ಣಗಾಗಿದ್ದ ಭುವಿಯ ತಂಪು ಕಸಿಯಲು ಮತ್ತೆ ಬರುತ್ತಿದ್ದಾನೆ. ಇನ್ನೇನು, ಬಿಸಿಲ ಬಲೆ ಬೀಸಲಿದ್ದಾನೆ..&lt;br /&gt;&lt;br /&gt;[&lt;span style="font-style: italic; color: rgb(102, 0, 0);"&gt;ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ&lt;/span&gt;]&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-7714622618918490427?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/7714622618918490427/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=7714622618918490427' title='18 Comments'/><link rel='edit' type='application/atom+xml' href='http://www.blogger.com/feeds/27009232/posts/default/7714622618918490427'/><link rel='self' type='application/atom+xml' href='http://www.blogger.com/feeds/27009232/posts/default/7714622618918490427'/><link rel='alternate' type='text/html' href='http://hisushrutha.blogspot.com/2010/04/blog-post_12.html' title='ಬಿಸಿಲಿದು ಬರಿ ಬಿಸಿಲಲ್ಲವೋ..'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>18</thr:total></entry><entry><id>tag:blogger.com,1999:blog-27009232.post-5124770553134567278</id><published>2010-04-06T10:03:00.002+05:30</published><updated>2010-04-06T10:07:41.651+05:30</updated><category scheme='http://www.blogger.com/atom/ns#' term='ನನ್ನದಲ್ಲದ್ದು'/><category scheme='http://www.blogger.com/atom/ns#' term='ಕವನ'/><category scheme='http://www.blogger.com/atom/ns#' term='ವಿ. ಹರಿನಾಥ ಬಾಬು'/><title type='text'>ಬೆಳಕ ಹೆಜ್ಜೆಯನರಸಿ...</title><content type='html'>ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ನನ್ನ ಕಥೆ ಓದಿ, ಅದು ಹೇಗೋ ವಿಳಾಸ ಪತ್ತೆ ಮಾಡಿ ಪತ್ರ ಬರೆದಿದ್ದ, ಸಿರಗುಪ್ಪದ ವಿ. ಹರಿನಾಥ ಬಾಬು ತಮ್ಮ ಚೊಚ್ಚಿಲ ಕವನ ಸಂಕಲನ '&lt;span style="color: rgb(102, 0, 0);"&gt;ಬೆಳಕ ಹೆಜ್ಜೆಯನರಸಿ&lt;/span&gt;' ಕಳುಹಿಸಿಕೊಟ್ಟಿದ್ದಾರೆ. ಸಧ್ಯ ಗಂಗಾವತಿಯಲ್ಲಿ ಉಪ ಖಜಾನಧಿಕಾರಿಯಾಗಿರುವ ಬಾಬು ಅವರ ಕವಿತೆಗಳು ಕನ್ನಡದ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಲೇ ಇರುತ್ತವೆ. ಎಲ್ಲ ಉತ್ತರ ಕರ್ನಾಟಕದ ಕವಿಗಳಂತೆ ಬಾಬು ಅವರ ಕವಿತೆಗಳಲ್ಲೂ ಬಿಸಿಲು, ಕರಿಮಣ್ಣು, ಅವ್ವ, ರೊಟ್ಟಿ, ಬಡತನ, ಹಟ್ಟಿ, ಹಸಿವು, ಜಾತಿ, ಜೀತಗಳಿವೆ. ರಾಜಕಾರಣಿಗಳ ಭ್ರಷ್ಟತೆಯೆಡೆಗಿನ ಪ್ರತಿಭಟನೆಯಿದೆ. ಮತ-ಧರ್ಮಗಳಂಥ ವಿಷಯಗಳ ಮುಂದೆ ಮೌಲ್ಯ ಕಳೆದುಕೊಳ್ಳುತ್ತಿರುವ ಮಾನವೀಯತೆಯ ಬಗ್ಗೆ ತುಡಿತವಿದೆ. ದೊಡ್ಡ ದೇಶಗಳು ಯುದ್ಧದಂಥ 'ಆಟ' ಆಡಿಸುವುದರಿಂದ ಆಗುವ ಹಾನಿಗಳೆಡೆಗೆ ಬೆಳಕು ಚೆಲ್ಲುವ ಪ್ರಯತ್ನವಿದೆ.&lt;br /&gt;&lt;br /&gt;"ಬತ್ತಿದ ಮೊಲೆಯ ತಾಯಂದಿರು ಬಂದೂಕುಗಳ ಹಿಡಿದು ಒಲೆ ಹಚ್ಚಿದರೆ / ಅನ್ನದ ಡಬರಿಯಲಿ ತಮ್ಮದೇ ಕೂಸುಗಳು ಕುದಿಯುತ್ತಿವೆ ಕೊತ ಕೊತ / ಸಣ್ಣ ಕರುಳು, ಬೋಟಿ, ಖಲೀಜ" -ದಂತಹ ಬೆಚ್ಚಿ ಬೀಳಿಸುವ ರೂಪಕಗಳನ್ನು ಕಟ್ಟುವ ಬಾಬು, "ಇನ್ನೆಷ್ಟು ದಿನ ಮಿಸುಕಾಡದ ದೇವರುಗಳ ಮುಂದೆ ಹರಕೆ ಹೊರುವುದು / ಹೊಲಸು ಹಾದಿಗಳ ಮೇಲೆ ಚಿಂದಿಯುಟ್ಟು ಉರುಳುವುದು / ತಲೆ ಬೋಳಿಸಿಕೊಳ್ಳುವುದು / ಸತ್ತ ಮೇಲೂ ಸಾಯುವುದು?" ಅಂತ ಪ್ರಶ್ನಿಸುತ್ತಾರೆ. "ನಮ್ಮವರ ಬಣ್ಣ ರೊಕ್ಕ ಇದ್ದ ಧಣಿಗಳ ತಾಕ ಜೀತಕ್ಕಿಟ್ಟೈತಿ / ಹುಟ್ಟಿದಾಗಿಂದ ಜಾತಿ ಒಲಿಯಾಗ ಬಡತನದ ಬೆಂಕ್ಯಾಗ ಸುಟ್ಟು ಕರಕಲಾಗೈತಿ / ಸಾಯೋಗಂಟ ಅದೇ ನಿಜ ಆಗೈತಿ" ಎಂದು ಬರೆಯುವಾಗ ಅವರಲ್ಲಿರುವ ವಿಷಾದ, "ಹೆಣ್ಣಾಗಿ ಹುಟ್ಟಿ ಭೂಮಿ ಎಂದು ಕರೆಸಿಕೊಳ್ಳುವುದು ಸಾಕು, ಸಿಡಿಯಬೇಕು ಇನ್ನಾದರೂ ಜ್ವಾಲಾಮುಖಿಯಾಗಿ" ಅಂತ ಬರೆವಾಗ ವಿಚಿತ್ರ ಆಶಾವಾದವಾಗುತ್ತದೆ. ಇಂತಹ, ಓದುಗನನ್ನು ಕೆರಳಿಸುವ, ಒರೆಗೆ ಹಚ್ಚುವ, ನಿಟ್ಟುಸಿರಿಡಿಸುವ ಕವನಗಳ ಜತೆಗೇ, ಬಾಬು ಚಂದಿರನಿಗೆ ಲಾಲಿ ಹಾಡಿ ತೂಗುತ್ತಾರೆ, ಮಗಳ ಹಾಡಿಗೆ ಕಿವಿಯಾಗುತ್ತಾರೆ, 'ಪ್ರೀತಿಯೇ ಬೆಟ್ಟವಾದ ನನ್ನಪ್ಪ'ನನ್ನು ಅನಾವರಣಗೊಳಿಸುತ್ತಾರೆ, ತಮ್ಮ ಕಾವ್ಯಕನ್ನಿಕೆಯನ್ನು 'ಬ್ಯಾಸಿಗಿ ಬಿಸಿಲಿಗೆ ತಂಪ ನೆಳ್ಳ ಆಗ್ಯಾಳ' ಎಂದು ಬಣ್ಣಿಸುತ್ತಾರೆ.&lt;br /&gt;&lt;br /&gt;ಇಂತಹ ಬಾಬು ಅವರ ಕವನ ಸಂಕಲನದಿಂದ ಆಯ್ದ ಒಂದು ಕವಿತೆ, ಅವರ ಪ್ರೀತಿಗೆ; ನನ್ನ ಹಂಚಿಕೊಳ್ಳುವ ಖುಶಿಗೆ.&lt;br /&gt;&lt;br /&gt;&lt;span style="font-weight: bold; color: rgb(102, 0, 0);"&gt;ಅಮ್ಮ ಸುಟ್ಟ ರೊಟ್ಟಿ&lt;/span&gt;&lt;br /&gt;&lt;ul&gt;&lt;li&gt;&lt;span style="font-size:85%;"&gt;&lt;span style="color: rgb(0, 0, 153); font-weight: bold;"&gt;ವಿ. ಹರಿನಾಥ ಬಾಬು&lt;/span&gt;&lt;/span&gt;&lt;/li&gt;&lt;/ul&gt;&lt;br /&gt;ಅಮ್ಮ ಬೆಳಗೆದ್ದು ರೊಟ್ಟಿ ಸುಡುವುದೆಂದರೆ&lt;br /&gt;ನಮಗೆ ಪಂಚಪ್ರಾಣ&lt;br /&gt;&lt;br /&gt;ಕತ್ತಲು ತುಂಬಿದ ಗುಡಿಸಲಿಗೆ&lt;br /&gt;ಒಲೆಯ ಬೆಂಕಿಯೇ ಬೆಳಕು&lt;br /&gt;ಸುಟ್ಟು ಸುಟ್ಟು ಕರ್ರಗಾದ&lt;br /&gt;ಬಿಳಿ ಮೂರು ಕಲ್ಲು,&lt;br /&gt;ಮೇಲೊಂದು ಕರ್ರಾನೆ ಕರಿ ಹೆಂಚು&lt;br /&gt;ಒಲೆಯೊಳಗೆ ಹಸಿ ಜಾಲಿ&lt;br /&gt;ಮುಳ್ಳು ಕಟ್ಟಿಗೆ ಒಟ್ಟಿ&lt;br /&gt;ಹೊಗೆಯೊಳಗೆ ಉಸಿರು ಕಟ್ಟಿ&lt;br /&gt;ಮನೆಯೊಳಗೆ ಉಸಿರೆರೆದವಳು&lt;br /&gt;&lt;br /&gt;ಅಮ್ಮ, ಕಾಲು ಒಲೆಯೊಳಗಿಟ್ಟು ಸುಟ್ಟ&lt;br /&gt;ಬಿಸಿ ಬಿಸಿ ರೊಟ್ಟಿ&lt;br /&gt;&lt;br /&gt;ಕೊಣಿಗೆಯಲಿ ಹಿಟ್ಟರವಿ&lt;br /&gt;ಆಸೆಯ ಒಡ್ಡು ಕಟ್ಟಿ&lt;br /&gt;ಹಗಲೆಲ್ಲ ದುಡಿದ ಮೈ ಬಸಿದ ಬೆವರು&lt;br /&gt;ಹದಕೆ ಕಾಯಿಸಿದ ಎಸರು&lt;br /&gt;ಸುರುವಿ ಒರೊಟೊರಟ ಕೈಯಿಲೆ&lt;br /&gt;ಮೆತ್ತ ಮೆತ್ತಗೆ ಕಲಸಿ&lt;br /&gt;ಗಾಲಿಯಂಗೆ ಗುಂಡಗೆ ನುಣ್ಣನೆಯ&lt;br /&gt;ಮೂರ್ತಿ ಮಾಡಿದವಳು&lt;br /&gt;&lt;br /&gt;ಅಮ್ಮ, ಕೈಯಿ ಒಲೆಯೊಳಗಿಟ್ಟು ಸುಟ್ಟ&lt;br /&gt;ಬಿಸಿ ಬಿಸಿ ರೊಟ್ಟಿ&lt;br /&gt;&lt;br /&gt;ಎದೆಯ ತುಡಿತಗಳ ಮಿಡಿತ&lt;br /&gt;ಹದವಾಗಿ ಮೆದುವಾಗಿ&lt;br /&gt;ಲಯಬದ್ಧವಾಗಿ ಹಿಟ್ಟ&lt;br /&gt;ತಟ್ಟಿದರೆ ದುಂಡ ದುಂಡಗೆ&lt;br /&gt;ಹುಣ್ಣಿಮೆಯ ಚಂದಿರ&lt;br /&gt;ಕಾದ ಕರಿಹೆಂಚಿನ ಮೇಲೆ&lt;br /&gt;ಆಕಡೀಕಡೆ ಸುಟ್ಟು&lt;br /&gt;ಹೊಟ್ಟೆಗಿಟ್ಟು&lt;br /&gt;ರಟ್ಟೆಗೆ ಬಲವ ಕೊಟ್ಟವಳು&lt;br /&gt;&lt;br /&gt;ಅಮ್ಮ, ಮೈಯಿ ಒಲೆಯೊಳಗಿಟ್ಟು ಸುಟ್ಟ&lt;br /&gt;ಬಿಸಿ ಬಿಸಿ ರೊಟ್ಟಿ&lt;br /&gt;&lt;br /&gt;ಜೀವ ಜೀವದ ಸಾರ&lt;br /&gt;ಕುಸಿವೆಣ್ಣೆ ಒಣಕಾರ&lt;br /&gt;ಈರುಳ್ಳಿ ಹಸಿಮೆಣಸು&lt;br /&gt;ಬೆಳ್ಳುಳ್ಳಿ ಉಂಚೆತೊಕ್ಕು&lt;br /&gt;ದಿನಕೊಂದು ಹೊಸ ರುಚಿಯ&lt;br /&gt;ರೊಟ್ಟಿಯೊಳಗೇ ಸುತ್ತಿ&lt;br /&gt;ಉಣಬಡಿಸಿ&lt;br /&gt;ಸುತ್ತೇಳು ಲೋಕವ ತೋರಿದವಳು&lt;br /&gt;&lt;br /&gt;ಅಮ್ಮ, ಜೀವ ಒಲೆಯೊಳಗಿಟ್ಟು ಸುಟ್ಟ&lt;br /&gt;ಬಿಸಿ ಬಿಸಿ ರೊಟ್ಟಿ&lt;br /&gt;&lt;br /&gt;ಕಟ್ಟಿಗೆಯೊಟ್ಟಿಗೆ ಸುಟ್ಟು&lt;br /&gt;ಹೊಗೆಯೊಳಗೆ ಕುದ್ದು&lt;br /&gt;ಹೆಂಚಂತೆ ಕಾದು&lt;br /&gt;ರೊಟ್ಟಿಯಾಗಿ ಬೆಂದ&lt;br /&gt;ಒಲೆಯ ಮುಂದಿನ ಅಮ್ಮನ ಮುಖ&lt;br /&gt;ನಿಗಿ ನಿಗಿ ಕೆಂಡ!&lt;br /&gt;&lt;br /&gt;[&lt;span style="font-style: italic;"&gt;'ಬೆಳಕ ಹೆಜ್ಜೆಯನರಸಿ'; ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ.&lt;/span&gt;]&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-5124770553134567278?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/5124770553134567278/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=5124770553134567278' title='14 Comments'/><link rel='edit' type='application/atom+xml' href='http://www.blogger.com/feeds/27009232/posts/default/5124770553134567278'/><link rel='self' type='application/atom+xml' href='http://www.blogger.com/feeds/27009232/posts/default/5124770553134567278'/><link rel='alternate' type='text/html' href='http://hisushrutha.blogspot.com/2010/04/blog-post.html' title='ಬೆಳಕ ಹೆಜ್ಜೆಯನರಸಿ...'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>14</thr:total></entry><entry><id>tag:blogger.com,1999:blog-27009232.post-3144087969572203979</id><published>2010-03-31T09:45:00.003+05:30</published><updated>2010-03-31T09:50:45.144+05:30</updated><category scheme='http://www.blogger.com/atom/ns#' term='ಮಳೆ'/><category scheme='http://www.blogger.com/atom/ns#' term='ಲಹರಿಯಲಿ ತೇಲಿ'/><category scheme='http://www.blogger.com/atom/ns#' term='ಖುಶಿ'/><title type='text'>ತೋಯ್ದೆ!</title><content type='html'>&lt;div&gt;&lt;span class="Apple-style-span"  style="color:#000066;"&gt;ನಿನ್ನೆ ಸಂಜೆ ಬೆಂಗಳೂರಿಗೆ ಮಳೆ ಬಂತು.&lt;/span&gt;&lt;div&gt;&lt;span class="Apple-style-span"  style="color:#000066;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="color:#000066;"&gt;ನಾನು ತೋಯ್ದೆ.&lt;/span&gt; &lt;span class="Apple-style-span"  style="color:#CC0000;"&gt;:-)&lt;/span&gt; &lt;span class="Apple-style-span"  style="color:#FF0000;"&gt;:-)&lt;/span&gt; &lt;span class="Apple-style-span"  style="color:#FF6666;"&gt;:-)&lt;/span&gt;&lt;/div&gt;&lt;/div&gt;&lt;div&gt;&lt;span class="Apple-style-span"  style="color:#FF6666;"&gt;&lt;br /&gt;&lt;/span&gt;&lt;/div&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_c2gCy0eVwAM/S7LNUzzD78I/AAAAAAAAG5U/3VJzhcxx7Fc/s1600/Rain.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 214px;" src="http://3.bp.blogspot.com/_c2gCy0eVwAM/S7LNUzzD78I/AAAAAAAAG5U/3VJzhcxx7Fc/s320/Rain.jpg" border="0" alt="" id="BLOGGER_PHOTO_ID_5454647856084545474" /&gt;&lt;/a&gt;&lt;br /&gt;&lt;span class="Apple-style-span"  style="color:#000066;"&gt;&lt;br /&gt;&lt;/span&gt;&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-3144087969572203979?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/3144087969572203979/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=3144087969572203979' title='9 Comments'/><link rel='edit' type='application/atom+xml' href='http://www.blogger.com/feeds/27009232/posts/default/3144087969572203979'/><link rel='self' type='application/atom+xml' href='http://www.blogger.com/feeds/27009232/posts/default/3144087969572203979'/><link rel='alternate' type='text/html' href='http://hisushrutha.blogspot.com/2010/03/blog-post_31.html' title='ತೋಯ್ದೆ!'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_c2gCy0eVwAM/S7LNUzzD78I/AAAAAAAAG5U/3VJzhcxx7Fc/s72-c/Rain.jpg' height='72' width='72'/><thr:total>9</thr:total></entry><entry><id>tag:blogger.com,1999:blog-27009232.post-1568971097636577</id><published>2010-03-17T12:46:00.003+05:30</published><updated>2010-04-06T10:13:37.851+05:30</updated><category scheme='http://www.blogger.com/atom/ns#' term='ನನ್ನ ಕವಿತೆ'/><category scheme='http://www.blogger.com/atom/ns#' term='Poem'/><title type='text'>ಇನ್ನೊಂದು ಲಾರ್ಜ್</title><content type='html'>ವಿಳಾಸವೇ ಬರೆದಿರದ ಪರಿಮಳದ&lt;br /&gt;ಜಾಡು ಹಿಡಿದು ಬೆಟ್ಟವನ್ನೇರುತ್ತಿರುವ ತುಂಬಿಗೆ&lt;br /&gt;ಹುಚ್ಚು ಭ್ರಮೆಯಿರಬೇಕು&lt;br /&gt;&lt;br /&gt;ಹೂವು ಬೆಟ್ಟದ ಮೇಲೇ ಇರಬಹುದು&lt;br /&gt;ಆಚೆ ತಪ್ಪಲಲ್ಲೂ ಇರಬಹುದು&lt;br /&gt;ಇಲ್ಲದೆಯೂ ಇರಬಹುದು, ಅಥವಾ&lt;br /&gt;ಅದರೊಡಲ ಮಧುಪಾತ್ರೆ ಈಗಾಗಲೇ&lt;br /&gt;ಬರಿದಾಗಿರಬಹುದು.&lt;br /&gt;ಪುಟ್ಟ ಪಾರದರ್ಶಕ ರೆಕ್ಕೆಗಳಿಗೆ&lt;br /&gt;ಭ್ರಾಂತಿಯ ಎಣ್ಣೆ ಸವರಿರದಿದ್ದರೆ&lt;br /&gt;ಹೇಗೆ ಬಂದೀತು ಬಳಲಿ ಬರದಂತೆ&lt;br /&gt;ಬಡಿಯುವ ಕಸುವು?&lt;br /&gt;&lt;br /&gt;ಮೆಚ್ಚುತ್ತೇನೆ-&lt;br /&gt;'ಅದು ಭ್ರಮೆಯೂ ಅಲ್ಲ, ಭ್ರಾಂತಿಯೂ ಅಲ್ಲ;&lt;br /&gt;ಬರೀ ಪ್ರೀತಿ.. ಹೂವಿನ ಪರಿಮಳದೆಡೆಗಿನ ತುಂಬಿಯ&lt;br /&gt;ಕನಸಿನ ರೀತಿ' ಎಂದುತ್ತರಿಸುವ ನಿನ್ನ ಜಾಣ್ಮೆ.&lt;br /&gt;&lt;br /&gt;ಆದರೆ-&lt;br /&gt;ಸಿಗಲಿಲ್ಲ ಹಣ್ಣು ಎಂದಾಕ್ಷಣ&lt;br /&gt;ದ್ರಾಕ್ಷಿ ಹುಳಿಯೆಂದ ನರಿಯಂತೆ ಹುಸಿ&lt;br /&gt;ಬುದ್ದಿವಂತಿಕೆ ತೋರುವ ನಿನ್ನೀ ಮುಖ ನೋಡಿ&lt;br /&gt;ಯಾಕೋ ಹೂವೇ ಮುಗ್ಧ ಅಂತ ನನಗನಿಸಿದರೆ,&lt;br /&gt;ಕ್ಷಮಿಸು.&lt;br /&gt;&lt;br /&gt;ಈಗಾಗಲೇ ಸಿಕ್ಕಾಪಟ್ಟೆ ಕುಡಿದಿದ್ದೀಯ,&lt;br /&gt;ಇನ್ನೊಂದು ಲಾರ್ಜ್‌ಗೆ ಆರ್ಡರ್ ಮಾಡುವ ಮುನ್ನ&lt;br /&gt;ಕೊಂಚ ಯೋಚಿಸು.&lt;div class="blogger-post-footer"&gt;@ Sushrutha Dodderi&lt;img width='1' height='1' src='https://blogger.googleusercontent.com/tracker/27009232-1568971097636577?l=hisushrutha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hisushrutha.blogspot.com/feeds/1568971097636577/comments/default' title='Post Comments'/><link rel='replies' type='text/html' href='http://www.blogger.com/comment.g?blogID=27009232&amp;postID=1568971097636577' title='27 Comments'/><link rel='edit' type='application/atom+xml' href='http://www.blogger.com/feeds/27009232/posts/default/1568971097636577'/><link rel='self' type='application/atom+xml' href='http://www.blogger.com/feeds/27009232/posts/default/1568971097636577'/><link rel='alternate' type='text/html' href='http://hisushrutha.blogspot.com/2010/03/blog-post_17.html' title='ಇನ್ನೊಂದು ಲಾರ್ಜ್'/><author><name>Sushrutha Dodderi</name><uri>https://profiles.google.com/115701581065580189907</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-T_jpa9CA8xM/AAAAAAAAAAI/AAAAAAAAJhA/KBb7sn1JB9s/s512-c/photo.jpg'/></author><thr:total>27</thr:total></entry><entry><id>tag:blogger.com,1999:blog-27009232.post-275671582264868520</id><published>2010-03-03T15:15:00.001+05:30</published><updated>2010-03-03T15:17:50.228+05:30</updated><category scheme='http://www.blogger.com/atom/ns#' term='ಸು-ಲಲಿತ ಪ್ರಬಂಧ'/><category scheme='http://www.blogger.com/atom/ns#' term='ನ್ಯಾಲೆ'/><title type='text'>ನ್ಯಾಲೆಯ ಮ್ಯಾಲೆ ತೂಗುವ ಮನುಕುಲದ ಬಟ್ಟೆಗಳು</title><content type='html'>&lt;div&gt;ಒಂದು ಊದ್ದನೆಯ ಹಗ್ಗ ಸಿಕ್ಕರೆ ಏನೇನು ಮಾಡಬಹುದು? ಹಗ್ಗ ತೆಳುವಾಗಿದ್ದರೆ, ಒಂದು ಗಾಳಿಪಟ ಮಾಡಿ ಅದಕ್ಕದನ್ನು ಕಟ್ಟಿ, ಬಯಲಿಗೊಯ್ದು ಹಾರಿಸಿ ಕಾಮನಬಿಲ್ಲನ್ನು ಭೂಮಿಗೆ ಇಳಿಸಬಹುದು. ಇಲ್ಲವೇ ಎರಡು ಬೆಂಕಿಪೊಟ್ಟಣಗಳಿಗೆ ದಾರದ ಎರಡು ತುದಿಗಳನ್ನು ಕಟ್ಟಿ ದೂರದೂರದಲ್ಲಿ ನಿಂತು ಅದನ್ನು ಕಿವಿಗಿಟ್ಟು ಹೃದಯದ ಲಬ್‌ಡಬ್ ಆಲಿಸಬಹುದು. ಹಗ್ಗ ಗಟ್ಟಿಯಿದ್ದರೆ, ಅದರ ಒಂದು ತುದಿಗೆ ಕುಣಿಕೆ ಗಂಟು ಹಾಕಿ, ಗಡಗಡೆಯ ಮೂಲಕ ತೂರಿಸಿ, ಕೊಡಪಾನವನ್ನು ಕುಣಿಕೆಗೆ ಬಿಗಿದು ಬಾವಿಯಲ್ಲಿ ಇಳಿಬಿಟ್ಟು ಪಾತಾಳದಿಂದ ಗಂಗೆಯನ್ನು ಮೇಲೆತ್ತಬಹುದು. ಹಗ್ಗ ತುಂಬಾ ಉದ್ದ ಇದ್ದರೆ? ಮಧ್ಯರಾತ್ರಿಯಲೆದ್ದು ಹಗ್ಗವನ್ನು ಬಯಲಿಗೊಯ್ದು, ಆಕಾಶದಲ್ಲಿ ಮಿನುಗುತ್ತಿರುವ ಎರಡು ತಾರೆಗಳಿಗೆ ಕಟ್ಟಿ ಜೋಕಾಲಿ ಆಡಬಹುದು. ಅತ್ತ ಗಟ್ಟಿಯೂ ಅಲ್ಲ ಇತ್ತ ತೆಳುವೂ ಅಲ್ಲದ ಹಗ್ಗ ಸಿಕ್ಕಿದರೆ? ಆಗ ಅಂಗಳದಲ್ಲಿ ಎರಡು ಕಂಬಗಳನ್ನು ನೆಟ್ಟು, ಆ ಕಂಬಗಳಿಗೆ ಹಗ್ಗವನ್ನು ಅಡ್ಡಡ್ಡ ಕಟ್ಟಿ, ತೊಳೆದ ಬಟ್ಟೆಯನ್ನೆಲ್ಲ ತಂದು ಒಣಹಾಕಬಹುದು. ಹೀಗೆ ಬಟ್ಟೆಯನ್ನು ತೂಗಿಸಿಕೊಂಡು ಬಿಸಿಲಿಗೆ ಸಾರ್ಥಕತೆಯ ಭಾವ ನೀಡುತ್ತಿರುವ ಹಗ್ಗವೇ ‘ನೇಲು’ ಅಥವಾ ‘ನ್ಯಾಲೆ’.&lt;/div&gt;&lt;div&gt;&lt;br /&gt;&lt;/div&gt;&lt;div&gt;ನ್ಯಾಲೆಯಲ್ಲಿ ಏನಿಲ್ಲ ಏನಿದೆ? ಅಮ್ಮನ ಸೀರೆ, ಅಕ್ಕನ ಪೆಟ್ಟಿಕೋಟು, ಅಪ್ಪನ ಶರ್ಟು ಧರಿಸಿರುವ ಹ್ಯಾಂಗರು, ವಿಮಾನದಂತೆ ಕಾಣುತ್ತಿರುವ ಪುಟ್ಟನ ಅಂಡರ್‌ವೇರು, ಅಜ್ಜನ ಮಾಸಲು ಸಾಟಿಪಂಚೆ. ಕೆಲಸದವಳು ತೊಳೆದು ಒಣಗಿಸಿದ್ದ ಅಜ್ಜಿಯ ದಪ್ಪ ಬೆಡ್‌ಶೀಟು ಒಣಗಿದ್ದು ಇಲ್ಲೇ, ನಾಳೆ ಬೆಳಗ್ಗೆ ಧರಿಸಲು ಬೇಕೆಂದು ಗಟ್ಟಿಯಾಗಿ ಹಿಂಡಿ ಹಾಕಿದ್ದ ಬನೀನಿನ ನೀರು ಆರಿದ್ದು ಇಲ್ಲೇ. ಆಚೆಮನೆ ಗಣಪಯ್ಯ ಕಾಫಿ ಚೆಲ್ಲಿ ಆಗಿದ್ದ ಕಲೆಯನ್ನು ತೊಳೆದು ಒಣಗಿಸಿದ್ದ ಜಮಖಾನ, ಮನೆಗೆ ಬಂದಿದ್ದ ನೆಂಟರ ಮಗುವಿನ ಉಚ್ಚೆ ಪರಿಮಳದ ಬಟ್ಟೆ, ಮುಟ್ಟಾಗಿದ್ದಾಗ ಹೊರಗೆ ಮಲಗಿದ್ದ ಸೊಸೆ ಹೊದ್ದಿದ್ದ ಕಂಬಳಿ -ಎಲ್ಲವೂ ಇಲ್ಲೇ ಒಣಗಿ ಹೊಸದಾಗಿವೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಮನೆಯಲ್ಲಿ ಬಾಣಂತನವಿದೆ ಎಂದಾದರೆ ಹೊಸದೊಂದು ನ್ಯಾಲೆಯನ್ನೇ ಎಳೆಯಬೇಕಾಗುತ್ತದೆ. ಬಾಣಂತಿಯ ವಸ್ತ್ರಗಳ ಜೊತೆ, ಮಗು ಪದೇ ಪದೇ ಮಾಡಿಕೊಳ್ಳುವ ಹೇಲು-ಉಚ್ಚೆಯ ಬಟ್ಟೆಗಳು, ತೊಟ್ಟಿಲಿನ ಮೆತ್ತೆಗೆ ಹಾಕುವ ವಸ್ತ್ರಗಳು, ಮಗುವಿನ ಗೊಬ್ಬೆ, ಪುಟ್ಟ ಅಂಗಿ-ಚಡ್ಡಿ, ಸ್ವೆಟರು.... ಊಹುಂ, ಇರುವ ನ್ಯಾಲೆ ಸಾಕಾಗುವುದೇ ಇಲ್ಲ. ಯಾರದಾದರೂ ಮನೆಯಲ್ಲಿ ಬಾಣಂತಿಯಿದ್ದಾಳಾ ಅಂತ ಕಂಡುಹಿಡಿಯಲು ಮನೆಯೊಳಗೆ ಹೋಗಬೇಕಾಗಿಯೇ ಇಲ್ಲ, ಹೊರಗಿರುವ ನ್ಯಾಲೆಯನ್ನು ಗಮನಿಸಿದರೆ ಸಾಕು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಅಷ್ಟೇ ಅಲ್ಲ, ಅವಶ್ಯಕತೆಯಿದ್ದರೆ, ಮನೆಯೊಳಗಿರುವವರ ಜಾತಿ, ಧರ್ಮ, ಅಂತಸ್ತು, ಸಂಸ್ಕೃತಿ, ವಯಸ್ಸು -ಎಲ್ಲವಕ್ಕೂ ನ್ಯಾಲೆಯೇ ಬೆಳಕಿಂಡಿಯಾಗಬಲ್ಲದು. ನ್ಯಾಲೆಯಲ್ಲಿ ಮಡಿಪಂಚೆ-ಶಲ್ಯಗಳು, ಕೆಂಪು ಕೆಂಪು ಮಡಿ ಸೀರೆಗಳು ಇದ್ದರೆ ಅಥವಾ ನ್ಯಾಲೆಯಲ್ಲಿ ಕಪ್ಪು ಬುರ್ಕಾಗಳು, ಅಚ್ಚಬಿಳಿ ಜುಬ್ಬಾಗಳು ಇದ್ದರೆ ಅಥವಾ ನ್ಯಾಲೆಯಲ್ಲಿ ಬರೀ ಜೀನ್ಸ್ ಪ್ಯಾಂಟುಗಳು, ಟೀ ಶರ್ಟುಗಳು, ವಿ‌ಐಪಿ ಬನೀನುಗಳು ಇದ್ದರೆ... ಗೊತ್ತಾಗಿಯೇ ಬಿಡುತ್ತದೆ- ಮನೆಯವರು ಇಂಥವರು ಎಂದು. ಮನೆಯೊಳಗೊಬ್ಬ ಹರೆಯದ ಹುಡುಗಿಯಿದ್ದಾಳೆಯೇ ತಿಳಿಯಬೇಕೇ- ನ್ಯಾಲೆಯನ್ನು ಗಮನಿಸಿ ಸಾಕು. ಮನೆಯೊಳಗೊಬ್ಬ ಹಣ್ಣುಹಣ್ಣು ಮುದುಕ ಇದ್ದಾನೆಯೇ ತಿಳಿಯಬೇಕೇ- ನ್ಯಾಲೆಯತ್ತ ದೃಷ್ಟಿ ಹರಿಸಿ ಸಾಕು. ಈ ಮನುಕುಲದೆಲ್ಲ ಸಂಸಾರಗಳ ಒದ್ದೆಬಟ್ಟೆ ಒಣಗಿ ಹಸನಾಗುವುದು ನ್ಯಾಲೆಯೆಂಬ ನಾಲ್ಕು ಮೀಟರ್ ದಾರದ ಮೇಲೇ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಎಲ್ಲರ ಮನೆಯ ಬಚ್ಚಲಲ್ಲೂ ಒಂದು ಪುಟ್ಟ ನ್ಯಾಲೆಯಿದೆ. ಹೊರಗೆ ಒಣಗಿಸಲು ಹಿಂಜರಿದವರ ಅಂಡರ್‌ವೇರು, ಪ್ಯಾಂಟಿ, ಬ್ರಾಗಳು ಇಲ್ಲಿ ಮುಚ್ಚಟೆಯಲ್ಲಿವೆ. ಬಚ್ಚಲಿನ ಬಿಸಿನೀರಿನ ಹಬೆ ಬೆರೆತ ಗಾಳಿಯಲ್ಲೇ ಅವು ಒಣಗಿ ಪುನೀತವಾಗಬೇಕಿದೆ. ಸ್ನಾನದ ನಂತರ ಮೈ ಒರೆಸಿಕೊಳ್ಳಲಿಕ್ಕಿರುವ ಟವೆಲ್ಲಿಗೂ ಇಲ್ಲಿ ಸ್ಥಾನ. ಬಾತ್‌ರೂಮ್ ಸಾಂಗುಗಳೆಲ್ಲ ಇದಕ್ಕೆ ಬಾಯಿಪಾಠ. ಮನೆಯವರೆಲ್ಲರ ನಗ್ನ ದೇಹಗಳೂ ಇದಕ್ಕೆ ಪರಿಚಿತ. ಯವ್ವನಿಗನ ಮುಷ್ಟ
