ಮಾವಿನ ಸೀಸನ್ನಿಗೆ ಕಾಯದ ಜಾಹೀರಾತಿನ
ನಟಿ ತಲೆಯೆತ್ತಿ ಕುಡಿಯುತ್ತಿದ್ದಾಳೆ ಮಾಜಾ
ಹೂದಾನಿಯಲ್ಲಿನ ಪ್ಲಾಸ್ಟಿಕ್ ಹೂವಿಗೆ ಬಂದಿದೆ
ದಿಕ್ಕು ತಪ್ಪಿದ ಒಂದು ಮರಿದುಂಬಿ
ಟೆರೇಸ್ ಗಾರ್ಡನಿನ ಪುಟ್ಟ ಪಾಟಲ್ಲಿ ಬೆಳೆದ
ಮಲ್ಲಿಗೆ ನರುಗಂಪ ಬೀರುತ್ತಿದೆ
ಫ್ಲೈಓವರಿನ ಕಂಬಗಳಿಗೆ ಹಬ್ಬಿಸಿದ
ಬಳ್ಳಿಗಳು ಹಸಿರ ಸೂಸುತ್ತಿವೆ
ಸ್ಪ್ರಿಂಕ್ಲರಿನಿಂದ ಚಿಮ್ಮಿದ ನೀರನ್ನೇ ಮಳೆಯೆಂದು
ಭಾವಿಸಿದ ವಸುಂಧರೆ ಗಂಧ ಹೊಮ್ಮಿಸುತ್ತಿದೆ
ಟೋನು ಬದಲಿಸಿದ ಅಲಾರ್ಮು ಬೆಳಬೆಳಗ್ಗೆ
ಕೋಗಿಲೆಯಂತೆಯೇ ಕೂಗುತ್ತಿದೆ ಪಂಚಮದಲ್ಲಿ
ಹಬ್ಬಕ್ಕೆಂದು ತೊಳೆದು ಹಾಕಿದ ಪ್ಲಾಸ್ಟಿಕ್ ತೋರಣ
ಮನೆಯ ಬಾಗಿಲಲ್ಲಿ ನಳನಳಿಸುತ್ತಿದೆ
ಸನ್ಸ್ಕ್ರೀನ್ ಲೇಪಿಸಿಕೊಳ್ಳುತ್ತ ಹೊಸ್ತಿಲಲ್ಲಿ ನಿಂತಿರುವ
ಹೊಸ ಸಂವತ್ಸರ ಮುದ್ದಾಗಿದೆ.
ಹೇಮಲಂಬ
ವರ್ಷದಲ್ಲಿ ನಿಮಗೆ ಬಾಯಾರಿದಾಗೆಲ್ಲ ಕುಡಿಯಲು ಸಬ್ಸೇ ಶುದ್ಧ ಪಾನಿಯೇ ಸಿಗಲಿ. ಸಂತೂರ್
ಮಮ್ಮಿ ಗೋದ್ರೇಜ್ ಹೇರ್ಡೈ ಹಾಕಿದ ಅಪ್ಪನನ್ನು ಕಂಡು ನಾಚಿಕೊಳ್ಳಲಿ. ಸೋಪಿನ ನೀರಲ್ಲಿ
ಮುಳುಗೆದ್ದ ಅಂಗಿಯ ಕಲೆ ಮಾಯವಾಗಲಿ. ಟೀ ಕುಡಿಯುತ್ತಿದ್ದಂತೆಯೇ ಜ್ವರ ಇಳಿಯಲಿ.
ಕತ್ತಲಲ್ಲಿ ತೆಗೆಯಲೆಣಿಸಿದ ಸೆಲ್ಫಿಗೂ ನಿಮ್ಮ ಮೊಬೈಲು ಬೆಳಕು ತೋರಲಿ. ದಿನಗಳು
ಮತ್ತಷ್ಟು ಚಂದವಾಗಲಿ. ಶುಭಾಶಯಗಳು.
Showing posts with label Ugadi. Show all posts
Showing posts with label Ugadi. Show all posts
Wednesday, March 29, 2017
Thursday, March 26, 2009
ಹಾರಯಿಕೆ
ಫಾಲ್ಗುಣದ ಕೊನೆ ಸಂಜೆ, ಹೊತ್ತು ಮುಳುಗುವ ಸಮಯ,
ರವಿ ಕಂಡು ಕುಂಕುಮಕೆ ಹೊಟ್ಟೆಕಿಚ್ಚು;
ತನ್ನ ಕೊಕ್ಕಿನ ಕೆಂಪೆ ಹೆಚ್ಚೆಂಬ ಭ್ರಮೆ ಕಳೆದು,
ಗೂಡ ದಾರಿಯಲಿರ್ದ ಗಿಳಿಮೊಗವು ಪೆಚ್ಚು ||
ಇರುಳು ಇಳಿಯಲೆಬೇಕು, ಹಗಲು ಅಳಿಯಲೆಬೇಕು,
ಇಲ್ಲದಿರೆ ಇಳೆಗಿಲ್ಲ ನಾಳೆಯಾ ನಲಿವು;
ಮುಗಿದು ಚಂದ್ರನ ಪಾಳಿ, ತಾರೆ ತೆರೆಮರೆ ಸರಿದು
ಅರಳಿದರೆ ಅರುಣಪ್ರಭೆ ಮಧುಮಾಸವು ||
ಚೈತ್ರವೆಂದರೆ ಹಸಿರು, ನಭದಲ್ಲಿ ಮೇಘಗಳು,
ಝರಿನೀರು ಜರಿದು ಧರೆ ಧುಮುಕುವಾ ಸದ್ದು;
ಎಲ್ಲೊ ತಪ್ಪಲಿನಲ್ಲಿ ನಾಟ್ಯವಾಡಲು ನವಿಲು,
ಸೆಟೆದು ನೂಪುರ ಸೆರಿಗೆ ಮೈಕೊಡವಿ ಸಜ್ಜು ||
ಸಿರಿಸೂರೆಯಾಗಿರುವ ಮಾಮರದ ಎಲೆಮರೆಯೇ
ಪರಪುಟ್ಟ ಹಕ್ಕಿಗೆ ಸರಿಯಾದ ಗೊತ್ತು;
ಕುಹುಕುಹುವೆ ಹಾಡಿಲ್ಲಿ, ಪಕ್ಕವಾದ್ಯವೇ ಬೇಡ
ಶ್ರವಣಸ್ವರ್ಗದಿ ಸರಿದು ಸರಸರನೆ ಹೊತ್ತು ||
ಋತುರಾಜನಾರ್ಭಟದಿ ಕಳೆದು ಕಹಿಯೆಲ್ಲ
ಹಿತಭಾವ ಹೃದಯದಲಿ ನೆಲೆಯೂರಲಿ;
ಜೀವಜೀವಪ್ರೀತಿ ಎಂದೂ ಮುಗಿಯದೆ ಇರಲಿ
ವರುಷವಿಡೀ 'ವಿರೋಧಿ' ಬರಿ ಹೆಸರಿಗಿರಲಿ ||
ರವಿ ಕಂಡು ಕುಂಕುಮಕೆ ಹೊಟ್ಟೆಕಿಚ್ಚು;
ತನ್ನ ಕೊಕ್ಕಿನ ಕೆಂಪೆ ಹೆಚ್ಚೆಂಬ ಭ್ರಮೆ ಕಳೆದು,
ಗೂಡ ದಾರಿಯಲಿರ್ದ ಗಿಳಿಮೊಗವು ಪೆಚ್ಚು ||
ಇರುಳು ಇಳಿಯಲೆಬೇಕು, ಹಗಲು ಅಳಿಯಲೆಬೇಕು,
ಇಲ್ಲದಿರೆ ಇಳೆಗಿಲ್ಲ ನಾಳೆಯಾ ನಲಿವು;
ಮುಗಿದು ಚಂದ್ರನ ಪಾಳಿ, ತಾರೆ ತೆರೆಮರೆ ಸರಿದು
ಅರಳಿದರೆ ಅರುಣಪ್ರಭೆ ಮಧುಮಾಸವು ||
ಚೈತ್ರವೆಂದರೆ ಹಸಿರು, ನಭದಲ್ಲಿ ಮೇಘಗಳು,
ಝರಿನೀರು ಜರಿದು ಧರೆ ಧುಮುಕುವಾ ಸದ್ದು;
ಎಲ್ಲೊ ತಪ್ಪಲಿನಲ್ಲಿ ನಾಟ್ಯವಾಡಲು ನವಿಲು,
ಸೆಟೆದು ನೂಪುರ ಸೆರಿಗೆ ಮೈಕೊಡವಿ ಸಜ್ಜು ||
ಸಿರಿಸೂರೆಯಾಗಿರುವ ಮಾಮರದ ಎಲೆಮರೆಯೇ
ಪರಪುಟ್ಟ ಹಕ್ಕಿಗೆ ಸರಿಯಾದ ಗೊತ್ತು;
ಕುಹುಕುಹುವೆ ಹಾಡಿಲ್ಲಿ, ಪಕ್ಕವಾದ್ಯವೇ ಬೇಡ
ಶ್ರವಣಸ್ವರ್ಗದಿ ಸರಿದು ಸರಸರನೆ ಹೊತ್ತು ||
ಋತುರಾಜನಾರ್ಭಟದಿ ಕಳೆದು ಕಹಿಯೆಲ್ಲ
ಹಿತಭಾವ ಹೃದಯದಲಿ ನೆಲೆಯೂರಲಿ;
ಜೀವಜೀವಪ್ರೀತಿ ಎಂದೂ ಮುಗಿಯದೆ ಇರಲಿ
ವರುಷವಿಡೀ 'ವಿರೋಧಿ' ಬರಿ ಹೆಸರಿಗಿರಲಿ ||
Friday, April 04, 2008
ಎಲ್ಲ ಎಲ್ಲೆಗಳನೂ ಮೀರಿ ಬರುತಿರುವ ಸರ್ವಧಾರಿ...
ಪೆನ್ನು ಪುಟ್ಟಿ ಮತ್ತೆ ಸಿಟ್ಟು ಮಾಡಿಕೊಂಡಿದ್ದಾಳೆ! ಬ್ಲಾಗರ್ಸ್ ಮೀಟಿನ ಬಗ್ಗೆ ಬಂದ ಪ್ರತಿಕ್ರಿಯೆಗಳು, ಆಮೇಲಾದ ಗಲಾಟೆ, ಎಲ್ಲಾ ನೋಡಿ ಮುನಿದು ಮುದುಡಿಹೋಗಿದ್ದ ಮನಸು ಇನ್ನೂ ಪೂರ್ತಿ ರಿಪೇರಿಯಾದಂತಿಲ್ಲ. ಜತೆಗೆ ಅಕಾಲದಲ್ಲಿ ಸುರಿಯತೊಡಗಿದ ವರ್ಷಧಾರೆ ನನಗೆ ನೆಗಡಿಯನ್ನು ಕರುಣಿಸಿ, ನಾನು ಸೀನೀ ಸೀನೀ ಸೀನಿ, ಕರ್ಚೀಫಿನಿಂದ ಮೂಗೊರೆಸಿಕೊಂಡೂ ಕೊಂಡು, ಕನ್ನಡಿ ನೋಡಿಕೊಂಡರೆ ಮೂಗಿನ ಬದಲು ಅಲ್ಲಿ ಅರಳಿದ ಕೆಂಡಸಂಪಿಗೆ ಕಾಣುವಂತಾಗಿ, 'ವಿಕ್ಸ್ ಸೇದುವುದರಲ್ಲೂ ಒಂಥರಾ ಸುಖವಿದೆ ಕಣೋ' ಅಂತೆಲ್ಲಾ ಅವರಿವರ ಬಳಿ ಹಲುಬುತ್ತಾ, ತೀರಾ ಅಬ್ಬೇಪಾರಿಯಂತಾಗಿ ಹೋಗಿದ್ದೇನೆ.
ಬರೆಯಬೇಕಿದೆ ಏನಾದರೂ.. ನಾನು ಪ್ರತಿ ಹಬ್ಬಕ್ಕೂ ಸಾಮಾನ್ಯವಾಗಿ ಗೆಳೆಯರಿಗೆ, ನೆಂಟರಿಗೆ ನಾನೇ ತಯಾರಿಸಿದ ಗ್ರೀಟಿಂಗ್ಸ್ ಕಳುಹಿಸುತ್ತೇನೆ. ಆ ಗ್ರೀಟಿಂಗನ್ನೇ ಬ್ಲಾಗಿನಲ್ಲೂ ಹಾಕುತ್ತಿದ್ದೆ. ಆದರೆ ಈ ಯುಗಾದಿಗೆ ಅದನ್ನೂ ಮಾಡಲಾಗುತ್ತಿಲ್ಲ.
ಬರೀ ಭಾವನೆಗಳನ್ನು ಬರೆಯಬಾರದು ಎಂದುಬಿಟ್ಟರು ಅವರು.. ನಾನೂ ಒಪ್ಪಿಬಿಟ್ಟೆ. ಸೀರಿಯಸ್ಸಾಗಿ ಬರೆಯೋಣವೆಂದು ಸೀರಿಯಸ್ಸಾಗಿಯೇ ಕುಳಿತೆ ಮೊನ್ನೆ ರಾತ್ರಿ. ಆದರೆ ಏನೆಂದರೆ ಏನೂ ಬರೆಯಲಾಗಲಿಲ್ಲ. ಕೊನೆಗೆ ಬೇಸತ್ತು, ಪೆನ್ನು ಬೀಸಾಡಿ, ಒಂದು ವಾಕ್ ಹೋಗಿ ಬಂದರೆ ಸರಿಯಾಗಬಹುದೆಂದು, ರೂಂಮೇಟನ್ನೆಳೆದುಕೊಂಡು ಹೊರ ಹೊರಟೆ. ಆಗಸ ಮಿಂಚುತ್ತಿತ್ತು. ಯಾವಾಗ ಬೇಕಿದ್ದರೂ ಮಳೆ ಬರಬಹುದಿತ್ತು. ನಮ್ಮ ಮನೆಯಿಂದ ಹೊರಟು ಮೊದಲು ರೈಟಿಗೆ ಹೋಗಿ ಆಮೇಲೆ ಲೆಫ್ಟಿಗೆ ತಿರುಗಿ ಮತ್ತೆ ರೈಟಿಗೆ ತಿರುಗಿದರೆ ಅದು ಮಲ್ಲೇಶ್ವರಂಗೆ ಹೋಗುವ ಹದಿನೇಳನೇ ಕ್ರಾಸ್ ರಸ್ತೆ. ಪಕ್ಕದಲ್ಲೊಂದು ಗೂಡಂಗಡಿ. ಅಲ್ಲಿ ಚಿಕ್ಕಿ ತಗೊಂಡು ತಿನ್ನುತ್ತಾ ಹೋಗುವುದು.. ಒಂದು ಬ್ರಿಜ್ ಸಿಗುತ್ತದೆ. ಹನ್ನೊಂದೂ ವರೆಗೆ ಸರಿಯಾಗಿ ಆ ಬ್ರಿಜ್ಜಿನಡಿ ಪೋಂಕನೆ ಸದ್ದು ಮಾಡುತ್ತಾ ಒಂದು ರೈಲು ಹೋಗುತ್ತದೆ. ಅದನ್ನು ನೋಡಿಕೊಂಡು ಹಾಗೇ ಸ್ವಲ್ಪ ಮುಂದೆ ಹೋಗುತ್ತೇವೆ.. ಅಲ್ಲಿ ನಮಗೊಂದು ಜೋಡಿ ಬಲೂನು ಸಿಗುತ್ತದೆ. ಒಂದು ಬಿಳೀ, ಇನ್ನೊಂದು ನೀಲಿ. ಎರಡೂ ಬಲೂನುಗಳ ಮೇಲೂ ಅಲ್ಲಲ್ಲಿ ಕರೀ ಚುಕ್ಕಿಗಳು. ನನ್ನ ರೂಂಮೇಟು ಅದನ್ನು ಕಂಡವನೇ ಓಡಿ ಹೋಗಿ, 'ಏಯ್ ನನ್ ಮಗ್ನೇ.. ಓಡೀಬೇಡಲೇ..' ಎಂಬ ನನ್ನ ಕೂಗು ಕೇಳುವುದರೊಳಗೇ, ಒಂದು ಬಲೂನನ್ನು ಕಾಲಲ್ಲಿ ಗುದ್ದಿ ಒಡೆದು ಬಿಡುತ್ತಾನೆ. 'ಪಾಠ್' ಎಂಬ ಶಬ್ದವೊಂದು ಇದೀಗ ತಾನೇ ದೂರಾದ ರೈಲಿನ ಶಬ್ದದೊಂದಿಗೆ ಲೀನವಾಗುತ್ತದೆ.
ಇನ್ನುಳಿದ, ಮೊಲದ ಮರಿಯಂತಹ ಬಿಳೀ ಬಲೂನನ್ನು ನಾನು ಎತ್ತಿಕೊಳ್ಳುತ್ತೇನೆ. ಅದರ ಮೈಯನ್ನು ಕೈಯಲ್ಲಿ ನೇವರಿಸುತ್ತೇನೆ. ಎಷ್ಟೊಂದು ನೆನಪುಗಳು ಆ ಸ್ಪರ್ಶದಲ್ಲಿ..! ಅಮ್ಮನ ಕೈ ಹಿಡಿದು ಅಪ್ಪನ ಜೊತೆ ಹೋಗಿ ಮಳ್ಗದ್ದೆ ಜಾತ್ರೆಯಲ್ಲಿ ಕೊಂಡಿದ್ದ ಬಲೂನು, ಸಾಗರದ ಜಾತ್ರೆಯಲ್ಲಿ ಭಾಗ್ಯತ್ಗೆ ಕೊಡಿಸಿದ್ದ ಬಲೂನು, ಬೆಂಕ್ಟಳ್ಳಿ ಪುಟ್ಟಿಗೆ ಊದಿಕೊಡುವಾಗಲೇ ಒಡೆದುಹೋಗಿದ್ದ ಬಲೂನು (ಆಮೇಲೆ ಅವಳು ಅತ್ತಿದ್ದು-ಹೊಸ ಬಲೂನು ಬೇಕೂ ಎಂದು ಹಟ ಮಾಡಿದ್ದು-ಕೊನೆಗೆ ವಿಧಿಯಿಲ್ಲದೇ ಸೈಕಲ್ಲೇರಿ ಕರ್ಕಿಕೊಪ್ಪದಿಂದ ಬಲೂನು ತಂದುಕೊಟ್ಟಿದ್ದು), ಕಾಲೇಜಿನಲ್ಲಿ ಗೆಟ್-ಟುಗೇದರ್ ದಿನ ಊದಿ ಕೊಡಲೆಂದು 'ಅವಳು' ಕೊಟ್ಟಿದ್ದ ಹಾರ್ಟ್ ಶೇಪ್ ರೆಡ್ ಬಲೂನ್, ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ನಡೆದಿದ್ದ ಅಶ್ವತ್ಥರ 'ಕನ್ನಡವೇ ಸತ್ಯ' ಕಾರ್ಯಕ್ರಮದಲ್ಲಿ ನೀಲಾಕಾಶಕ್ಕೆ ತೇಲಿಬಿಟ್ಟಿದ್ದ ಸಾವಿರ ಸಾವಿರ ಕಂತೆ ಕಂತೆ ಬಲೂನ್, ಚಂದ್ರಗುತ್ತಿ ಗುಡ್ಡದಲ್ಲಿ ಬಲೂನಿಂತೆಯೇ ಹಾರಿಹೋಗಿ ಕನಸಿನಂತೆ ಕಣ್ಮರೆಯಾಗಿದ್ದ ಬಿಳೀ ಕವರ್... ಆಹಾ.. ಊದಿದಷ್ಟೂ ಹಿಗ್ಗುವ ಬಲೂನಿನಂತೆ ನೆನಪುಗಳು.
ಮಳೆ ಬರತೊಡಗುತ್ತದೆ.. ನಾ ಕಾಣದ ಯಾವುದೋ ವ್ಯಕ್ತಿಯ ಉಸಿರನ್ನು ತುಂಬಿಕೊಂಡಿರುವ ಈ ಬಲೂನನ್ನು ಎದೆಗವಚಿಕೊಂಡು ಮನೆಗೆ ಬರುತ್ತೇನೆ. ಇನ್ನೊಂದು ಬಲೂನ್ ಒಡೆದದ್ದಕ್ಕಾಗಿ ನನ್ನಿಂದ ಬೈಸಿಕೊಂಡ ರೂಂಮೇಟ್ ಪೆಚ್ಚಾಗಿ ನಡೆದು ಬರುತ್ತಾನೆ ನನ್ನ ಹಿಂದೆ. ರೂಮಿಗೆ ಹೋಗಿ, ಸ್ಕೆಚ್ ಪೆನ್ನಿನಿಂದ ಆ ಬಿಳೀ ಬಲೂನಿನ ಮೇಲೆ ಒಂದು ಕಣ್ಣು ಬಿಡಿಸುತ್ತೇನೆ, ಪುಟ್ಟ ಮೂಗು, ಬಿರಿದ ತುಟಿ, ಎರಡು ಹುಬ್ಬುಗಳ ಮಧ್ಯೆ ಒಂದು ಚುಕ್ಕಿ ಇಟ್ಟರೆ ಥೇಟ್ ಅವಳ ಮುಖದಂತೆಯೇ ಕಾಣತೊಡಗುತ್ತದೆ ಬಲೂನ್.. ಕೆಳಗೆ ಅವಳ ಹೆಸರು ಬರೆಯುತ್ತೇನೆ. ಬಲೂನನ್ನು ತಬ್ಬಿಕೊಂಡು ತುಂಬ ಹೊತ್ತು ಹಾಗೆಯೇ ಕೂರುತ್ತೇನೆ. ಭಾವನೆಗಳ ಬಗ್ಗೆ ಬರೆಯಬಾರದು ಎಂದು ನಿಶ್ಚೈಸಿಕೊಂಡಿದ್ದು ಮರೆತುಹೋಗುತ್ತದೆ. ಸುಮಾರು ಹೊತ್ತಿನ ಮೇಲೆ ಯೋಚನೆಯಾಗುತ್ತದೆ. ಯೋಚಿಸಿದರೆ ಏನೂ ಹೊಳೆಯುವುದೇ ಇಲ್ಲ.

ಹೊಗೇನಕಲ್ಲಿನಲ್ಲಿ ನಡೆಯುತ್ತಿರುವ ಗಡಿ ವಿವಾದ, ಅದಕ್ಕಾಗಿ ಎಲ್ಲೆಲ್ಲೂ ಆಗುತ್ತಿರುವ ಪ್ರತಿಭಟನೆ, ಸತ್ಯಾಗ್ರಹ, ಗಲಾಟೆ, ದೊಂಬಿಗಳು.. ಈಗ ಎರಡು ವರ್ಷದ ಹಿಂದೆ ನಾನು, ಸಂತೋಷ, ರಾಘು ಹೋಗಿದ್ದೆವು ಹೊಗೇನಕಲ್ಗೆ. ಎಲ್ಲಿ ನೋಡಿದರೂ ಹುರಿದ ಕೆಂಪು ಮೀನಿನ ಮಾರಾಟ, ವಾಕರಿಕೆ ಬರುವಷ್ಟು ವಾಸನೆ, ಮಸಾಜ್ ಮಾಡುವವರ - ದೋಣಿಯವರ ದುಂಬಾಲು... ಸುಂದರ ಪ್ರವಾಸೀ ತಾಣವನ್ನು ಇಷ್ಟೊಂದು 'ಕಮರ್ಶಿಯಲೈಸ್' ಮಾಡಿದ್ದಕ್ಕಾಗಿ ನಾವು ಬೈದುಕೊಳ್ಳುತ್ತಾ, ಕೊನೆಗೆ ಒಂದು ತೆಪ್ಪ (ದೋಣಿ)ವನ್ನು ಚೌಕಾಶಿ ಮಾಡಿ ನೂರೈವತ್ತು ರೂಪಾಯಿಗೆ ಬುಕ್ ಮಾಡಿ ಯಾನ ಹೊರಟಿದ್ದೆವು.. ತೆಪ್ಪ ನಡೆಸಲಿಕ್ಕೆ ಸರ್ಕಾರದ ಲೈಸೆನ್ಸ್ ಬೇಕಂತೆ. ತಿಂಗಳಿಗೆ ಇಂತಿಷ್ಟು ಎಂದು ಅವರು ಕಟ್ಟಬೇಕು. ಅಲ್ಲದೇ ಪ್ರತೀ ಬೋಟ್ ಡ್ರೈವರ್ ಪ್ರತೀ ವಿಹಾರಕ್ಕೂ ಮುನ್ನ ದುಡ್ಡು ಕಟ್ಟಿ ಟಿಕೇಟ್ ಪಡೆದುಕೊಳ್ಳಬೇಕು. 'ಕಷ್ಟ ಸಾರ್.. ಇಷ್ಟೆಲ್ಲಾ ಮಾಡ್ಕೊಂಡು, ನಾವು ಕಾಸು ಮಾಡಿ ಹೆಂಡ್ರು ಮಕ್ಳುನ್ನ ಸಾಕೋದು ಅಂದ್ರೆ..' ಎಂದಿದ್ದ ದೋಣಿ ನಡೆಸುವವ. ಅವನ ಹೆಸರು ಸೆಲ್ವನ್. ಅವನ ಹೆಂಡತಿ ಕರ್ನಾಟಕದವಳು. ನಮ್ಮ ತೆಪ್ಪ ಅರ್ಧ ತಾಸಿನ ಮೇಲೆ ನೀರಿನ ಮಧ್ಯಕ್ಕೆಲ್ಲೋ ಬಂದಿದ್ದಾಗ 'ನೋಡೀ, ಇದೇ ತಮಿಳುನಾಡು-ಕರ್ನಾಟಕದ ಗಡಿ.. ಇದೇ, ಇಲ್ಲೇ ಬರುತ್ತೆ' ಎಂದಿದ್ದ ಸೆಲ್ವನ್. ಹೊಳೆಯ ಕೆಳಗೆಲ್ಲೋ ಮುಳುಗಿದ್ದ ಗಡಿ ನಮಗೆ ಕಂಡೇ ಇರಲಿಲ್ಲ. ಕರ್ನಾಟಕದ ರಾಜಧಾನಿಯಿಂದ ತಮಿಳುನಾಡಿಗೆ ಬಂದಿದ್ದ ನಮಗೆ, ಕನ್ನಡತಿಯೊಬ್ಬಳ ಗಂಡ ಸೆಲ್ವನ್ ತೋರಿಸಿದ್ದ ಗಡಿರೇಖೆ, ಊಹುಂ, ಕಣ್ಣಿಗಷ್ಟೇ ಅಲ್ಲ; ಮನಸಿಗೂ ಕಂಡಿರಲಿಲ್ಲ.. ಎಲ್ಲ ಎಲ್ಲೆಗಳನ್ನೂ ಮೀರಿ ಹೋಗುತ್ತಿತ್ತದು ವಿಹಾರ.. ಈಗಲ್ಲಿ ವಿವಾದ. ದೋಣಿ ಸಂಚಾರ ನಿಶೇಧವಾಗಿದೆಯಂತೆ. ಹೊಡೆದಾಟಗಳಾಗುತ್ತಿವೆಯಂತೆ. ಸೆಲ್ವನ್ ಮತ್ತವನ ಕುಟುಂಬ ಈಗ ಏನಾಗಿರಬಹುದು? ಯೋಚಿಸಿದರೆ ಮಂಕು ಕವಿಯುತ್ತದೆ.
ಚುನಾವಣೆ ಹತ್ತಿರಾಗುತ್ತಿದೆ. ಕ್ಷೇತ್ರ ಮರುವಿಂಗಡನೆ ಈ ದಿನಾಂಕದೊಳಗೆ ಆಗುತ್ತದೆ, ನಾಮಪತ್ರ ಸಲ್ಲಿಕೆಗೆ ಇದು ಕೊನೇ ದಿನ, ಬ್ಯಾನರ್ ಕಟ್ಟಲು ಇದು ಕೊನೇ ದಿನ, ನಾಮಪತ್ರ ಹಿಂತೆಗೆದುಕೊಳ್ಳಲು ಇದು ಕೊನೇ ದಿನ, ಈ ದಿನ ಚುನಾವಣೆ... ದಿನಾಂಕಗಳು ನಿಗಧಿಯಾಗುತ್ತಿವೆ, ಗಡಿಗಳು ಸೃಷ್ಟಿಯಾಗುತ್ತಿವೆ. ಮೊನ್ನೆ ನಾನು ಯೋಚಿಸುತ್ತಿದ್ದೆ: ಹೀಗೆ ನಾನು ಸಣ್ಣಪುಟ್ಟದ್ದಕ್ಕೆಲ್ಲ ತಲೆಕೆಡಿಸಿಕೊಂಡು, ಬೇಸರಗೊಂಡು, ಮೂಡೌಟ್ ಮಾಡಿಕೊಂಡು ಕೂರುತ್ತೇನೆ. ಆದರೆ ಪ್ರತಿದಿನ ಟೆನ್ಷನ್ ಮಾಡಿಕೊಳ್ಳುತ್ತಾ, ಒಬ್ಬರ ಮೇಲೊಬ್ಬರು ಆಪಾದನೆ ಹೊರಿಸುತ್ತಾ, ಜಗಳವಾಡುತ್ತಲೇ ಇರುತ್ತಾರಲ್ಲಾ ರಾಜಕಾರಣಿಗಳು, ಅವರಿಗೆ ಸ್ವಲ್ಪವೂ ಬೇಜಾರಾಗೊಲ್ಲವಾ? ಯಾವನಾದರೂ ಒಬ್ಬ ರಾಜಕಾರಣಿಗೆ "ಅಯ್ಯೋ ಸಾಕಾಗಿ ಹೋಯ್ತಪ್ಪ ಈ ರಾಜಕೀಯ! ಈ ಓಡಾಡೋದು, ಇವತ್ತು ಕಿತ್ತಾಡಿಕೊಂಡವರ ಜೊತೆಯೇ ನಾಳೆ ಮೈತ್ರಿಗಾಗಿ ಹೋಗುವುದು, ಜನರಿಗೆ ಸುಳ್ಳೇ ಆಶ್ವಾಸನೆಗಳನ್ನ ಕೊಡೋದು, ಎಲೆಕ್ಷನ್ನಿಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡೋದು, ಕೊನೆಗೆ ಗೆದ್ದು ಬಂದು ಅಧರ್ಮಮಾರ್ಗದಲ್ಲಿ ದುಡ್ಡು ಮಾಡೋದು.. ಎಲ್ಲಾ ಬೇಜಾರ್ ಬಂದುಹೋಯ್ತು! ಇಷ್ಟು ವರ್ಷ ರಾಜಕೀಯ ಮಾಡಿದ್ದು ಸಾಕು. ಇನ್ನು ಹಾಯಾಗಿ ಹೆಂಡತಿ-ಮಕ್ಕಳ ಜೊತೆ ಮನೇಲಿರ್ತೀನಿ" ಅಂತ ಅನ್ನಿಸಿಲ್ಲವಲ್ಲ? ಯೋಚಿಸಿದರೆ ಆಶ್ಚರ್ಯವಾಗತ್ತೆ, ಅಸಹ್ಯವಾಗತ್ತೆ. ಅದಕ್ಕೇ, ನಾನು ಯೋಚಿಸಬಾರದೆಂದು ನಿರ್ಧರಿಸುತ್ತೇನೆ.
ಇವತ್ತು ರಾತ್ರಿ ಯುಗಾದಿ ಹಬ್ಬಕ್ಕೆಂದು ಊರಿಗೆ ಹೊರಟಿದ್ದೇನೆ. ಸಾಕಾಗಿದೆ ಬೆಂಗಳೂರು. ಸಾಕಾಗಿದೆ ಟ್ರಾಫಿಕ್ಕು. ಸಾಕಾಗಿದೆ ಗಲಾಟೆ. ಸಾಕಾಗಿದೆ ಮಾತು. ಬೇಕಾಗಿದೆ: ಅಮ್ಮನ ಮಡಿಲು, ಅಪ್ಪನ ಜೊತೆ ಮೌನ, ತೊಂಭತ್ತಕ್ಕೂ ಹೆಚ್ಚು ಸಂವತ್ಸರಗಳನ್ನು ಕಂಡಿರುವ ಅಜ್ಜನೊಂದಿಗೆ ಮೆಲು ಸಂವಾದ, ಕೊಟ್ಟಿಗೆಯ ಕರುವಿನ ನೀಲಿ ಕಣ್ಣಲ್ಲಿ ಕಾಣಬೇಕಿರುವ ನನ್ನ ಬಿಂಬ... ಈ ಸಲದ ಚೈತ್ರ, ಫಾಲ್ಗುಣದ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿ ಬರುತ್ತಿದ್ದಾನೆ: ಎಲ್ಲ ಗಡಿಗಳನ್ನೂ ಮೀರಿ.. ಹಿತ್ತಿಲ ಪೇರಲೆ ಗಿಡದಲ್ಲಿ ಹಣ್ಣಾಗಿವೆಯಂತೆ.. ಮಳೆಗಾಲಕ್ಕೆ ಮುನ್ನವೇ ಗಿಡಗಳೆಲ್ಲ ಚಿಗುರಿವೆಯಂತೆ.. ಬಾವಿಯಲ್ಲಿ ನೀರು ಬಂದಿದೆಯಂತೆ.. ಅಂಗಳದಲ್ಲಿ ಕಳೆ ಹಬ್ಬಿದೆಯಂತೆ.. ಅಪ್ಪನ ಬಾಯಲ್ಲಿ ವರ್ಣನೆ ಕೇಳುತ್ತಿದ್ದರೆ, ಅದೆಷ್ಟು ಬೇಗ ರಾತ್ರಿಯಾಗುತ್ತದೋ, ಬಸ್ಸು ಬರುತ್ತದೋ, ಊರು ತಲುಪುತ್ತೇನೋ ಎಂದು ತುಡಿಯುತ್ತಿದ್ದೇನೆ!
ನಿಮಗೆಲ್ಲಾ, ಯುಗಾದಿಯ ಹಾರ್ದಿಕ ಶುಭಾಶಯಗಳು..
ಬರೆಯಬೇಕಿದೆ ಏನಾದರೂ.. ನಾನು ಪ್ರತಿ ಹಬ್ಬಕ್ಕೂ ಸಾಮಾನ್ಯವಾಗಿ ಗೆಳೆಯರಿಗೆ, ನೆಂಟರಿಗೆ ನಾನೇ ತಯಾರಿಸಿದ ಗ್ರೀಟಿಂಗ್ಸ್ ಕಳುಹಿಸುತ್ತೇನೆ. ಆ ಗ್ರೀಟಿಂಗನ್ನೇ ಬ್ಲಾಗಿನಲ್ಲೂ ಹಾಕುತ್ತಿದ್ದೆ. ಆದರೆ ಈ ಯುಗಾದಿಗೆ ಅದನ್ನೂ ಮಾಡಲಾಗುತ್ತಿಲ್ಲ.
ಬರೀ ಭಾವನೆಗಳನ್ನು ಬರೆಯಬಾರದು ಎಂದುಬಿಟ್ಟರು ಅವರು.. ನಾನೂ ಒಪ್ಪಿಬಿಟ್ಟೆ. ಸೀರಿಯಸ್ಸಾಗಿ ಬರೆಯೋಣವೆಂದು ಸೀರಿಯಸ್ಸಾಗಿಯೇ ಕುಳಿತೆ ಮೊನ್ನೆ ರಾತ್ರಿ. ಆದರೆ ಏನೆಂದರೆ ಏನೂ ಬರೆಯಲಾಗಲಿಲ್ಲ. ಕೊನೆಗೆ ಬೇಸತ್ತು, ಪೆನ್ನು ಬೀಸಾಡಿ, ಒಂದು ವಾಕ್ ಹೋಗಿ ಬಂದರೆ ಸರಿಯಾಗಬಹುದೆಂದು, ರೂಂಮೇಟನ್ನೆಳೆದುಕೊಂಡು ಹೊರ ಹೊರಟೆ. ಆಗಸ ಮಿಂಚುತ್ತಿತ್ತು. ಯಾವಾಗ ಬೇಕಿದ್ದರೂ ಮಳೆ ಬರಬಹುದಿತ್ತು. ನಮ್ಮ ಮನೆಯಿಂದ ಹೊರಟು ಮೊದಲು ರೈಟಿಗೆ ಹೋಗಿ ಆಮೇಲೆ ಲೆಫ್ಟಿಗೆ ತಿರುಗಿ ಮತ್ತೆ ರೈಟಿಗೆ ತಿರುಗಿದರೆ ಅದು ಮಲ್ಲೇಶ್ವರಂಗೆ ಹೋಗುವ ಹದಿನೇಳನೇ ಕ್ರಾಸ್ ರಸ್ತೆ. ಪಕ್ಕದಲ್ಲೊಂದು ಗೂಡಂಗಡಿ. ಅಲ್ಲಿ ಚಿಕ್ಕಿ ತಗೊಂಡು ತಿನ್ನುತ್ತಾ ಹೋಗುವುದು.. ಒಂದು ಬ್ರಿಜ್ ಸಿಗುತ್ತದೆ. ಹನ್ನೊಂದೂ ವರೆಗೆ ಸರಿಯಾಗಿ ಆ ಬ್ರಿಜ್ಜಿನಡಿ ಪೋಂಕನೆ ಸದ್ದು ಮಾಡುತ್ತಾ ಒಂದು ರೈಲು ಹೋಗುತ್ತದೆ. ಅದನ್ನು ನೋಡಿಕೊಂಡು ಹಾಗೇ ಸ್ವಲ್ಪ ಮುಂದೆ ಹೋಗುತ್ತೇವೆ.. ಅಲ್ಲಿ ನಮಗೊಂದು ಜೋಡಿ ಬಲೂನು ಸಿಗುತ್ತದೆ. ಒಂದು ಬಿಳೀ, ಇನ್ನೊಂದು ನೀಲಿ. ಎರಡೂ ಬಲೂನುಗಳ ಮೇಲೂ ಅಲ್ಲಲ್ಲಿ ಕರೀ ಚುಕ್ಕಿಗಳು. ನನ್ನ ರೂಂಮೇಟು ಅದನ್ನು ಕಂಡವನೇ ಓಡಿ ಹೋಗಿ, 'ಏಯ್ ನನ್ ಮಗ್ನೇ.. ಓಡೀಬೇಡಲೇ..' ಎಂಬ ನನ್ನ ಕೂಗು ಕೇಳುವುದರೊಳಗೇ, ಒಂದು ಬಲೂನನ್ನು ಕಾಲಲ್ಲಿ ಗುದ್ದಿ ಒಡೆದು ಬಿಡುತ್ತಾನೆ. 'ಪಾಠ್' ಎಂಬ ಶಬ್ದವೊಂದು ಇದೀಗ ತಾನೇ ದೂರಾದ ರೈಲಿನ ಶಬ್ದದೊಂದಿಗೆ ಲೀನವಾಗುತ್ತದೆ.
ಇನ್ನುಳಿದ, ಮೊಲದ ಮರಿಯಂತಹ ಬಿಳೀ ಬಲೂನನ್ನು ನಾನು ಎತ್ತಿಕೊಳ್ಳುತ್ತೇನೆ. ಅದರ ಮೈಯನ್ನು ಕೈಯಲ್ಲಿ ನೇವರಿಸುತ್ತೇನೆ. ಎಷ್ಟೊಂದು ನೆನಪುಗಳು ಆ ಸ್ಪರ್ಶದಲ್ಲಿ..! ಅಮ್ಮನ ಕೈ ಹಿಡಿದು ಅಪ್ಪನ ಜೊತೆ ಹೋಗಿ ಮಳ್ಗದ್ದೆ ಜಾತ್ರೆಯಲ್ಲಿ ಕೊಂಡಿದ್ದ ಬಲೂನು, ಸಾಗರದ ಜಾತ್ರೆಯಲ್ಲಿ ಭಾಗ್ಯತ್ಗೆ ಕೊಡಿಸಿದ್ದ ಬಲೂನು, ಬೆಂಕ್ಟಳ್ಳಿ ಪುಟ್ಟಿಗೆ ಊದಿಕೊಡುವಾಗಲೇ ಒಡೆದುಹೋಗಿದ್ದ ಬಲೂನು (ಆಮೇಲೆ ಅವಳು ಅತ್ತಿದ್ದು-ಹೊಸ ಬಲೂನು ಬೇಕೂ ಎಂದು ಹಟ ಮಾಡಿದ್ದು-ಕೊನೆಗೆ ವಿಧಿಯಿಲ್ಲದೇ ಸೈಕಲ್ಲೇರಿ ಕರ್ಕಿಕೊಪ್ಪದಿಂದ ಬಲೂನು ತಂದುಕೊಟ್ಟಿದ್ದು), ಕಾಲೇಜಿನಲ್ಲಿ ಗೆಟ್-ಟುಗೇದರ್ ದಿನ ಊದಿ ಕೊಡಲೆಂದು 'ಅವಳು' ಕೊಟ್ಟಿದ್ದ ಹಾರ್ಟ್ ಶೇಪ್ ರೆಡ್ ಬಲೂನ್, ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ನಡೆದಿದ್ದ ಅಶ್ವತ್ಥರ 'ಕನ್ನಡವೇ ಸತ್ಯ' ಕಾರ್ಯಕ್ರಮದಲ್ಲಿ ನೀಲಾಕಾಶಕ್ಕೆ ತೇಲಿಬಿಟ್ಟಿದ್ದ ಸಾವಿರ ಸಾವಿರ ಕಂತೆ ಕಂತೆ ಬಲೂನ್, ಚಂದ್ರಗುತ್ತಿ ಗುಡ್ಡದಲ್ಲಿ ಬಲೂನಿಂತೆಯೇ ಹಾರಿಹೋಗಿ ಕನಸಿನಂತೆ ಕಣ್ಮರೆಯಾಗಿದ್ದ ಬಿಳೀ ಕವರ್... ಆಹಾ.. ಊದಿದಷ್ಟೂ ಹಿಗ್ಗುವ ಬಲೂನಿನಂತೆ ನೆನಪುಗಳು.
ಮಳೆ ಬರತೊಡಗುತ್ತದೆ.. ನಾ ಕಾಣದ ಯಾವುದೋ ವ್ಯಕ್ತಿಯ ಉಸಿರನ್ನು ತುಂಬಿಕೊಂಡಿರುವ ಈ ಬಲೂನನ್ನು ಎದೆಗವಚಿಕೊಂಡು ಮನೆಗೆ ಬರುತ್ತೇನೆ. ಇನ್ನೊಂದು ಬಲೂನ್ ಒಡೆದದ್ದಕ್ಕಾಗಿ ನನ್ನಿಂದ ಬೈಸಿಕೊಂಡ ರೂಂಮೇಟ್ ಪೆಚ್ಚಾಗಿ ನಡೆದು ಬರುತ್ತಾನೆ ನನ್ನ ಹಿಂದೆ. ರೂಮಿಗೆ ಹೋಗಿ, ಸ್ಕೆಚ್ ಪೆನ್ನಿನಿಂದ ಆ ಬಿಳೀ ಬಲೂನಿನ ಮೇಲೆ ಒಂದು ಕಣ್ಣು ಬಿಡಿಸುತ್ತೇನೆ, ಪುಟ್ಟ ಮೂಗು, ಬಿರಿದ ತುಟಿ, ಎರಡು ಹುಬ್ಬುಗಳ ಮಧ್ಯೆ ಒಂದು ಚುಕ್ಕಿ ಇಟ್ಟರೆ ಥೇಟ್ ಅವಳ ಮುಖದಂತೆಯೇ ಕಾಣತೊಡಗುತ್ತದೆ ಬಲೂನ್.. ಕೆಳಗೆ ಅವಳ ಹೆಸರು ಬರೆಯುತ್ತೇನೆ. ಬಲೂನನ್ನು ತಬ್ಬಿಕೊಂಡು ತುಂಬ ಹೊತ್ತು ಹಾಗೆಯೇ ಕೂರುತ್ತೇನೆ. ಭಾವನೆಗಳ ಬಗ್ಗೆ ಬರೆಯಬಾರದು ಎಂದು ನಿಶ್ಚೈಸಿಕೊಂಡಿದ್ದು ಮರೆತುಹೋಗುತ್ತದೆ. ಸುಮಾರು ಹೊತ್ತಿನ ಮೇಲೆ ಯೋಚನೆಯಾಗುತ್ತದೆ. ಯೋಚಿಸಿದರೆ ಏನೂ ಹೊಳೆಯುವುದೇ ಇಲ್ಲ.
ಹೊಗೇನಕಲ್ಲಿನಲ್ಲಿ ನಡೆಯುತ್ತಿರುವ ಗಡಿ ವಿವಾದ, ಅದಕ್ಕಾಗಿ ಎಲ್ಲೆಲ್ಲೂ ಆಗುತ್ತಿರುವ ಪ್ರತಿಭಟನೆ, ಸತ್ಯಾಗ್ರಹ, ಗಲಾಟೆ, ದೊಂಬಿಗಳು.. ಈಗ ಎರಡು ವರ್ಷದ ಹಿಂದೆ ನಾನು, ಸಂತೋಷ, ರಾಘು ಹೋಗಿದ್ದೆವು ಹೊಗೇನಕಲ್ಗೆ. ಎಲ್ಲಿ ನೋಡಿದರೂ ಹುರಿದ ಕೆಂಪು ಮೀನಿನ ಮಾರಾಟ, ವಾಕರಿಕೆ ಬರುವಷ್ಟು ವಾಸನೆ, ಮಸಾಜ್ ಮಾಡುವವರ - ದೋಣಿಯವರ ದುಂಬಾಲು... ಸುಂದರ ಪ್ರವಾಸೀ ತಾಣವನ್ನು ಇಷ್ಟೊಂದು 'ಕಮರ್ಶಿಯಲೈಸ್' ಮಾಡಿದ್ದಕ್ಕಾಗಿ ನಾವು ಬೈದುಕೊಳ್ಳುತ್ತಾ, ಕೊನೆಗೆ ಒಂದು ತೆಪ್ಪ (ದೋಣಿ)ವನ್ನು ಚೌಕಾಶಿ ಮಾಡಿ ನೂರೈವತ್ತು ರೂಪಾಯಿಗೆ ಬುಕ್ ಮಾಡಿ ಯಾನ ಹೊರಟಿದ್ದೆವು.. ತೆಪ್ಪ ನಡೆಸಲಿಕ್ಕೆ ಸರ್ಕಾರದ ಲೈಸೆನ್ಸ್ ಬೇಕಂತೆ. ತಿಂಗಳಿಗೆ ಇಂತಿಷ್ಟು ಎಂದು ಅವರು ಕಟ್ಟಬೇಕು. ಅಲ್ಲದೇ ಪ್ರತೀ ಬೋಟ್ ಡ್ರೈವರ್ ಪ್ರತೀ ವಿಹಾರಕ್ಕೂ ಮುನ್ನ ದುಡ್ಡು ಕಟ್ಟಿ ಟಿಕೇಟ್ ಪಡೆದುಕೊಳ್ಳಬೇಕು. 'ಕಷ್ಟ ಸಾರ್.. ಇಷ್ಟೆಲ್ಲಾ ಮಾಡ್ಕೊಂಡು, ನಾವು ಕಾಸು ಮಾಡಿ ಹೆಂಡ್ರು ಮಕ್ಳುನ್ನ ಸಾಕೋದು ಅಂದ್ರೆ..' ಎಂದಿದ್ದ ದೋಣಿ ನಡೆಸುವವ. ಅವನ ಹೆಸರು ಸೆಲ್ವನ್. ಅವನ ಹೆಂಡತಿ ಕರ್ನಾಟಕದವಳು. ನಮ್ಮ ತೆಪ್ಪ ಅರ್ಧ ತಾಸಿನ ಮೇಲೆ ನೀರಿನ ಮಧ್ಯಕ್ಕೆಲ್ಲೋ ಬಂದಿದ್ದಾಗ 'ನೋಡೀ, ಇದೇ ತಮಿಳುನಾಡು-ಕರ್ನಾಟಕದ ಗಡಿ.. ಇದೇ, ಇಲ್ಲೇ ಬರುತ್ತೆ' ಎಂದಿದ್ದ ಸೆಲ್ವನ್. ಹೊಳೆಯ ಕೆಳಗೆಲ್ಲೋ ಮುಳುಗಿದ್ದ ಗಡಿ ನಮಗೆ ಕಂಡೇ ಇರಲಿಲ್ಲ. ಕರ್ನಾಟಕದ ರಾಜಧಾನಿಯಿಂದ ತಮಿಳುನಾಡಿಗೆ ಬಂದಿದ್ದ ನಮಗೆ, ಕನ್ನಡತಿಯೊಬ್ಬಳ ಗಂಡ ಸೆಲ್ವನ್ ತೋರಿಸಿದ್ದ ಗಡಿರೇಖೆ, ಊಹುಂ, ಕಣ್ಣಿಗಷ್ಟೇ ಅಲ್ಲ; ಮನಸಿಗೂ ಕಂಡಿರಲಿಲ್ಲ.. ಎಲ್ಲ ಎಲ್ಲೆಗಳನ್ನೂ ಮೀರಿ ಹೋಗುತ್ತಿತ್ತದು ವಿಹಾರ.. ಈಗಲ್ಲಿ ವಿವಾದ. ದೋಣಿ ಸಂಚಾರ ನಿಶೇಧವಾಗಿದೆಯಂತೆ. ಹೊಡೆದಾಟಗಳಾಗುತ್ತಿವೆಯಂತೆ. ಸೆಲ್ವನ್ ಮತ್ತವನ ಕುಟುಂಬ ಈಗ ಏನಾಗಿರಬಹುದು? ಯೋಚಿಸಿದರೆ ಮಂಕು ಕವಿಯುತ್ತದೆ.
ಚುನಾವಣೆ ಹತ್ತಿರಾಗುತ್ತಿದೆ. ಕ್ಷೇತ್ರ ಮರುವಿಂಗಡನೆ ಈ ದಿನಾಂಕದೊಳಗೆ ಆಗುತ್ತದೆ, ನಾಮಪತ್ರ ಸಲ್ಲಿಕೆಗೆ ಇದು ಕೊನೇ ದಿನ, ಬ್ಯಾನರ್ ಕಟ್ಟಲು ಇದು ಕೊನೇ ದಿನ, ನಾಮಪತ್ರ ಹಿಂತೆಗೆದುಕೊಳ್ಳಲು ಇದು ಕೊನೇ ದಿನ, ಈ ದಿನ ಚುನಾವಣೆ... ದಿನಾಂಕಗಳು ನಿಗಧಿಯಾಗುತ್ತಿವೆ, ಗಡಿಗಳು ಸೃಷ್ಟಿಯಾಗುತ್ತಿವೆ. ಮೊನ್ನೆ ನಾನು ಯೋಚಿಸುತ್ತಿದ್ದೆ: ಹೀಗೆ ನಾನು ಸಣ್ಣಪುಟ್ಟದ್ದಕ್ಕೆಲ್ಲ ತಲೆಕೆಡಿಸಿಕೊಂಡು, ಬೇಸರಗೊಂಡು, ಮೂಡೌಟ್ ಮಾಡಿಕೊಂಡು ಕೂರುತ್ತೇನೆ. ಆದರೆ ಪ್ರತಿದಿನ ಟೆನ್ಷನ್ ಮಾಡಿಕೊಳ್ಳುತ್ತಾ, ಒಬ್ಬರ ಮೇಲೊಬ್ಬರು ಆಪಾದನೆ ಹೊರಿಸುತ್ತಾ, ಜಗಳವಾಡುತ್ತಲೇ ಇರುತ್ತಾರಲ್ಲಾ ರಾಜಕಾರಣಿಗಳು, ಅವರಿಗೆ ಸ್ವಲ್ಪವೂ ಬೇಜಾರಾಗೊಲ್ಲವಾ? ಯಾವನಾದರೂ ಒಬ್ಬ ರಾಜಕಾರಣಿಗೆ "ಅಯ್ಯೋ ಸಾಕಾಗಿ ಹೋಯ್ತಪ್ಪ ಈ ರಾಜಕೀಯ! ಈ ಓಡಾಡೋದು, ಇವತ್ತು ಕಿತ್ತಾಡಿಕೊಂಡವರ ಜೊತೆಯೇ ನಾಳೆ ಮೈತ್ರಿಗಾಗಿ ಹೋಗುವುದು, ಜನರಿಗೆ ಸುಳ್ಳೇ ಆಶ್ವಾಸನೆಗಳನ್ನ ಕೊಡೋದು, ಎಲೆಕ್ಷನ್ನಿಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡೋದು, ಕೊನೆಗೆ ಗೆದ್ದು ಬಂದು ಅಧರ್ಮಮಾರ್ಗದಲ್ಲಿ ದುಡ್ಡು ಮಾಡೋದು.. ಎಲ್ಲಾ ಬೇಜಾರ್ ಬಂದುಹೋಯ್ತು! ಇಷ್ಟು ವರ್ಷ ರಾಜಕೀಯ ಮಾಡಿದ್ದು ಸಾಕು. ಇನ್ನು ಹಾಯಾಗಿ ಹೆಂಡತಿ-ಮಕ್ಕಳ ಜೊತೆ ಮನೇಲಿರ್ತೀನಿ" ಅಂತ ಅನ್ನಿಸಿಲ್ಲವಲ್ಲ? ಯೋಚಿಸಿದರೆ ಆಶ್ಚರ್ಯವಾಗತ್ತೆ, ಅಸಹ್ಯವಾಗತ್ತೆ. ಅದಕ್ಕೇ, ನಾನು ಯೋಚಿಸಬಾರದೆಂದು ನಿರ್ಧರಿಸುತ್ತೇನೆ.
ಇವತ್ತು ರಾತ್ರಿ ಯುಗಾದಿ ಹಬ್ಬಕ್ಕೆಂದು ಊರಿಗೆ ಹೊರಟಿದ್ದೇನೆ. ಸಾಕಾಗಿದೆ ಬೆಂಗಳೂರು. ಸಾಕಾಗಿದೆ ಟ್ರಾಫಿಕ್ಕು. ಸಾಕಾಗಿದೆ ಗಲಾಟೆ. ಸಾಕಾಗಿದೆ ಮಾತು. ಬೇಕಾಗಿದೆ: ಅಮ್ಮನ ಮಡಿಲು, ಅಪ್ಪನ ಜೊತೆ ಮೌನ, ತೊಂಭತ್ತಕ್ಕೂ ಹೆಚ್ಚು ಸಂವತ್ಸರಗಳನ್ನು ಕಂಡಿರುವ ಅಜ್ಜನೊಂದಿಗೆ ಮೆಲು ಸಂವಾದ, ಕೊಟ್ಟಿಗೆಯ ಕರುವಿನ ನೀಲಿ ಕಣ್ಣಲ್ಲಿ ಕಾಣಬೇಕಿರುವ ನನ್ನ ಬಿಂಬ... ಈ ಸಲದ ಚೈತ್ರ, ಫಾಲ್ಗುಣದ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿ ಬರುತ್ತಿದ್ದಾನೆ: ಎಲ್ಲ ಗಡಿಗಳನ್ನೂ ಮೀರಿ.. ಹಿತ್ತಿಲ ಪೇರಲೆ ಗಿಡದಲ್ಲಿ ಹಣ್ಣಾಗಿವೆಯಂತೆ.. ಮಳೆಗಾಲಕ್ಕೆ ಮುನ್ನವೇ ಗಿಡಗಳೆಲ್ಲ ಚಿಗುರಿವೆಯಂತೆ.. ಬಾವಿಯಲ್ಲಿ ನೀರು ಬಂದಿದೆಯಂತೆ.. ಅಂಗಳದಲ್ಲಿ ಕಳೆ ಹಬ್ಬಿದೆಯಂತೆ.. ಅಪ್ಪನ ಬಾಯಲ್ಲಿ ವರ್ಣನೆ ಕೇಳುತ್ತಿದ್ದರೆ, ಅದೆಷ್ಟು ಬೇಗ ರಾತ್ರಿಯಾಗುತ್ತದೋ, ಬಸ್ಸು ಬರುತ್ತದೋ, ಊರು ತಲುಪುತ್ತೇನೋ ಎಂದು ತುಡಿಯುತ್ತಿದ್ದೇನೆ!
ನಿಮಗೆಲ್ಲಾ, ಯುಗಾದಿಯ ಹಾರ್ದಿಕ ಶುಭಾಶಯಗಳು..
Subscribe to:
Posts (Atom)