Monday, July 11, 2011

ಇದೇ ಈ ಕ್ಷಣಕ್ಕೆ...

ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವುದೇ
ನಿರಾಳ ಬದುಕಿನ ಯಶೋಸೂತ್ರ ಎಂದವರು
ಸೂರ್ಯನನ್ನೇ ಕರಿಬಟ್ಟೆಯಿಂದ ಮುಚ್ಚಿ
ಮಂದಬೆಳಕಿನ ದೀಪಗಳ ಕೆಳಗೆ
ಮಿಕ್ಸ್ ಮಾಡಲು ಐಸನ್ನೋ ನೀರನ್ನೋ
ಸ್ಪ್ರೈಟನ್ನೋ ಕಾಯುತ್ತ ಕೂತಿದ್ದಾರೆ
ಅವರ ಮಾತನ್ನು ಜಗತ್ತು ಕೇಳುತ್ತಿಲ್ಲ.

ಅತಿಯಾಗಿ ಸಿಟ್ಟು ಮಾಡುವ ಹುಡುಗಿಗೆ
ಉಪ್ಪು ಕಮ್ಮಿ ಹಾಕಿದ ಉಪ್ಪಿಟ್ಟು ತಿನ್ನಿಸಿ
ತುದಿಯಷ್ಟೇ ಕೆಂಪಗಾಗಿರುವ ಮೂಗಿಗೆ
ಅಂಟಿಕೊಂಡಿರುವ ಗುಲಗುಂಜಿ ಒರೆಸುವಾಗ
ತುಟಿ ಬಿರಿದರಳಿ ಮೊಗ ಹೂವಾಗಿದೆ
ಇವರಾಡುವ ಮಾತು ಈ ಲೋಕದ್ದೇ ಅಲ್ಲ.

ಕೆಲವೇ ಗಂಟೆಗಳ ಹಿಂದೆ, ಎತ್ತಿ ಹಿಡಿದ ಪರದೆಯ
ಆಚೀಚೆ ನಿಂತಿದ್ದಾಗ ಸುಲಗ್ನೇ ಸಾವಧಾನ
ಎಂದಿದ್ದ ಪುರೋಹಿತರಿಗೂ ಡೊಳ್ಳುಹೊಟ್ಟೆಯ ಬೀಗರು
ಬಗ್ಗಿ ಬಗ್ಗಿ ಹೇಳುತ್ತಿದ್ದಾರೆ:
ಸಾವಧಾನ, ನಿಧಾನವಾಗಿ ಆಗಲಿ ಊಟ.

ಪಂಕ್ತಿಯ ಕೊನೆಯಲ್ಲಿ ಕುಳಿತಿದ್ದಾನೆ ಒಬ್ಬ ಹುಡುಗ
ಅವರು ಬರುವುದರೊಳಗೆ ಎದ್ದು ಹೋಗಬೇಕು ಅಂತ
ಕಣ್ಣು ಮೂಗು ಕಿವಿಗಳಿಂದಲೂ ತಿನ್ನುತ್ತಿದ್ದಾನೆ
ಅಪಘಾತದಿಂದ ತಪ್ಪಿಸಿಕೊಳ್ಳಲೆಂದೇ ಅವಸರ ಮಾಡುತ್ತಿದ್ದಾನೆ.

ಗಿಜಿಗಿಜಿ ತುಂಬಿದ ಮದುವೆಯ ಮನೆಯಲ್ಲಿ
ಎಲ್ಲರೂ ಅವರವರ ಮಾತು ಆಡುತ್ತಿದ್ದಾರೆ.

ಪಂಕ್ತಿಯ ಮಧ್ಯದಲ್ಲಿ ಒಂದು ಬಾಳೆ ಉಳಿದುಹೋಗಿದೆ
ಹಸಿದ ಬೀಗರು ಎಡೆಶೃಂಗಾರಕ್ಕೆ ಹಾಕಿದ
ಪದಾರ್ಥಗಳನ್ನು ನೋಡುತ್ತ ನಿಂತುಬಿಟ್ಟಿದ್ದಾರೆ.

9 comments:

ರಾಘವೇಂದ್ರ ಜೋಶಿ said...

ಇದು!
:-)
(ಜಾಸ್ತಿಯಾಗಿದ್ದರಿಂದ ಇಷ್ಟೇ!)

ರಾಘವೇಂದ್ರ ಜೋಶಿ said...

ಇದು!
:-)

(ಖುಶಿ ಜಾಸ್ತಿಯಾಗಿದ್ದರಿಂದ ಇಷ್ಟೇ!)

ಗುಹೆ said...

Super..........

Sushrutha Dodderi said...

Joshi,
:-)

Guhe,
thanks!

Raghu said...

Nice..!!

ಪ್ರತಾಪ್ ಬ್ರಹ್ಮಾವರ್ said...

ishta aaytu:)

ushodaya said...

su............per.

ushodaya said...

su.............per.

Vipra said...

Dhanyavaadagalu...dodderiyavare...athyadbuthavaagide.....dhanyavaadagalu mattomme...:-)