Thursday, March 03, 2011

ಪ್ರಣತಿ- ಪ್ರಬಂಧ ಸ್ಪರ್ಧೆ ಫಲಿತಾಂಶ

ನಮ್ಮ ಸಂಸ್ಥೆ ಪ್ರಣತಿ, 'ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ' ಎಂಬ ವಿಷಯದ ಮೇಲೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗೆ ರಾಜ್ಯದ ನಾನಾ ಜಿಲ್ಲೆಗಳ ವಿದ್ಯಾರ್ಥಿಗಳಿಂದ ಪ್ರವೇಶಗಳು ಬಂದಿದ್ದವು. ಅಂತಿಮ ಫಲಿತಾಂಶ ಈ ರೀತಿ ಇದೆ:

ಪ್ರಥಮ ಬಹುಮಾನ: ವೀರನಗೌಡ ಪಾಟೀಲ, ಬೆಳಗಾವಿ (ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ)
ದ್ವಿತೀಯ ಬಹುಮಾನ: ಅಮೃತಾ ಜೆ., ಬೆಂಗಳೂರು (ಬೆಂಗಳೂರಿನ ನ್ಯೂ ಹಾರಿಜೋನ್ ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿ)
ತೃತೀಯ ಬಹುಮಾನ: ಆನಂದ ಅಲಗುಂಡಗಿ, ಗದಗ (ಹುಬ್ಬಳ್ಳಿಯ ಜಗದ್ಗುರು ಗುರುಸಿದ್ದೇಶ್ವರ ಟೀಚರ್ಸ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿ)

ಮೂವರೂ ವಿಜೇತರಿಗೆ ಅಭಿನಂದನೆಗಳು. ಭಾಗವಹಿಸಿದ ಎಲ್ಲರಿಗೂ ನಮ್ಮ ಧನ್ಯವಾದಗಳು. ಬಹುಮಾನಗಳನ್ನು ಅಂಚೆಯ ಮೂಲಕ ತಲುಪಿಸಲಾಗುವುದು.

2 comments:

ಶಾಂತಲಾ ಭಂಡಿ (ಸನ್ನಿಧಿ) said...

ಪುಟ್ಟಣ್ಣಾ...
ಯುವಲೇಖಕ/ಕಿಯರನ್ನು ಒಂದೊಳ್ಳೆಯ ವಿಷಯದ ಬಗ್ಗೆ ಪ್ರಬಂಧ ಬರೆಯಲು ಉತ್ತೇಜನ ಕೊಟ್ಟ ‘ಪ್ರಣತಿ’ಗೆ ಅಭಿನಂದನೆಗಳೊಂದಿಗೆ ಇನ್ನಷ್ಟು ಇಂಥ ಉತ್ತಮ ಪ್ರಯತ್ನಗಳೆಡೆ ‘ಪ್ರಣತಿ’ಯ ಪಥ ಸಾಗಲೆಂಬ ಶುಭಾಶಯದೊಂದಿಗೆ,

ಪ್ರೀತಿಯಿಂದ,
ಪುಟ್ಟಕ್ಕ

ಸಾಗರದಾಚೆಯ ಇಂಚರ said...

Pranati ge jai Ho