ನಮ್ಮ ಸಂಸ್ಥೆ ಪ್ರಣತಿ, 'ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ' ಎಂಬ ವಿಷಯದ ಮೇಲೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗೆ ರಾಜ್ಯದ ನಾನಾ ಜಿಲ್ಲೆಗಳ ವಿದ್ಯಾರ್ಥಿಗಳಿಂದ ಪ್ರವೇಶಗಳು ಬಂದಿದ್ದವು. ಅಂತಿಮ ಫಲಿತಾಂಶ ಈ ರೀತಿ ಇದೆ:
ಪ್ರಥಮ ಬಹುಮಾನ: ವೀರನಗೌಡ ಪಾಟೀಲ, ಬೆಳಗಾವಿ (ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ)
ದ್ವಿತೀಯ ಬಹುಮಾನ: ಅಮೃತಾ ಜೆ., ಬೆಂಗಳೂರು (ಬೆಂಗಳೂರಿನ ನ್ಯೂ ಹಾರಿಜೋನ್ ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿ)
ತೃತೀಯ ಬಹುಮಾನ: ಆನಂದ ಅಲಗುಂಡಗಿ, ಗದಗ (ಹುಬ್ಬಳ್ಳಿಯ ಜಗದ್ಗುರು ಗುರುಸಿದ್ದೇಶ್ವರ ಟೀಚರ್ಸ್ ಟ್ರೇನಿಂಗ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿ)
ಮೂವರೂ ವಿಜೇತರಿಗೆ ಅಭಿನಂದನೆಗಳು. ಭಾಗವಹಿಸಿದ ಎಲ್ಲರಿಗೂ ನಮ್ಮ ಧನ್ಯವಾದಗಳು. ಬಹುಮಾನಗಳನ್ನು ಅಂಚೆಯ ಮೂಲಕ ತಲುಪಿಸಲಾಗುವುದು.